Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ತುಕ್ಡೆ ತುಕ್ಡೆ ಗ್ಯಾಂಗ್‌ ಕುರಿತು ಯಾವುದೇ ಮಾಹಿತಿಯಿಲ್ಲ – ಗೃಹ ಸಚಿವಾಲಯ

ತುಕ್ಡೆ ತುಕ್ಡೆ ಗ್ಯಾಂಗ್‌ ಕುರಿತು ಯಾವುದೇ ಮಾಹಿತಿಯಿಲ್ಲ – ಗೃಹ ಸಚಿವಾಲಯ
ತುಕ್ಡೆ ತುಕ್ಡೆ ಗ್ಯಾಂಗ್‌ ಕುರಿತು ಯಾವುದೇ ಮಾಹಿತಿಯಿಲ್ಲ – ಗೃಹ ಸಚಿವಾಲಯ

January 21, 2020
Share on FacebookShare on Twitter

ದಿನ ಬೆಳಗಾದರೆ ಮಾಧ್ಯಮಗಳ ಮುಂದೆ ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ʼತುಕ್ಡೆ ತುಕ್ಡೆ ಗ್ಯಾಂಗ್‌ʼ ಎಂದು ಅರಚಿಕೊಳ್ಳುತ್ತಿರುವ ಬಿಜೆಪಿಯ ನಾಯಕರುಗಳಿಗೆ ಸ್ಪಷ್ಟವಾದ ಉತ್ತರವನ್ನು ಆರ್‌ಟಿಐ ಕಾರ್ಯಕರ್ತರೊಬ್ಬರು ನೀಡಿದ್ದಾರೆ. ಗೃಹ ಸಚಿವಾಲಯಕ್ಕೆ ತುಕ್ಡೆ ತುಕ್ಡೆ ಗ್ಯಾಂಗ್‌ ಕುರಿತು ಮಾಹಿತಿಯನ್ನು ಕೇಳಿ ಆರ್‌ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ ಅವರು ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಗೃಹ ಸಚಿವಾಲಯ ಈ ಕುರಿತು ಯಾವುದೇ ಮಾಹಿತಿ ಸಚವಾಲಯದಲ್ಲಿ ಲಭ್ಯವಿಲ್ಲ ಎಂದು ಹೇಳಿದೆ.

ಹೆಚ್ಚು ಓದಿದ ಸ್ಟೋರಿಗಳು

ಪ್ರಜಾಪ್ರಭುತ್ವ ಸಂವಿಧಾನ ಮತ್ತು ಮಾನವ ಹಕ್ಕುಗಳು : ನಾ ದಿವಾಕರ ಅವರ ಬರಹ

ಇನ್ಮುಂದೆ ಕರ್ನಾಟಕ ರೀತಿಯಲ್ಲೇ ತೆಲಂಗಾಣದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

2025ರ ಅಂತ್ಯಕ್ಕೆ $ 5 ಟ್ರಿಲ್ಲಿಯನ್ ಆರ್ಥಿಕತೆ ಸಾಧಿಸಲಿದೆ ಭಾರತ- ಅಮಿತ್ ಶಾ

ಪ್ರತಿ ಬಾರಿಯೂ ತಮ್ಮ ವಿರೋಧೀಗಳನ್ನು ಸಂಭೋದಿಸಲು ತುಕ್ಡೆ ತುಕ್ಡೆ ಗ್ಯಾಂಗ್‌ ಎಂಬ ಪದ ಪ್ರಯೋಗ ಮಾಡುತ್ತಿದ್ದ ಅಮಿತ್‌ ಶಾ ಹಾಗೂ ಇತರ ನಾಯಕರುಗಳು, ದೇಶವನ್ನು ಇಬ್ಬಾಗ ಮಾಡಲು ಪ್ರಯತ್ನಿಸುತ್ತಿರುವ ಶಕ್ತಿಗಳು ಇವು ಎಂದು ಆರೋಪಿಸುತ್ತಿದ್ದರು. ದೆಹಲಿಯ ಜವಹರ್‌ಲಾಲ್‌ ನೆಹರು ಯತೂನಿವರ್ಸಿಟಿಯಲ್ಲಿ (ಜೆಎನ್‌ಯು) 2016ರಲ್ಲಿ ಆರಂಭವಾದ ಪ್ರತಿಭಟನೆಗಳ ಸಂದರ್ಭದಲ್ಲಿ ತುಕ್ಡೆ ತುಕ್ಡೆ ಗ್ಯಾಂಗ್‌ ಎಂಬ ಪದ ಪ್ರಯೋಗವನ್ನು ಬಿಜೆಪಿಯು ಆರಂಭಿಸಿತ್ತು. ಈಗ ಆರ್‌ಟಿಐಗೆ ಗೃಹ ಸಚಿವಾಲಯ ನೀಡಿರುವ ಉತ್ತರವನ್ನು ನೋಡಿ, ಸಾಕೇತ್‌ ಅವರು ತುಕ್ಡೆ ತುಕ್ಡೆ ಗ್ಯಾಂಗ್‌ ಎನ್ನುವುದು ಅಮಿತ್‌ ಶಾ ಅವರ ಕಲ್ಪನೆಯ ಒಂದು ಭಾಗವಷ್ಟೇ ಎಂದು ಹೇಳಿದ್ದಾರೆ.

ಭಾರತೀಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿರುವ ಸಾಕೇತ್‌ ಅವರು, ಯಾವುದೇ ರಾಜಕೀಯ ಸಮಾರಂಭಗಳಲ್ಲಿ ತುಕ್ಡೆ ತುಕ್ಡೆ ಗ್ಯಾಂಗ್‌ ಎಂಬ ಪದ ಪ್ರಯೋಗವನ್ನು ಬಳಸಿದರೆ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ. “ಅಮಿತ್‌ ಶಾ ಅವರು ತುಕ್ಡೆ ತುಕ್ಡೆ ಗ್ಯಾಂಗ್‌ ಎಂದು ವಿರೋಧಿಗಳನ್ನು ಕರೆಯಲು ಸ್ಪಷ್ಟವಾದ ಕಾರಣವನ್ನು ನೀಡಬೇಕು. ಇಲ್ಲವಾದಲ್ಲಿ ಜನರ ದಿಕ್ಕು ತಪ್ಪಿಸಿದಕ್ಕಾಗಿ ಹಾಗೂ ಸಾರ್ವಜನಿಕವಾಗಿ ಸುಳ್ಳು ಹೇಳಿದಕ್ಕಾಗಿ ದೇಶದ ಜನರಲ್ಲಿ ಬೇಷರತ್‌ ಕ್ಷಮೆ ಯಾಚಿಸಬೇಕು,” ಎಂದು ಅವರು ಆಗ್ರಹಿಸಿದ್ದಾರೆ.

ಜನವರಿ 5ರಂದು ಜೆಎನ್‌ಯುನಲ್ಲಿ ನಡೆದ ಹಿಂಸಾಚಾರ ನಡೆದ ಮರುದಿನ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಅವರು ಮಾತನಾಡುತ್ತಾ, ತಾವು ಜೆಎನ್‌ಯುನಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಯಾವುದೇ ತುಕ್ಡೆ ತುಕ್ಡೆ ಗ್ಯಾಂಗ್‌ಗಳು ಸಕ್ರೀಯವಾಗಿರಲಿಲ್ಲ ಎಂದು ಹೇಳಿದ್ದರು. ಈ ಮಾತುಗಳನ್ನಾಡುವ ಹಿಂದಿನ ದಿನ ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡಿದ್ದ ದುಷ್ಕರ್ಮಿಗಳ ತಂಡವೊಂದು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಈ ಹಲ್ಲೆಗಳಿಗೆ ಬಲಪಂಥೀಯ ವಿದ್ಯಾರ್ಥಿ ಸಂಘಟನೆಯನ್ನು ಹೊಣೆಗಾರರನ್ನಾಗಿಸಿತ್ತು.

ಇನ್ನು ಮಾಜಿ ವಿತ್ತ ಸಚಿವರಾದ ಅರುಣ್‌ ಜೇಟ್ಲಿ ಅವರು ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಪ್ರಣಾಳಿಕೆಯನ್ನು ರಾಃಉಲ್‌ ಗಾಂಧಿಯವರ ಆಪ್ತ ತುಕ್ಡೆ ತುಕ್ಡೆ ಗ್ಯಾಂಗ್‌ ಸಿದ್ದಪಡಿಸಿದೆ. ಆ ಪ್ರಣಾಳಿಕೆಯನ್ನು ದೇಶದಲ್ಲಿ ಅನುಷ್ಟಾನಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಇನ್ನು ಡಿಸೆಂಬರ್‌ 26ರಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ಗೃಹ ಸಚಿವ ಅಮಿತ್‌ ಶಾ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಕಾಂಗ್ರೆಸ್‌ ಹಾಗೂ ತುಕ್ಡೆ ತುಕ್ಡೆ ಗ್ಯಾಂಗ್‌ಗಳು ಕಾರಣ ಎಂದು ಆರೋಪಿಸಿದ್ದರು. ಏಪ್ರಿಲ್‌ 10, 2019ರಲ್ಲಿ ಚುನಾವಣಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡುವಾಗ ಅಮಿತ್‌ ಶಾ ಅವರು ಮೋದಿಯವರಿಂದ ಮಾತ್ರ ಬಲಿಷ್ಠ ಆಡಳಿತ ನೀಡಲು ಸಾಧ್ಯ ತುಕ್ಡೆ ತುಕ್ಡೆ ಗ್ಯಾಂಗ್‌ನಿಂದ ಅಲ್ಲ ಎಂದಿದ್ದರು.

ಈಗ, ತುಕ್ಡೆ ತುಕ್ಡೆಗ್ಯಾಂಗ್‌ ಕುರಿತು ಯಾವುದೇ ಮಾಹಿತಿ ತಮ್ಮಲಿಲ್ಲ ಎಂದು ಗೃಹ ಸಚಿವಾಲಯ ಹೇಳುವ ಮೂಲಕ ತಮ್ಮದೇ ಸಚಿವಾಳಯದ ಸಚಿವರು ಮಾಡುವ ಆರೋಪಗಳಿಗೆ ಬುನಾದಿಯಿಲ್ಲ ಎಂದು ನಿರೂಪಿಸಿದೆ. ಯಾವ ಆಧಾರದ ಮೇಲೆ ತುಕ್ಡೆ ತುಕ್ಡೆ ಗ್ಯಾಂಗ್‌ ಎಂಬ ಪದ ಪ್ರಯೋಗವನ್ನು ಬಿಜೆಪಿಯ ನಾಯಕರು ಪದೇ ಪದೇ ಮಾಡುತ್ತಿದ್ದಾರೆ ಎನ್ನುವುದರ ಕುರಿಉ ಸ್ಪಷ್ಟನೆ ನೀಡುವ ಅಗತ್ಯವಿದೆ.

ಕೃಪೆ: ಸ್ಕ್ರಾಲ್.ಇನ್

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಲೋಕಸಭಾಗೆ ಕರ್ನಾಟಕದಿಂದ ಸ್ಪರ್ಧೆ ಮಾಡಿ : ರಾಹುಲ್‌‌ಗೆ ಎಡ ಪಕ್ಷಗಳ ಸಲಹೆ – I.N.D.I.A ಒಡಕು!
ಕರ್ನಾಟಕ

ಲೋಕಸಭಾಗೆ ಕರ್ನಾಟಕದಿಂದ ಸ್ಪರ್ಧೆ ಮಾಡಿ : ರಾಹುಲ್‌‌ಗೆ ಎಡ ಪಕ್ಷಗಳ ಸಲಹೆ – I.N.D.I.A ಒಡಕು!

by Prathidhvani
December 5, 2023
ದಿಕ್ಕು ತಪ್ಪಿಸುವ TV NEWS ಮಾದ್ಯಮದ ಚರ್ಚೆಗಳು
ಅಂಕಣ

ದಿಕ್ಕು ತಪ್ಪಿಸುವ TV NEWS ಮಾದ್ಯಮದ ಚರ್ಚೆಗಳು

by ಡಾ | ಜೆ.ಎಸ್ ಪಾಟೀಲ
December 4, 2023
ಪ್ರಜಾಪ್ರಭುತ್ವ ಸಂವಿಧಾನ ಮತ್ತು ಮಾನವ ಹಕ್ಕುಗಳು : ನಾ ದಿವಾಕರ ಅವರ ಬರಹ
ದೇಶ

ಪ್ರಜಾಪ್ರಭುತ್ವ ಸಂವಿಧಾನ ಮತ್ತು ಮಾನವ ಹಕ್ಕುಗಳು : ನಾ ದಿವಾಕರ ಅವರ ಬರಹ

by Prathidhvani
December 10, 2023
ಸಾಯಂಗ್ರಿದ್ರೆ ಬಸ್ಸಿಗೆ ಸಿಕ್ಕಾಕ್ಕೊಂಡು ಸಾಯ್ಬೇಕಿತ್ತು – ಕೂಗಾಡಿದ ದೇವೇಗೌಡರ ಹಿರಿಸೊಸೆ
ಇದೀಗ

ಸಾಯಂಗ್ರಿದ್ರೆ ಬಸ್ಸಿಗೆ ಸಿಕ್ಕಾಕ್ಕೊಂಡು ಸಾಯ್ಬೇಕಿತ್ತು – ಕೂಗಾಡಿದ ದೇವೇಗೌಡರ ಹಿರಿಸೊಸೆ

by Prathidhvani
December 4, 2023
CM ಸಿದ್ದರಾಮಯ್ಯ ಕಾರಿಗೆ ದಾರಿ ಮಾಡಿಕೊಡಲು ಕುಮಾರಸ್ವಾಮಿ ಕಾರು ಪಕ್ಕಕ್ಕೆ ನಿಲ್ಲಿಸಿದ ಪೊಲೀಸರು
ಕರ್ನಾಟಕ

CM ಸಿದ್ದರಾಮಯ್ಯ ಕಾರಿಗೆ ದಾರಿ ಮಾಡಿಕೊಡಲು ಕುಮಾರಸ್ವಾಮಿ ಕಾರು ಪಕ್ಕಕ್ಕೆ ನಿಲ್ಲಿಸಿದ ಪೊಲೀಸರು

by Prathidhvani
December 6, 2023
Next Post
ಬಿಜೆಪಿ ಜತೆ ಮೈತ್ರಿ ಮುರಿದುಕೊಂಡ ಮಿತ್ರ ಪಕ್ಷಗಳು    

ಬಿಜೆಪಿ ಜತೆ ಮೈತ್ರಿ ಮುರಿದುಕೊಂಡ ಮಿತ್ರ ಪಕ್ಷಗಳು    

ಸಾಯಿಸುವ ದುರುದ್ದೇಶ ಹೊಂದಿದ್ದ ಪೊಲೀಸರು: ಟ್ರಿಬ್ಯುನಲ್ ಅಭಿಮತ

ಸಾಯಿಸುವ ದುರುದ್ದೇಶ ಹೊಂದಿದ್ದ ಪೊಲೀಸರು: ಟ್ರಿಬ್ಯುನಲ್ ಅಭಿಮತ

ಕೇಜ್ರಿವಾಲ್ ಎದುರು ಮಂಡಿಯೂರಿದ ಕಾಂಗ್ರೆಸ್

ಕೇಜ್ರಿವಾಲ್ ಎದುರು ಮಂಡಿಯೂರಿದ ಕಾಂಗ್ರೆಸ್, ಬಿಜೆಪಿ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist