Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕೇರಳದ ಬೀಡಿಕಟ್ಟುವ ಮಹಿಳೆ ಮೇಲೆ ಮಂಗಳೂರಿನ ಸಿಎಎ ಗಲಭೆ ಸಂಬಂಧಿಸಿದಂತೆ ನೊಟೀಸ್

ಕೇರಳದ ಬೀಡಿಕಟ್ಟುವ ಮಹಿಳೆ ಮೇಲೆ ಮಂಗಳೂರಿನ ಸಿಎಎ ಗಲಭೆ ಸಂಬಂಧಿಸಿದಂತೆ ನೊಟೀಸ್
ಕೇರಳದ ಬೀಡಿಕಟ್ಟುವ ಮಹಿಳೆ ಮೇಲೆ ಮಂಗಳೂರಿನ ಸಿಎಎ ಗಲಭೆ ಸಂಬಂಧಿಸಿದಂತೆ ನೊಟೀಸ್

January 21, 2020
Share on FacebookShare on Twitter

ಅಂದು ಡಿಸೆಂಬರ್ 19, ಪೌರತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ದೊಡ್ಡ ಗಲಾಟೆಯೇ ನಡೆದುಹೋಯಿತು. ಪೊಲೀಸ್ ಕಾರ್ಯಾಚರಣೆಯೂ ಶುರುವಾಯಿತು. ಅಂದು ಮಂಗಳೂರಿಗೆ ಯಾರ್ಯಾರು ಬಂದಿದ್ದರೋ ಎಲ್ಲರನ್ನು ವಿಚಾರಕ್ಕೆ ಪಡಿಸಲಾಯಿತು.

ಹೆಚ್ಚು ಓದಿದ ಸ್ಟೋರಿಗಳು

10 ತಿಂಗಳ ನಂತ್ರ ನವಜೋತ್‌ ಸಿಂಗ್‌ ಸಿಧು ಜೈಲಿನಿಂದ ಬಿಡುಗಡೆ..!

ಜೆಡಿಎಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದ ಎ.ಟಿ.ರಾಮಸ್ವಾಮಿ ..!

ಚುನಾವಣೆ ಘೋಷಣೆ : ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ..!

ಅಂದು ಹಲವರಿಗೆ ನೊಟೀಸ್ ಕಳುಹಿಸಲಾಯಿತು. ಅದರಲ್ಲಿ ಕೇರಳದ ಬೀಡಿ ಕಟ್ಟುವ ಮಹಿಳೆಯೋರ್ವಳಿಗೂ ನೊಟೀಸ್ ತಲುಪಿತು. ಆ ಮಹಿಳೆ ಯಾವುದೋ ಕೆಲಸಕ್ಕಾಗಿ ಮಂಗಳೂರಿಗೆ ಬಂದು ಹೋಗಿದ್ದಳು. ಅದು ಅವಳ ವೈಯುಕ್ತಿಕ ಭೇಟಿಯೂ ಆಗಿತ್ತು.

ಅವಳ ಹೆಸರು ಶಫೀಯಾ, ಸುಮಾರು 55 ವಯಸ್ಸಿನ ಹಿರಿಯ ಮಹಿಳೆ. ಅವಳು ಇರುವುದು ಕೇರಳದ ಕಾಸರಗೋಡಿನ ಛತಿಪಡಪ್ಪು ಎಂಬ ಗ್ರಾಮದವರು. ಶಫಿಯಾ ಆ ಗ್ರಾಮದಲ್ಲಿ ಬಿಡಿ ಕಟ್ಟುವ ಕೆಲಸ ಮಾಡುತ್ತಾರೆ. ಆ ನೊಟೀಸ್ ಮೊದಲು ಏನೆಂಬುದೇ ಅವರಿಗೆ ಅರ್ಥವಾಗಲಿಲ್ಲ. ಅದೂ ಇಂಗ್ಲಿಷ್ ನಲ್ಲಿ ಕಳುಹಿಸಲಾಗಿತ್ತು. ಮೊದಲು ಶಫಿಯಾ ಗಾಭರಿಯಾದರು, ಯಾರೋ ಸಂಬಂಧಿಕರಿಗೆ ಏನೊ ತೊಂದರೆಯಾಗಿದೆಯಾ, ಕೇರಳದಲ್ಲಿರುವ ಇವರಿಗೆ ಮಂಗಳೂರಿನಿಂದ ಏಕೆ ಪತ್ರ ಬಂತು. ಅದರಲ್ಲೂ ಪೊಲೀಸ ಇಲಾಖೆಯ ಚಿಹ್ನೆ ಬೇರೆ. ತಕ್ಷಣ ಶಫಿಯಾ ತಮ್ಮ ಗ್ರಾಮದಲ್ಲಿ ಇಂಗ್ಲಿಷ ಬಲ್ಲವರ ಕಡೆಗೆ ತೆಗೆದುಕೊಂಡು ಹೋಗಿ ಆ ಪತ್ರವನ್ನು ತೋರಿಸಿದರು. ಆ ಗ್ರಾಮದವರು ಗಾಬರಿ ವ್ಯಕ್ತಪಡಿಸಿದರು. ಮಂಗಳೂರು ಎಲ್ಲಿ, ಕೇರಳದ ಈ ಗ್ರಾಮ ಎಲ್ಲಿ!!, ಬೀಡಿ ಕಟ್ಟಿಕೊಂಡು ಜೀವನದ ಬಂಡಿ ಸಾಗುತ್ತಿದ್ದ ಕಾರ್ಮಿಕ ಮಹಿಳೆಗೆ ಈ ನೊಟೀಸ್!! ಅಂತ ಇವರನ್ನು ಗ್ರಾಮದವರು ಕೇಳಿದಾಗ, ಶಫಿಯಾ, ಹೌದು ನಾನು ವೈಯುಕ್ತಿಕ ಕೆಲಸದ ಮೇಲೆ ಸಂಬಂಧಿಕರ ಕಡೆಗೆ ಹೋಗಿದ್ದೆ ಎಂಬುದನ್ನು ತಿಳಿಸಿದರು. ನಂತರ ಆ ಗ್ರಾಮದವರು ಇದು ಮಂಗಳೂರಿನಲ್ಲಿ ಆದ ಗಲಭೆಗೆ ಸಂಬಂಧಿಸಿದ್ದು ಎಂದಾಗ ಶಫಿಯಾ ಭಯಬೀತರಾದರು. ಆದರೂ ಮಂಗಳೂರಿನತ್ತ ಪ್ರಯಾಣ ಬೆಳೆಸಿದರು ಶಫಿಯಾ.

ಆ ನೊಟೀಸ್ ನಲ್ಲಿ ಏನಿತ್ತು?

ಪೊಲೀಸ್ ಇಲಾಖೆಯಿಂದ ಬಂದ ನೊಟೀಸ್ ನಲ್ಲಿ, “ನಮ್ಮ ತನಿಖೆಯ ಪ್ರಕಾರ, ಮಂಗಳೂರಿನಲ್ಲಿ ನಡೆದ ಗಲಭೆಯ ಮೂಲಗಳಿಂದ ಹಾಗೂ ತನಿಖಾ ತಂಡದಿಂದ ತಿಳಿದು ಬಂದಿದ್ದು ಏನೆಂದರೆ ಗಲಭೆ ಸಮಯದಲ್ಲಿ ತಾವು (ಶಫಿಯಾ) ಅಲ್ಲಿದ್ದದ್ದು ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದೆ. ಅಂದು ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಕೊಟ್ಟ ಎಚ್ಚರಿಕೆ ಮೇಲೂ ತಾವು ಆ ಗಲಭೆಯ ಹತ್ತಿರ ಇದ್ದಿರಿ. ಆ ಪ್ರಕಾರ ಭಾರತೀಯ ದಂಡ ಸಂಹಿತೆ 143, 147, 148, 188, 353, 332, 324, 427, 307, 120 ಬಿ ಹಾಗೂ ಸಿಆರ್ ಪಿಸಿ 174 ಪ್ರಕಾರ ಅದು ತಪ್ಪು. ಆದ ಕಾರಣ ತಾವು ಖುದ್ದು ವಿಚಾರಣೆಗೆ ಹಾಜರಾಗಿ ಮಂಗಳೂರಿಗೆ ಏಕೆ ಬಂದಿದ್ದು ಎಂದು ತಿಳಿಸಲು ಕೋರಲಾಗಿದೆ”.

ಮುಂದೆ?

ನೊಟೀಸ್ ನೋಡಿದ ಕೂಡಲೇ ಗ್ರಾಮದ ಹಿರಿಯರ ಸಲಹೆಯ ಪ್ರಕಾರ ಡಿವೈಎಫ್ ಆಯ್ ಅಧ್ಯಕ್ಷರನ್ನು ಶಫಿಯಾ ಭೇಟಿಯಾಗಿ ಎಲ್ಲವನ್ನೂ ವಿವರಿಸಿದರು. ಅಧ್ಯಕ್ಷ ಮುನೀರ್ ಕಟಿಪಲ್ಲಾ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಅವರು ಏಕೆ ಮತ್ತು ಯಾರನ್ನು ಕಾಣಲು ಬಂದಿದ್ದರೆಂಬುದು ವಿವರಿಸಿದರು. ನಂತರ ಪೊಲೀಸರು ಅವರನ್ನು ವಾಪಸ್ ಕಳುಹಿಸಿದರು.

ಆ ಘಟನೆ ನಂತರ ಇಂಥಹ ಹಲವಾರು ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೊಟೀಸ್ ಬಂದಿದ್ದು ಅವರೆಲ್ಲ ಈಗ ಮಂಗಳೂರಿಗೆ ಬರುವುದೇ ಬೇಡ ಎಂದು ನಿರ್ಧರಿಸಿದ್ದಾರಂತೆ.

ನಂತರ ಇಂತಹ ನೂರಾರು ನೊಟೀಸ್ ಗಳು ಹಲವರಿಗೆ ತಲುಪಿದರ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಪಿ. ಎಸ್. ಹರ್ಷ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದು ಹೀಗೆ, “ಎಷ್ಟು ನೊಟೀಸ್ ಕಳುಹಿಸಿದ್ದೇವೆ ಹಾಗೂ ಯಾರ್ಯಾರಿಗೆ ಎಂಬುದು ತಿಳಿಸಲಾಗುವುದಿಲ್ಲ ಕಾರಣ ಪ್ರಕರಣ ಈಗ ಸಿಬಿಐ ಗೆ ಹಸ್ತಾಂತರಿಸಲಾಗಿದೆ. ಈ ಘಟನೆಯ ನಂತರ ಪೊಲೀಸರ ಮೇಲೆ ಹಲವು ಆರೋಪಗಳು ಕೇಳಿ ಬಂದವು. ಕೇರಳದ ಬೀಡಿ ಕಟ್ಟುವವರಷ್ಟೇ ಅಲ್ಲ, ಅಂದು ಬೇಟಿ ನೀಡಿದ್ದ ವ್ಯಾಪಾರಿಗಳು, ವಿದ್ಯಾರ್ಥಿಗಳು, ಉದ್ಯೋಗಸ್ಥರು ಯಾರನ್ನೂ ಬಿಟ್ಟಿಲ್ಲ. ಎಲ್ಲರನ್ನೂ ವಿಚಾರಿಸಿದ್ದೇವೆ. ಅಂದು ಆ ಸೂಕ್ಷ್ಮ ಜಾಗದಲ್ಲಿ ನೆರೆದಿದ್ದ ಎಲ್ಲಾ ಮೊಬೈಲ್ ನಂಬರಗಳನ್ನು ತೆಗೆದುಕೊಂಡು ಅವರಿಗೆಲ್ಲ ನೊಟಿಸ್ ಕೊಡಲಾಗಿತ್ತು”. ಎಂದವರು ತಿಳಿಸಿದರು.

ಇಲ್ಲಿ ಬೀಡಿ ಕಟ್ಟುವಂತಹ ಹಾಗೂ ದಿನಗೂಲಿ ಕೆಲಸ ಮಾಡುವವರು ಒಂದೆರಡು ದಿನ ಮಂಗಳೂರಿಗೆ ಬಂದು ಸಮಯ ಕಳೆಯುವುದು ಅಂದರೆ ಇತ್ತ ದುಡಿಮೆಯೂ ಇಲ್ಲ, ಖರ್ಚು ಬೇರೆ…ಇದರತ್ತ ಯಾರೂ ಗಮನಹರಿಸುವುದಿಲ್ಲ. ಅವರ ಕಷ್ಟ ಅವರಿಗೆ ಇವರ ಕಷ್ಟ ಇವರಿಗೆ. ಇತ್ತ ಪೊಲೀಸರಿಗೂ ಏನೆನ್ನುವಂತಿಲ್ಲ.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ದೊಡ್ಡಬಳ್ಳಾಪುರದ ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಒಲಿಯುತ್ತದೆ ವಿಜಯಲಕ್ಷ್ಮಿ | PART 5 | #PRATIDHVANI
ಇದೀಗ

ದೊಡ್ಡಬಳ್ಳಾಪುರದ ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಒಲಿಯುತ್ತದೆ ವಿಜಯಲಕ್ಷ್ಮಿ | PART 5 | #PRATIDHVANI

by ಪ್ರತಿಧ್ವನಿ
March 27, 2023
ನಂದಿನಿ ಕನ್ನಡಿಗರ ಆಸ್ತಿ, ಕನ್ನಡಿಗರ ಅಸ್ಮಿತೆ ಹಾಗೂ ಕನ್ನಡಿಗರ ಜೀವನಾಡಿ : ಹೆಚ್.ಡಿ.ಕುಮಾರಸ್ವಾಮಿ
Top Story

ನಂದಿನಿ ಕನ್ನಡಿಗರ ಆಸ್ತಿ, ಕನ್ನಡಿಗರ ಅಸ್ಮಿತೆ ಹಾಗೂ ಕನ್ನಡಿಗರ ಜೀವನಾಡಿ : ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
March 30, 2023
ʻಗುರುದೇವ್‌ ಹೊಯ್ಸಳʼನಾದ ಡಾಲಿ… ನಟ ರಾಕ್ಷಸನ ಆಕ್ಟಿಂಗ್‌ಗೆ ಫ್ಯಾನ್ಸ್‌ ಫಿದಾ..!
ಸಿನಿಮಾ

ʻಗುರುದೇವ್‌ ಹೊಯ್ಸಳʼ ಬಗ್ಗೆ ನೆಗೆಟಿವ್‌ ಕಮೆಂಟ್‌.. ಖಡಕ್‌ ಉತ್ತರ ಕೊಟ್ಟ ನಿರ್ಮಾಪಕ..!

by ಪ್ರತಿಧ್ವನಿ
April 1, 2023
ನಂದಿನಿ ಮೊಸರು ಪ್ಯಾಕೆಟ್‌ ಮೇಲೆ ‘ದಹಿ’ ಮುದ್ರಣ ಆದೇಶ ಹಿಂಪಡೆದ FSSAI.. ಕನ್ನಡಿಗರು ಟೀಕೆ ಬೆನ್ನಲ್ಲೇ ನಿರ್ಧಾರ..!
Top Story

ನಂದಿನಿ ಮೊಸರು ಪ್ಯಾಕೆಟ್‌ ಮೇಲೆ ‘ದಹಿ’ ಮುದ್ರಣ ಆದೇಶ ಹಿಂಪಡೆದ FSSAI.. ಕನ್ನಡಿಗರು ಟೀಕೆ ಬೆನ್ನಲ್ಲೇ ನಿರ್ಧಾರ..!

by ಪ್ರತಿಧ್ವನಿ
March 30, 2023
ಅಪ್ಪ ಧ್ರುವನಾರಾಯಣ್ ಫೋಟೋ ಮುಂದೆ ದರ್ಶನ್ ಕಣ್ಣೀರು | DHRUVA NARAYAN | SIDDARAMAIAH | DARSHAN |
ಇದೀಗ

ಅಪ್ಪ ಧ್ರುವನಾರಾಯಣ್ ಫೋಟೋ ಮುಂದೆ ದರ್ಶನ್ ಕಣ್ಣೀರು | DHRUVA NARAYAN | SIDDARAMAIAH | DARSHAN |

by ಪ್ರತಿಧ್ವನಿ
March 29, 2023
Next Post
ಕಾಂಗ್ರೆಸ್ ಬಣ ಜಗಳ ತೀವ್ರ: ಸಿದ್ದು ವಿರುದ್ಧ  ಮೂಲ ಕಾಂಗ್ರೆಸ್ಸಿಗರ ಸೆಡ್ಡು

ಕಾಂಗ್ರೆಸ್ ಬಣ ಜಗಳ ತೀವ್ರ: ಸಿದ್ದು ವಿರುದ್ಧ ಮೂಲ ಕಾಂಗ್ರೆಸ್ಸಿಗರ ಸೆಡ್ಡು

ಇಂದು  ಸುಪ್ರೀಂಕೋರ್ಟಿನ ಮೇಲೆ ದೇಶದ ಕಣ್ಣು

ಇಂದು ಸುಪ್ರೀಂಕೋರ್ಟಿನ ಮೇಲೆ ದೇಶದ ಕಣ್ಣು

ಉಡುಪಿ ರಥಬೀದಿಯಲ್ಲೊಂದು ಬಂಡಾಯ!

ಉಡುಪಿ ರಥಬೀದಿಯಲ್ಲೊಂದು ಬಂಡಾಯ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist