Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಚಿರತೆಗಳಿಗೆ ಚಿತೆಯಾಗುತ್ತಿದೆ ಶಿವಮೊಗ್ಗ-ಸಾಗರ ರೈಲು ಮಾರ್ಗ

ಚಿರತೆಗಳಿಗೆ ಚಿತೆಯಾಗುತ್ತಿದೆ ಶಿವಮೊಗ್ಗ-ಸಾಗರ ರೈಲು ಮಾರ್ಗ
ಚಿರತೆಗಳಿಗೆ ಚಿತೆಯಾಗುತ್ತಿದೆ ಶಿವಮೊಗ್ಗ-ಸಾಗರ ರೈಲು ಮಾರ್ಗ

February 8, 2020
Share on FacebookShare on Twitter

ಶಿವಮೊಗ್ಗದಲ್ಲಿ ಎರಡು ತಿಂಗಳ ಅವಧಿಯಲ್ಲಿ ಎರಡು ಚಿರತೆಗಳು ರೈಲಿಗೆ ಸಿಲುಕಿ ಮೃತಪಟ್ಟಿದ್ದು ಅಘಾತಕಾರಿಯಾಗಿದೆ. ತರಾತುರಿಯಲ್ಲಿ ಚಿರತೆಗಳ ಶವಪರೀಕ್ಷೆ ನಡೆಸಿ ಸುಟ್ಟು ಹಾಕಿರುವ ಅರಣ್ಯ ಇಲಾಖೆಯ ನಡೆ ಆತಂಕ ಮೂಡಿಸಿದೆ. ಮಲೆನಾಡು ಹುಲಿಗಳಿಗಿಂತ ಚಿರತೆಗಳಿಗೆ ಪ್ರಸಿದ್ಧವಾದ ಪ್ರದೇಶ, ಹಳೆ ತಲೆಮಾರಿನ ಕಥೆಗಳನ್ನ ಕೇಳುತ್ತಾ ಹೋದರೆ ಚಿರತೆಗಳ ಬಗ್ಗೆ ಒಂದಾದರೂ ಕಥೆ ಇರುತ್ತದೆ. ಮೇಯಲು ಹೋದ ದನ ಕರುಗಳ ಮೇಲೆ ಬಿದ್ದಿರುವ ಉಗುರುಗಳ ಗುರುತನ್ನೂ ಕೂಡ ಜನರು ನೆನಪು ಮಾಡಿಕೊಳ್ಳುತ್ತಾರೆ. ಪಶ್ಚಿಮ ಘಟ್ಟಗಳಲ್ಲಿನ ಅರಣ್ಯ ನಾಶ ಚಿರತೆಗಳ ಸಂತತಿಯನ್ನ ಕ್ರಮೇಣ ಕಡಿಮೆ ಮಾಡಿತ್ತು, ಇದರ ಜೊತೆ ಬೇಟೆ, ಹೊಲಗದ್ದೆಗಳ ಉರುಳಿಗೆ ಬಿದ್ದು ಸಾವಿಗೀಡಾಗುತ್ತಿದ್ದ ಚಿರತೆಗಳು ರಕ್ಷಿತಾರಣ್ಯ ಪ್ರದೇಶದಲ್ಲಿ ಮಾತ್ರ ವಾಸವಿದ್ದವು, ಆದರೆ ಈಗ ಇಂತಹ ಪ್ರದೇಶಗಳಿಗೂ ಉಳಿಗಾಲವಿಲ್ಲ.

ಹೆಚ್ಚು ಓದಿದ ಸ್ಟೋರಿಗಳು

ಬಿಜೆಪಿಗೆ ಬಿಜೆಪಿಯೇ ಎದುರಾಳಿ..! ‘ನಾವಿಕನಿಲ್ಲದ ಹಡಗು’ ಭಾಗ – 02

‘ಸಿದ್ದರಾಮಯ್ಯ ಎರಡು ದೋಣಿ ಮೇಲೆ ಕಾಲಿಡಬಾರದು’ : ಆರೋಗ್ಯ ಸಚಿವ ಡಾ.ಕೆ ಸುಧಾಕರ್​

ಶಿವಮೊಗ್ಗದಿಂದ ವಿಮಾನದಲ್ಲಿ ಪ್ರಯಾಣಿಸುವವರಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ

ಶಿವಮೊಗ್ಗದಿಂದ ಸಾಗರಕ್ಕೆ ಸಾಗುವ ರೈಲು ಮಾರ್ಗ ಚಿರತೆಗಳಿಗೆ ಚಿತೆಯಾಗಿ ಪರಿಣಮಿಸಿದೆ, ಎರಡೇ ತಿಂಗಳ ಅವಧಿಯಲ್ಲಿ ಎರಡು ಚಿರತೆಗಳು ರೈಲುಗಳಿಗೆ ಮೃತಪಟ್ಟಿವೆ. ಬುಧವಾರ ಮುಂಜಾನೆ ಶಿವಮೊಗ್ಗ ತಾಲೂಕಿನ ಕೊನಗನಹಳ್ಳಿಯಲ್ಲಿ ರೈಲ್ವೇ ಟ್ರ್ಯಾಕ್‌ ಸಮೀಪ ದೈತ್ಯಾಕಾರದ ಚಿರತೆ ನೆಲಕ್ಕೆ ಒರಗಿತ್ತು, ಯಾರೇ ಅದನ್ನ ನೋಡಿದರೂ ಭಯಮೂಡಿಸುವಂತಹ ಕಾಯ ಆ ಚಿರತೆಯದ್ದಾಗಿತ್ತು, ಮೃತ ಚಿರತೆಯನ್ನ ಒಂದು ದಿನದ ನಂತರ ಅಲ್ಲಿನ ಜನರು ಗುರುತಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಶಂಕರ ಅರಣ್ಯ ವಿಭಾಗದ ವಲಯ ಅಧಿಕಾರಿ ಜಯೇಶ್‌ ಹಾಗೂ ವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಿ, ಅಲ್ಲೇ ಶವ ಪರೀಕ್ಷೆಯನ್ನೂ ನಡೆಸಿ ಪ್ರಾಥಮಿಕ ವರದಿಗಳ ಪ್ರಕಾರ ರೈಲು ಅಪಘಾತದಲ್ಲಿ ಚಿರತೆ ಮೃತಪಟ್ಟಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ಚಿರತೆ ಸಾವು ಅರಣ್ಯ ಇಲಾಖೆಗೆ ಬಹಳ ಮುಖ್ಯವಾಗಲಿಲ್ಲ, ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಗಳು ಯಾರಿಗೂ ಅದರ ಬಗ್ಗೆ ತನಿಖೆ ಮಾಡಬೇಕು ಎಂದು ಅನಿಸಲಿಲ್ಲ, ಪತ್ರಿಕೆಗಳಲ್ಲಿ ಶ್ರದ್ಧಾಂಜಲಿಯ ತರಹದೊಂದು ಚಿಕ್ಕ ವರದಿಯೊಂದಿಗೆ ಸಮಾಪ್ತಿಯಾಯ್ತು.

ಒಂದು ತಿಂಗಳ ಹಿಂದೆ ಇದೇ ರೈಲು ಮಾರ್ಗದಲ್ಲಿ ರಿಪ್ಪನ್‌ಪೇಟೆ ಸಮೀಪ ಸೂಡೂರು ಗ್ರಾಮದ ಬಳಿಯಿಂದ ಚಿರತೆ ಕಾಲು ಉಗುರುಗಳನ್ನ ಕತ್ತರಿಸಿಕೊಂಡು ಬಿದ್ದಿತ್ತು, ಶೆಟ್ಟಿಹಳ್ಳಿ ಅಭಯಾರಣ್ಯದ ಸಮೀಪವೂ ಇರುವ ಕಾರಣ ಯಾರೋ ಬೇಟೆಗಾರರು ಹೊಡೆದುರುಳಿಸಿ ಕಾಲು ಉಗುರುಗಳನ್ನ ಕಿತ್ತಿರಬಹುದೆಂಬ ಅನುಮಾನ ಮೂಡಿತು ಆದು ಬಲಗೊಳ್ಳುವ ಮೊದಲೇ ಆ ಭಾಗದ ಅರಣ್ಯ ಅಧಿಕಾರಿಗಳು ಅದರ ಶವ ಪರೀಕ್ಷೆ ಮಾಡಿ ರೈಲು ಬಡಿದು ಮೃತಪಟ್ಟಿದೆ ಎಂದು ಹಿರಿಯ ಅಧಿಕಾರಿಗಳಿಗೆ ತಿಳಿಸಿದರು ಆಗಲೂ ಕೂಡ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಹೋಗಲೇ ಇಲ್ಲ, ಇದುವರೆಗೆ ಆ ಚಿರತೆ ಸಾವಿಗೊಂದು ವರದಿಯನ್ನೂ ನೀಡಿಲ್ಲ. ಒಂದು ವೇಳೆ ರೈಲು ಅಪಘಾತಕ್ಕೇ ಪ್ರಾಣಿಗಳು ಮೃತಪಡುತ್ತಿವೆ ಎಂದಾದರೆ ಆ ಬಗ್ಗೆ ರೈಲ್ವೇ ಇಲಾಖೆಗೊಂದು ಮನವಿಯನ್ನ ನೀಡಿ ರೈಲಿನ ವೇಗದ ಮಿತಿಯನ್ನ ಅಭಯಾರಣ್ಯ ವ್ಯಾಪ್ತಿ ( ಹತ್ತು ಕಿಲೋಮೀಟರ್‌ ವರೆಗೆ ಸೇರುವ ಪ್ರದೇಶ) ಯಲ್ಲಿ ಕಡಿಮೆ ಮಾಡಿಸಬಹುದು.

ಈ ಕುರಿತು ಪರಿಸರ ಹೋರಾಟಗಾರ ಅಜಯ್‌ಶರ್ಮಾ ಬೇಸರ ವ್ಯಕ್ತಪಡಿಸುತ್ತಾರೆ, ೨೦೧೯ರಲ್ಲಿ ೭೩ ಚಿರತೆಗಳು ರಸ್ತೆ ಅಪಘಾತದಲ್ಲಿ, ಇಪ್ಪತ್ತಕ್ಕೂ ಅಧಿಕ ಚಿರತೆಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ, ಸಾಮಾನ್ಯವಾಗಿ ಮಲೆನಾಡಿನಲ್ಲಿ ಮುಂಜಾನೆ ಮಂಜು ಕವಿದಿರುತ್ತೆ, ಆಹಾರವಿಲ್ಲದೇ ನಿತ್ರಾಣಗೊಂಡಿರುವ ಚಿರತೆಗಳು ಮಬ್ಬು ಬೆಳಕಿನಲ್ಲಿ ಇದ್ದಕ್ಕಿದ್ದಂತೆ ಎರಗುವ ರೈಲಿನ ಶಬ್ಧಕ್ಕೆ ವಿಚಲಿತಗೊಂಡು ಆಚೀಚೆ ಹರಿದಾಡಿ ಪ್ರಾಣ ಬಿಟ್ಟಿರುವ ಸಾಧ್ಯತೆಗಳಿವೆ. ಈ ಕುರಿತು ಸಮಗ್ರವಾಗಿ ಅರಣ್ಯ ಇಲಾಖೆ ವರದಿ ನೀಡಬೇಕು, ಚಿರತೆಗಳು ಈ ಭಾಗದಲ್ಲಿ ಸಂಚರಿಸುವುದು ಜನರಿಗೂ ಆತಂಕ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಯುಗಾದಿ ಶುಭ ಮುಹೂರ್ತಕ್ಕೆ ಕಾಯುತ್ತಿದ್ದಾರೆ ಪಕ್ಷಾಂತರಿಗಳು..! ಇವರು ಜಂಪಿಂಗ್​ ಸ್ಟಾರ್ಸ್​.. They are Jumping Stars
Top Story

ಯುಗಾದಿ ಶುಭ ಮುಹೂರ್ತಕ್ಕೆ ಕಾಯುತ್ತಿದ್ದಾರೆ ಪಕ್ಷಾಂತರಿಗಳು..! ಇವರು ಜಂಪಿಂಗ್​ ಸ್ಟಾರ್ಸ್​.. They are Jumping Stars

by ಕೃಷ್ಣ ಮಣಿ
March 20, 2023
ಕಾಂಗ್ರೆಸ್ ಗ್ಯಾರಂಟಿ ನಂಬರ್ 4 : ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ..! : Congress guarantee number 4
Top Story

ಕಾಂಗ್ರೆಸ್ ಗ್ಯಾರಂಟಿ ನಂಬರ್ 4 : ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ..! : Congress guarantee number 4

by ಪ್ರತಿಧ್ವನಿ
March 20, 2023
ಸುಮಲತಾ ಬಿಜೆಪಿಗೆ ಬೆಂಬಲ, ಈ ವಾರದಲ್ಲೇ ಶಿವರಾಮೇಗೌಡ ಬಿಜೆಪಿ ಸೇರ್ಪಡೆ :ಮಂಡ್ಯದಲ್ಲಿ ಜೆಡಿಎಸ್​ಗೆ ಈ ಬಾರಿ ಸಂಕಷ್ಟ..?
ಕರ್ನಾಟಕ

ಸುಮಲತಾ ಬಿಜೆಪಿಗೆ ಬೆಂಬಲ, ಈ ವಾರದಲ್ಲೇ ಶಿವರಾಮೇಗೌಡ ಬಿಜೆಪಿ ಸೇರ್ಪಡೆ :ಮಂಡ್ಯದಲ್ಲಿ ಜೆಡಿಎಸ್​ಗೆ ಈ ಬಾರಿ ಸಂಕಷ್ಟ..?

by ಮಂಜುನಾಥ ಬಿ
March 20, 2023
ಒಕ್ಕಲಿಗ-ಮುಸ್ಲಿಮರನ್ನು ಎತ್ತಿ ಕಟ್ಟುವ ಹುನ್ನಾರವೇ? ನಟ ಕಿಶೋರ್‌ ಪ್ರಶ್ನೆ
Top Story

ಒಕ್ಕಲಿಗ-ಮುಸ್ಲಿಮರನ್ನು ಎತ್ತಿ ಕಟ್ಟುವ ಹುನ್ನಾರವೇ? ನಟ ಕಿಶೋರ್‌ ಪ್ರಶ್ನೆ

by ಪ್ರತಿಧ್ವನಿ
March 22, 2023
ಮಳೆ ನೀರಲ್ಲಿ ಮತ್ತೆ ಮುಳುಗಿದ ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಹೈವೇ..! : Mysore Bangalore Express Highway
Top Story

ಮಳೆ ನೀರಲ್ಲಿ ಮತ್ತೆ ಮುಳುಗಿದ ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಹೈವೇ..! : Mysore Bangalore Express Highway

by ಪ್ರತಿಧ್ವನಿ
March 18, 2023
Next Post
ಸರ್ಕಾರದಲ್ಲಿ ಶ್ರೀರಾಮುಲುಗೆ ಅನ್ಯಾಯ: ಬಿಜೆಪಿಯಿಂದ ದೂರವಾಗಲಿದೆ ವಾಲ್ಮೀಕಿ ಸಮುದಾಯ!

ಸರ್ಕಾರದಲ್ಲಿ ಶ್ರೀರಾಮುಲುಗೆ ಅನ್ಯಾಯ: ಬಿಜೆಪಿಯಿಂದ ದೂರವಾಗಲಿದೆ ವಾಲ್ಮೀಕಿ ಸಮುದಾಯ!

ದೇಶದ ಸಮಸ್ಯೆಗಳ ಕುರಿತುಕೇಂದ್ರಕ್ಕೆ ಗಮನ ಹರಿಸಲು ಸಾಧ್ಯವಾಗದಿದ್ದಲ್ಲಿ ಅಧಿಕಾರ ತ್ಯಜಿಸಲಿ – ದೊರೆಸ್ವಾಮಿ

ದೇಶದ ಸಮಸ್ಯೆಗಳ ಕುರಿತುಕೇಂದ್ರಕ್ಕೆ ಗಮನ ಹರಿಸಲು ಸಾಧ್ಯವಾಗದಿದ್ದಲ್ಲಿ ಅಧಿಕಾರ ತ್ಯಜಿಸಲಿ – ದೊರೆಸ್ವಾಮಿ

ಸೋತು-ಗೆದ್ದು ನಾಲ್ಕುವರೆ ದಶಕ ಬಿಜೆಪಿ ಕಟ್ಟಿದ್ದ ಆರಗ ಜ್ಞಾನೇಂದ್ರಗೆ ಮಂತ್ರಿ ಪದವಿ ಮರೀಚಿಕೆ

ಸೋತು-ಗೆದ್ದು ನಾಲ್ಕುವರೆ ದಶಕ ಬಿಜೆಪಿ ಕಟ್ಟಿದ್ದ ಆರಗ ಜ್ಞಾನೇಂದ್ರಗೆ ಮಂತ್ರಿ ಪದವಿ ಮರೀಚಿಕೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist