• Home
  • About Us
  • ಕರ್ನಾಟಕ
Wednesday, January 21, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಕೇರಳದ ಬೀಡಿಕಟ್ಟುವ ಮಹಿಳೆ ಮೇಲೆ ಮಂಗಳೂರಿನ ಸಿಎಎ ಗಲಭೆ ಸಂಬಂಧಿಸಿದಂತೆ ನೊಟೀಸ್

by
January 21, 2020
in ಕರ್ನಾಟಕ
0
ಕೇರಳದ ಬೀಡಿಕಟ್ಟುವ ಮಹಿಳೆ ಮೇಲೆ ಮಂಗಳೂರಿನ ಸಿಎಎ ಗಲಭೆ ಸಂಬಂಧಿಸಿದಂತೆ ನೊಟೀಸ್
Share on WhatsAppShare on FacebookShare on Telegram

ಅಂದು ಡಿಸೆಂಬರ್ 19, ಪೌರತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ದೊಡ್ಡ ಗಲಾಟೆಯೇ ನಡೆದುಹೋಯಿತು. ಪೊಲೀಸ್ ಕಾರ್ಯಾಚರಣೆಯೂ ಶುರುವಾಯಿತು. ಅಂದು ಮಂಗಳೂರಿಗೆ ಯಾರ್ಯಾರು ಬಂದಿದ್ದರೋ ಎಲ್ಲರನ್ನು ವಿಚಾರಕ್ಕೆ ಪಡಿಸಲಾಯಿತು.

ADVERTISEMENT

ಅಂದು ಹಲವರಿಗೆ ನೊಟೀಸ್ ಕಳುಹಿಸಲಾಯಿತು. ಅದರಲ್ಲಿ ಕೇರಳದ ಬೀಡಿ ಕಟ್ಟುವ ಮಹಿಳೆಯೋರ್ವಳಿಗೂ ನೊಟೀಸ್ ತಲುಪಿತು. ಆ ಮಹಿಳೆ ಯಾವುದೋ ಕೆಲಸಕ್ಕಾಗಿ ಮಂಗಳೂರಿಗೆ ಬಂದು ಹೋಗಿದ್ದಳು. ಅದು ಅವಳ ವೈಯುಕ್ತಿಕ ಭೇಟಿಯೂ ಆಗಿತ್ತು.

ಅವಳ ಹೆಸರು ಶಫೀಯಾ, ಸುಮಾರು 55 ವಯಸ್ಸಿನ ಹಿರಿಯ ಮಹಿಳೆ. ಅವಳು ಇರುವುದು ಕೇರಳದ ಕಾಸರಗೋಡಿನ ಛತಿಪಡಪ್ಪು ಎಂಬ ಗ್ರಾಮದವರು. ಶಫಿಯಾ ಆ ಗ್ರಾಮದಲ್ಲಿ ಬಿಡಿ ಕಟ್ಟುವ ಕೆಲಸ ಮಾಡುತ್ತಾರೆ. ಆ ನೊಟೀಸ್ ಮೊದಲು ಏನೆಂಬುದೇ ಅವರಿಗೆ ಅರ್ಥವಾಗಲಿಲ್ಲ. ಅದೂ ಇಂಗ್ಲಿಷ್ ನಲ್ಲಿ ಕಳುಹಿಸಲಾಗಿತ್ತು. ಮೊದಲು ಶಫಿಯಾ ಗಾಭರಿಯಾದರು, ಯಾರೋ ಸಂಬಂಧಿಕರಿಗೆ ಏನೊ ತೊಂದರೆಯಾಗಿದೆಯಾ, ಕೇರಳದಲ್ಲಿರುವ ಇವರಿಗೆ ಮಂಗಳೂರಿನಿಂದ ಏಕೆ ಪತ್ರ ಬಂತು. ಅದರಲ್ಲೂ ಪೊಲೀಸ ಇಲಾಖೆಯ ಚಿಹ್ನೆ ಬೇರೆ. ತಕ್ಷಣ ಶಫಿಯಾ ತಮ್ಮ ಗ್ರಾಮದಲ್ಲಿ ಇಂಗ್ಲಿಷ ಬಲ್ಲವರ ಕಡೆಗೆ ತೆಗೆದುಕೊಂಡು ಹೋಗಿ ಆ ಪತ್ರವನ್ನು ತೋರಿಸಿದರು. ಆ ಗ್ರಾಮದವರು ಗಾಬರಿ ವ್ಯಕ್ತಪಡಿಸಿದರು. ಮಂಗಳೂರು ಎಲ್ಲಿ, ಕೇರಳದ ಈ ಗ್ರಾಮ ಎಲ್ಲಿ!!, ಬೀಡಿ ಕಟ್ಟಿಕೊಂಡು ಜೀವನದ ಬಂಡಿ ಸಾಗುತ್ತಿದ್ದ ಕಾರ್ಮಿಕ ಮಹಿಳೆಗೆ ಈ ನೊಟೀಸ್!! ಅಂತ ಇವರನ್ನು ಗ್ರಾಮದವರು ಕೇಳಿದಾಗ, ಶಫಿಯಾ, ಹೌದು ನಾನು ವೈಯುಕ್ತಿಕ ಕೆಲಸದ ಮೇಲೆ ಸಂಬಂಧಿಕರ ಕಡೆಗೆ ಹೋಗಿದ್ದೆ ಎಂಬುದನ್ನು ತಿಳಿಸಿದರು. ನಂತರ ಆ ಗ್ರಾಮದವರು ಇದು ಮಂಗಳೂರಿನಲ್ಲಿ ಆದ ಗಲಭೆಗೆ ಸಂಬಂಧಿಸಿದ್ದು ಎಂದಾಗ ಶಫಿಯಾ ಭಯಬೀತರಾದರು. ಆದರೂ ಮಂಗಳೂರಿನತ್ತ ಪ್ರಯಾಣ ಬೆಳೆಸಿದರು ಶಫಿಯಾ.

ಆ ನೊಟೀಸ್ ನಲ್ಲಿ ಏನಿತ್ತು?

ಪೊಲೀಸ್ ಇಲಾಖೆಯಿಂದ ಬಂದ ನೊಟೀಸ್ ನಲ್ಲಿ, “ನಮ್ಮ ತನಿಖೆಯ ಪ್ರಕಾರ, ಮಂಗಳೂರಿನಲ್ಲಿ ನಡೆದ ಗಲಭೆಯ ಮೂಲಗಳಿಂದ ಹಾಗೂ ತನಿಖಾ ತಂಡದಿಂದ ತಿಳಿದು ಬಂದಿದ್ದು ಏನೆಂದರೆ ಗಲಭೆ ಸಮಯದಲ್ಲಿ ತಾವು (ಶಫಿಯಾ) ಅಲ್ಲಿದ್ದದ್ದು ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದೆ. ಅಂದು ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಕೊಟ್ಟ ಎಚ್ಚರಿಕೆ ಮೇಲೂ ತಾವು ಆ ಗಲಭೆಯ ಹತ್ತಿರ ಇದ್ದಿರಿ. ಆ ಪ್ರಕಾರ ಭಾರತೀಯ ದಂಡ ಸಂಹಿತೆ 143, 147, 148, 188, 353, 332, 324, 427, 307, 120 ಬಿ ಹಾಗೂ ಸಿಆರ್ ಪಿಸಿ 174 ಪ್ರಕಾರ ಅದು ತಪ್ಪು. ಆದ ಕಾರಣ ತಾವು ಖುದ್ದು ವಿಚಾರಣೆಗೆ ಹಾಜರಾಗಿ ಮಂಗಳೂರಿಗೆ ಏಕೆ ಬಂದಿದ್ದು ಎಂದು ತಿಳಿಸಲು ಕೋರಲಾಗಿದೆ”.

ಮುಂದೆ?

ನೊಟೀಸ್ ನೋಡಿದ ಕೂಡಲೇ ಗ್ರಾಮದ ಹಿರಿಯರ ಸಲಹೆಯ ಪ್ರಕಾರ ಡಿವೈಎಫ್ ಆಯ್ ಅಧ್ಯಕ್ಷರನ್ನು ಶಫಿಯಾ ಭೇಟಿಯಾಗಿ ಎಲ್ಲವನ್ನೂ ವಿವರಿಸಿದರು. ಅಧ್ಯಕ್ಷ ಮುನೀರ್ ಕಟಿಪಲ್ಲಾ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಅವರು ಏಕೆ ಮತ್ತು ಯಾರನ್ನು ಕಾಣಲು ಬಂದಿದ್ದರೆಂಬುದು ವಿವರಿಸಿದರು. ನಂತರ ಪೊಲೀಸರು ಅವರನ್ನು ವಾಪಸ್ ಕಳುಹಿಸಿದರು.

ಆ ಘಟನೆ ನಂತರ ಇಂಥಹ ಹಲವಾರು ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೊಟೀಸ್ ಬಂದಿದ್ದು ಅವರೆಲ್ಲ ಈಗ ಮಂಗಳೂರಿಗೆ ಬರುವುದೇ ಬೇಡ ಎಂದು ನಿರ್ಧರಿಸಿದ್ದಾರಂತೆ.

ನಂತರ ಇಂತಹ ನೂರಾರು ನೊಟೀಸ್ ಗಳು ಹಲವರಿಗೆ ತಲುಪಿದರ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಪಿ. ಎಸ್. ಹರ್ಷ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದು ಹೀಗೆ, “ಎಷ್ಟು ನೊಟೀಸ್ ಕಳುಹಿಸಿದ್ದೇವೆ ಹಾಗೂ ಯಾರ್ಯಾರಿಗೆ ಎಂಬುದು ತಿಳಿಸಲಾಗುವುದಿಲ್ಲ ಕಾರಣ ಪ್ರಕರಣ ಈಗ ಸಿಬಿಐ ಗೆ ಹಸ್ತಾಂತರಿಸಲಾಗಿದೆ. ಈ ಘಟನೆಯ ನಂತರ ಪೊಲೀಸರ ಮೇಲೆ ಹಲವು ಆರೋಪಗಳು ಕೇಳಿ ಬಂದವು. ಕೇರಳದ ಬೀಡಿ ಕಟ್ಟುವವರಷ್ಟೇ ಅಲ್ಲ, ಅಂದು ಬೇಟಿ ನೀಡಿದ್ದ ವ್ಯಾಪಾರಿಗಳು, ವಿದ್ಯಾರ್ಥಿಗಳು, ಉದ್ಯೋಗಸ್ಥರು ಯಾರನ್ನೂ ಬಿಟ್ಟಿಲ್ಲ. ಎಲ್ಲರನ್ನೂ ವಿಚಾರಿಸಿದ್ದೇವೆ. ಅಂದು ಆ ಸೂಕ್ಷ್ಮ ಜಾಗದಲ್ಲಿ ನೆರೆದಿದ್ದ ಎಲ್ಲಾ ಮೊಬೈಲ್ ನಂಬರಗಳನ್ನು ತೆಗೆದುಕೊಂಡು ಅವರಿಗೆಲ್ಲ ನೊಟಿಸ್ ಕೊಡಲಾಗಿತ್ತು”. ಎಂದವರು ತಿಳಿಸಿದರು.

ಇಲ್ಲಿ ಬೀಡಿ ಕಟ್ಟುವಂತಹ ಹಾಗೂ ದಿನಗೂಲಿ ಕೆಲಸ ಮಾಡುವವರು ಒಂದೆರಡು ದಿನ ಮಂಗಳೂರಿಗೆ ಬಂದು ಸಮಯ ಕಳೆಯುವುದು ಅಂದರೆ ಇತ್ತ ದುಡಿಮೆಯೂ ಇಲ್ಲ, ಖರ್ಚು ಬೇರೆ…ಇದರತ್ತ ಯಾರೂ ಗಮನಹರಿಸುವುದಿಲ್ಲ. ಅವರ ಕಷ್ಟ ಅವರಿಗೆ ಇವರ ಕಷ್ಟ ಇವರಿಗೆ. ಇತ್ತ ಪೊಲೀಸರಿಗೂ ಏನೆನ್ನುವಂತಿಲ್ಲ.

Tags: CAA ProtestsCBI inquiryIPC SectionKasargodKeralaಕೇರಳಭಾರತೀಯ ದಂಡ ಸಂಹಿತೆಸಿಎಎ ಗಲಭೆಸಿಬಿಐ
Previous Post

ಕೇಜ್ರಿವಾಲ್ ಎದುರು ಮಂಡಿಯೂರಿದ ಕಾಂಗ್ರೆಸ್, ಬಿಜೆಪಿ!

Next Post

ಕಾಂಗ್ರೆಸ್ ಬಣ ಜಗಳ ತೀವ್ರ: ಸಿದ್ದು ವಿರುದ್ಧ ಮೂಲ ಕಾಂಗ್ರೆಸ್ಸಿಗರ ಸೆಡ್ಡು

Related Posts

ಸಚಿವ ಈಶ್ವರ್ ಖಂಡ್ರೆಗೆ ಒಲಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಾರಥ್ಯ..!
ಇದೀಗ

ಸಚಿವ ಈಶ್ವರ್ ಖಂಡ್ರೆಗೆ ಒಲಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಾರಥ್ಯ..!

by ಪ್ರತಿಧ್ವನಿ
January 20, 2026
0

ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿಂದು ನಡೆದ ಮಹಾಸಭಾದ ಕಾರ್ಯಕಾರಿಣಿ ಸಭೆಯಲ್ಲಿ...

Read moreDetails

Davos Summit: 2ನೇ ದಿನ ರೆನ್ಯೂ ಪವರ್, ಝೈಲಂ, ಆಕ್ಟೋಪಸ್ ಎನರ್ಜಿ ಜತೆ ಮಾತುಕತೆ ನಡೆಸಿದ ಸಚಿವ ಎಂ ಬಿ ಪಾಟೀಲ

January 20, 2026
ದಾವೋಸ್‌ ಸಮಾವೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಚರ್ಚೆ ಮಾಡಿದ ಸಚಿವ ಎಂ. ಬಿ. ಪಾಟೀಲ

ದಾವೋಸ್‌ ಸಮಾವೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಚರ್ಚೆ ಮಾಡಿದ ಸಚಿವ ಎಂ. ಬಿ. ಪಾಟೀಲ

January 20, 2026
ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ರಾಜೀವ್ ಗೌಡಗೆ ಹೈಕೋರ್ಟ್ ತರಾಟೆ

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ರಾಜೀವ್ ಗೌಡಗೆ ಹೈಕೋರ್ಟ್ ತರಾಟೆ

January 20, 2026
ಸವಿತಾ ಸಮಾಜದ ವಿರುದ್ಧದ ಪ್ರಕರಣಕ್ಕೆ ಕ್ಲೀನ್ ಚೀಟ್

ಸವಿತಾ ಸಮಾಜದ ವಿರುದ್ಧದ ಪ್ರಕರಣಕ್ಕೆ ಕ್ಲೀನ್ ಚೀಟ್

January 20, 2026
Next Post
ಕಾಂಗ್ರೆಸ್ ಬಣ ಜಗಳ ತೀವ್ರ: ಸಿದ್ದು ವಿರುದ್ಧ  ಮೂಲ ಕಾಂಗ್ರೆಸ್ಸಿಗರ ಸೆಡ್ಡು

ಕಾಂಗ್ರೆಸ್ ಬಣ ಜಗಳ ತೀವ್ರ: ಸಿದ್ದು ವಿರುದ್ಧ ಮೂಲ ಕಾಂಗ್ರೆಸ್ಸಿಗರ ಸೆಡ್ಡು

Please login to join discussion

Recent News

Top Story

Davos Summit: 2ನೇ ದಿನ ರೆನ್ಯೂ ಪವರ್, ಝೈಲಂ, ಆಕ್ಟೋಪಸ್ ಎನರ್ಜಿ ಜತೆ ಮಾತುಕತೆ ನಡೆಸಿದ ಸಚಿವ ಎಂ ಬಿ ಪಾಟೀಲ

by ಪ್ರತಿಧ್ವನಿ
January 20, 2026
ದಾವೋಸ್‌ ಸಮಾವೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಚರ್ಚೆ ಮಾಡಿದ ಸಚಿವ ಎಂ. ಬಿ. ಪಾಟೀಲ
Top Story

ದಾವೋಸ್‌ ಸಮಾವೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಚರ್ಚೆ ಮಾಡಿದ ಸಚಿವ ಎಂ. ಬಿ. ಪಾಟೀಲ

by ಪ್ರತಿಧ್ವನಿ
January 20, 2026
ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ರಾಜೀವ್ ಗೌಡಗೆ ಹೈಕೋರ್ಟ್ ತರಾಟೆ
Top Story

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ರಾಜೀವ್ ಗೌಡಗೆ ಹೈಕೋರ್ಟ್ ತರಾಟೆ

by ಪ್ರತಿಧ್ವನಿ
January 20, 2026
Pavithra Gowda: ಪವಿತ್ರಾ ಗೌಡಗೆ ಮತ್ತೊಂದು ಬಿಗ್ ಶಾಕ್ ಕೊಟ್ಟ ಹೈಕೋರ್ಟ್
Top Story

Pavithra Gowda: ಪವಿತ್ರಾ ಗೌಡಗೆ ಮತ್ತೊಂದು ಬಿಗ್ ಶಾಕ್ ಕೊಟ್ಟ ಹೈಕೋರ್ಟ್

by ಪ್ರತಿಧ್ವನಿ
January 20, 2026
ʼಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ ʼಪ್ರಿಯಾಂಕ್ ಖರ್ಗೆʼಯ ಹೆಸರೇ ಆಸರೆʼ
Top Story

ʼಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ ʼಪ್ರಿಯಾಂಕ್ ಖರ್ಗೆʼಯ ಹೆಸರೇ ಆಸರೆʼ

by ಪ್ರತಿಧ್ವನಿ
January 20, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಚಿವ ಈಶ್ವರ್ ಖಂಡ್ರೆಗೆ ಒಲಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಾರಥ್ಯ..!

ಸಚಿವ ಈಶ್ವರ್ ಖಂಡ್ರೆಗೆ ಒಲಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಾರಥ್ಯ..!

January 20, 2026

Davos Summit: 2ನೇ ದಿನ ರೆನ್ಯೂ ಪವರ್, ಝೈಲಂ, ಆಕ್ಟೋಪಸ್ ಎನರ್ಜಿ ಜತೆ ಮಾತುಕತೆ ನಡೆಸಿದ ಸಚಿವ ಎಂ ಬಿ ಪಾಟೀಲ

January 20, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada