ಬಿಜೆಪಿ ಅವರಿಗೆ ಏನು ಹಕ್ಕಿದೆ ಎಂದು ನಮ್ಮ ಪ್ರತಿಭಟನೆ ವಿರೋಧ ಮಾಡ್ತಾರೆ.ಅವರನ್ನು ಕೇಳಿಕೊಂಡು ನಾವು ನಮ್ಮ ಹಕ್ಕನ್ನು ಕೇಳಬೇಕು.
ಬಿಜೆಪಿ ಅವರು ನಮ್ಮ ಯಜಮಾನರಾ?.
ನಮ್ಮ ಯಜಮಾನರು ರಾಜ್ಯದ ಜನರು.
ಜನರು ಹೇಳಿದ್ದನ್ನು ನಾವು ಕೇಳಬೇಕು, ಬಿಜೆಪಿ, ಜೆಡಿಎಸ್ ಹೇಳಿದ್ದು ಅಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಹೋಗ್ತಾ ಇರೋದು, ನಮಗೆ ಬರಪರಿಹಾರ ನೀಡದೇ ಇರೋದಕ್ಕೆ ಪ್ರತಿಭಟನೆ ಮಾಡಲು.ಕರ್ನಾಟಕಕ್ಕೆ ಆರ್ಥಿಕ ಸಹಕಾರವನ್ನು ನೀಡ್ತಾ ಇಲ್ಲ ಎಂದು ಹೋರಾಟ ಮಾಡ್ತಾ ಇದೀವಿ. ನಾಚಿಕೆ ಇದ್ದರೆ ಬಿಜೆಪಿ ಅವರು ರಾಜಕೀಯ ಹೊರತುಪಡಿಸಿ ಮಾತನಾಡಲಿ.
ಅವರಿಗೆ ಅವರ ನಾಯಕರ ಬಗ್ಗೆ ಭಯ ಇದೆ, ಅದಕ್ಕೆ ಮಾತಾಡುತ್ತಾ ಇಲ್ಲ ಎಂದರು.
ಬಿಜೆಪಿ ಬಿಡುಗಡೆ ಮಾಡಿರೋ ದಾಖಲೆ 100% ಸುಳ್ಳು.
ನಮ್ಮನ್ನ ಶ್ವೇತಾ ಪತ್ರ ಹೊರಡಿಸಲು ಹೇಳಲು ಅವರು ಯಾರು?. ಮುಂದೆ ಚುನಾವಣೆ ಇದೆ ಜನರು ಅವರಿಗೆ ಬುದ್ಧಿ ಕಲಿಸುತ್ತಾರೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು 5 ವರ್ಷವೂ ಕೊಡುತ್ತೇವೆ. ಕೇಂದ್ರ ಸರ್ಕಾರದ ವಿರುದ್ಧ ನಾವು ಪ್ರತಿಭಟನೆ ಮಾಡ್ತಾ ಇದೀವಿ. ಬಿಜೆಪಿ ಸಂಸದರಿಗೆ ಬರೋಕೆ ತಾಕತ್ ಇದ್ಯಾ?.
ಮೋದಿ ಅವರ ಬಳಿ ಏನು ಕೇಳೋಕೆ ಅವರಿಗೆ ಆಗಲ್ಲ, ಇನ್ನು ಪ್ರತಿಭಟನೆಗೆ ಬರ್ತಾರಾ?. ಅವರು ಪ್ರತಿಭಟನೆಗೆ ಬಂದ್ರೆ ಸಂತೋಷ. ನಮ್ಮ ಜೊತೆ ಬರದೇ, ಅವರೇ ಹೋಗಿ ಸತ್ಯಾಗ್ರಹ ಮಾಡ್ತೀವಿ ಎಂದು ಕೂತರು ಸಂತೋಷ. ರಾಜ್ಯದ ಕಾಳಜಿ ಸುಮಲತಾ ಅವರಿಗೆ ಇದ್ರೆ ಬರಲಿ. ಸ್ವಾಭಿಮಾನಿ ಸಂಸದೆ ಆಗಿದ್ರೆ, ನಮಗಿಂತ ಮೊದಲೇ ಪ್ರತಿಭಟನೆಯಲ್ಲಿ ಇರಬೇಕು ಎಂದರು.