Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಉಗ್ರಗಾಮಿ ಹಾಗೂ ಕೇಜ್ರಿವಾಲ್ ನಡುವೆ ಯಾವುದೇ ವ್ಯತ್ಯಾಸವಿಲ್ಲ : ಬಿಜೆಪಿ

ಉಗ್ರಗಾಮಿ ಹಾಗೂ ಕೇಜ್ರಿವಾಲ್ ನಡುವೆ ಯಾವುದೇ ವ್ಯತ್ಯಾಸವಿಲ್ಲ : ಬಿಜೆಪಿ
ಉಗ್ರಗಾಮಿ ಹಾಗೂ ಕೇಜ್ರಿವಾಲ್ ನಡುವೆ ಯಾವುದೇ ವ್ಯತ್ಯಾಸವಿಲ್ಲ : ಬಿಜೆಪಿ

February 3, 2020
Share on FacebookShare on Twitter

ದೆಹಲಿ ವಿಧಾನಸಭಾ ಚುನಾವಣೆಯ ದಿನ ಸಮೀಪಿಸುತ್ತಿದ್ದಂತೆ ಪ್ರಚಾರ ಕಣದಲ್ಲಿ ಆಕ್ಷೇಪಾರ್ಹ, ವಿವಾದಾತ್ಮಕ ಹೇಳಿಕೆಗಳು ವಿಜೃಂಭಿಸುತ್ತಿವೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರನ್ನು ಭಯೋತ್ಪಾದಕ ಎಂದು ಕರೆದ ಬಿಜೆಪಿ ಸಂಸದರೊಬ್ಬರಿಗೆ ಚುನಾವಣಾ ಆಯೋಗ ನೋಟಿಸ್‌ ನೀಡಿದೆ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌, “ಅರವಿಂದ ಕೇಜ್ರಿವಾಲ್‌ರಿಂದ ದಿಲ್ಲಿಯ ಮತದಾರರು ದೂರ ಹೋಗಿದ್ದಕ್ಕೆ ಕಾರಣವಿದೆ. ಕೇಜ್ರಿವಾಲ್‌ ಮುಗ್ಧನ ಮುಖ ಮಾಡಿ – ‘ನಾನು ಭಯೋತ್ಪಾದಕನಾ?’ ಎಂದು ಕೇಳುತ್ತಾರೆ. ನೀವು ಭಯೋತ್ಪಾದಕ, ಇದಕ್ಕೆ ಸಾಕಷ್ಟು ಪುರಾವೆಗಳಿವೆ. ನೀವೇ ನಾನೊಬ್ಬ ಅರಾಜಕವಾದಿ ಎಂದಿದ್ದೀರಿ. ಅರಾಜಕವಾದಿ ಹಾಗೂ ಉಗ್ರವಾದಿಗಳಲ್ಲಿ ಹೆಚ್ಚಿನ ಅಂತರ ಇರುವುದಿಲ್ಲ,” ಎಂದು ಹೇಳಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಕೆಲವು ರಾಷ್ಟ್ರಗಳು ಅಜೆಂಡಾ ನಿರ್ಧರಿಸಿ, ಉಳಿದವರು ಅನುಸರಿಸುವ ಕಾಲ ಮುಗಿದಿದೆ: ಜೈಶಂಕರ್

ಸುಪ್ರೀಂ ಕೋರ್ಟ್ ಗಮನ ಸೆಳೆಯಲು ಬೀದಿಗಿಳಿದು ಹೋರಾಟ ಅನಿವಾರ್ಯ: ಬಸವರಾಜ ಬೊಮ್ಮಾಯಿ

ತಮಿಳುನಾಡಿನಲ್ಲಿ ಬಿಜೆಪಿ ಜತೆಗಿನ ಬಾಂಧವ್ಯವನ್ನು ಕಳೆದುಕೊಳ್ಳುತ್ತೇನೆ : ಉದಯನಿಧಿ ಸ್ಟಾಲಿನ್

ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಕೇಜ್ರಿವಾಲ್ “ನನ್ನನ್ನು ದೆಹಲಿಯ ಜನರು ಸಹೋದರನಂತೆ ಭಾವಿಸುತ್ತಾರೆಯೇ ಅಥವಾ ಮಗನೆಂದು ಭಾವಿಸುತ್ತಾರೆಯೇ ಅಥವಾ ಉಗ್ರವಾದಿ ಎಂದು ಭಾವಿಸುತ್ತಾರೆ ಎಂಬುದನ್ನು ನಾನು ಜನರ ನಿರ್ಧಾರಕ್ಕೆ ಬಿಡುವೆ” ಎಂದಿದ್ದರು. ಪ್ರಕಾಶ್‌ ಜಾವಡೇಕರ್‌ ಮಾತಿಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, “ನಿನ್ನೆ ಬಿಜೆಪಿಯ ಕೆಲ ಮುಖಂಡರು ಕೇಜ್ರಿವಾಲ್ ಓರ್ವ ಭಯೋತ್ಪಾದಕನಾಗಿದ್ದಾನೆ ಎಂದು ಹೇಳಿದ್ದರು. ನಾನು ಇಲ್ಲಿಯವರೆಗೆ ದೇಶಕ್ಕಾಗಿ ತನು, ಮನ, ಧನ ಅರ್ಪಿಸಿ ಸೇವೆ ಸಲ್ಲಿಸಿದ್ದೇನೆ. ಕಳೆದ ಐದು ವರ್ಷಗಳಿಂದ ದೆಹಲಿಯ ಪ್ರತಿಯೊಂದು ಮಗುವನ್ನು ನಾನು ನನ್ನ ಮಗ ಎಂದು ಭಾವಿಸಿ ಅವರಿಗಾಗಿ ಒಳ್ಳೆಯ ಶಿಕ್ಷಣದ ವ್ಯವಸ್ಥೆ ಮಾಡಿದ್ದೇನೆ. ಇದರಿಂದ ನಾನು ಭಯೋತ್ಪಾದಕನಾದೇನೆ? ದೆಹಲಿಯ ಯಾವುದೇ ಒಂದು ಮನೆಯಲ್ಲಿ ಓರ್ವ ವ್ಯಕ್ತಿ ಅನಾರೋಗ್ಯಕ್ಕೀಡಾದರೆ ಅವರಿಗಾಗಿ ಔಷಧಿ, ವೈದ್ಯಕೀಯ ಪರೀಕ್ಷೆ ಹಾಗೂ ಆಪರೇಷನ್ ವ್ಯವಸ್ಥೆ ಮಾಡಿದ್ದೇನೆ. ಯಾವೊಬ್ಬ ಉಗ್ರವಾದಿ ಇದನ್ನು ಮಾಡಿದ್ದಾನೆಯೇ?” ಎಂದು ಪ್ರಶ್ನಿಸಿದ್ದರು.

ಜತೆಗೆ ಜಾವಡೇಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಎಪಿ ಸಂಸದ ಸಂಜಯ್‌ ಸಿಂಗ್‌ “ಕೇಂದ್ರ ಸರಕಾರ ಇರುವ, ಚುನಾವಣಾ ಆಯೋಗ ಉಪಸ್ಥಿತಿ ಇರುವ ದೇಶದ ರಾಜಧಾನಿಯಲ್ಲೇ ಈ ಬೆಳವಣಿಗೆಗಳು ನಡೆಯುತ್ತಿವೆ. ಇಂಥಹ ಭಾಷೆ ಬಳಕೆ ಮಾಡಲು ಕೇಂದ್ರ ಸಚಿವರಿಗೆ ಹೇಗೆ ಅನುಮತಿ ನೀಡುತ್ತಾರೆ? ಅರವಿಂದ ಕೇಜ್ರಿವಾಲ್‌ ಭಯೋತ್ಪಾದಕರಾದರೆ, ಅವರನ್ನು ಬಂಧಿಸುವಂತೆ ನಾನು ಬಿಜೆಪಿಗೆ ಸವಾಲು ಹಾಕುತ್ತೇನೆ,” ಎಂದು ಕಿಡಿಕಾರಿದ್ದಾರೆ. ಈ ಹಿಂದೆ ಬಿಜೆಪಿ ಸಂಸದ ಪರ್ವೇಶ್‌ ವರ್ಮಾ ಚುನಾವಣಾ ಪ್ರಚಾರದ ವೇಳೆ ಕೇಜ್ರಿವಾಲ್‌ ವಿರುದ್ಧ ಜನವರಿ 25 ರಂದು ಭಯೋತ್ಪಾದಕ ಪದ ಬಳಸಿದ್ದರು. ಈ ಸಂಬಂಧ ಅವರಿಗೆ ಚುನಾವಣಾ ಆಯೋಗ ನೋಟಿಸ್‌ ನೀಡಿ ನಾಲ್ಕು ದಿನಗಳ ಪ್ರಚಾರಕ್ಕೂ ನಿರ್ಬಂಧ ವಿಧಿಸಿದೆ. ಈ ಎಲ್ಲಾ ನಿರ್ಭಂಧಗಳ ನಡುವೆ ದೆಹಲಿ ರಾಜಕಾರಣ ಕೆಸರೆರಚಾಟವನ್ನು ಮುಂದುವರಿಸಿದೆ.

ಕೇಂದ್ರ ಸರ್ಕಾರವನ್ನು ವಿರೋಧಿಸುವ ಪ್ರತಿಯೊಬ್ಬರು ಕೂಡ ಉಗ್ರರ ಪರವಾಗಿದ್ದಾರೆ ಎನ್ನುವ ರೀತಿಯಲ್ಲಿ ಬಿಜೆಪಿಯ ಸಂಸದರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೇ, ಸಮಾಜದಲ್ಲಿ ಅಶಾಂತಿ ಉಂಟು ಮಾಡುವಂತಹ ಪ್ರಚೋದನಕಾರಿ ಭಾಷಣಗಳನ್ನು ಮಾಡಿ, ಅದರ ಲಾಭವನ್ನು ಮತಗಳ ಮೂಲಕ ಪಡೆಯಲು ಬಯಸುವುದು ಬಿಜೆಪಿಯ ಗುರಿ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಇನ್ನು ದೆಹಲಿ ಚುನಾವಣೆಯಲ್ಲಿ ಯಾವುದೇ ಸುದ್ದಿಯನ್ನು ನಿರ್ಮಿಸಲು ಸಾಧ್ಯವಾಗದ ಕಾಂಗ್ರೆಸ್‌ ಪಕ್ಷವು ಆಮ್‌ ಆದ್ಮಿ ಮತ್ತು ಬಿಜೆಪಿಯ ಒತ್ತಡದಿಂದ ಸಾಕಷ್ಟು ಮೆತ್ತಗಾಗಿ ಹೋಗಿದೆ. ಮೇಲ್ನೋಟಕ್ಕೆ ನೋಡುವಾಗ ಇದು ಆಪ್‌ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿಯಿದ್ದಂತೆ ಕಾಣುತ್ತದೆ. ಹಾಗಾಗಿ, ಆಮ್‌ ಆದ್ಮಿ ಪಕ್ಷಕ್ಕೆ ಏಕಾಂಗಿಯಾಗಿ ರಾಷ್ಟ್ರೀಯ ಪಕ್ಷವಾದ ಬಿಜೆಪಿಯನ್ನು ಎದುರಿಸುವ ಅನಿವಾರ್ಯತೆ ಈ ಚುನಾವಣೆಯಲ್ಲಿ ಎದುರಾಗಿದೆ.

RS 500
RS 1500

SCAN HERE

Pratidhvani Youtube

«
Prev
1
/
5517
Next
»
loading
play
Yogaraj Bhat | ಉತ್ತರ ಕರ್ನಾಟಕ ಬ್ಯಾಕ್ ಗ್ರೌಂಡ್ ಇದೆ ಭಾಷೆ ಬಳಕೆ ಇಲ್ಲಾ ಇದರಲ್ಲಿ | @pratidhvanidigital3421
play
LIVE: HD DeveGowda Press Meet | JDS | HD Kumaraswamy | Politics | Cauvery #pratidhvani #hddevegowda
«
Prev
1
/
5517
Next
»
loading

don't miss it !

ಭಾರತದಲ್ಲಿ ಮೋದಿ ಅವರ ನಾಯಕತ್ವದಲ್ಲಿ ಮಹಿಳಾ ಮೀಸಲಾತಿ ಜಾರಿ: ಪ್ರಹ್ಲಾದ್​ ಜೋಶಿ
Top Story

ಭಾರತದಲ್ಲಿ ಮೋದಿ ಅವರ ನಾಯಕತ್ವದಲ್ಲಿ ಮಹಿಳಾ ಮೀಸಲಾತಿ ಜಾರಿ: ಪ್ರಹ್ಲಾದ್​ ಜೋಶಿ

by ಪ್ರತಿಧ್ವನಿ
September 22, 2023
ಜಟಿಲ ಸಿಕ್ಕುಗಳ ನಡುವೆ ರಂಗಭೂಮಿಯ ಆದ್ಯತೆಗಳು
ಅಂಕಣ

ಜಟಿಲ ಸಿಕ್ಕುಗಳ ನಡುವೆ ರಂಗಭೂಮಿಯ ಆದ್ಯತೆಗಳು

by ನಾ ದಿವಾಕರ
September 25, 2023
ಅಖಂಡ ಕರ್ನಾಟಕ ಸಂಪೂರ್ಣ ಸ್ತಬ್ಧವಾದರೆ ಮಾತ್ರ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಬಹುದು: ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ
Top Story

ಅಖಂಡ ಕರ್ನಾಟಕ ಸಂಪೂರ್ಣ ಸ್ತಬ್ಧವಾದರೆ ಮಾತ್ರ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಬಹುದು: ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ

by ಪ್ರತಿಧ್ವನಿ
September 24, 2023
ಕಾವೇರಿ ನೀರಿಗಾಗಿ ಬೆಂಗಳೂರು ಬಂದ್: ವ್ಯಾಪಾರ- ವಹಿವಾಟು ಸ್ತಬ್ಧ!
Top Story

ಕಾವೇರಿ ನೀರಿಗಾಗಿ ಬೆಂಗಳೂರು ಬಂದ್: ವ್ಯಾಪಾರ- ವಹಿವಾಟು ಸ್ತಬ್ಧ!

by ಪ್ರತಿಧ್ವನಿ
September 26, 2023
ಕಾವೇರಿ ನೀರು ಹಂಚಿಕೆಗೆ ಮುಂದುವರೆದ ಹೋರಾಟ: ಇಂದು ಮಂಡ್ಯ ಬಂದ್
Top Story

ಕಾವೇರಿ ನೀರು ಹಂಚಿಕೆಗೆ ಮುಂದುವರೆದ ಹೋರಾಟ: ಇಂದು ಮಂಡ್ಯ ಬಂದ್

by ಪ್ರತಿಧ್ವನಿ
September 23, 2023
Next Post
ಮನೆಯ ಹಸಿ ಕಸದಲ್ಲಿದೆ `ರಸ’ ಗೊಬ್ಬರ!

ಮನೆಯ ಹಸಿ ಕಸದಲ್ಲಿದೆ `ರಸ’ ಗೊಬ್ಬರ!

ಶಿವಮೊಗ್ಗದಲ್ಲಿ ಹಕ್ಕಿಗಳ ಮ್ಯಾರಥಾನ್

ಶಿವಮೊಗ್ಗದಲ್ಲಿ ಹಕ್ಕಿಗಳ ಮ್ಯಾರಥಾನ್

ಅದಮಾರು ಪರ್ಯಾಯ - 2020

ಅದಮಾರು ಪರ್ಯಾಯ - 2020

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist