Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಎಡವಿ ಬಿದ್ದ ಪಿಎಂ ಕಿಸಾನ್ ಯೋಜನೆ!

ಎಡವಿ ಬಿದ್ದ ಪಿಎಂ ಕಿಸಾನ್ ಯೋಜನೆ!
ಎಡವಿ ಬಿದ್ದ ಪಿಎಂ ಕಿಸಾನ್ ಯೋಜನೆ!

January 29, 2020
Share on FacebookShare on Twitter

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ರೈತರಿಗೆ ನೆರವಾಗಲೆಂದು ಪ್ರಧಾನಮಂತ್ರಿ ಕಿಸಾನ್ ಯೋಜನೆಯನ್ನು ಜಾರಿಗೆ ತಂದರು. ಇದರ ಬಗ್ಗೆ ದೇಶದ ಕೋಟ್ಯಂತರ ರೈತ ಬಾಂಧವರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಸಮಾನ ಮೂರು ಕಂತುಗಳಲ್ಲಿ ರೈತರಿಗೆ 6000 ರೂಪಾಯಿ ಹಣವನ್ನು ನೀಡುವ ಯೋಜನೆ ಇದಾಗಿತ್ತು.

ಹೆಚ್ಚು ಓದಿದ ಸ್ಟೋರಿಗಳು

ಸುಪ್ರೀಂ ಕೋರ್ಟ್ ಗಮನ ಸೆಳೆಯಲು ಬೀದಿಗಿಳಿದು ಹೋರಾಟ ಅನಿವಾರ್ಯ: ಬಸವರಾಜ ಬೊಮ್ಮಾಯಿ

ತಮಿಳುನಾಡಿನಲ್ಲಿ ಬಿಜೆಪಿ ಜತೆಗಿನ ಬಾಂಧವ್ಯವನ್ನು ಕಳೆದುಕೊಳ್ಳುತ್ತೇನೆ : ಉದಯನಿಧಿ ಸ್ಟಾಲಿನ್

ಕಾವೇರಿ ನೀರಿ ನಿಯಂತ್ರಣ ಸಮಿತಿ ಸಭೆ: ಕರ್ನಾಟಕದ ಪರವಾಗಿ ಅಧಿಕಾರಿಗಳು ವಾದ ಮಂಡನೆ 

ಆದರೆ, ವಾಸ್ತವವಾಗಿ ಈ ಯೋಜನೆಯಡಿ 6000 ರೂಪಾಯಿ ಹಣವನ್ನು ಪಡೆದಿರುವ ರೈತರ ಸಂಖ್ಯೆಯನ್ನು ಗಮನಿಸಿದರೆ ಯೋಜನೆ ಎತ್ತ ಸಾಗಿದೆ ಎಂಬುದು ಗೊತ್ತಾಗುತ್ತದೆ. ಅಂದರೆ, ಪ್ರತಿ 10 ರೈತರ ಪೈಕಿ ಕೇವಲ ಮೂರಕ್ಕಿಂತ ಕಡಿಮೆ ರೈತರಿಗೆ ಈ ಹಣ ತಲುಪಿದೆ!

ಆಂಗ್ಲ ಆನ್ ಲೈನ್ ಸುದ್ದಿವಾಹಿನಿ `ದಿ ವೈರ್’ ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಲಭ್ಯವಾಗಿರುವ ಅಂಕಿ ಅಂಶಗಳಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಡಿಸೆಂಬರ್್ 1, 2018 ರಿಂದ ನವೆಂಬರ್ 30, 2019 ರವರೆಗಿನ ಮೊದಲ ವರ್ಷದಲ್ಲಿ ಪಿಎಂ ಕಿಸಾನ್ ಯೋಜನೆಯಡಿ ಶೇ.41 ರಷ್ಟು ರೈತರಿಗೆ ಮಾತ್ರ ಹಣ ಸಿಗಲು ಸಾಧ್ಯವಾಗಿದೆ. ಅದರಲ್ಲಿಯೂ ಕೇವಲ ಶೇ.25 ರಷ್ಟು ರೈತರಿಗೆ ಮಾತ್ರ ಮೂರು ಕಂತುಗಳಲ್ಲಿ ಹಣ ಸಿಕ್ಕಿದೆ.

2019ರ ಲೋಕಸಭೆ ಚುನಾವಣೆ ನಂತರ ಈ ಪಿಎಂ ಕಿಸಾನ್ ಯೋಜನೆ ಕುಂಠಿತಗೊಂಡಿದೆ. ಈ ಯೋಜನೆಯಡಿ 9 ಕೋಟಿ ರೈತರು ನೋಂದಣಿ ಮಾಡಿಕೊಂಡಿದ್ದರು. ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಲೋಕಸಭೆ ಚುನಾವಣೆಗೆ ಮುನ್ನ ಮೊದಲ ಕಂತಿನಲ್ಲಿ ಸುಮಾರು ನಾಲ್ಕೂವರೆ ಕೋಟಿ ರೈತರು ನೋಂದಣಿ ಮಾಡಿಸಿಕೊಂಡಿದ್ದರು. ಚುನಾವಣೆ ಮುಗಿಯುತ್ತಿದ್ದಂತೆಯೇ ನೋಂದಣಿ ಪ್ರಕ್ರಿಯೆಗೆ ಹಿನ್ನಡೆ ಉಂಟಾಗಿದೆ.

ಶೇ.75 ರಷ್ಟು ರೈತರು ಮೂರೂ ಕಂತುಗಳಲ್ಲಿ ಹಣವನ್ನೇ ಪಡೆದಿಲ್ಲ!

ಡಿಸೆಂಬರ್ 2018 ರಲ್ಲಿ ಆರಂಭವಾದ ಈ ಯೋಜನೆಯ ಮೊದಲ ವರ್ಷದಲ್ಲಿ ಅಂದರೆ ಡಿಸೆಂಬರ್ 2019 ರ ಅವಧಿಯಲ್ಲಿ ಕೇವಲ 3.85 ಕೋಟಿ ರೈತರು 2000 ರೂಪಾಯಿಗಳ ಸಮಾನ ಹಣದ ಮೂರು ಕಂತುಗಳ ಹಣ ಪಡೆದಿದ್ದಾರೆ.

ಯೋಜನೆಯನ್ನು ಆರಂಭ ಮಾಡಿದ ಸಂದರ್ಭದಲ್ಲಿ ದೇಶದಲ್ಲಿರುವ ಸುಮಾರು 14.5 ಕೋಟಿ ರೈತರು ಯೋಜನೆಯ ಪ್ರಯೋಜನ ಪಡೆಯಲಿದ್ದಾರೆಂದು ಅಂದಾಜಿಸಲಾಗಿತ್ತು. ಈ ಮೂಲಕ ಪ್ರತಿ ವರ್ಷ 2 ಸಾವಿರ ರೂಪಾಯಿಗಳಂತೆ ಮೂರು ಕಂತುಗಳಲ್ಲಿ ಒಟ್ಟು 6000 ರೂಪಾಯಿ ರೈತರ ಖಾತೆಗೆ ಹಣ ಜಮಾ ಆಗಬೇಕಿತ್ತು.

ಆದರೆ, ಯೋಜನೆಯ ಮೊದಲ ವರ್ಷ ಮುಗಿದ ನಂತರ ಅಂಕಿಅಂಶಗಳನ್ನು ಪರಿಶೀಲಿಸಿದರೆ ಶೇ.26.6 ರಷ್ಟು ರೈತರು ಮಾತ್ರ ಮೂರು ಕಂತುಗಳ ಸಂಪೂರ್ಣ ಹಣವನ್ನು ಪಡೆದಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆ ಹಿನ್ನಡೆ ಅನುಭವಿಸಲು ಪ್ರಮುಖ ಕಾರಣ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಇದಕ್ಕೆ ಸಂಬಂಧಿಸಿದಂತೆ ರೈತರ ಬಳಿ ಸೂಕ್ತ ದಾಖಲೆಗಳಿಲ್ಲದಿರುವುದು. ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ ದೇಶದ ಶೇ.44 ರಷ್ಟು ರೈತರು ಎರಡು ಕಂತುಗಳ ಹಣ ಅಂದರೆ 4000 ರೂಪಾಯಿ ಹಣವನ್ನು ಪಡೆದಿದ್ದಾರೆ. ಇನ್ನು ಶೇ.52 ರಷ್ಟು ರೈತರು ಕೇವಲ ಒಂದು ಕಂತಿನ ಹಣವನ್ನು ಪಡೆದಿದ್ದಾರೆ.

ಇನ್ನು ಶೇ.48 ರಷ್ಟು ರೈತರು ಯೋಜನೆಯ ಮೊದಲ ವರ್ಷದಲ್ಲಿ ಒಂದೇ ಒಂದು ಕಂತಿನ ಹಣವನ್ನೂ ಪಡೆಯದಿರುವುದು ಆಶ್ಚರ್ಯದ ಸಂಗತಿಯಾಗಿದೆ.

14.5 ಕೋಟಿ ರೈತರು ಯೋಜನೆಯ ಪ್ರಯೋಜನ ಪಡೆಯುತ್ತಾರೆ ಎಂದು ಸರ್ಕಾರ ಅಂದಾಜು ಮಾಡಿತ್ತು. ಆದರೆ, ಯೋಜನೆಯ ಮೊದಲ ವರ್ಷದಲ್ಲಿ ತಲಾ 2000 ರೂಪಾಯಿಯಂತೆ 7.6 ಕೋಟಿ ರೈತರು ಒಂದು ಕಂತಿನ ಹಣವನ್ನು ಒಂದು ವರ್ಷದಲ್ಲಿ ಪಡೆದಿದ್ದಾರೆ. ಅಂದರೆ, ಸರ್ಕಾರದ ಲೆಕ್ಕಾಚಾರದಂತೆ ಇನ್ನೂ 6.8 ಕೋಟಿ ರೈತರು ಈ ಯೋಜನೆಯ ಮೊದಲ ವರ್ಷದಲ್ಲಿ ಒಂದೂ ಕಂತು ಹಣ ಪಡೆಯಲು ಸಾಧ್ಯವಾಗಿಲ್ಲ.

ಮೊದಲ ವರ್ಷ ಸರ್ಕಾರದ ಅಂದಾಜಿನಂತೆ 14.5 ಕೋಟಿ ರೈತರು ಪಿಎಂ ಕಿಸಾನ್ ಯೋಜನೆಯ ಪ್ರಯೋಜನ ಪಡೆದಿದ್ದರೆ ಒಟ್ಟು 87,000 ಕೋಟಿ ರೂಪಾಯಿಗಳನ್ನು ರೈತರಿಗೆ ನೀಡಬೇಕಿತ್ತು. ಆದರೆ, ಈ ಪೈಕಿ ಶೇ.41 ರಷ್ಟು ರೈತರಿಗೆ ಮಾತ್ರ ಹಣ ಹೋಗಿರುವುದರಿಂದ ಸರ್ಕಾರ ನವೆಂಬರ್ 2019 ರವರೆಗೆ 36,000 ಕೋಟಿ ರೂಪಾಯಿಗಳ ಹಣವನ್ನು ನೀಡಿದಂತಾಗಿದೆ.

ಲೋಕಸಭೆ ಚುನಾವಣೆ ನಂತರ ಕುಂಠಿತ

ಲೋಕಸಭಾ ಚುನಾವಣೆಗೂ ಕೆಲವೇ ವಾರಗಳ ಮೊದಲು ಅಂದರೆ 2019 ರ ಫೆಬ್ರವರಿ 24 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಪಿಎಂ ಕಿಸಾನ್ ಯೋಜನೆಯನ್ನು ಉದ್ಘಾಟನೆ ಮಾಡಿದ್ದರು. ಇದರ ಉದ್ದೇಶ ಚುನಾವಣೆ ವೇಳೆ ಮತದಾರರನ್ನು ಸೆಳೆಯುವುದಾಗಿತ್ತು. ಚುನಾವಣೆಗೂ ಮುನ್ನ ಜಾರಿಗೆ ತಂದ ಕೇವಲ ಐದು ವಾರಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ರೈತರನ್ನು ಈ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲಾಗಿತ್ತು. ಇದಾದ ಬಳಿಕ ಅಂದರೆ ಚುನಾವಣೆ ನಡೆದು ಎರಡನೇ ಅವಧಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸರ್ಕಾರ ಮತ್ತು ಅಧಿಕಾರಿಗಳು ಈ ಯೋಜನೆಯನ್ನು ಮರೆತಂತೆ ಕಂಡುಬಂದಿದೆ. ಏಕೆಂದರೆ, ಚುನಾವಣೆ ಬಳಿಕ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲು ರೈತರೂ ಆಸಕ್ತಿ ತೋರಲಿಲ್ಲ ಮತ್ತು ಅಧಿಕಾರಿಗಳೂ ಆಸ್ಥೆ ವಹಿಸಲೇ ಇಲ್ಲದ ಪರಿಣಾಮ ಯೋಜನೆಗೆ ಹಿನ್ನಡೆ ಉಂಟಾಗಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಗಳ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದಿವೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ಫಲಾನುಭವಿಗಳ ಪಟ್ಟಿಯನ್ನು ನೀಡದಿದ್ದರೆ ಯೋಜನೆಯ ಪ್ರಯೋಜನ ಲಭ್ಯವಾಗುವುದಿಲ್ಲ. ಉದಾಹರಣೆಗೆ ಕೇಂದ್ರ ಸರ್ಕಾರದ ಯೋಜನೆ ಬೇಡ ಎಂಬ ವಾದ ಮಂಡಿಸುತ್ತಾ ಬಂದಿರುವ ಪಶ್ಚಿಮ ಬಂಗಾಳದ ಇದುವರೆಗೆ ಒಬ್ಬನೇ ಒಬ್ಬ ರೈತನ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿಲ್ಲ. ಇದರಿಂದಾಗಿ ಪಿಎಂ ಕಿಸಾನ್ ಯೋಜನೆಯಿಂದ ಪಶ್ಚಿಮ ಬಂಗಾಳದ 68 ಲಕ್ಷ ರೈತರು ವಂಚಿತರಾಗುವಂತಾಗಿದೆ.

ಬಿಜೆಪಿ ಆಡಳಿತವಿರುವ ರಾಜ್ಯಗಳೂ ಸಹ ರೈತರ ಪಟ್ಟಿಯನ್ನು ನೀಡಲು ಹಿಂದೆ ಬಿದ್ದಿವೆ. ಕರ್ನಾಟಕ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ (ಯೋಜನೆ ಜಾರಿಗೆ ಬಂದಾಗ ಬಿಜೆಪಿ ಅಧಿಕಾರದಲ್ಲಿತ್ತು) ಕೇವಲ 2.5 ಕೋಟಿ ರೈತರ ಹೆಸರನ್ನು ಕಳುಹಿಸಿವೆ. ಬಿಹಾರ ರಾಜ್ಯದಲ್ಲಿ ಸುಮಾರು 1.5 ಕೋಟಿ ರೈತರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ, ಆ ರಾಜ್ಯದಲ್ಲಿ ಕೇವಲ 44 ಲಕ್ಷ ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ.

ಕೃಪೆ: ದಿ ವೈರ್

RS 500
RS 1500

SCAN HERE

Pratidhvani Youtube

«
Prev
1
/
5515
Next
»
loading
play
Tamil Naduನಲ್ಲಿ Siddaramaiah ಫೋಟೋಗೆ ಹಾರ ಹಾಕಿ ಧರಣಿ | ರಾಮನಗರದಲ್ಲಿ ತಮಿಳುನಾಡು ಸಿಎಂ Stalin​ಗೆ ತಿಥಿ!
play
Mandya : ರಾಮನಗರದಲ್ಲಿ ತಮಿಳುನಾಡು ಸಿಎಂ Stalin​ಗೆ ತಿಥಿ!
«
Prev
1
/
5515
Next
»
loading

don't miss it !

ರಾಮನಗರದಲ್ಲಿ ಬೆಳ್ಳಂಬೆಳಗ್ಗೆಯೇ ಪ್ರತಿಭಟನೆ : ಸ್ಟಾಲಿನ್‌ಗೆ ಶ್ರದ್ಧಾಂಜಲಿ ಕೋರಿ  ಆಕ್ರೋಶ
Top Story

ರಾಮನಗರದಲ್ಲಿ ಬೆಳ್ಳಂಬೆಳಗ್ಗೆಯೇ ಪ್ರತಿಭಟನೆ : ಸ್ಟಾಲಿನ್‌ಗೆ ಶ್ರದ್ಧಾಂಜಲಿ ಕೋರಿ ಆಕ್ರೋಶ

by ಪ್ರತಿಧ್ವನಿ
September 26, 2023
ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಬೃಹತ್ ಪ್ರತಿಭಟನೆ; ನಾಯಕರ ಬಂಧನ ಬಿಡುಗಡೆ
Top Story

ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಬೃಹತ್ ಪ್ರತಿಭಟನೆ; ನಾಯಕರ ಬಂಧನ ಬಿಡುಗಡೆ

by ಪ್ರತಿಧ್ವನಿ
September 23, 2023
ಕಾವೇರಿ ಪರ ಟ್ವೀಟ್‌ ಮೂಲಕ ಧ್ವನಿ ಎತ್ತಿದ ಚಾಲೆಂಜಿಗ್‌ ಸ್ಟಾರ್‌ ದರ್ಶನ್‌
Top Story

ಕಾವೇರಿ ಪರ ಟ್ವೀಟ್‌ ಮೂಲಕ ಧ್ವನಿ ಎತ್ತಿದ ಚಾಲೆಂಜಿಗ್‌ ಸ್ಟಾರ್‌ ದರ್ಶನ್‌

by ಪ್ರತಿಧ್ವನಿ
September 20, 2023
ಎಲ್ಲೆಂದರಲ್ಲಿ ತ್ಯಾಜ್ಯ  ಎಸೆಯುವವರಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆ!
Top Story

ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆ!

by ಲಿಖಿತ್‌ ರೈ
September 20, 2023
ಸುಪ್ರೀಂಕೋರ್ಟ್​ನಲ್ಲಿ ಕಾವೇರಿ ನೀರು ವಿವಾದ.. ನೀರು ಬಿಡಿ ಅಷ್ಟೇ..
Top Story

ಸುಪ್ರೀಂಕೋರ್ಟ್​ನಲ್ಲಿ ಕಾವೇರಿ ನೀರು ವಿವಾದ.. ನೀರು ಬಿಡಿ ಅಷ್ಟೇ..

by ಲಿಖಿತ್‌ ರೈ
September 21, 2023
Next Post
ಬಜೆಟ್‌ 2020: ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿ ಸೇನಾ ಪಡೆಗಳು 

ಬಜೆಟ್‌ 2020: ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿ ಸೇನಾ ಪಡೆಗಳು 

ಯಾವುದು ಪ್ರಚೋದನೆ? ಯಾವುದು ದೇಶದ್ರೋಹ? ದೇಶದಲ್ಲಿ ಶುರುವಾಯ್ತಾ ಭಯದ ವಾತಾವರಣ?

ಯಾವುದು ಪ್ರಚೋದನೆ? ಯಾವುದು ದೇಶದ್ರೋಹ? ದೇಶದಲ್ಲಿ ಶುರುವಾಯ್ತಾ ಭಯದ ವಾತಾವರಣ?

ಗದಗ್‌ನ 7 ವರ್ಷದ ಬಾಲಕಿಗೆ ಸಿಕ್ಕಿತು ಡಾಕ್ಟರೇಟ್

ಗದಗ್‌ನ 7 ವರ್ಷದ ಬಾಲಕಿಗೆ ಸಿಕ್ಕಿತು ಡಾಕ್ಟರೇಟ್

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist