Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕಡಲ ಕೌತುಕ ಹೆಚ್ಚಿಸಿದೆ ರಾತ್ರಿ ಹೊತ್ತಿನ ‘ನೀಲಿ’ ಕಲರವ!

ಕಡಲ ಕೌತುಕ ಹೆಚ್ಚಿಸಿದೆ ರಾತ್ರಿ ಹೊತ್ತಿನ ‘ನೀಲಿ’ ಕಲರವ!
ಕಡಲ ಕೌತುಕ ಹೆಚ್ಚಿಸಿದೆ ರಾತ್ರಿ ಹೊತ್ತಿನ ‘ನೀಲಿ’ ಕಲರವ!

March 15, 2020
Share on FacebookShare on Twitter

ಸಾಮಾನ್ಯವಾಗಿ ಹಗಲು ಹೊತ್ತು ಸಮುದ್ರದ ನೀರು ನೀಲಿ ಬಣ್ಣದಿಂದ ಕಂಗೊಳಿಸುವುದನ್ನ ನಾವು ಕಂಡಿದ್ದೇವೆ. ಸೂರ್ಯನ ಬೆಳಕು ಸಮುದ್ರಕ್ಕೆ ಅಪ್ಪಳಿಸಿದಾಗ ಸಮುದ್ರದ ನೀರಿನ ಅಣುಗಳಿಂದ ಬೆಳಕು ಪ್ರತಿಫಲನಗೊಳ್ಳುತ್ತದೆ. ಸಮುದ್ರದ ನೀರಿನ ಅಣುಗಳು ತುಂಬಾ ಚಿಕ್ಕದಾಗಿರುವ ಕಾರಣ, ಬೆಳಕಿನ ನೀಲಿ ಬಣ್ಣವು ಪ್ರತಿಫಲನಗೊಳ್ಳುತ್ತವೆ ಅನ್ನೋದು ಸಮುದ್ರ ನೀಲಿ ಬಣ್ಣದಿಂದ ಕಂಗೊಳಿಸುವುದಕ್ಕೆ ಇರುವ ವೈಜ್ಞಾನಿಕ ಕಾರಣ. ಆದರೆ ಇತ್ತೀಚಿನ ಮೂರು ನಾಲ್ಕು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಮುದ್ರದಲ್ಲಿ ವಿಚಿತ್ರ ಬದಲಾವಣೆಯನ್ನು ಜನ ಗಮನಿಸಿದ್ದಾರೆ. ಹಗಲು ಮಾತ್ರವಲ್ಲ ರಾತ್ರಿ ಹೊತ್ತು ಸಮುದ್ರದ ಒಂದು ಭಾಗದಲ್ಲಿ ನೀರು ನೀಲಿ ಬಣ್ಣದಿಂದ ಪಳಪಳನೆನೆ ಹೊಳೆಯಲು ಆರಂಭಿಸಿದೆ.

ಹೆಚ್ಚು ಓದಿದ ಸ್ಟೋರಿಗಳು

ಪ.ಬಂಗಾಳಕ್ಕೆ ಸಿಗುತ್ತಿಲ್ಲ ಕೇಂದ್ರದ ಅನುದಾನ- ಶೀಘ್ರವೇ ಪ್ರಧಾನಿ ಮೋದಿ ಭೇಟಿಯಾಗಲಿರುವ ದೀದಿ..!

ಪೊಲೀಸ್ ಠಾಣೆಯಲ್ಲಿ SI ಅಚಾತುರ್ಯ- ಮಹಿಳೆ ತಲೆಗೆ ಹೊಕ್ಕಿದ ಗುಂಡು..!

ಸೋನಿಯಾ ಗಾಂಧಿ 77ನೇ ಹುಟ್ಟುಹಬ್ಬ- ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ

ಸ್ಥಳೀಯರಂತೂ ಇದರಿಂದ ಆತಂಕಕ್ಕೊಳಗಾಗಿದ್ದಾರೆ. ಸಮುದ್ರದಲ್ಲಾದ ಏಕಾಏಕಿ ಬದಲಾವಣೆ ಮೀನುಗಾರರಲ್ಲಿ ಕೊಂಚ ಆತಂಕ ಮೂಡಿಸಿದೆ. ಕೇವಲ ರಾತ್ರಿ ಹೊತ್ತು ಮಾತ್ರ ಕಾಣಿಸಿಕೊಳ್ಳುವ ಈ ನೀಲು ಬಣ್ಣದ ವಿಸ್ಮಯ ಆತಂಕದ ಜೊತೆಗೆ ಕುತೂಹಲಕ್ಕೂ ಕಾರಣವಾಗಿದೆ. ಹಾಗಂತ ಈ ವಿಸ್ಮಯ ಕೇವಲ 10 ರಿಂದ 15 ದಿನಗಳಷ್ಟೇ ಸಮುದ್ರದಲ್ಲಿ ಕಾಣಬಹುದೇ ಹೊರತು ಆ ಬಳಿಕ ಅಂತಹ ಅಚ್ಚರಿಯಾಗಲೀ, ವಿಸ್ಮಯವಾಗಲೀ ಕಾಣಸಿಗೋದು ಅನುಮಾನ. ಕಾರಣ, ಈ ರೀತಿಯಾಗಿ ರಾತ್ರಿ ಪಳಪಳನೆ ನೀಲಿ ಬಣ್ಣದಿಂದ ಹೊಳೆಯುವುದ ಹಿಂದೆ ಪಾಚಿ ಪ್ರಭೇದಕ್ಕೆ ಸೇರಿದ ಏಕಕೋಶ ಜೀವಿಗಳಿವೆ. ಈ ಏಕಕೋಶಜೀವಿಗಳು ಸೂಕ್ಷ್ಮಾಣು ಜೀವಿಗಳಾಗಿದ್ದು ಕೆಲವೇ ದಿನಗಳಲ್ಲಿ ತನ್ನ ಹೊಳಪು ಕಳೆದುಕೊಳ್ಳಲಿದೆ. ಅಲ್ಲದೇ ಇಂತಹ ಏಕಕೋಶ ಸೂಕ್ಮಾಣು ಜೀವಿಗಳ ಆಯಸ್ಸೂ ಬಹಳ ಕಡಿಮೆ. ಹಾಗಾಗಿ, ಸಮುದ್ರದಲ್ಲಿ ಕಾಣಸಿಗೋ ಈ ಅಪರೂಪದ ವಿಸ್ಮಯವನ್ನು ಹೆಚ್ಚು ದಿನ ಕಣ್ತುಂಬಿಕೊಳ್ಳೋದಕ್ಕೆ ಸಾಧ್ಯವಾಗದು.

ಹಾಗಂತ ಸಮುದ್ರ ನೀಲಿ ಬಣ್ಣದ ಹೊರತು ಬೇರೆ ಬೇರೆ ಬಣ್ಣಕ್ಕೆ ತಿರುಗುವ ಪ್ರಸಂಗಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಕಪ್ಪು, ಹಸಿರು, ತಿಳಿಗೆಂಪು ಬಣ್ಣಕ್ಕೆ ಸಮುದ್ರದ ನೀರು ಬದಲಾಗಿದ್ದೂ ಇದೆ. ಜೋರಾಗಿ ಮಳೆ ಬಂದಾಗ ಕಡಲಿನ ಅಬ್ಬರರ ಏರಳಿತದಿಂದಾಗಿ ಸಮುದ್ರದ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ರೆ, ಇನ್ನು ಹಲವೆಡೆ ಕರಾವಳಿ ತೀರದಲ್ಲಿರುವ ಕಾರ್ಖಾನೆ, ಕೈಗಾರಿಕೆಗಳು ಸಮುದ್ರಕ್ಕೆ ಹರಿಯಬಿಡುವ ಕಲುಷಿತ ನೀರಿನಿಂದಾಗಿಯೂ ಸಮುದ್ರ ಕಪ್ಪು ಬಣ್ಣಕ್ಕೆ ತಿರುಗುವುದು ಸಹಜ. ಇದು ಮಾತ್ರವಲ್ಲದೇ ಹಸಿರು, ತಿಳಿಗೆಂಪು ಬಣ್ಣಕ್ಕೆ ತಿರುಗುವುದರ ಹಿಂದೆಯೂ ಪ್ರಕೃತಿ ಮೇಲೆ ಮಾನವನ ಹಸ್ತಕ್ಷೇಪ ಗೋಚರಿಸುತ್ತದೆ.

ಸಮುದ್ರಕ್ಕೆ ಅತಿಯಾಗಿ ಹೊರಬಿಡುವ ಕಲುಷಿತ ನೀರು, ರಾಸಾಯನಿಕಗಳಿಂದಾಗಿ ಸಮುದ್ರದಲ್ಲಿ ಹಸಿರು, ತಿಳಿಗೆಂಪು ಬಣ್ಣದ ಪಾಚಿಗಳು ತಲೆದೂರುತ್ತವೆ. ಇಂತಹ ಸನ್ನಿವೇಶ ಸೃಷ್ಟಿಯಾದಾಗ ಮೀನುಗಾರರು ಮೀನುಗಾರಿಕೆಗೆ ಇಳಿಯಲು ಹಿಂದೆ ಮುಂದೆ ನೋಡುತ್ತಾರೆ. ಕಾರಣ ಕಡಲಿನ ನೀರು ತುಂಬಾ ಮಲಿನಗೊಂಡಿರುತ್ತದೆ. ಅಲ್ಲದೇ ತಿಳಿಗೆಂಪು ಮಿಶ್ರಿತ ನೀರು ಕುಡಿಯುವ ಮೀನುಗಳಿಗೂ ಹಾಗೂ ಅದನ್ನ ತಿನ್ನುವ ಮನುಷ್ಯರಿಗೂ ಅಷ್ಟೇ ಅಪಾಯಕಾರಿಯಾಗಿರುತ್ತದೆ. ಆದರೆ ರಾತ್ರಿ ಹೊತ್ತು ಹೊಳೆಯುವ ಈ ಪಾಚಿ ಪ್ರಭೇದದ ಜೀವಿಗಳ ನೀಲಿ ಬಣ್ಣ ಅಷ್ಟೇನು ಅಪಾಯಕಾರಿಯಲ್ಲವಾಗಿದ್ದು ಒಂದು ರೀತಿಯ ಅಚ್ಚರಿ ಹಾಗೂ ಕೌತುಕಕ್ಕೆ ಕಾರಣವಾಗಿರುತ್ತದೆ.

ಹಾಗಂತ ಈ ರೀತಿಯ ವಿಸ್ಮಯ ಈ ಹಿಂದೆಯೂ ಉಡುಪಿಯ ಹಲವೆಡೆ ಹಾಗೂ ಕಾರವಾರ ತಾಲೂಕಿನ ಕಡಲತಡಿಯಲ್ಲಿ, ಚೆನ್ನೈ ಹಾಗೂ ಮಹಾರಾಷ್ಟ್ರದಲ್ಲೂ ಕಾಣಿಸಿಕೊಂಡಿತ್ತು. ಹಾಗಂತ ಈ ರೀತಿಯಾಗಿ ಸಮುದ್ರದ ನೀರು ರಾತ್ರಿ ಹೊತ್ತು ಪಳಪಳನೆ ನೀಲಿ ಬಣ್ಣದಿಂದ ಹೊಳೆಯೋದಕ್ಕೆ ಕಾರಣವೇ ಡೈನೋಫ್ಲೆಗೆಲೆಟ್ ಅನ್ನೋ ಪಾಚಿ ಜೀವಿ. ಈ ಸೂಕ್ಷ್ಮಾಣು ಜೀವಿ ಬರಿಗಣ್ಣಿಗೆ ಕಾಣಿಸದು. ಮಾತ್ರವಲ್ಲದೇ ಇವುಗಳು ನೀರಿನಲ್ಲಿ ತನ್ನಿಷ್ಟದ ದಿಕ್ಕಿಗೆ ಚಲಿಸುವ ಸಾಮರ್ಥ್ಯ ಹೊಂದಿರಲಾರವು. ಹಾಗಾಗಿ ಅಲೆಗಳ ಹೊಡೆತಕ್ಕೆ ಸಿಕ್ಕಿ ಈ ಡೈನೋಫ್ಲೆಗೆಲೆಟ್ ಅನ್ನೋ ಏಕಕೋಶಜೀವಿಯು ಸಮುದ್ರದ ದಡಕ್ಕೆ ಬರುತ್ತವೆ. ಈ ರೀತಿ ಬರಬೇಕಾದರೆ ಅವುಗಳು ಹೊರಸೂಸುವ ರಾಸಾಯನಿಕದಿಂದಾಗಿ ಮಿಂಚುಹುಳದಂತೆ ಅವುಗಳು ಬೆಳಕು ಚೆಲ್ಲುತ್ತವೆ. ಈ ಹೊರಸೂಸುವ ರಾಸಾಯನಿಯಕವೇ ನೀಲಿ ಬಣ್ಣದಿಂದ ಪಳಪಳನೆ ಅಂತಾ ಹೊಳೆಯಲು ಶುರುವಾಗುತ್ತವೆ. ಸಾಮಾನ್ಯವಾಗಿ ಇಂತಹ ಜೀವಿಗಳು ಕೂಡಾ ಪ್ರಕೃತಿಯಿಂದ ಸಮುದ್ರ ಸೇರುವ ಕೆಲವೊಂದು ಪದಾರ್ಥಗಳನ್ನ ಸೇವಿಸುವ ಪರಿಣಾಮ ಇಂತಹ ರಾಸಾಯನಿಕ ಹೊರಸೂಸುತ್ತದೆ ಅನ್ನೋದು ತಜ್ಞರ ಅಭಿಪ್ರಾಯ.

ಆದರೆ ಈ ರೀತಿ ನೀರಿನ ವರ್ತನೆಯಿಂದ ಜನ ಒಂದೊಮ್ಮೆ ಭಯಭೀತರಾಗುವ ಪ್ರಸಂಗಗಳೂ ನಡೆಯುತ್ತವೆ. ಇದು ಅದ್ಯಾವುದೋ ದೈವ-ದೇವರು ನೀಡಿದ ಶಾಪವೋ ಅನ್ನೋ ಭಯಕ್ಕೂ ಒಳಗಾಗುತ್ತಾರೆ. ಆದರೆ ಮನುಷ್ಯ ಪ್ರಕೃತಿ ಮೇಲೆ ನಡೆಸುವ ಹಸ್ತಕ್ಷೇಪವನ್ನು ಮರೆಮಾಚುತ್ತಾರೆ. ಆದರೆ ಅನಗತ್ಯ ಪ್ರಕೃತಿ ಮೇಲೆ ನಡೆಸುವ ದೌರ್ಜನ್ಯವೇ ಇಂದು ತಿರುಗಿ ಮನುಷ್ಯನಿಗೆ ಈ ರೀತಿಯಾಗಿ ಉತ್ತರ ನೀಡುತ್ತಿರುತ್ತವೆ. ಆದರೆ ಸದ್ಯ ಕಾರವಾರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾತ್ರಿ ಹೊತ್ತಿನ ಕಡಲ ಕೌತುಕ ಅಷ್ಟೇನೂ ಅಪಾಯಕಾರಿಯಲ್ಲವಾಗಿದ್ದು, ಡೈನೋಫ್ಲೆಗೆಲೆಟ್ ಎಂಬ ಪಾಚಿ ವರ್ಗಕ್ಕೆ ಸೇರಿದ ಸೂಕ್ಷ್ಮಾಣು ಜೀವಿಗಳು ಗುಂಪಲ್ಲಿ ಇದ್ದಾಗ ಮಾತ್ರ ಇಂತಹ ವಿಸ್ಮಯ ಮೂಡೋದಕ್ಕಷ್ಟೇ ಸಾಧ್ಯ.

RS 500
RS 1500

SCAN HERE

Pratidhvani Youtube

«
Prev
1
/
6246
Next
»
loading
play
Shashikumar : ಲೀಲಮ್ಮನ ಅಂತಿಮ ದರ್ಶನಕ್ಕೆ ಬಂದ ಶಶಿಕುಮಾರ್
play
DK Shivakumar : ಮೊನ್ನೆ ಕೊನೆ ಭೇಟಿ, ಲೀಲಾವತಿ ನನ್ನ ಮನೆಗೆ ಬಂದಿದ್ರು
«
Prev
1
/
6246
Next
»
loading

don't miss it !

ಗ್ಯಾರಂಟಿ ಘೋಷಿಸಿದ್ದೇ ಬಿಜೆಪಿ ಗೆಲುವಿಗೆ ಕಾರಣ: ಸಚಿವ ಎಂ.ಬಿ ಪಾಟೀಲ್
ಕರ್ನಾಟಕ

ಗ್ಯಾರಂಟಿ ಘೋಷಿಸಿದ್ದೇ ಬಿಜೆಪಿ ಗೆಲುವಿಗೆ ಕಾರಣ: ಸಚಿವ ಎಂ.ಬಿ ಪಾಟೀಲ್

by Prathidhvani
December 3, 2023
ರಾಜಸ್ಥಾನದಲ್ಲಿ ‘ಮರಳು’ ಮುಕ್ಕಿದ ಕಾಂಗ್ರೆಸ್..!
ದೇಶ

ರಾಜಸ್ಥಾನದಲ್ಲಿ ‘ಮರಳು’ ಮುಕ್ಕಿದ ಕಾಂಗ್ರೆಸ್..!

by Prathidhvani
December 3, 2023
ಲೀಲಾವತಿಯವರೊಂದಿಗೇ ಮರೆಯಾಯ್ತಾ ಮದುವೆ ರಹಸ್ಯ..?
ಸಿನಿಮಾ

ಲೀಲಾವತಿಯವರೊಂದಿಗೇ ಮರೆಯಾಯ್ತಾ ಮದುವೆ ರಹಸ್ಯ..?

by Prathidhvani
December 8, 2023
ವಿನೋದ್ ರಾಜ್ ಗೆ ಮದುವೆ ಆಗಿದೆಯಾ? ಆ ದಾಖಲೆಯಲ್ಲೇನಿದೆ?ಲೀಲಾವತಿಯವರೇ ಹೇಳಿದ್ರಾ ಸತ್ಯ..?
ಸಿನಿಮಾ

ವಿನೋದ್ ರಾಜ್ ಗೆ ಮದುವೆ ಆಗಿದೆಯಾ? ಆ ದಾಖಲೆಯಲ್ಲೇನಿದೆ?ಲೀಲಾವತಿಯವರೇ ಹೇಳಿದ್ರಾ ಸತ್ಯ..?

by Prathidhvani
December 8, 2023
ಭವಾನಿ ರೇವಣ್ಣ ಒಂದುವರೆ ಕೋಟಿ ಕಾರು ಬೇನಾಮಿನಾ..?
ಕರ್ನಾಟಕ

ಭವಾನಿ ರೇವಣ್ಣ ಒಂದುವರೆ ಕೋಟಿ ಕಾರು ಬೇನಾಮಿನಾ..?

by Prathidhvani
December 5, 2023
Next Post
ಡಿಕೆಶಿ ಕೆಪಿಸಿಸಿ ಪಟ್ಟ; ಮಂಡ್ಯ

ಡಿಕೆಶಿ ಕೆಪಿಸಿಸಿ ಪಟ್ಟ; ಮಂಡ್ಯ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಕಾಂಗ್ರೆಸ್ Checkmate

ಜಾಲತಾಣದ ನಕಲಿ ಸುದ್ದಿ

ಜಾಲತಾಣದ ನಕಲಿ ಸುದ್ದಿ, ಪ್ರಚೋದನಾತ್ಮಕ ಸಂದೇಶಗಳಿಗೆ ಕಡಿವಾಣ ಹಾಕಲು ‘ಕೇಂದ್ರ’ ನಿರಾಸಕ್ತಿ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷರನ್ನು ಹೃದಯಹೀನ ಮತ್ತು ಅಸಮರ್ಥ ಎಂದ ನಿರ್ಮಲಾ ಸೀತಾರಾಮನ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷರನ್ನು ಹೃದಯಹೀನ ಮತ್ತು ಅಸಮರ್ಥ ಎಂದ ನಿರ್ಮಲಾ ಸೀತಾರಾಮನ್

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist