Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ನೇಣು ಶಿಕ್ಷೆ ಸಂಬಂಧ ಕಾನೂನು ಬಿಗಿ ಮಾಡಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಂಡ ಕೇಂದ್ರ

ನೇಣು ಶಿಕ್ಷೆ ಸಂಬಂಧ ಕಾನೂನು ಬಿಗಿ ಮಾಡಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಂಡ ಕೇಂದ್ರ
ನೇಣು ಶಿಕ್ಷೆ ಸಂಬಂಧ ಕಾನೂನು ಬಿಗಿ ಮಾಡಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಂಡ ಕೇಂದ್ರ

February 9, 2020
Share on FacebookShare on Twitter

“ನನ್ನ ಮಗಳು ಅಂದೇ ತೀರಿಹೋದಳು. ಆದರೆ ಪ್ರಕರಣದ ನ್ಯಾಯಾಂಗ ವಿಚಾರಣೆಯ ವೇಳೆ, ನನ್ನ ಮಗಳ ಕೊಲೆಗಾರರ ಮುಖಗಳನ್ನು ಪ್ರತಿದಿನ ನೋಡುತ್ತಾ ನಾನು ದಿನಾ ಸಾಯುತ್ತಿದ್ದೇನೆ,” ಎಂದು ನಿರ್ಭಯಾ ತಾಯಿ ಹೇಳಿದ ನೋವಿನ ಮಾತುಗಳು ದೇಶದ ಜನತೆಯ ಮನಕಲಕುತ್ತಿದ್ದು, ಇಡೀ ದೇಶವೇ ಈ ಹಂತಕರನ್ನು ನೇಣು ಕುಣಿಕೆಗೆ ಹಾಕುವುದು ಯಾವಾಗ ಎಂದು ಕೇಳುವಂತೆ ಆಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಸರ್ದಾರ್ ಪಟೇಲ್ vs ಸಾವರ್ಕರ್: ಏನು ಹೇಳುತ್ತೆ ಇತಿಹಾಸ?

ಉದ್ಯಮಿ ಗೌತಮ್ ಅದಾನಿಗೆ Z ಶ್ರೇಣಿ ಭದ್ರತೆ

ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ತಡೆಯಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಮರಣ ದಂಡನೆ ಸಂಬಂಧ ಇರುವ ಕಾನೂನಿಗೆ ಪೂಕರವಾಗಿ ಬಿಗುಯಾದ ನಿಯಮಗಳನ್ನು ತರುವ ಮೂಲಕ, ನ್ಯಾಯಾಂಗ ಪ್ರಕ್ರಿಯೆಯ ಅಣುಕು ಮಾಡುವಂಥ ಪ್ರಹಸನಗಳಿಗೆ ಅಂತ್ಯ ತರಲು ಕೇಂದ್ರದ ಪರ ವಕೀಲರೂ ಆದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೋರಿದ್ದಾರೆ.

ಕೇಂದ್ರದ ಮನವಿಯ ಮುಂದಿನ ಆಲಿಕೆಯನ್ನು ಸುಪ್ರೀಂ ಕೋರ್ಟ್ ಫೆಬ್ರವರಿ 11ಕ್ಕೆ ನಿಗದಿ ಮಾಡಿದೆ. ಆ ವೇಳೆಗೆ ಆರೋಪಿಗಳಿಗೆ ತಮ್ಮ ಪಾಲಿನ ಲೀಗಲ್‌ ಅವಕಾಶಗಳ ಕಾಲಮಿತಿ ಮುಗಿಯಲಿದೆ.

ನಾಲ್ವರು ಆರೋಪಿಗಳನ್ನು ನೇಣಿಗೇರಿಸುವ ಪ್ರಕ್ರಿಯೆಗೆ ಪಡೆಯಾಜ್ಞೆ ತಂದಿರುವ ಪಟಿಯಾಲಾ ಹೌಸ್‌ ಕೋರ್ಟ್‌ ಆದೇಶದ ವಿರುದ್ಧ ತಾನು ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿರುವ ದೆಹಲಿ ಹೈಕೋರ್ಟ್‌ನ ನಡೆಯನ್ನು ಪ್ರಶ್ನಿಸಿರುವ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ಎಲ್ಲ ಆಪಾದಿತರನ್ನು ಒಟ್ಟಿಗೇ ಗಲ್ಲಿಗೇರಿಸಬೇಕೆಂದು ದೆಹಲಿ ಹೈಕೋರ್ಟ್ ಅದಾಗಲೇ ಆದೇಶ ನೀಡಿತ್ತು. ಆದರೆ ಈ ವಿಚಾರವನ್ನೂ ಸಹ ಚಾಲೆಂಜ್ ಮಾಡಿದ್ದ ಕೇಂದ್ರ, ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ನೇಣಿಗೇರಿಸಬೇಕೆಂದು ಕೋರಿತ್ತು. ಆರೋಪಿಗಳನ್ನು ಒಟ್ಟಿಗೇ ಅಥವಾ ಪ್ರತ್ಯೇಕವಾಗಿ ಗಲ್ಲಿಗೇರಿಸಬೇಕೇ ಎಂಬ ಕುರಿತಂತೆ ಕಾನೂನನ್ನು ಸುಪ್ರೀಂ ಕೋರ್ಟ್ ನಿರ್ಧಾರ ಮಾಡಬೇಕೆಂದು ಮೆಹ್ತಾ ತಿಳಿಸಿದ್ದಾರೆ.

“ಅಂತಿಮವಾಗಿ, ನ್ಯಾಯಾಲಯವು ಕಾನೂನನ್ನು ತರಬೇಕು. ದೇಶದ ತಾಳ್ಮೆಯನ್ನು ಅದಾಗಲೇ ಪರೀಕ್ಷೆ ಮಾಡಲಾಗಿದೆ. ಹೈಕೋರ್ಟ್‌ನಲ್ಲಿ ಈ ವಿಚಾರವಾಗಿ ನಾವು ತಕ್ಕ ಮಟ್ಟಿಗೆ ಯಶಸ್ಸನ್ನೂ ಸಾಧಿಸಿದ್ದೇವೆ. ಕ್ಷಮದಾನದ ಅರ್ಜಿಯು ನ್ಯಾಯಾಂಗದ ಅರ್ಜಿಯಲ್ಲ ಎಂದು ಹೈಕೋರ್ಟ್ ಆದೇಶಿಸಿದ್ದು, ಆರೋಪಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಲು ನಿರಾಕರಿಸಿದೆ,” ಎಂದು ಮೆಹ್ತಾ ತಿಳಿಸಿದ್ದಾರೆ.

ನಾಲ್ವರು ಆರೋಪಿಗಳ ಪೈಕಿ ಮೂವರ ಬಳಿ ಇದ್ದ ‌ನ್ಯಾಯಾಂಗ ಪರಿಹಾರಗಳ ಆಯ್ಕೆಗಳು ಅದಾಗಲೇ ಅಂತ್ಯಗೊಂಡಿವೆ. ಈ ನಾಲ್ವರನ್ನೂ ಗಲ್ಲಿಗೇರಿಸಬೇಕೆಂದು ಕೇಂದ್ರ ಸರ್ಕಾರ ಕೋರಿಕೊಳ್ಳುತ್ತಿದೆ. ರಾಷ್ಟ್ರಪತಿಗಳ ಬಳಿ ಕೇವಲ ಒಬ್ಬ ಆರೋಪಿ ಮಾತ್ರವೇ ಕ್ಷಮಾದಾನದ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಉಳಿಸಿಕೊಂಡಿದ್ದಾನೆ.

ಆರೋಪಿಗಳು ಹಾಗೂ ಅವರ ಪರ ವಕೀಲರು ವಿಳಂಬದ ಧೋರಣೆ ಮೂಲಕ ಶಿಕ್ಷೆಯನ್ನು ಆದಷ್ಟು ಮುಂದಕ್ಕೆ ಹಾಕಲು ಮಾಡುತ್ತಿರುವುದು ನ್ಯಾಯಾಂಗ ಪ್ರಕ್ರಿಯೆಗಳ ಅಣಕವೇ ಆಗಿದೆ ಎನ್ನಲಾಗುತ್ತಿದೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಚಿತ್ರರಂಗದಲ್ಲಿ 62 ವರ್ಷ ಪೂರೈಸಿದ ಹಿರಿಯ ನಟ ಉಮೇಶ್‌ ಗೆ ಸನ್ಮಾನ!
ವಿಡಿಯೋ

ಚಿತ್ರರಂಗದಲ್ಲಿ 62 ವರ್ಷ ಪೂರೈಸಿದ ಹಿರಿಯ ನಟ ಉಮೇಶ್‌ ಗೆ ಸನ್ಮಾನ!

by ಪ್ರತಿಧ್ವನಿ
August 13, 2022
ಅಗ್ನಿಪಥ್ ಯೋಜನೆಯು ಭಾರತೀಯ ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಹೊಡೆಯಲಿರುವ ಕೊನೆಯ ಮೊಳೆ? ಭಾಗ-೧
ಅಭಿಮತ

ಅಗ್ನಿಪಥ್ ಯೋಜನೆಯು ಭಾರತೀಯ ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಹೊಡೆಯಲಿರುವ ಕೊನೆಯ ಮೊಳೆ? ಭಾಗ-೨

by ಡಾ | ಜೆ.ಎಸ್ ಪಾಟೀಲ
August 13, 2022
ಕಾಂಗ್ರೆಸ್ ಯಾವಾಗಲೂ ಮುಸ್ಲಿಂ ಮತಗಳ ಮೇಲೆ ಕೇಂದ್ರೀಕರಿಸುತ್ತದೆ : ಸಚಿವ ಬಿ.ಸಿ.ನಾಗೇಶ್
ಕರ್ನಾಟಕ

ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ: ಟ್ವೀಟ್ ಮೂಲಕ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ

by ಪ್ರತಿಧ್ವನಿ
August 12, 2022
Uncategorized

Write My Essay Online For Me

by
August 13, 2022
ಅಂಗಾಂಗ ದಾನಕ್ಕೆ ನಾನು ಹೆಸರು ನೋಂದಾಯಿಸಿದ್ದೇನೆ, ನೀವು ಕೂಡ ನೋಂದಾಯಿಸಿ: ಸಿಎಂ ಬಸವರಾಜ ಬೊಮ್ಮಾಯಿ
ವಿಡಿಯೋ

ಅಂಗಾಂಗ ದಾನಕ್ಕೆ ನಾನು ಹೆಸರು ನೋಂದಾಯಿಸಿದ್ದೇನೆ, ನೀವು ಕೂಡ ನೋಂದಾಯಿಸಿ: ಸಿಎಂ ಬಸವರಾಜ ಬೊಮ್ಮಾಯಿ

by ಪ್ರತಿಧ್ವನಿ
August 13, 2022
Next Post
ದೆಹಲಿ ಫಲಿತಾಂಶದ ಮರ್ಮಾಘಾತದ ಬಳಿಕ ಕೋಮು ಪ್ರಚೋದನೆ

ದೆಹಲಿ ಫಲಿತಾಂಶದ ಮರ್ಮಾಘಾತದ ಬಳಿಕ ಕೋಮು ಪ್ರಚೋದನೆ, ದ್ವೇಷ ರಾಜಕಾರಣ ಕೈಬಿಡುವುದೇ ಬಿಜೆಪಿ?

ದೆಹಲಿ ಮತದಾರನ ಮೌನದ ಉತ್ತರ..! ಸಿಡಿದೆದ್ದ ಕಮಲಪಡೆ..?

ದೆಹಲಿ ಮತದಾರನ ಮೌನದ ಉತ್ತರ..! ಸಿಡಿದೆದ್ದ ಕಮಲಪಡೆ..?

ಅಮಿತ್‌ ಶಾ ‘ಚಾಣಕ್ಯ’ನ ಪಟ್ಟಕ್ಕೆ ‘ಕಿಂಗ್ ಮೇಕರ್’ ಪ್ರಶಾಂತ್ ಕಿಶೋರ್ ಗುನ್ನಾ!

ಅಮಿತ್‌ ಶಾ ‘ಚಾಣಕ್ಯ’ನ ಪಟ್ಟಕ್ಕೆ ‘ಕಿಂಗ್ ಮೇಕರ್’ ಪ್ರಶಾಂತ್ ಕಿಶೋರ್ ಗುನ್ನಾ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist