Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕರೋನಾ ಭೀತಿಯ ನಡುವೆ ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದೆಯೇ ಸರ್ಕಾರ?

ಕರೋನಾ ಭೀತಿಯ ನಡುವೆ ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದೆಯೇ ಸರ್ಕಾರ?
ಕರೋನಾ ಭೀತಿಯ ನಡುವೆ ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದೆಯೇ ಸರ್ಕಾರ?

March 19, 2020
Share on FacebookShare on Twitter

ಕರೋನಾ ಅಬ್ಬರ ಜೋರಾಗಿದೆ. ದಿನದಿಂದ ದಿನಕ್ಕೆ ಕರೋನಾ ಪೀಡಿತರ ಸಂಖ್ಯೆ ದುಪ್ಪಟ್ಟು ಆಗುತ್ತಿದೆ ಕಳೆದ ವಾರ ಒಂದಿಬ್ಬರು ಸೋಂಕಿತರು ಇದ್ದರು. ಆದರೆ ಇದೀಗ ಬರೋಬ್ಬರಿ 14 ಜನ ಸೋಂಕಿತರು ನಮ್ಮ ಕರ್ನಾಟಕದಲ್ಲೇ ಇದ್ದಾರೆ. ಆದರೂ ಸರ್ಕಾರ ಮಾತ್ರ ಅಧಿವೇಶ ಮಾಡುವುದರಲ್ಲಿ ಸಖತ್‌ ಬ್ಯುಸಿ ಇದೆ. ಹಣ ಬಿಡುಗಡೆ ಮಾಡುವಲ್ಲೂ ಮೀನಾ ಮೇಷ ಎಣಿಸುತ್ತಿದೆ ಎನಿಸುತ್ತದೆ.

ಹೆಚ್ಚು ಓದಿದ ಸ್ಟೋರಿಗಳು

ಹೆಚ್ಚುವರಿಯಾಗಿ 188 ಇಂದಿರಾ ಕ್ಯಾಂಟೀನ್ ಗಳ ಸ್ಥಾಪನೆ : ಸಿಎಂ ಸಿದ್ದರಾಮಯ್ಯ

ಯತ್ನಾಳ್‌ ಕೋಪ ತಣಿಸಲು ಮುಂದಾದ ಬಿಜೆಪಿ ಹೈಕಮಾಂಡ್‌..! ಇವತ್ತೇ ನಿರ್ಧಾರ..!

ಡಿಕೆ ಶಿವಕುಮಾರ್‌‌ ವಿರುದ್ಧದ ಕೇಸ್‌ ರದ್ದು.. ಮುಂದಿರುವ ಆಯ್ಕೆಗಳೇನು..?

ಕರೋನಾ ಸೋಂಕಿತರ ನಿರ್ವಹಣೆ ಸೇರಿದಂತೆ ಹಣದ ವ್ಯವಹಾರ ಯಾವ ಇಲಾಖೆ ಮೂಲಕ ಮಾಡಬೇಕು ಎನ್ನುವ ವಿಚಾರದಲ್ಲೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್‌ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ ಎನ್ನುವ ಮಾತುಗಳಲ್ಲಿ ಅಲ್ಲಲ್ಲಿ ಚಾಲ್ತಿಯಲ್ಲಿವೆ. ಇದರ ಜೊತೆಗೆ ಸರ್ಕಾರ ಲಾಭ ನಷ್ಟದ ಲೆಕ್ಕಾಚಾರ ಹಾಕುತ್ತಾ ಕರೋನಾ ತಡೆಗಟ್ಟುವಲ್ಲಿ ವಿಫಲವಾಗುತ್ತಿದೆ ಎನ್ನುವ ಮಾತುಗಳು ಆಡಳಿತ ವರ್ಗದಲ್ಲಿ ಕೇಳಿ ಬರುತ್ತಿದೆ.

ಕರೋನಾ ಸೋಂಕು ತಡೆಗಟ್ಟಲು ಸರ್ಕಾರ ಹಲವಾರು ನಿರ್ಬಂಧಗಳನ್ನು ಮಾಡುತ್ತಿದ್ದೇವೆ ಎಂದು ಘೋಷಣೆ ಮಾಡುತ್ತಲೇ ಇದೆ. ಆದರೆ ಯಾವುದೂ ಜಾರಿಯಾಗುತ್ತಿದೆ ಎಂದು ಅನಿಸುತ್ತಿಲ್ಲ. ಯಾಕಂದ್ರೆ ಬೆಂಗಳೂರಿನ ಟ್ರಾಫಿಕ್‌ ಒಂದಿಂಚು ಕಡಿಮೆ ಆಗಿಲ್ಲ. ಜನರ ಸಂಚಾರ ಯಥಾಸ್ಥಿತಿ ಮುಂದುವರಿದಿದೆ. ಒಬ್ಬರಿಂದ ಒಬ್ಬರಿಗೆ ಕಾಯಿಲೆ ಹರಡುತ್ತದೆ ಎನ್ನುವುದು ಗೊತ್ತಿದ್ದರೂ ಜನರು ಹೋಟೆಲ್‌ ಸೇರಿದಂತೆ ಹಲವಾರು ಕಡೆಗಳಲ್ಲಿ ಕುಳಿತು ಹರಟೆ ಹೊಡೆಯುವುದು ಸಾಮಾನ್ಯವಾಗಿದೆ. ಇನ್ನು ಮದುವೆ, ನಾಮಕರಣ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆ ಆಗಿದೆ. ಆಗುವುದೂ ಇಲ್ಲ ಎನಿಸುತ್ತದೆ. ಇದಕ್ಕೆ ಕಾರಣ ಆದೇಶ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರೇ ಪರಿಷತ್‌ ಸದಸ್ಯರ ಮಗಳ ಅದ್ಧೂರಿ ಮದುವೆಯಲ್ಲಿ ಭಾಗಿಯಾಗುವುದಾದರೆ ಸಾಮಾನ್ಯ ಜನರು ಮದುವೆ ಮಾಡುವುದನ್ನು ಬಿಡಲಾದಿತೆ ಎನ್ನುವ ಮಾತುಗಳನ್ನು ಜನರು ಹೇಳುತ್ತಿದ್ದಾರೆ.

ಸರ್ಕಾರ ನಡೆಸುವುದಕ್ಕೆ ಆರ್ಥಿಕ ಸಂಪನ್ಮೂಲ ಕ್ರೋಢಿಕರಣ ಮಾಡುವುದು ಬಹಳ ಅಗತ್ಯ ಎನ್ನುವುದರಲ್ಲಿ ಯಾವುದೇ ಎರಡು ಮಾತಿಲ್ಲ. ಆದರೆ ಕರೋನಾ ಎಂಬ ಹೆಮ್ಮಾರಿ ಮನೆಯೊಳಕ್ಕೆ ನುಗ್ಗಿದರೂ ಎಚ್ಚೆತ್ತುಕೊಳ್ಳದಿದ್ದರೆ ಮೂರ್ಖತನ ಎನ್ನುವುದಿಲ್ಲವೇ? ಒಂದು ಪ್ರಕರಣ ರಾಜ್ಯಕ್ಕೆ ಬರುವ ಮುಂಚೆಯೇ ನಾವು ಎಚ್ಚೆತ್ತುಕೊಳ್ಳಬೇಕಿತ್ತು ಎನ್ನುವುದು ನಿಜ.

ವಿಮಾನ ನಿಲ್ದಾಣದಲ್ಲಿ ಬಂದವರನ್ನು ಒಂದು ಕಡೆ 14 ದಿನಗಳ ಕಾಲ ಐಸೋಲೇಟ್‌ ಮಾಡಿ ಇಟ್ಟ ಬಳಿಕ ಬಿಡುಗಡೆ ಮಾಡುವ ಕೆಲಸ ಮಾಡಬೇಕಿತ್ತು. ಒಂದು ವೇಳೆ ಕರೋನಾ ಇದೆ ಎನ್ನುವುದು ತಿಳಿದರೆ ಬೇರೊಂದು ಕಡೆಗೆ ವರ್ಗಾವಣೆ ಮಾಡಿ ಚಿಕಿತ್ಸೆ ಕೊಡುವ ಕೆಲಸ ಮಾಡಬೇಕಿತ್ತು. ಆದರೆ ಅದ್ಯಾವುದನ್ನು ಸರ್ಕಾರ ಮಾಡಿಲ್ಲ. ಈಗ ಕಾಲ ಮಿಂಚಿ ಹೋಗಿದೆ. ಆದರೆ ಈಗಲೂ ಸರ್ಕಾರ ಎಚ್ಚತ್ತುಕೊಳ್ಳುತ್ತಿಲ್ಲ ಎನ್ನುವುದು ಬೇಜವಾಬ್ದಾರಿತನ ಪ್ರದರ್ಶನದ ಪರಮಾವಧಿ ಎನ್ನಬಹುದು.

ವಿಮಾನದಲ್ಲಿ ಬರುವ ಜನರನ್ನು ತಡೆಯಬೇಕಿರುವುದು ಕೇಂದ್ರ ಸರ್ಕಾರ ಎನ್ನುವುದು ಸತ್ಯ. ಆದರೆ ಕೇಂದ್ರ ಸರ್ಕಾರ ಮಾಡಲಿಲ್ಲ ಎಂದು ರಾಜ್ಯವೂ ಕೈಚೆಲ್ಲಿದರೆ ಜನಸಮಾನ್ಯರು ಬಲಿಯಾವುದು ನಿಶ್ಚಿತ. ಸರ್ಕಾರದ ಎದುರು ಎರಡು ಬಹುಮುಖ್ಯ ಅಸ್ತ್ರಗಳಿವೆ. ಅವುಗಳೆಂದರೆ ಬಾರ್‌ ಅಂಡ್‌ ರೆಸ್ಟೋರೆಂಟ್‌ ಹಾಗು ಪೆಟ್ರೋಲ್‌ ಬಂಕ್‌ಗಳು. ಈ ಎರಡೂ ಮಾರ್ಗದಿಂದ ಸರ್ಕಾರಕ್ಕೆ ಹೆಚ್ಚಿನ ವರಮಾನ ಹರಿದುಬರುತ್ತಿದೆ. ಅದೇ ಕಾರಣದಿಂದ ಕರ್ನಾಟಕ ಸರ್ಕಾರ ಸೇರಿದಂತೆ ಕೇಂದ್ರ ಸರ್ಕಾರವೂ ಯಾವುದೇ ಕಠಿಣ ನಿರ್ಧಾರ ಮಾಡಲು ಮುಂದಾಗುತ್ತಿಲ್ಲ.

ಒಂದು ವೇಳೆ ಬಾರ್‌ಗಳನ್ನು ಬಂದ್‌ ಮಾಡಿದರೆ ನೂರಾರು ಜನರು ಒಂದು ಕಡೆ ಸೇರುವುದನ್ನು ತಡೆಯಬಹುದು. ಪೆಟ್ರೋಲ್‌ ಬಂಕ್‌ಗಳನ್ನು ಸರಿಯಾದ ನಿರ್ವಹಣೆ ಮಾಡಿದ್ದಲ್ಲಿ, ಜನರು ಬೇಕಾಬಿಟ್ಟಿ ರಸ್ತೆಗೆ ಇಳಿಯುವುದು ನಿಲ್ಲುತ್ತದೆ. ಇಲ್ಲದಿದ್ದರೆ ನೂರಾರು ಅಷ್ಟೇ ಅಲ್ಲ, ಸಾವಿರಾರು ಜನರನ್ನು ಕಳೆದುಕೊಳ್ಳುವುದು ನಿಶ್ಚಿತ ಎನ್ನಬಹುದು. ಸರ್ಕಾರದಲ್ಲೂ ಕೋಟಿ ಕೋಟಿ ಹಣ ವೆಚ್ಚ ಮಾಡಲು ಪೈಪೋಟಿ ನಡೆಯುತ್ತಿರುವುದು ನಮ್ಮ ಜನರ ದುರ್ದೈವ ನ್ನಬಹುದು.

RS 500
RS 1500

SCAN HERE

Pratidhvani Youtube

«
Prev
1
/
6192
Next
»
loading
play
Siddaramaiah: ಗ್ಯಾರಂಟಿಗಳನ್ನ ವಿರೋಧಿಸೋ ಮಿಸ್ಟರ್ ಮೋದಿನೇ ಫ್ರೀ ಕೊಡ್ತಿನಿ ಅಂತಿಲ್ವಾ?
play
Siddaramaiah: ಗ್ಯಾರಂಟಿಗಳನ್ನ ವಿರೋಧಿಸೋ ಮಿಸ್ಟರ್ ಮೋದಿನೇ ಫ್ರೀ ಕೊಡ್ತಿನಿ ಅಂತಿಲ್ವಾ?
«
Prev
1
/
6192
Next
»
loading

don't miss it !

ಯತ್ನಾಳ್‌ ಕೋಪ ತಣಿಸಲು ಮುಂದಾದ ಬಿಜೆಪಿ ಹೈಕಮಾಂಡ್‌..! ಇವತ್ತೇ ನಿರ್ಧಾರ..!
ಕರ್ನಾಟಕ

ಯತ್ನಾಳ್‌ ಕೋಪ ತಣಿಸಲು ಮುಂದಾದ ಬಿಜೆಪಿ ಹೈಕಮಾಂಡ್‌..! ಇವತ್ತೇ ನಿರ್ಧಾರ..!

by Prathidhvani
November 30, 2023
28ಕ್ಕೆ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುತ್ತೇವೆ : ಹೆಚ್.ಡಿ.ಕೆ ಮತ್ತು ವಿಜಯೇಂದ್ರ
ಕರ್ನಾಟಕ

28ಕ್ಕೆ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುತ್ತೇವೆ : ಹೆಚ್.ಡಿ.ಕೆ ಮತ್ತು ವಿಜಯೇಂದ್ರ

by Prathidhvani
November 26, 2023
ಸಂವಿಧಾನ ದಿನದಂದು ‘ಮಂತ್ರ ಮಾಂಗಲ್ಯ’ : ಚಾಮರಾಜನಗರ ಎಡಿಸಿ’ಯಿಂದ ಮಾದರಿ ನಡೆ
ಕರ್ನಾಟಕ

ಸಂವಿಧಾನ ದಿನದಂದು ‘ಮಂತ್ರ ಮಾಂಗಲ್ಯ’ : ಚಾಮರಾಜನಗರ ಎಡಿಸಿ’ಯಿಂದ ಮಾದರಿ ನಡೆ

by Prathidhvani
November 25, 2023
ಚೀನಾ ಉಸಿರಾಟದ ಕಾಯಿಲೆ ಹೆಚ್ಚಳ : ಭಾರತಕ್ಕೆ ಹೆಚ್ಚಿನ ಅಪಾಯವಿಲ್ಲ ಎಂದ ಕೇಂದ್ರ ಆರೋಗ್ಯ ಸಚಿವಾಲಯ
ಕರ್ನಾಟಕ

ಚೀನಾ ಉಸಿರಾಟದ ಕಾಯಿಲೆ ಹೆಚ್ಚಳ : ಭಾರತಕ್ಕೆ ಹೆಚ್ಚಿನ ಅಪಾಯವಿಲ್ಲ ಎಂದ ಕೇಂದ್ರ ಆರೋಗ್ಯ ಸಚಿವಾಲಯ

by Prathidhvani
November 24, 2023
ಜನತಾ ದರ್ಶನ ಜನರ ಸಂಭ್ರಮ.. ಕಾಂಗ್ರೆಸ್‌‌ಗೆ ಭೀಮಬಲ ‘ಗ್ಯಾರಂಟಿ’
ಕರ್ನಾಟಕ

ಜನತಾ ದರ್ಶನ ಜನರ ಸಂಭ್ರಮ.. ಕಾಂಗ್ರೆಸ್‌‌ಗೆ ಭೀಮಬಲ ‘ಗ್ಯಾರಂಟಿ’

by Prathidhvani
November 28, 2023
Next Post
ಕರೋನಾ ವೈರಸ್- ಮುಂದಿನ ವಾರಗಳೇ ನಮಗೆ ನಿರ್ಣಾಯಕ..!

ಕರೋನಾ ವೈರಸ್- ಮುಂದಿನ ವಾರಗಳೇ ನಮಗೆ ನಿರ್ಣಾಯಕ..!

ಸಚಿವರ ಮಧ್ಯೆ ಭಿನ್ನಮತಕ್ಕೆ ಕಾರಣವಾದ ಕರೋನಾ ಸೋಂಕು!

ಸಚಿವರ ಮಧ್ಯೆ ಭಿನ್ನಮತಕ್ಕೆ ಕಾರಣವಾದ ಕರೋನಾ ಸೋಂಕು!

ಪ್ರಧಾನಿ ಮೋದಿ ದೇಶಕ್ಕೆ ಕೊಟ್ಟ  ಸಂದೇಶ ಏನು..? ಏನಿದು ಜನತಾ ಕರ್ಫ್ಯೂ?

ಪ್ರಧಾನಿ ಮೋದಿ ದೇಶಕ್ಕೆ ಕೊಟ್ಟ ಸಂದೇಶ ಏನು..? ಏನಿದು ಜನತಾ ಕರ್ಫ್ಯೂ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist