ಬಡತನದ ವಿರುದ್ಧ ಹೋರಾಟದಲ್ಲಿ ಕಷ್ಟಪಟ್ಟು ದುಡಿದ ಆದಾಯವನ್ನು ಭಾರತದ ಜನರು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ ಎಂದು ವರ್ಲ್ಡ್ ಬ್ಯಾಂಕ್ ಎಚ್ಚರಿಸಿದೆ. ಕೋವಿಡ್-19 ನಿಂದ ಉಂಟಾದ ಉದ್ಯೋಗ ನಷ್ಟ ಹಾಗೂ ಆದಾಯ ನಷ್ಟ ಹಲವಾರು ಕುಟುಂಬಗಳನ್ನು ಬಡತನಕ್ಕೆ ದೂಡಲಿದೆ ಎಂದು ಅದು ತಿಳಿಸಿದೆ.
ಆರ್ಥಿಕ ಉತ್ತೇಜನಕ್ಕೆಂದು ತಂದಿರುವ 20 ಲಕ್ಷ ಕೋಟಿ ಪ್ಯಾಕೇಜಿನಲ್ಲಿ ಕೇಂದ್ರ ಸರ್ಕಾರದ ಖರ್ಚುಗಳನ್ನಷ್ಟೇ ಉಲ್ಲೇಖಿಸಲಾಗಿದೆ, ಜನರಿಗೆ ನೀಡುವ ಪ್ರಯೋಜನಗಳ ಕುರಿತು ಏನೂ ಉಲ್ಲೇಖಿಸಿಲ್ಲ ಎಂದು ಜೂನ್ ನಲ್ಲಿ ನೀಡಿರುವ ಇಂಡಿಯ ಡೆವಲಪ್ಮೆಂಟ್ ಅಪ್ಡೇಟ್ ವರದಿಯಲ್ಲಿ ವರ್ಲ್ಡ್ ಬ್ಯಾಂಕ್ ತಿಳಿಸಿದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಲಾಕ್ಡೌನ್ ನಂತರದ ಪ್ರಾಥಮಿಕ ಆರ್ಥಿಕ ವಿಶ್ಲೇಷಣೆ, ಆರ್ಥಿಕತೆಯು ನಾಶವಾಗಲಿದೆ ಎಂಬುದನ್ನು ಸೂಚಿಸುತ್ತದೆ. ಭಾರತ ಜನರು ಬಡತನದ ವಿರುದ್ಧದ ಹೋರಾಟದಲ್ಲಿ ತಾವು ಕಷ್ಟಪಟ್ಟು ಗಳಿಸಿದ ಲಾಭಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ, ಮತ್ತು ಮೊದಲೇ ಅಸ್ತಿತ್ವದಲ್ಲಿರುವ ಆರ್ಥಿಕ ಅಸಮಾನತೆಗಳು ಇನ್ನೂ ವಿಸ್ತಾರಗೊಳ್ಳುತ್ತವೆ ಎಂದು ವರ್ಲ್ಡ್ ಬ್ಯಾಂಕ್ ಹೇಳಿದೆ. ಭಾರತದ ಅರ್ಧ ಜನಸಂಖ್ಯೆಯ ಬಳಕೆಯ ಮಟ್ಟಗಳು ಬಡತನದ ರೇಖೆಗೆ ನಿಖರವಾಗಿ ಹತ್ತಿರದಲ್ಲಿದೆ ಎಂದು ಅದು ತಿಳಿಸಿದೆ.
ಕೋವಿಡ್ನಿಂದಾದ ಆರ್ಥಿಕ ಕುಸಿತ, ಉದ್ಯೋಗ ನಷ್ಟದಿಂದಾಗಿ ಕುಟುಂಬಗಳು ಬಡತನಕ್ಕೆ ಇಳಿಯುವ ಸಾಧ್ಯತೆ ಇದೆ. 90% ಭಾರತೀಯ ಉದ್ಯೋಗಿಗಳು ಅಸಂಘಟಿತ ವಲಯದಲ್ಲಿದ್ದಾರೆ ಎಂದೂ ಕರಡು ಉಲ್ಲೇಖಿಸಿದೆ. ಕುಗ್ಗುತ್ತಿರುವ ಆರ್ಥಿಕ ಚಟುವಟಿಕೆಗಳು, ಸರ್ಕಾರ ಹೇರಿದ ಲಾಕ್ಡೌನ್ ಮತ್ತು ಸಾಮಾಜಿಕ ಅಂತರದ ಶಿಷ್ಟಾಚಾರದಿಂದ ಉಂಟಾಗುವ ವೇತನ ಮತ್ತು ಜೀವನೋಪಾಯದ ನಷ್ಟದಿಂದಾಗಿ ಈ ಅಸಂಘಟಿತ ಕಾರ್ಮಿಕರು ಬಡತನಕ್ಕೆ ಸಿಲುಕುವ ಅಪಾಯವಿದೆ. ಭಾರತದಲ್ಲಿ ಸ್ಥಿರವಾದ ಸಾಮಾಜಿಕ ಸಂರಕ್ಷಣಾ ವ್ಯವಸ್ಥೆಯಿಂದಾಗಿ ವಲಸಿಗರು ಆಗಾಧವಾದ ಅಪಾಯಗಳನ್ನು ಎದುರಿಸುತ್ತಾರೆ, ಅಂತರರಾಜ್ಯ ವಲಸಿಗರು ಬಡತನ ಮತ್ತು ನಿರ್ಗತಿಕತೆಯ ಅಪಾಯದಲ್ಲಿದ್ದಾರೆ ಎಂದು ವರದಿ ಹೇಳಿದೆ.