• Home
  • About Us
  • ಕರ್ನಾಟಕ
Wednesday, June 25, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕರೋನಾ ಭೀತಿ: ಉನ್ಮಾದತೆಯ ಮನಸ್ಥಿತಿ ಹುಟ್ಟುಹಾಕಿದ ಚಪ್ಪಾಳೆ ಕರೆ!

by
March 23, 2020
in ದೇಶ
0
ಕರೋನಾ ಭೀತಿ: ಉನ್ಮಾದತೆಯ ಮನಸ್ಥಿತಿ ಹುಟ್ಟುಹಾಕಿದ ಚಪ್ಪಾಳೆ ಕರೆ!
Share on WhatsAppShare on FacebookShare on Telegram

ಒಂದು ಕಾಲದಲ್ಲಿ ಮಂಡ್ಯ, ಮೈಸೂರು, ಕೊಡಗು, ಹಾಸನ, ಶಿವಮೊಗ್ಗಗಳೆಂದರೆ, ವೈಜ್ಞಾನಿಕ ಮನೋಭಾವಕ್ಕೆ ಹೆಸರಾದ ಜಿಲ್ಲೆಗಳಾಗಿದ್ದವು. ಆದಿವಾಸಿ ಕುಟುಂಬಗಳಿಂದಲೇ ತುಂಬಿರುವ ಚಾಮರಾಜನಗರದಲ್ಲಿ ಸಂಘ ಪರಿವಾರದ ಆಟಾಟೋಪ ಅಷ್ಟಿರಲಿಲ್ಲ. ಆದರೆ ಭಾನುವಾರ ಈ ಜಿಲ್ಲೆಗಳಾದ್ಯಂತ ನಡೆದ ಕರೋನಾ ಸಂಭ್ರಮಾಚರಣೆಗಳತ್ತ ನಾವು ಕಣ್ಣು ಹಾಯಿಸಿದರೆ, ಈ ಜಿಲ್ಲೆಗಳ ಜನರ ಮೇಲೂ ಮೋದಿ ಮಾಡಿರುವ ಮೋಡಿಯ ಅರಿವಾಗಬಹುದು. ಸಮಸ್ಯೆ ಇರುವುದು ಚಪ್ಪಾಳೆಯಲ್ಲಲ್ಲ. ಬದಲಿಗೆ ಈ ಚಪ್ಪಾಳೆ ಕರೆಯನ್ನು ಸಂಘ ಪರಿವಾರ ಎಲ್ಲಾ ಕುಟುಂಬಗಳಿಗೂ ಪಸರಿಸಿದ ರೀತಿಯಲ್ಲಿ.

ADVERTISEMENT

ಭಾನುವಾರ ಸಂಜೆ 5ಕ್ಕೆ, ಜನತಾ ಕರ್ಫ್ಯೂ ಬಳಿಕ ಪ್ರಧಾನಿ ಮೋದಿ ಹೇಳಿದ್ದು ಚಪ್ಪಾಳೆ ತಟ್ಟಲು. ಕರೋನಾ ಹರಡುವಿಕೆಯ ವೇಗ ತಗ್ಗಿಸಲು ಪರಸ್ಪರ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂ ಹಾಗೂ ಬಳಿಕ ಚಪ್ಪಾಳೆ ಹೊಡೆದು ನಮ್ಮ ನಡುವಣ ಸೇವೆ ಸಲ್ಲಿಸುತ್ತಿರುವವರನ್ನು ಗೌರವಿಸಿ ಎನ್ನುವ ಮೋದಿ ಕರೆಯನ್ನು ಒಪ್ಪಿಕೊಳ್ಳಬಹುದು. ದೇಶ ವ್ಯಾಪ್ತಿ ವಾಸ್ತವವಾಗಿ ಕುಸಿಯುತ್ತಿರುವ ಆರೋಗ್ಯ ವ್ಯವಸ್ಥೆ ಬಗ್ಗೆ ಕಳೆದ ಆರು ವರ್ಷಗಳಿಂದ ಮೌನಿಯಾಗಿರುವ ಪ್ರಧಾನ ಮಂತ್ರಿ ಮೋದಿ ಅವರನ್ನು ಟೀಕಿಸುತ್ತಲೆ, ಕನಿಷ್ಠ ಜನತಾ ಕರ್ಫ್ಯೂವನ್ನು ರೋಗ ನಿಯಂತ್ರಣದತ್ತ ಒಂದು ಗಂಭೀರ ಹೆಜ್ಜೆಯಾಗಿ ಒಪ್ಪಿಕೊಳ್ಳಬಹುದು.

ಆದರೆ, ಇದರ ಜತೆಗೆ ನಡೆದ ಅನಾಹುತ ಮಾತ್ರ ಭೀಕರ. ಮೋದಿ ಹೇಳಿದ್ದು ಚಪ್ಪಾಳೆ ಮಾತ್ರ. ಆದರೆ ಸಂಘ ಪರಿವಾರದ ಕಾಲಾಳುಗಳು ಶಂಖ-ಜಾಗಟೆ ಶಬ್ದಕ್ಕೆ ವೈಜ್ಞಾನಿಕ ಶಕ್ತಿ ಇದೆ ಎಂಬ ಸುದ್ದಿ ಹರಡಿದರು. ಪರಿಣಾಮ ಚಪ್ಪಾಳೆಯ ಬದಲಿಗೆ ಎಲ್ಲಾ ಕಡೆ ಕೇಳಿ ಬಂದದ್ದು ಗಂಟೆ-ಜಾಗಟೆ ಶಬ್ದ. ವಾಟ್ಸಾಪ್ ವಿಶ್ವವಿದ್ಯಾನಿಲಯ ಹಾಗೂ ಕನ್ನಡದ ಕೆಲ ದೃಶ್ಯ ಮಾಧ್ಯಮಗಳು ಸಂಘ ಪರಿವಾರದ ಕಾರ್ಯ ಸೂಚಿಗೆ ಪೂರಕವಾಗೇ ಕೆಲಸ ಮಾಡಿದವು. ಪರಿಣಾಮ ಎಲ್ಲೆಡೆ ಒಂದು ರೀತಿಯ ಉನ್ಮಾದತೆ ಸೃಷ್ಟಿಯಾಯಿತು.
ಕಾಸ್ಮೋಪಾಲಿಟನ್ ಸಂಸ್ಕೃತಿಯ ಬೆಂಗಳೂರಿನಲ್ಲಿ ಇಂತಹ ಅಪದ್ಧಗಳು ನಡೆದರೆ, ಅದನ್ನು ಅರಗಿಸಿಕೊಳ್ಳಬಹುದು. ಆದರೆ, ದುರಂತವೆಂದರೆ, ಈ ಉನ್ಮಾದತೆ ಬೆಂಗಳೂರಿಗಿಂತ ಹೆಚ್ಚು ಹರಡಿದ್ದು, ಈವರೆಗೆ ವೈಜ್ಞಾನಿಕ, ಪುರೋಹಿತಶಾಹಿ ವಿರೋಧಿ ಮನಸ್ಥಿಯ ಜನರೆ ಹೆಚ್ಚಿನ ಸಂಖ್ಯೆಯಲ್ಲಿದ್ದ ಇತರ ಜಿಲ್ಲೆಗಳಲ್ಲಿ.

ಚಾಮರಾಜನಗರದಂತಹ ಜಿಲ್ಲೆಯಲ್ಲಿ ಕೂಡಾ, ಹಳ್ಳಿಹಳ್ಳಿಗಳಲ್ಲಿ ಗಂಟೆ-ಜಾಗಟೆ, ಶಂಖದ ಶಬ್ದ ಅನುರಣಿಸಿತು. ಹಿಂದುಳಿದ ವರ್ಗಗಳ ಮನಸ್ಸಿನೊಳಗೆ ಹೊಸ ವಿಷ ಬೀಜವವನ್ನು ಸಂಘ ಪರಿವಾರದ ಕಾಲಾಳುಗಳು ಪರಿಣಾಮಕಾರಿಯಾಗಿಯೇ ಬಿತ್ತಿದರು. ಅದು ಇನ್ನು ಮೊಳಕೆಯೊಡೆಯುವುದೊಂದೇ ಬಾಕಿ. ಅದು ಮೊಳಕೆ ಒಡೆದರೆ ಇನ್ನೊಮ್ಮೆ ಮೋದಿ ಚುನಾಯಿತರಾಗುವುದರಲ್ಲಿ ಸಂಶಯವಿಲ್ಲ.

ನಮ್ಮ ನಡುವಣ ಹಲವಾರು ತಜ್ಞರು, ಈ ಗಂಟೆ-ಜಾಗಟೆ- ಶಂಖವನ್ನು ಪ್ರಬಲವಾಗಿ ಖಂಡಿಸಿದರು. ಆದರೆ, ಜನ ಸಮುದಾಯ ಯಾವ ಭ್ರಮೆಯಲ್ಲಿದೆ ಎಂದರೆ, ಸತ್ಯ ಯಾರಿಗೂ ಬೇಕಿಲ್ಲ. ಉನ್ಮಾದತೆಯಲ್ಲೇ ಏನೋ ಒಂದು ಸಂತಸ ಕಂಡುಕೊಂಡಂತಿದೆ.
ಈ ಹಿನ್ನೆಲೆಯಲ್ಲಿ ನಾವು ನಮ್ಮ ನಡುವಣ ವೈಜ್ಞಾನಿಕ ಮನೋಭಾವ ಮೂಡಿಸಲು ಪ್ರಯತ್ನಿಸುತ್ತಿರುವವರ ನಿರಾಸೆಯನ್ನು ಗಮನಿಸಬಹುದು.

ಖ್ಯಾತ ವಿಚಾರವಾದಿ ಹಾಸನದ ಮಮತಾ ಅರಸೀಕರೆ ಅವರ ಫೇಸ್‌ಬುಕ್ ಪೋಸ್ಟ್ ನಮ್ಮ ಆತ್ಮಸಾಕ್ಷಿಯನ್ನು ಕಲಕುತ್ತದೆ. “ತೀರಾ ಕನಿಷ್ಠಕ್ಕಿಳಿಯಿತು ದೇಶ. ಈ ಪರಿ ಮೂಢತನ, ಈ ಉಡಾಫೆ, ಈ ಭಜನೆಯ ಪರಮಾವದಿ, ಈ ಕೇಕೆ, ಅಟ್ಟಹಾಸ, ಇಷ್ಟೊಂದು ಮೂರ್ಖತನ ಯಾವತ್ತೂ ಕಾಣಲಿಲ್ಲವೇನೊ.. ಈ ದೇಶವನ್ನ ವೈಚಾರಿಕವಾಗಿ ಕಟ್ಟಲು ಯಾರೆಲ್ಲ ಎಷ್ಟೊಂದು ಪ್ರಯತ್ನ ಪಟ್ಟರು. ಎಷ್ಟೊಂದು ದುಡಿದರು. ಕುಟುಂಬವನ್ನ ತ್ಯಾಗ ಮಾಡಿ ಬೀದಿಗಿಳಿದರು. ತಮ್ಮ ಆಯುಷ್ಯ ಸವೆಸಿದರು. ಆರೋಗ್ಯ ಹಾಳು ಮಾಡಿಕೊಂಡು ಶ್ರಮಪಟ್ಟರು. ವೈಯಕ್ತಿಕ ಹಿತಾಸಕ್ತಿ ತ್ಯಜಿಸಿದರು. ಈಗಲೂ ಬಹಳಷ್ಟು ದುಡಿಯುತ್ತಿದ್ದಾರೆ. ನೊ ಯಾವುದೇ ಪ್ರಯೋಜನ ಇಲ್ಲ. ಇದನ್ನ ರಿಪೇರಿ ಮಾಡಲಸಾಧ್ಯ. ಈಗ ಆಗಿರುವ ಡ್ಯಾಮೇಜ್ ಸರಿಪಡಿಸಲು ಶತಮಾನಗಳ ಸತತ ಪ್ರಯತ್ನ ಬೇಕು. ಸಾಮಾಜಿಕ ಕಾಳಜಿಯೆನ್ನುವುದು ಈಗ ಅಪಹಾಸ್ಯದ ಮಾತಾಗಿಹೋಯಿತು. ಬದಲಾವಣೆ ಅಲ್ಲ ಸುಧಾರಣೆಯೂ ಸಾಧ್ಯವಿಲ್ಲವೇನೊ,” ಎನ್ನುವ ಅವರ ಮಾತಿನಲ್ಲಿ ನೋವು ನೆಲೆಗೊಂಡಿದೆ.

Tags: coronavirusJanata Curfewಕರೋನಾ ಭೀತಿಜನತಾ ಕರ್ಫ್ಯೂ
Previous Post

ಷೇರುಪೇಟೆಯಲ್ಲಿ ಮುಂದುವರೆದ ಮಾರಣಹೋಣ, ವಹಿವಾಟು ತಾತ್ಕಾಲಿಕ ಸ್ಥಗಿತ; ರುಪಾಯಿ ಕುಸಿತ

Next Post

ಶಾಹಿನ್‌ ಬಾಗ್‌ CAA ಪ್ರತಿಭಟನಾ ಸ್ಥಳದಲ್ಲಿ ಪೆಟ್ರೋಲ್‌ ಬಾಂಬ್‌ ದಾಳಿ 

Related Posts

Top Story

B.R Patil: ನನ್ನ ಮತ್ತು ಸರ್ಕಾರದ್ದು ಗಂಡ-ಹೆಂಡತಿ ಜಗಳವಿದ್ದ ಹಾಗೆ: ಬಿ.ಆರ್ ಪಾಟೀಲ್..!!

by ಪ್ರತಿಧ್ವನಿ
June 25, 2025
0

ಸರ್ಕಾರ, ನನ್ನ ನಡುವಿನದ್ದು ಗಂಡ-ಹೆಂಡತಿ ಜಗಳವಿದ್ದ ಹಾಗೆ, ನಾಳೆ ಸಿಎಂ ಅವರನ್ನು ಭೇಟಿ ಮಾಡುತ್ತೇನೆ. ನಾಳೆ ಸಿಎಂ, ಡಿಸಿಎಂ(DCM DK Shivakumar) ನನ್ನನ್ನು ಕರೆಸಿದ್ದಾರೆ. ಭೇಟಿಗೆ ಹೋಗುತ್ತೇನೆ,...

Read moreDetails

Yathnal: ಸಿದ್ದರಾಮಯ್ಯ ಕರ್ನಾಟಕವನ್ನು ಡಿಕೆಶಿ ಕೈಗೆ ಕೊಡಬೇಡಿ ಮಾರಿಬಿಡ್ತಾರೆ.. ಯತ್ನಾಳ್ ಸ್ಪೋಟಕ ಹೇಳಿಕೆ

June 24, 2025

CM Siddaramaiah: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರನ್ನು ಭೇಟಿ ಮಾಡಿದ ಸಿ.ಎಂ. ಸಿದ್ದರಾಮಯ್ಯ..

June 24, 2025

HD Kumarswamy: ಮಾವು ಬೆಳೆಗಾರರ ನೆರವಿಗೆ ಬರುವಂತೆ ಮನವಿ ಪತ್ರ ಬರೆದ ಹೆಚ್.ಡಿ ಕುಮಾರಸ್ವಾಮಿ.

June 24, 2025

M.B Patil: ದೇವನಹಳ್ಳಿ ತಾಲ್ಲೂಕಿನ 3 ಗ್ರಾಮಗಳ 495 ಎಕರೆಗೆ ವಿನಾಯಿತಿ: ಎಂ ಬಿ ಪಾಟೀಲ

June 24, 2025
Next Post
ಶಾಹಿನ್‌ ಬಾಗ್‌ CAA ಪ್ರತಿಭಟನಾ ಸ್ಥಳದಲ್ಲಿ ಪೆಟ್ರೋಲ್‌ ಬಾಂಬ್‌ ದಾಳಿ 

ಶಾಹಿನ್‌ ಬಾಗ್‌ CAA ಪ್ರತಿಭಟನಾ ಸ್ಥಳದಲ್ಲಿ ಪೆಟ್ರೋಲ್‌ ಬಾಂಬ್‌ ದಾಳಿ 

Please login to join discussion

Recent News

ಕಾಂಗ್ರೆಸ್ ಶಾಸಕರ ಅಸಮಾಧಾನ..ಗದ್ದಲ – ಹೈ ನಾಯಕರ ಮೊರೆಹೋದ ಸಿಎಂ ಸಿದ್ದು ! 
Top Story

ಕಾಂಗ್ರೆಸ್ ಶಾಸಕರ ಅಸಮಾಧಾನ..ಗದ್ದಲ – ಹೈ ನಾಯಕರ ಮೊರೆಹೋದ ಸಿಎಂ ಸಿದ್ದು ! 

by Chetan
June 25, 2025
Top Story

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ್ಯಾಕೆ ಸರ್‌?

by ಪ್ರತಿಧ್ವನಿ
June 25, 2025
Top Story

ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲು CM ಮನವಿ..!

by ಪ್ರತಿಧ್ವನಿ
June 25, 2025
ವಾಟ್ಸಪ್ಪ್ status ಕಣ್ರೀ..ಯಾಕೆ ಕೇಳ್ತಿರಾ ಆ …ಸ್ಟೇಟಸ್….ಸ್ಟೇಟಸ್….. ಸ್ಟೇಟಸ್…
Top Story

ವಾಟ್ಸಪ್ಪ್ status ಕಣ್ರೀ..ಯಾಕೆ ಕೇಳ್ತಿರಾ ಆ …ಸ್ಟೇಟಸ್….ಸ್ಟೇಟಸ್….. ಸ್ಟೇಟಸ್…

by ಪ್ರತಿಧ್ವನಿ
June 25, 2025
Top Story

B.R Patil: ನನ್ನ ಮತ್ತು ಸರ್ಕಾರದ್ದು ಗಂಡ-ಹೆಂಡತಿ ಜಗಳವಿದ್ದ ಹಾಗೆ: ಬಿ.ಆರ್ ಪಾಟೀಲ್..!!

by ಪ್ರತಿಧ್ವನಿ
June 25, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಾಂಗ್ರೆಸ್ ಶಾಸಕರ ಅಸಮಾಧಾನ..ಗದ್ದಲ – ಹೈ ನಾಯಕರ ಮೊರೆಹೋದ ಸಿಎಂ ಸಿದ್ದು ! 

ಕಾಂಗ್ರೆಸ್ ಶಾಸಕರ ಅಸಮಾಧಾನ..ಗದ್ದಲ – ಹೈ ನಾಯಕರ ಮೊರೆಹೋದ ಸಿಎಂ ಸಿದ್ದು ! 

June 25, 2025

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ್ಯಾಕೆ ಸರ್‌?

June 25, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada