• Home
  • About Us
  • ಕರ್ನಾಟಕ
Wednesday, June 25, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಇಂಗಾಲ ದಾಸ್ತಾನು ಕಡಿಮೆಯಾದರೂ ಅರಣ್ಯ ವಿಸ್ತರಣೆ! ಗೊಂದಲದ ವರದಿ ನೀಡಿದ ಕೇಂದ್ರ 

by
February 27, 2020
in ದೇಶ
0
ಇಂಗಾಲ ದಾಸ್ತಾನು ಕಡಿಮೆಯಾದರೂ ಅರಣ್ಯ ವಿಸ್ತರಣೆ! ಗೊಂದಲದ ವರದಿ ನೀಡಿದ ಕೇಂದ್ರ 
Share on WhatsAppShare on FacebookShare on Telegram

ಕಳೆದ ಡಿಸೆಂಬರ್‌ ಅಂತ್ಯಕ್ಕೆ ಕೇಂದ್ರ ಅರಣ್ಯ ಇಲಾಖೆ ತನ್ನ ದ್ವೈವಾರ್ಷಿಕ ವರದಿ ಬಿಡುಗಡೆ ಮಾಡಿ, ದೇಶದಲ್ಲಿ ಅರಣ್ಯ ವಿಸ್ತಾರಗೊಳ್ಳುತ್ತಿದೆ ಎಂದು ವಿವರಿಸಿ ತನ್ನ ಬೆನ್ನು ತಾನೇ ತಟ್ಟಿಕೊಂಡಿತ್ತು. ವರದಿ ಬಂದ ಬೆನ್ನಲ್ಲೇ ಎಲ್ಲಾ ಪತ್ರಿಕೆಗಳು, ಡಿಜಿಟಲ್‌ ಮಾಧ್ಯಮಗಳು ಹೊಗಳಿದ್ದೇ ಹೊಗಳಿದ್ದು, ಆದರೆ ಪರಿಸರವಾದಿಗಳಿಗೆ ಮಾತ್ರ ಈ ಸುಳ್ಳನ್ನ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವರದಿ ವೈಜ್ಞಾನಿಕವಾಗಿಯೂ ಹಸಿ ಸುಳ್ಳು ಎಂಬುದು ವರದಿಯಿಂದಲೇ ಸಾಬೀತಾಗಿದೆ.

ADVERTISEMENT

ಕೇಂದ್ರ ಅರಣ್ಯ ಇಲಾಖೆಯ ವಿಸ್ತೃತ ವರದಿಯಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ಕರ್ನಾಟಕ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ, ಚತ್ತೀಸ್‌ಗಢ, ಕೇರಳ, ಉತ್ತರ ಪ್ರದೇಶ, ಜಾರ್ಖಾಂಡ್‌ ರಾಜ್ಯಗಳಲ್ಲಿ ಅರಣ್ಯ ಪ್ರದೇಶ ವ್ಯಾಪ್ತಿ ವಿಸ್ತಾರಗೊಂಡಿದೆ, ಅಂದರೆ ಕಾಡು ವೃದ್ಧಿಯಾಗಿದೆ. ಇದೇ ವರದಿಯ ಪ್ರಕಾರ ಈ ಎಲ್ಲಾ ರಾಜ್ಯಗಳಲ್ಲಿ ಇಂಗಾಲದ ದಾಸ್ತಾನು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಜೀವರಾಶಿ ಸಮೃದ್ಧವಾಗಿರಲು ಇಂಗಾಲದ ಪ್ರಮಾಣ ಹೆಚ್ಚಿರಲೇ ಬೇಕು, ಇಂಗಾಲದ ಚಕ್ರ ಇಡೀ ಜಗತ್ತನ್ನ ಬಂಧದಲ್ಲಿಟ್ಟಿದೆ. ಇಂಗಾಲದ ಚಕ್ರದಲ್ಲಿ ಭೂಮಿಯ ಮೇಲಿನ ಅರಣ್ಯ ಹಾಗೂ ಸಸ್ಯವರ್ಗ, ಸಮುದ್ರದ ಮೇಲಿನ ತೇಲುವ ಸಸ್ಯವರ್ಗವೆಲ್ಲಾ ಸೇರಿಕೊಂಡಿದೆ. ದ್ಯುತಿ ಸಂಶ್ಲೇಷಣ ಕ್ರೀಯೆ ಮುಖಾಂತರ ಸಸ್ಯಗಳು ಅಹಾರ ತಯಾರಿಸುತ್ತವೆ. ಜೈವಿಕ ವಲಯದ ಪರಾವಲಂಬಿಗಳಲ್ಲಿ, ಕೊಳೆತ ಪದಾರ್ಥಗಳಲ್ಲಿಯೂ ಸಹ ಇಂಗಾಲದ ಪ್ರಮಾಣ ಇರುತ್ತದೆ, ಇಂತಹ ಅದ್ಭುತ ಬಂಧಕ್ಕೆ ಸಾಕಷ್ಟು ಹಾನಿಯಾಗಿದೆ. ಇಂಗಾಲದ ದಾಸ್ತಾನು ಗಣನೀಯವಾಗಿ ಕಡಿಮೆಯಾಗುತ್ತಿದೆ, ಇದರ ಅರ್ಥ ಕಾಡು ವಿಪರೀತ ನಾಶವಾಗಿರಲೇ ಬೇಕಲ್ಲ!

ಅರಣ್ಯ ಇಲಾಖೆ ನೀಡಿದ ಮಾಹಿತಿಯಲ್ಲಿ ನಮ್ಮ ರಾಜ್ಯವನ್ನೇ ತೆಗೆದುಕೊಂಡರೆ ಎರಡು ವರ್ಷದಲ್ಲಿ 1,025 ಸ್ಕ್ವೇರ್‌ ಕಿಲೋಮೀಟರ್‌ ಅರಣ್ಯ ವೃದ್ಧಿಯಾಗಿದೆ, ಆದರೆ ಪ್ರತಿಶತ ಇಪ್ಪತ್ತರಷ್ಟು ಇಂಗಾಲದ ಪ್ರಮಾಣ ಕಡಿಮೆಯಾಗಿದೆ. ಅದೇ ಅರುಣಾಚಲಪ್ರದೇಶದಲ್ಲಿ ಇಂಗಾಲದ ಪ್ರಮಾಣ ಹೆಚ್ಚಾಗಿದ್ದರೂ ಕೂಡ 276 ಸ್ಕ್ವೇರ್‌ ಕಿಲೋಮೀಟರ್‌ ಅರಣ್ಯ ನಾಶವಾಗಿದೆ. ಇಲಾಖೆ ನೀಡಿದ ವರದಿಯಲ್ಲೇ ಲೋಪವಿದ್ದರೂ ಉತ್ತರ ಸಿಕ್ಕಿಲ್ಲ. ಮುಂಬೈ ಮೂಲದ ಪರಿಸರ ಹೋರಾಟಗಾರರ ತಂಡ ವನಶಕ್ತಿ ಕೇಂದ್ರ ಸರ್ಕಾರದ ಅರಣ್ಯ ವೃದ್ಧಿ ವರದಿಯನ್ನ ಅವೈಜ್ಞಾನಿಕ ಎಂದು ಟೀಕಿಸಿದೆ. ಈ ವರದಿಯಲ್ಲೇ ಲೋಪವಿದೆ, ಉಪಗ್ರಹಗಳ ಮೂಲಕ ಅರಣ್ಯಗಳ ವಿಸ್ತಾರ ಅಳೆಯುತ್ತಾರೆ, ಕೆಲವೊಮ್ಮೆ ತೋಟಗಳೂ ಸಹ ಅರಣ್ಯ ಎಂದೇ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ವನಶಕ್ತಿ ಸಂಘಟನೆಯ ಕಾರ್ಯಕರ್ತರು.

ಅರಣ್ಯ ಸಚಿವ ಪ್ರಕಾಶ್‌ ಜಾವ್ಡೇಕರ್‌ ನೀಡಿರುವ ವರದಿಯ ಏಳನೇ ಚಾಪ್ಟರ್‌ ಈ ಇಂಗಾಲದ ಮಹತ್ವ ಹಾಗೂ ಏರಿಳಿತಗಳ ಬಗ್ಗೆ ಬೆಳಕು ಚೆಲ್ಲುತ್ತೆ, ವೈಜ್ಞಾನಿಕವಾಗಿಯೇ ಈ ವರದಿ ಸುಳ್ಳು ಮಾಹಿತಿ ನೀಡುತ್ತಿರುವುದರ ಬಗ್ಗೆ ಪರಿಸರ ಪ್ರೇಮಿಗಳೂ ಗರಂ ಆಗಿದ್ದಾರೆ. ಶಿವಮೊಗ್ಗ ಮೂಲದ ಪರಿಸರವಾದಿ ಅಜಯ್‌ ಕುಮಾರ್‌ ಶರ್ಮಾ ಈ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಅರಣ್ಯ ಹೆಚ್ಚಾಗಿದೆ ಎಂದಾದರೆ ಇಂಗಾಲದ ದಾಸ್ತಾನೂ ಹೆಚ್ಚಾಗಿರಬೇಕು. ಆದರೆ, ಇದು ವಿರುದ್ಧವಾಗಿ ದಾಖಲಾಗಿದೆ. ನಿಜವಾಗಿಯೂ ವರದಿ ನೀಡುವವರು ಮೂಲ ನಕ್ಷೆ ಹಿಡಿದುಕೊಂಡು ಓಡಾಡಬೇಕು. ಉದಾಹರಣೆ ಶಿವಮೊಗ್ಗದ ಶೆಟ್ಟಿಹಳ್ಳಿ, ನಗರಕ್ಕೆ ಹೊಂದಿಕೊಂಡಂತಿದೆ, ಕಳೆದ ದಶಕದಲ್ಲಿ ಸಾಕಷ್ಟು ಮರಗಳನ್ನ ಕಳೆದುಕೊಂಡಿದೆ, ಈ ತಂಡ ಗೂಗಲ್‌ ಮ್ಯಾಪ್‌, ಇಸ್ರೋದ ಭುವನ್‌ ಉಪಗ್ರಹ ಆಧಾರವಾಗಿಟ್ಟುಕೊಂಡೂ ಸಹ ಅಳೆಯುತ್ತಾರೆ. ಸಾಮಾನ್ಯವಾಗಿ ಕಾಡಿನ ಮಧ್ಯೆ ಯಾರೂ ಹೋಗಿ ಒತ್ತುವರಿ ಮಾಡಿ ಬರುವುದಿಲ್ಲ. ತೋಟದ ಪಕ್ಕದಲ್ಲಿರುವ ಮರವನ್ನೇ ಕಡಿದು ಉರುಳಿಸಿಕೊಂಡರೂ ಇವರ ಮಾಪನಗಳಲ್ಲಿ ದಾಖಲಾಗುವುದಿಲ್ಲ. ಉಪಗ್ರಹಗಳ ದತ್ತಾಂಶದಿಂದ ತಪ್ಪು ವರದಿಯೇ ಹೆಚ್ಚು, ಚಿಕ್ಕಮಗಳೂರಿನಲ್ಲಿರುವ ಕಾಫಿ ತೋಟಗಳು, ಶಿವಮೊಗ್ಗದ ಅಡಕೆ ತೋಟಗಳೂ ಸಹ ಕಾಡಿನಂತೆ ಕಂಡರೆ ಆಶ್ಚರ್ಯವೇನಿಲ್ಲ ಎನ್ನುತ್ತಾರೆ.

ಕಾರ್ಬನ್‌ ಸ್ಟಾಕ್‌ ಅಥವಾ ಇಂಗಾಲದ ದಾಸ್ತಾನು ವೈಜ್ಞಾನಿಕವಾಗಿಯೇ ದಾಖಲು ಮಾಡಿರುತ್ತಾರೆ, ಆದರೆ ವನವೃದ್ಧಿ ಹಾಗೂ ನಾಶವನ್ನ ನಕ್ಷೆ ಹಿಡಿದುಕೊಂಡು ಸ್ಥಳಕ್ಕೆ ಹೋಗಿ ದಾಖಲು ಮಾಡುವುದಿಲ್ಲ, ಎಲ್ಲೋ ಒತ್ತುವರಿ ತೆರವು ಮಾಡಿದಾಕ್ಷಣ ರಾತ್ರೋರಾತ್ರಿ ಕಾಡು ಬೆಳೆಯುವುದಿಲ್ಲ, ವರ್ಷದಿಂದ ವರ್ಷಕ್ಕೆ ಅರಣ್ಯ ಭೂಮಿ ನಾನಾ ಕಾರಣಗಳಿಂದ ನಾಶವಾಗುತ್ತಲೇ ಇದೆ, ಎರಡು ವರ್ಷದಲ್ಲಿ ಅರಣ್ಯ ಪ್ರದೇಶ ವಿಸ್ತಾರವಾಗಿದೆ ಎಂದು ವರದಿ ನೀಡುವ ಮೂಲಕ ಕೇಂದ್ರ ಸರ್ಕಾರ ಮಂಕುಬೂದಿ ಎರಚಿದೆ.

Tags: Carbon CycleEcologyForest DepartmentMinister for Forest and Environmentಇಂಗಾಲ ದಾಸ್ತಾನುಕೇಂದ್ರ ಅರಣ್ಯ ಇಲಾಖೆ
Previous Post

ಪ್ರತಿಸ್ಪರ್ಧಿ ರಾಜಕೀಯದಲ್ಲಿ ಕಪಾಲ ಬೆಟ್ಟದ ಏಸು ಪ್ರತಿಮೆ ವಿವಾದ ತಣ್ಣಗಾಗುತ್ತಿದೆಯೇ?

Next Post

ಕೊರೊನಾ ಇಫೆಕ್ಟ್ ಈಗ ರಾಯಚೂರಿನ ಮುದಗಲ್‌ಗೆ!

Related Posts

Top Story

B.R Patil: ನನ್ನ ಮತ್ತು ಸರ್ಕಾರದ್ದು ಗಂಡ-ಹೆಂಡತಿ ಜಗಳವಿದ್ದ ಹಾಗೆ: ಬಿ.ಆರ್ ಪಾಟೀಲ್..!!

by ಪ್ರತಿಧ್ವನಿ
June 24, 2025
0

ಸರ್ಕಾರ, ನನ್ನ ನಡುವಿನದ್ದು ಗಂಡ-ಹೆಂಡತಿ ಜಗಳವಿದ್ದ ಹಾಗೆ, ನಾಳೆ ಸಿಎಂ ಅವರನ್ನು ಭೇಟಿ ಮಾಡುತ್ತೇನೆ. ನಾಳೆ ಸಿಎಂ, ಡಿಸಿಎಂ ನನ್ನನ್ನು ಕರೆಸಿದ್ದಾರೆ. ಭೇಟಿಗೆ ಹೋಗುತ್ತೇನೆ, ನನ್ನ ಬೇಡಿಕೆಗಳು...

Read moreDetails

Yathnal: ಸಿದ್ದರಾಮಯ್ಯ ಕರ್ನಾಟಕವನ್ನು ಡಿಕೆಶಿ ಕೈಗೆ ಕೊಡಬೇಡಿ ಮಾರಿಬಿಡ್ತಾರೆ.. ಯತ್ನಾಳ್ ಸ್ಪೋಟಕ ಹೇಳಿಕೆ

June 24, 2025

CM Siddaramaiah: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರನ್ನು ಭೇಟಿ ಮಾಡಿದ ಸಿ.ಎಂ. ಸಿದ್ದರಾಮಯ್ಯ..

June 24, 2025

HD Kumarswamy: ಮಾವು ಬೆಳೆಗಾರರ ನೆರವಿಗೆ ಬರುವಂತೆ ಮನವಿ ಪತ್ರ ಬರೆದ ಹೆಚ್.ಡಿ ಕುಮಾರಸ್ವಾಮಿ.

June 24, 2025

M.B Patil: ದೇವನಹಳ್ಳಿ ತಾಲ್ಲೂಕಿನ 3 ಗ್ರಾಮಗಳ 495 ಎಕರೆಗೆ ವಿನಾಯಿತಿ: ಎಂ ಬಿ ಪಾಟೀಲ

June 24, 2025
Next Post
ಕೊರೊನಾ ಇಫೆಕ್ಟ್ ಈಗ ರಾಯಚೂರಿನ ಮುದಗಲ್‌ಗೆ!

ಕೊರೊನಾ ಇಫೆಕ್ಟ್ ಈಗ ರಾಯಚೂರಿನ ಮುದಗಲ್‌ಗೆ!

Please login to join discussion

Recent News

ಕಾಂಗ್ರೆಸ್ ಶಾಸಕರ ಅಸಮಾಧಾನ..ಗದ್ದಲ – ಹೈ ನಾಯಕರ ಮೊರೆಹೋದ ಸಿಎಂ ಸಿದ್ದು ! 
Top Story

ಕಾಂಗ್ರೆಸ್ ಶಾಸಕರ ಅಸಮಾಧಾನ..ಗದ್ದಲ – ಹೈ ನಾಯಕರ ಮೊರೆಹೋದ ಸಿಎಂ ಸಿದ್ದು ! 

by Chetan
June 25, 2025
Top Story

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ್ಯಾಕೆ ಸರ್‌?

by ಪ್ರತಿಧ್ವನಿ
June 25, 2025
Top Story

ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲು CM ಮನವಿ..!

by ಪ್ರತಿಧ್ವನಿ
June 25, 2025
ವಾಟ್ಸಪ್ಪ್ status ಕಣ್ರೀ..ಯಾಕೆ ಕೇಳ್ತಿರಾ ಆ …ಸ್ಟೇಟಸ್….ಸ್ಟೇಟಸ್….. ಸ್ಟೇಟಸ್…
Top Story

ವಾಟ್ಸಪ್ಪ್ status ಕಣ್ರೀ..ಯಾಕೆ ಕೇಳ್ತಿರಾ ಆ …ಸ್ಟೇಟಸ್….ಸ್ಟೇಟಸ್….. ಸ್ಟೇಟಸ್…

by ಪ್ರತಿಧ್ವನಿ
June 25, 2025
Top Story

B.R Patil: ನನ್ನ ಮತ್ತು ಸರ್ಕಾರದ್ದು ಗಂಡ-ಹೆಂಡತಿ ಜಗಳವಿದ್ದ ಹಾಗೆ: ಬಿ.ಆರ್ ಪಾಟೀಲ್..!!

by ಪ್ರತಿಧ್ವನಿ
June 24, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಾಂಗ್ರೆಸ್ ಶಾಸಕರ ಅಸಮಾಧಾನ..ಗದ್ದಲ – ಹೈ ನಾಯಕರ ಮೊರೆಹೋದ ಸಿಎಂ ಸಿದ್ದು ! 

ಕಾಂಗ್ರೆಸ್ ಶಾಸಕರ ಅಸಮಾಧಾನ..ಗದ್ದಲ – ಹೈ ನಾಯಕರ ಮೊರೆಹೋದ ಸಿಎಂ ಸಿದ್ದು ! 

June 25, 2025

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ್ಯಾಕೆ ಸರ್‌?

June 25, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada