ADVERTISEMENT
  • Home
  • About Us
  • ಕರ್ನಾಟಕ
Sunday, May 18, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಒಂದೇಟಿಗೆ ಎರಡು ಹಕ್ಕಿ ಹೊಡೆಯುವುದು ಬಿಎಸ್​​ವೈ ‘ರಾಜೀನಾಮೆ’ ತಂತ್ರವೇ?

by
January 15, 2020
in ಕರ್ನಾಟಕ
0
ಒಂದೇಟಿಗೆ ಎರಡು ಹಕ್ಕಿ ಹೊಡೆಯುವುದು ಬಿಎಸ್​​ವೈ ‘ರಾಜೀನಾಮೆ’ ತಂತ್ರವೇ?
Share on WhatsAppShare on FacebookShare on Telegram

ಐದು ತಿಂಗಳ ಹಿಂದೆ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ‌ ಸರ್ಕಾರ ಸ್ಥಾಪಿಸಿದ ಛಲಗಾರ ಬಿ‌ ಎಸ್ ಯಡಿಯೂರಪ್ಪ ಅವರು ಬಹಿರಂಗವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತುಗಳನ್ನು ಆಡಿರುವ ಸಂದರ್ಭವು ಒತ್ತಡದ ಸನ್ನಿವೇಶ ಎಂದಾದರೂ ಅದರ‌ ಹಿಂದೆ ದೊಡ್ಡ ರಾಜಕೀಯ ತಂತ್ರಗಾರಿಕೆ ಇದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ವೇದಿಕೆಯಲ್ಲಿ ಸ್ವಾಮೀಜಿಯೊಂದಿಗೆ ವಾಗ್ವಾದಕ್ಕಿಳಿದ ಯಡಿಯೂರಪ್ಪನವರೊಳಗಿನ ಸಂಘರ್ಷ‌ ಮತ್ತು ಹತಾಶೆಯು ಹಿರಿಯ ನಾಯಕನನ್ನು ಕೇಂದ್ರ ಬಿಜೆಪಿ ನಾಯಕತ್ವ ಸುಡುವ ಕಾವಲಿಯಲ್ಲಿಟ್ಟಿರುವುದಕ್ಕೆ ಸ್ಪಷ್ಟ ಉದಾಹರಣೆ ಎನ್ನಲಾಗುತ್ತಿದೆ.

ADVERTISEMENT

ವೀರಶೈವ ಲಿಂಗಾಯತ ಸಮುದಾಯದ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಅವರು “ಸಮಾಜವು ನಿಮ್ಮ ಬೆನ್ನಿಗೆ ಅಚಲವಾಗಿ ನಿಂತಿದೆ. ಪಂಚಮಸಾಲಿ ಸಮಾಜದಿಂದ 13 ಮಂದಿ ಆಯ್ಕೆಯಾಗಿದ್ದು, ಮುರುಗೇಶ್ ನಿರಾಣಿ ಸೇರಿದಂತೆ ಕನಿಷ್ಠ ಮೂವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಸಮಾಜ ನಿಮ್ಮ ಕೈಬಿಡಲಿದೆ” ಎಂದು ಸ್ವಾಮೀಜಿ‌ ಹೇಳುತ್ತಿದ್ದಂತೆ ಯಡಿಯೂರಪ್ಪ ಕೆರಳಿದರು. ಪಕ್ಕದಲ್ಲಿದ್ದ‌ ನಿರಾಣಿಯವರ ಮೇಲೂ ಬಿಎಸ್ ವೈ ಸಿಟ್ಟು ವ್ಯಕ್ತಪಡಿಸಿದ್ದಾರೆ. ಕೇಂದ್ರ ನಾಯಕತ್ವದ ಅವಗಣನೆ‌ಯನ್ನು ಸಮರ್ಥವಾಗಿ ಪ್ರಶ್ನಿಸಲು ಸೋಲುವ ಬಿಎಸ್ವೈ ತಾನು ನಂಬಿರುವ ಸಮಾಜದ ಸ್ವಾಮೀಜಿಗಳ ಎಚ್ಚರಿಕೆಗೆ ತಿರುಗೇಟು ನೀಡಿರುವುದು ಸರಿ ಎನಿಸಿದರೂ ಅವರ ದ್ವಂದ್ವ ವಿರೋಧಾಭಾಸವಾಗಿ ಕಾಣಿಸುತ್ತಿದೆ. 2008-11 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗುವ ಸ್ಥಿತಿ ನಿರ್ಮಾಣವಾದಾಗ ಬಚಾವಾಗಲು ಲಿಂಗಾಯತ ಸಮುದಾಯದ 100 ಸ್ವಾಮೀಜಿಗಳ ನಿಯೋಗದ ಬೆನ್ನತ್ತಿದ್ದ ಬಿಎಸ್ ವೈ ಈಗ ಅದೇ ಸಮಾಜದ ಸ್ವಾಮೀಜಿಯ ಆಗ್ರಹಕ್ಕೆ‌ ಸೆಡ್ಡು ಹೊಡೆದಿರುವುದು ರಾಜಕೀಯ ಲೆಕ್ಕಾಚಾರದ ಭಾಗವಿರಬಹುದು ಎಂಬ ರಾಜಕೀಯ ತಜ್ಞರ ಮಾತುಗಳನ್ನು ಸುಲಭಕ್ಕೆ ತಳ್ಳಿಹಾಕಲಾಗದು.

ಸ್ವಾಮೀಜಿಯೊಬ್ಬರು ನಿರ್ದಿಷ್ಟ ಸಮಾಜದ ಮುಖಂಡರಿಗೆ ರಾಜಕೀಯ ಸ್ಥಾನಮಾನಕ್ಕೆ‌ ಒತ್ತಾಯಿಸುವ ವಿದ್ಯಮಾನ ಹೊಸದೇನಲ್ಲ.‌ ಆದರೆ, ಬೆದರಿಕೆಯ ಬೆಳವಣಿಗೆ ಅಸಹಜವಾದುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧ್ಯಾತ್ಮ ಮತ್ತು ಧಾರ್ಮಿಕ ಕ್ಷೇತ್ರದಲ್ಲಿರುವವರು ಬಹಿರಂಗವಾಗಿ ರಾಜಕೀಯ ನಿಲುವು ತಳೆಯುವುದು ಉತ್ತಮ ಬೆಳವಣಿಗೆಯಲ್ಲ. ಇಂದಿನ ಈ ಸ್ಥಿತಿ ನಿರ್ಮಾಣವಾಗುವುದರಲ್ಲಿ ಬಿಎಸ್ ವೈ ಪಾಲು ದೊಡ್ಡದಿದೆ ಎಂಬುದು ವಾಸ್ತವ. ಆದ್ದರಿಂದ ಈ ಥರದ ಅತಿರೇಕಗಳನ್ನು ಅರಗಿಸಿಕೊಳ್ಳುವುದನ್ನು‌ ಬಿಎಸ್ ವೈ ಕಲಿಯುವುದು ಅನಿವಾರ್ಯ.

ಮುಖ್ಯಮಂತ್ರಿ ಅವರನ್ನು ಸಮಾಧಾನ ಮಾಡುತ್ತಲೇ ಮಾತು ಮುಂದುವರಿಸಿದ ಸ್ವಾಮೀಜಿಯು “ಈ ಸಂದೇಶ ಮೋದಿ-ಶಾಗೆ ತಲುಪಲಿ” ಎಂದಿರುವುದೂ ಕುತೂಹಲ‌ ಮೂಡಿಸಿದೆ. ಭಾರಿ ನೆರೆಯಿಂದ ರಾಜ್ಯದ 22ಕ್ಕೂ ಹೆಚ್ಚು ಜಿಲ್ಲೆಗಳು ಶತಮಾನದಲ್ಲಿ ಕಂಡಿರದ ಸಂಕಷ್ಟ ಎದುರಿಸುತ್ತಿವೆ. ಇದಕ್ಕೆ ನ್ಯಾಯಯೋಚಿತವಾಗಿ ಸ್ಪಂದಿಸದ ತಮ್ಮದೇ ಪಕ್ಷದ ಪ್ರಧಾನಿ ಮೋದಿಯವರಿಗೆ ತುಮಕೂರಿನ ಬಹಿರಂಗ ಸಭೆಯಲ್ಲಿ ಆಗ್ರಹ ಪೂರ್ವಕ ಮನವಿ ಸಲ್ಲಿಸಿದ ಬಿಎಸ್ ವೈ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಅದರ ಬೆನ್ನಿಗೆ 1,850 ಕೋಟಿ‌ ರುಪಾಯಿ‌ ನೆರವಿನ ಪೈಕಿ ಬರಬೇಕಾದ ಅಂದಾಜು 650 ಕೋಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.‌ ಆದರೆ, ಸಚಿವ ಸಂಪುಟ ವಿಸ್ತರಣೆ‌ ಬಗ್ಗೆ ಚರ್ಚಿಸಲು ಅಮಿತ್ ಶಾ ಅವರು ಬಿಎಸ್ ವೈ ಗೆ ಕಾಲಾವಕಾಶ ನೀಡದೇ ಇರುವುದರಿಂದ ವಿಚಲಿತರಾಗಿದ್ದಾರೆ. ಅನರ್ಹರಾಗಿ ಗೆದ್ದುಬಂದು ಸ್ಥಾನಮಾನಕ್ಕಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತಿರುವ ಅವರುಗಳು ಬಿಎಸ್ವೈ ಅವರನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿದ್ದಾರೆ. ವಿರೋಧ ಪಕ್ಷಗಳು ಇದನ್ನೇ ಪ್ರಬಲ ಅಸ್ತ್ರವಾಗಿ ಬಳಸುತ್ತಿರುವುದರಿಂದ ಮುಖ್ಯಮಂತ್ರಿ ಇರುಸುಮುರುಸು ಅನುಭವಿಸುತ್ತಿದ್ದಾರೆ.

ಬಿಎಸ್ ವೈ ಮಂತ್ರಿಮಂಡಲವು 34 ಸದಸ್ಯ ಬಲ ಹೊಂದಿದೆ.‌ ಆಗಸ್ಟ್ ನಲ್ಲಿ ಮೊದಲ‌ ಬಾರಿಗೆ ಸಂಪುಟ ವಿಸ್ತರಿಸಿ 17 ಮಂದಿಗೆ ಸಚಿವ ಸ್ಥಾನ ಕಲ್ಪಿಸಲಾಗಿದೆ. ಒಟ್ಟಾರೆ 37 ವೀರಶೈವ ಲಿಂಗಾಯತ ಶಾಸಕರು ಬಿಜೆಪಿಯಲ್ಲಿದ್ದು, ಬಿಎಸ್ ವೈ ಸೇರಿದಂತೆ 8 ಮಂದಿಗೆ ಪ್ರಾತಿನಿಧ್ಯ ದೊರೆತಿದೆ. ಇತ್ತೀಚೆಗೆ 17 ಕಾಂಗ್ರೆಸ್-ಜೆಡಿಎಸ್ ಹಾಗೂ ಪಕ್ಷೇತರ‌ ಶಾಸಕರಿಗೆ ಮಂತ್ರಿ ಸ್ಥಾನದ ಭರವಸೆ ನೀಡಿ ಅವರನ್ನು ರಾಜೀನಾಮೆ ಕೊಡಿಸಿ‌ದ ಬಿಎಸ್ವೈ ಅವರಿಗೆ ನೀಡಿದ ಮಾತು ಉಳಿಸಿಕೊಳ್ಳಲಾರದ ಸ್ಥಿತಿ ತಲುಪಿದ್ದಾರೆ. ಉಳಿದ ಸ್ಥಾನಗಳಲ್ಲಿ ಸ್ವಾಮೀಜಿಗಳು ಹೇಳಿದವರಿಗೆ ಪ್ರಾತಿನಿಧ್ಯ ನೀಡಿದರೆ ಅನರ್ಹರಾಗಿ ಗೆದ್ದವರಿಗೆ ಅವಕಾಶ ಕಲ್ಪಿಸುವುದು ಹೇಗೆ? ತಮ್ಮ ಸಮುದಾಯದ ಸ್ವಾಮೀಜಿಯ ಮಾತು ಮಾನ್ಯ ಮಾಡಿದರೆ ಉಳಿದ ಸಮುದಾಯಗಳ ಮಠಾಧೀಶರು ಬೀದಿಗಿಳಿದರೆ ಅದನ್ನು ನಿಭಾಯಿಸುವುದು ಹೇಗೆ? ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ಹೆಚ್ಚಿದ್ದು, ವಚನಾನಂದ ಶ್ರೀ ಬಹಿರಂಗ ಎಚ್ಚರಿಕೆ ಉಳಿದವರ ಆಗ್ರಹಕ್ಕೆ ದಾರಿ ಮಾಡಿಕೊಟ್ಟಂತಾಗುವುದಿಲ್ಲವೇ? ಎಲ್ಲರೂ ಒತ್ತಡ ತಂತ್ರ ಅನುಸರಿಸಿದರೆ ಸಮಸ್ಯೆ ಬಗೆಹರಿಸುವುದು ಹೇಗೆ? ಆರ್ ಎಸ್ ಎಸ್ ನಾಯಕರನ್ನು ಸಂತೈಸುವುದು ಹೇಗೆ? ಹೀಗೆ ಬಿಎಸ್ ವೈ ನೂರಾರು ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದ್ದಾರೆ.‌‌ ಇದರಿಂದಾಗಿ ಬಿಎಸ್ ವೈ ಸ್ಫೋಟಗೊಂಡಿದ್ದಾರೆ ಎನ್ನಲಾಗುತ್ತಿದೆ.

ಆದರೆ, ಇದನ್ನು ಒಪ್ಪದ ಬಿಜೆಪಿ ಟೀಕಾಕಾರರು ಸ್ವಾಮೀಜಿ ಮೂಲಕ ಬಿಎಸ್ ವೈ ಅವರು ಮೋದಿ-ಶಾಗೆ ತಾನು ಸಿಲುಕಿರುವ ಒತ್ತಡದ ಸನ್ನಿವೇಶದ ಸಂದೇಶ ರವಾನಿಸಿದ್ದಾರೆ. ಬಿಎಸ್ ವೈ ಸಮುದಾಯದ ಪ್ರಶ್ನಾತೀತ ನಾಯಕ ಎಂದು ಸ್ವಾಮೀಜಿ ಹೇಳಿರುವುದು ಕೇಂದ್ರ ಹಾಗೂ ಆರ್ ಎಸ್ ಎಸ್ ನಾಯಕರು ನೀಡುತ್ತಿರುವ ಕಿರುಕುಳಕ್ಕೆ ಉತ್ತರಿಸುವ ತಂತ್ರವೇ ಆಗಿದೆ ಎನ್ನಲಾಗುತ್ತಿದೆ. ಅನರ್ಹ ಶಾಸಕರನ್ನು ಗೆಲ್ಲಿಸುವಲ್ಲಿ ಲಿಂಗಾಯತ ಸಮುದಾಯವು ಬಿಎಸ್ ವೈ ಬೆನ್ನಿಗೆ ನಿಂತಿದೆ. ಈ ಮೂಲಕ ಸ್ವಪಕ್ಷದೊಳಗಿನ ಶತ್ರುಗಳಿಗೆ ಸಮಾಜವು ಉತ್ತರಿಸಿದೆ. ಈಗ ಅದೇ ಸಮುದಾಯದ ಸ್ವಾಮೀಜಿಗಳ ಮೂಲಕ ಒತ್ತಡ ಸೃಷ್ಟಿಸಿ ಕಾರ್ಯ ಸಾಧನೆಗೆ ಬಿಎಸ್ ವೈ ಗುಪ್ತ ತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ. ಲಿಂಗಾಯತ ಸಮುದಾಯವು ಬಿಜೆಪಿಗೆ ನಿಷ್ಠವಾಗಿದೆ.‌ ಇದೇ ಕಾರಣಕ್ಕೆ ಬಿಜೆಪಿಯಲ್ಲಿ 75 ವರ್ಷ ತುಂಬಿದವರಿಗೆ ಸ್ಥಾನಮಾನ ನೀಡುವುದಿಲ್ಲ ಎಂಬ ನಿಯಮವನ್ನು ಸಡಿಲಗೊಳಿಸಿ, ಬಿಎಸ್ ವೈ ಅವರನ್ನು ಮುಖ್ಯಮಂತ್ರಿಯಾಗಿಸಲಾಗಿದೆ. ಈಗ ಸಂಘ ಪರಿವಾರದ ನಾಯಕರ ಆಣತಿಯಂತೆ ರಾಜ್ಯದಲ್ಲಿ ಯಡಿಯೂರಪ್ಪ ಅವರಿಗೆ ಸುಲಲಿತವಾಗಿ ಆಡಳಿತ ನಡೆಸಲು, ಸಂಪುಟ ಪುನಾರಚಿಸಲು ಹಾಗೂ ಕೇಂದ್ರದಿಂದ ನೀಡಬೇಕಾದ ಅನುದಾನವನ್ನು ಕಾಲಕ್ಕೆ ತಕ್ಕಂತೆ ಬಿಡುಗಡೆ ಮಾಡದೆ ಕಿರಕುಳ‌ ನೀಡಲಾಗುತ್ತಿದೆ. ರಾಜಕೀಯವಾಗಿ ಬಲಾಢ್ಯರಾಗಿರುವ ಮೋದಿ-ಶಾ ಜೋಡಿಯನ್ನು‌ ಬಿಎಸ್ವೈ ನೇರವಾಗಿ ಟೀಕಿಸಲಾಗದು. ಆದ್ದರಿಂದ ಸಮುದಾಯದ ಮೂಲಕ ಒತ್ತಡ ಸೃಷ್ಟಿಸಿ, ಸಾರ್ವಜನಿಕವಾಗಿ ಅನುಕಂಪ ಸೃಷ್ಟಿಸಿಕೊಳ್ಳುವ ಮೂಲಕ ಸಂಘ ಪರಿವಾರ ಹಾಗೂ ಕೇಂದ್ರ ನಾಯಕತ್ವವನ್ನು ಬಗ್ಗಿಸುವ ಪ್ರತಿತಂತ್ರವನ್ನು ಹಿರಿಯ ರಾಜಕಾರಣಿ ಯಡಿಯೂರಪ್ಪ ಮಾಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ರಾಜಕೀಯ ತಂತ್ರ-ಪ್ರತಿತಂತ್ರಗಳ ಆಟ. ಬಿಎಸ್ ವೈ ಇದರಲ್ಲಿ ಪಳಗಿದ ನಾಯಕ.

Tags: Amit ShahBJP GovernmentBS YeddyurappaLingayat CommunityMinister PostNarendra ModiRSSSangh Pariwarಅಮಿತ್ ಶಾಆರ್ ಎಸ್ ಎಸ್ನರೇಂದ್ರ ಮೋದಿಬಿಎಸ್ ಯಡಿಯೂರಪ್ಪಬಿಜೆಪಿ ಸರ್ಕಾರಲಿಂಗಾಯುತ ಸಮುದಾಯಸಂಘಪರಿವಾರಸಚಿವ ಸ್ಥಾನ
Previous Post

ಮಠದಲ್ಲಿ ರಾಜಕೀಯ ಭಾಷಣ ಮಾಡಿದ ಮೋದಿ ಮೇಲೆ ರಾಮಕೃಷ್ಣ ಮಿಷನ್ ಸಿಟ್ಟು

Next Post

ಟಿಡಿಆರ್‌ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ದೋಷಾರೋಪ ಪಟ್ಟಿ ಎಸಿಬಿ ಕೈಯಲ್ಲಿ

Related Posts

ದೇವೇಗೌಡರಿಗೆ ಜನ್ಮದಿನದ ಶುಭ ಕೋರಿದ ಸಿಎಂ..! – ಹಳೆ ಫೋಟೋ ಪೋಸ್ಟ್ ಮಾಡಿ ಫ್ಲಾಶ್ ಬ್ಯಾಕ್ ನೆನಪಿಸಿಕೊಂಡ ಸಿದ್ದು 
Top Story

ದೇವೇಗೌಡರಿಗೆ ಜನ್ಮದಿನದ ಶುಭ ಕೋರಿದ ಸಿಎಂ..! – ಹಳೆ ಫೋಟೋ ಪೋಸ್ಟ್ ಮಾಡಿ ಫ್ಲಾಶ್ ಬ್ಯಾಕ್ ನೆನಪಿಸಿಕೊಂಡ ಸಿದ್ದು 

by Chetan
May 18, 2025
0

ಮಾಜಿ ಪ್ರಧಾನಿ ದೇವೇಗೌಡರ (HD Devegowda) ಜನ್ಮದಿನದ ಹಿನ್ನಲೆ ಸಿಎಂ ಸಿದ್ದರಾಮಯ್ಯ (Cm siddaramaiah) ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.ರಾಜಕೀಯ ವಿರೋಧ ಪಕ್ಕಕ್ಕಿಟ್ಟು, ತಮ್ಮ ಹಳೆಯ ರಾಜಕೀಯ...

Read moreDetails
ಅಂಕಪಟ್ಟಿಯಲ್ಲಿ RCB ನೇ ನಂಬರ್.1 ..! ಕೋಲ್ಕತ್ತಾ ಪಾಲಿಗೆ ಖಳನಾಯಕನಾದ ಮಳೆರಾಯ ! 

ಅಂಕಪಟ್ಟಿಯಲ್ಲಿ RCB ನೇ ನಂಬರ್.1 ..! ಕೋಲ್ಕತ್ತಾ ಪಾಲಿಗೆ ಖಳನಾಯಕನಾದ ಮಳೆರಾಯ ! 

May 18, 2025
ಸಚಿವ ಕೃಷ್ಣ ಬೈರೇಗೌಡ ಆಪ್ತರಿಂದ ಗೂಂಡಾಗಿರಿ..?! – ಸರ್ಕಾರಿ ಅಧಿಕಾರಿ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ಮಾಡಿ ದರ್ಪ 

ಸಚಿವ ಕೃಷ್ಣ ಬೈರೇಗೌಡ ಆಪ್ತರಿಂದ ಗೂಂಡಾಗಿರಿ..?! – ಸರ್ಕಾರಿ ಅಧಿಕಾರಿ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ಮಾಡಿ ದರ್ಪ 

May 18, 2025
ನನ್ನ ಕನ್ನಡಕದ ಬಗ್ಗೆ ಮಾತನಾಡಿದವರು ಮಣ್ಣು ಮುಕ್ಕಿದ್ದಾರೆ ಜೋಕೆ..

ನನ್ನ ಕನ್ನಡಕದ ಬಗ್ಗೆ ಮಾತನಾಡಿದವರು ಮಣ್ಣು ಮುಕ್ಕಿದ್ದಾರೆ ಜೋಕೆ..

May 18, 2025
ಕೊರಗಜ್ಜನ ಸನ್ನಿಧಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಪೂಜೆ.. ಕಾರಣ ಗೊತ್ತಾ..?

ಕೊರಗಜ್ಜನ ಸನ್ನಿಧಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಪೂಜೆ.. ಕಾರಣ ಗೊತ್ತಾ..?

May 18, 2025
Next Post
ಟಿಡಿಆರ್‌ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ದೋಷಾರೋಪ ಪಟ್ಟಿ ಎಸಿಬಿ ಕೈಯಲ್ಲಿ

ಟಿಡಿಆರ್‌ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ದೋಷಾರೋಪ ಪಟ್ಟಿ ಎಸಿಬಿ ಕೈಯಲ್ಲಿ

Please login to join discussion

Recent News

ದೇವೇಗೌಡರಿಗೆ ಜನ್ಮದಿನದ ಶುಭ ಕೋರಿದ ಸಿಎಂ..! – ಹಳೆ ಫೋಟೋ ಪೋಸ್ಟ್ ಮಾಡಿ ಫ್ಲಾಶ್ ಬ್ಯಾಕ್ ನೆನಪಿಸಿಕೊಂಡ ಸಿದ್ದು 
Top Story

ದೇವೇಗೌಡರಿಗೆ ಜನ್ಮದಿನದ ಶುಭ ಕೋರಿದ ಸಿಎಂ..! – ಹಳೆ ಫೋಟೋ ಪೋಸ್ಟ್ ಮಾಡಿ ಫ್ಲಾಶ್ ಬ್ಯಾಕ್ ನೆನಪಿಸಿಕೊಂಡ ಸಿದ್ದು 

by Chetan
May 18, 2025
ಅಂಕಪಟ್ಟಿಯಲ್ಲಿ RCB ನೇ ನಂಬರ್.1 ..! ಕೋಲ್ಕತ್ತಾ ಪಾಲಿಗೆ ಖಳನಾಯಕನಾದ ಮಳೆರಾಯ ! 
Top Story

ಅಂಕಪಟ್ಟಿಯಲ್ಲಿ RCB ನೇ ನಂಬರ್.1 ..! ಕೋಲ್ಕತ್ತಾ ಪಾಲಿಗೆ ಖಳನಾಯಕನಾದ ಮಳೆರಾಯ ! 

by Chetan
May 18, 2025
ಸಚಿವ ಕೃಷ್ಣ ಬೈರೇಗೌಡ ಆಪ್ತರಿಂದ ಗೂಂಡಾಗಿರಿ..?! – ಸರ್ಕಾರಿ ಅಧಿಕಾರಿ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ಮಾಡಿ ದರ್ಪ 
Top Story

ಸಚಿವ ಕೃಷ್ಣ ಬೈರೇಗೌಡ ಆಪ್ತರಿಂದ ಗೂಂಡಾಗಿರಿ..?! – ಸರ್ಕಾರಿ ಅಧಿಕಾರಿ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ಮಾಡಿ ದರ್ಪ 

by Chetan
May 18, 2025
ಪಹಲ್ಗಾಮ್ ಭೀಕರ ದಾಳಿಯ ಎಫೆಕ್ಟ್..! – ಅಮರನಾಥ ಯಾತ್ರೆಗೆ ಯಾತ್ರಾರ್ಥಿಗಳ ಹಿಂದೇಟು..! 
Top Story

ಪಹಲ್ಗಾಮ್ ಭೀಕರ ದಾಳಿಯ ಎಫೆಕ್ಟ್..! – ಅಮರನಾಥ ಯಾತ್ರೆಗೆ ಯಾತ್ರಾರ್ಥಿಗಳ ಹಿಂದೇಟು..! 

by Chetan
May 18, 2025
ನನ್ನ ಕನ್ನಡಕದ ಬಗ್ಗೆ ಮಾತನಾಡಿದವರು ಮಣ್ಣು ಮುಕ್ಕಿದ್ದಾರೆ ಜೋಕೆ..
Top Story

ನನ್ನ ಕನ್ನಡಕದ ಬಗ್ಗೆ ಮಾತನಾಡಿದವರು ಮಣ್ಣು ಮುಕ್ಕಿದ್ದಾರೆ ಜೋಕೆ..

by ಕೃಷ್ಣ ಮಣಿ
May 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ದೇವೇಗೌಡರಿಗೆ ಜನ್ಮದಿನದ ಶುಭ ಕೋರಿದ ಸಿಎಂ..! – ಹಳೆ ಫೋಟೋ ಪೋಸ್ಟ್ ಮಾಡಿ ಫ್ಲಾಶ್ ಬ್ಯಾಕ್ ನೆನಪಿಸಿಕೊಂಡ ಸಿದ್ದು 

ದೇವೇಗೌಡರಿಗೆ ಜನ್ಮದಿನದ ಶುಭ ಕೋರಿದ ಸಿಎಂ..! – ಹಳೆ ಫೋಟೋ ಪೋಸ್ಟ್ ಮಾಡಿ ಫ್ಲಾಶ್ ಬ್ಯಾಕ್ ನೆನಪಿಸಿಕೊಂಡ ಸಿದ್ದು 

May 18, 2025
ಅಂಕಪಟ್ಟಿಯಲ್ಲಿ RCB ನೇ ನಂಬರ್.1 ..! ಕೋಲ್ಕತ್ತಾ ಪಾಲಿಗೆ ಖಳನಾಯಕನಾದ ಮಳೆರಾಯ ! 

ಅಂಕಪಟ್ಟಿಯಲ್ಲಿ RCB ನೇ ನಂಬರ್.1 ..! ಕೋಲ್ಕತ್ತಾ ಪಾಲಿಗೆ ಖಳನಾಯಕನಾದ ಮಳೆರಾಯ ! 

May 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada