Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡುವ ಉತ್ಸಾಹ ಸರ್ಕಾರಕ್ಕೆ ಇಲ್ಲವೇ?

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡುವ ಉತ್ಸಾಹ ಸರ್ಕಾರಕ್ಕೆ ಇಲ್ಲವೇ?
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡುವ ಉತ್ಸಾಹ ಸರ್ಕಾರಕ್ಕೆ ಇಲ್ಲವೇ?

January 13, 2020
Share on FacebookShare on Twitter

ರಾಜ್ಯದ ಆಶಾ ಕಾರ್ಯಕರ್ತೆಯರು ತಮಗೆ ಸಿಗುತ್ತಿದ್ದ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕಳೆದ ವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಬಹಳ ವರ್ಷಗಳಿಂದ ಬಾಕಿ ಇರುವ ಹಲವು ಬೇಡಿಕೆಗಳ ಈಡೇರಿಸಲೇ ಬೇಕು ಎಂದು ಆಗ್ರಹಿಸಿದ್ದರು. ಜನವರಿ 3ರಂದು ಫ್ರೀಡಂ ಪಾರ್ಕ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೂಡಲೇ 15 ತಿಂಗಳಿನಿಂದ ಬರಬೇಕಿದ್ದ ಪ್ರೋತ್ಸಾಹಧನ ನೀಡಬೇಕೆಂದು ಆಗ್ರಹಿಸಿದ್ದರು. ಪ್ರತಿಭಟನೆ ಜೋರಾಗುತ್ತಿದ್ದಂತೆ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಭಟನೆಯನ್ನು ಉದ್ದೇಶಿಸಿ “ ಸರ್ಕಾರ, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಸಿದ್ಧ. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತದೆ. ಸರ್ಕಾರ ನಿಮ್ಮೊಂದಿಗೆ ಯಾವಾಗಲೂ ಇರುತ್ತದೆ. ಆತಂಕಪಡಬೇಡಿ, ನಿಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸುತ್ತದೆ. ನೀವೆಲ್ಲರೂ ನಮ್ಮ ಅಕ್ಕ, ತಂಗಿಯರಿದ್ದಂತೆ, ತುಂಬಾ ಕಷ್ಟಪಟ್ಟುಕೊಂಡು ಬಂದಿದ್ದೀರಿ. ನಿಮ್ಮ ಅಧ್ಯಕ್ಷರು ನನ್ನನ್ನು ಭೇಟಿ ಆಗಿದ್ದರು. ಈ ವಿಚಾರ ಕುರಿತು ಚರ್ಚೆಯಾಗಿದೆ. ಸರ್ಕಾರದ ಕಾರ್ಯದರ್ಶಿಗಳ ಜೊತೆಗೆ ಮಾತನಾಡಿದ್ದೇನೆ. ಆದಷ್ಟು ನಿಮ್ಮ ಬೇಡಿಕೆ ಈಡೇರಿಸುತ್ತೇವೆ. ಈ ಕಾರಣದಿಂದಾಗಿ ಪ್ರತಿಭಟನೆಯನ್ನು ವಾಪಸ್‌ ಪಡೆಯಬೇಕು” ಎಂದು ಭರವಸೆ ನೀಡಿದ್ದರು.

ಹೆಚ್ಚು ಓದಿದ ಸ್ಟೋರಿಗಳು

ಚಾಮರಾಜಪೇಟೆ ಮೈದಾನದ ಈದ್ಗಾ ಟವರ್ ತೆರವುಗೊಳಿಸಲು ಸರ್ಕಾರಕ್ಕೆ ಗಡುವು ನೀಡಿದ ಹಿಂದೂಪರ ಸಂಘಟನೆಗಳು

ಮೀಸಲಾತಿಗಾಗಿ ಹೋರಾಟ ನಡೆಸುವ ದಿನಗಳು ದೂರವುಳಿದಿಲ್ಲ : ಜಿ.ಟಿ.ದೇವೇಗೌಡ

ಈ ಭಾರೀ ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧವಿಲ್ಲ : ಆರ್ ಅಶೋಕ್

ಅಲ್ಲದೆ, ಸಚಿವರು ಮುಂದುವರಿದು ಮಾತನಾಡಿ “ಪ್ರತಿ ತಿಂಗಳ 15ನೇ ತಾರೀಖಿನೊಳಗೆ ಎರಡು ತಿಂಗಳ ಸಂಬಳ ಜೊತೆಗೆ ಹಾಕಲು ಅನುಮತಿ ಕೊಟ್ಟಿದ್ದೇನೆ. ನೆರೆಯ ಆಂಧ್ರ ಪ್ರದೇಶ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡುತ್ತಿದೆ. ಇಲ್ಲಿ ಈ ಹಿಂದೆ 5,500 ರೂಪಾಯಿಗಳಿದ್ದು ಈಗ ನಮ್ಮ ಸರ್ಕಾರ ಬಂದ ಮೇಲೆ ಅದನ್ನು 6 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ನನ್ನ ಅಧಿಕಾರದಲ್ಲಿ ಕಾರ್ಯಕರ್ತೆಯರ ವೇತನವನ್ನು 10 ಸಾವಿರಕ್ಕೆ ಹೆಚ್ಚಿಸುವ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ಕೊಟ್ಟರು.

ಸುಮಾರು 15 ತಿಂಗಳಿನಿಂದ ಯಾವುದೇ ಪ್ರೋತ್ಸಾಹಧನ ಪಡೆಯದಿದ್ದರಿಂದ ಆಶಾ ಕಾರ್ಯಕರ್ತೆಯರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಲೇಬೇಕಾಯಿತು. ಆದರೆ ಸಚಿವರ ವಿನಂತಿಗೆ ಸುಮ್ಮನಾಗುವುದು ಬೇಡವೆಂದು, ಸರ್ಕಾರ ಪ್ರೋತ್ಸಾಹಧನ ಬಿಡುಗಡೆ ಮಾಡುವವರೆಗೂ ಕೆಲಸಕ್ಕೆ ಹಾಜರಾಗದೇ, ಮನೆಯಲ್ಲೇ ಧರಣಿ ನಡೆಸಲು ಆಶಾ ಕಾರ್ಯಕರ್ತೆಯರು ತೀರ್ಮಾನಿಸಿದ್ದರು. ಆದರೆ ಧೀಡಿರ್‌ ಅಂತ ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರಿಗೆ ಬಿಗ್‌ ಶಾಕ್‌ ನೀಡಿತು. ಇವರ ತೀರ್ಮಾನದಿಂದಾಗಿ ಕೋಪಗೊಂಡ ಆರೋಗ್ಯ ಇಲಾಖೆಯ ಅಧಿಕಾರಿಗಳು, ಕೆಲಸಕ್ಕೆ ಹಾಜರಾಗದಿರುವವರ ಪ್ರೋತ್ಸಾಹಧನ ಬಿಡುಗಡೆ ಮಾಡುವುದಿಲ್ಲ ಎಂದು ಸೋಮವಾರ ಸುತ್ತೋಲೆ ಹೊರಡಿಸಿ, ಕೆಲಸಕ್ಕೆ ಹಾಜರಾಗದೇ ಮನೆಯಲ್ಲಿದ್ದರೆ ಪ್ರೋತ್ಸಾಹಧನ ಬಿಡುಗಡೆ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಪ್ರತಿಭಟನೆಯ ವೇಳೆ ಸಚಿವ ಶ್ರೀರಾಮುಲು ಆಶಾ ಕಾರ್ಯಕರ್ತರ ಬೇಡಿಕೆಗಳನ್ನು ಈಡೇರುಸುತ್ತೇವೆ ಎಂದು ಭರವಸೆ ನೀಡಿದ್ದರು. ಅಲ್ಲದೆ, ಇಲಾಖೆಯ ಅಧಿಕಾರಗಳಂತೆ, ಶ್ರೀರಾಮುಲು ಕೂಡ “ಕೆಲಸಕ್ಕೆ ಹಾಜರಾಗದೇ ಮನೆಯಲ್ಲೇ ಕುಳಿತು ಧರಣಿ ನಡೆಸುವುದು ಸರಿಯಲ್ಲ. ಕೆಲಸಕ್ಕೆ ಹಾಜರಾಗದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಇಲ್ಲಿ ಆಶಾ ಕಾರ್ಯಕರ್ತೆಯರ ಮುಖ್ಯವಾದ ಬೇಡಿಕೆಗಳೇನೆಂದರೆ, ಕೇಂದ್ರ ಮತ್ತು ರಾಜ್ಯದಿಂದ ಮಾಸಿಕ 12,000/- ಪ್ರೋತ್ಸಾಹ ನೀಡಬೇಕು, 15 ತಿಂಗಳ ಬಾಕಿ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು, ಆಶಾ ಕ್ಷೇಮಾವೃದ್ಧಿ ನಿಧಿ ಸ್ಥಾಪಿಸಬೇಕು, ಮಾರಣಾಂತಿಕ ಕಾಯಿಲೆ ಹಾಗೂ ಮರಣ ಹೊಂದಿದರೆ ನೆರವು ನೀಡಬೇಕು, ವಿವಿಧ ಸರ್ವೆಗಳ ಬಾಕಿ ಪ್ರೋತ್ಸಾಹಧನ ಕೂಡಲೇ ಪಾವತಿಸಬೇಕು, ಜಿಲ್ಲಾ ಮತ್ತು ತಾಲೂಕು ಕೇಂದ್ರದ ಸಭೆಗಳಿಗೆ ದಿನಭತ್ಯೆ ಹೆಚ್ಚಿಸಬೇಕು, ದಿನಕ್ಕೆ 300 ರೂ. ನಿಗದಿಪಡಿಸಿ, ಅಂದೇ ಪಾವತಿಸಬೇಕು, ಆಶಾ ಸುಗಮಗಾರರನ್ನು ನೇಮಿಸಿ, ಮಾಸಿಕ 12,000 ರೂ. ಜೊತೆಗೆ ಟಿಎ ನೀಡಬೇಕು ಎಂದು ಬೇಡಿಕೆಗಳನ್ನು ಇಟ್ಟಿದ್ದಾರೆ.

ರಾಜ್ಯದಲ್ಲಿ ಸರಿ ಸುಮಾರು 40 ಸಾವಿರ ಆಶಾ ಕಾರ್ಯಕರ್ತೆಯರಿದ್ದು, ಸರ್ಕಾರದ ಹಲವಾರು ಯೋಜನೆಗಳನ್ನು ಜನರಿಗೆ ತಲುಪಿಸಲು ಆಶಾ ಕಾರ್ಯಕರ್ತೆಯರ ಸೇವೆ ಅತಿಮುಖ್ಯ. ಮಕ್ಕಳಿಗೆ ಪಲ್ಸ್
ಪೋಲಿಯೋ ಹಾಕುವುದರಿಂದ ಹಿಡಿದು, ಗರ್ಭಿಣಿ, ಬಾಣಂತಿಗೆ ಪೋಷಣೆ ಜೊತೆಗೆ ಸರ್ವೇ ಕೆಲಸಗಳನ್ನೂ ಸಹ ಮಾಡುತ್ತಾರೆ. ಅಲ್ಲದೆ, ಇದೇ ತಿಂಗಳು ಸರ್ಕಾರ ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಸಲಿದೆ. ಇದಕ್ಕೆ ಆಶಾ ಕಾರ್ಯಕರ್ತೆಯರ ಸೇವೆ ಬೇಕೆ ಬೇಕು.

ಇಲ್ಲಿ ಆಶಾ ಕಾರ್ಯಕರ್ತೆಯರು ಬಹಳ ವರ್ಷಗಳಿಂದ ಇಂತಹ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳದೆ ಇರುವುದು ವಿಷಾದನೀಯ. ಸಚಿವ ಶ್ರೀರಾಮುಲು ಕೂಡ ಒಮ್ಮೆ ಭರವಸೆ ನೀಡಿ, ಎಚ್ಚರಿಕೆಯನ್ನೂ ಸಹ ಕೊಟ್ಟಿದ್ದಾರೆ. ರಾಜ್ಯದ 40 ಸಾವಿರ ಆಶಾ ಕಾರ್ಯಕರ್ತೆಯರು ಪ್ರೋತ್ಸಾಹಧನವನ್ನು ನಂಬಿಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಆದರೆ 15 ತಿಂಗಳಿನಿಂದ ಪ್ರೋತ್ಸಾಹಧನ ನೀಡದೆ ಇರುವುದು ವಿಪರ್ಯಾಸ. ದೇಶದ ಆರೋಗ್ಯ ಕ್ಷೇತ್ರ ಉನ್ನತಿ ಕಾಣಬೇಕೆಂದರೆ ಹಾಗೂ ಆರೋಗ್ಯ ಪೂರ್ಣ ಸಮಾಜ ರೂಪಿಸುವುದಕ್ಕೆ ಆಶಾ ಕಾರ್ಯಕರ್ತೆಯ ಸೇವೆ ಅತ್ಯಗತ್ಯ.

RS 500
RS 1500

SCAN HERE

don't miss it !

ಮಾಜಿ ಸಿಎಂಗೆ ಅಭಿಮಾನದ ಸುನಾಮಿ : B.S Shivanna
ವಿಡಿಯೋ

ಮಾಜಿ ಸಿಎಂಗೆ ಅಭಿಮಾನದ ಸುನಾಮಿ : B.S Shivanna

by ಪ್ರತಿಧ್ವನಿ
August 3, 2022
SDPI, PFI ಸಂಘಟನೆಯವರನ್ನು ನಾವೆ ನುಗ್ಗಿ ಹೊಡೆಯಬೇಕಾಗುತ್ತೆ : ಕುಲಕರ್ಣಿ
ಕರ್ನಾಟಕ

SDPI, PFI ಸಂಘಟನೆಯವರನ್ನು ನಾವೆ ನುಗ್ಗಿ ಹೊಡೆಯಬೇಕಾಗುತ್ತೆ : ಕುಲಕರ್ಣಿ

by ಪ್ರತಿಧ್ವನಿ
August 5, 2022
ಕಳೆದ 8 ರ್ಷಗಳಲ್ಲಿ ಪ್ರಧಾನಿ ಮೋದಿ ಎಲ್ಲರನ್ನು ಒಳಗೊಂಡ ಸರ್ಕಾರ ನೀಡಿದ್ದಾರೆ : ಅಮಿತ್ ಶಾ
ದೇಶ

ಕಳೆದ 8 ರ್ಷಗಳಲ್ಲಿ ಪ್ರಧಾನಿ ಮೋದಿ ಎಲ್ಲರನ್ನು ಒಳಗೊಂಡ ಸರ್ಕಾರ ನೀಡಿದ್ದಾರೆ : ಅಮಿತ್ ಶಾ

by ಪ್ರತಿಧ್ವನಿ
August 4, 2022
ʻಧಮಾಕ’ ಸಿನಿಮಾದಿಂದ ಬಂತು ಮತ್ತೊಂದು ಟ್ರ್ಯಾಕ್
ಸಿನಿಮಾ

ʻಧಮಾಕ’ ಸಿನಿಮಾದಿಂದ ಬಂತು ಮತ್ತೊಂದು ಟ್ರ್ಯಾಕ್

by ಪ್ರತಿಧ್ವನಿ
August 7, 2022
ಆಧಾರ್ ಇಲ್ಲದ ಮಕ್ಕಳಿಗೆ ಶಾಲೆಗಳಲ್ಲಿ ಸಿಗುತ್ತಿಲ್ಲ ಪ್ರವೇಶ : ಶಿಕ್ಷಣದ ಹಕ್ಕನ್ನೂ‌ ಕಸಿದುಕೊಳ್ಳುತ್ತಿದೆಯೇ ಆಧಾರ್?
ದೇಶ

ಆಧಾರ್ ಇಲ್ಲದ ಮಕ್ಕಳಿಗೆ ಶಾಲೆಗಳಲ್ಲಿ ಸಿಗುತ್ತಿಲ್ಲ ಪ್ರವೇಶ : ಶಿಕ್ಷಣದ ಹಕ್ಕನ್ನೂ‌ ಕಸಿದುಕೊಳ್ಳುತ್ತಿದೆಯೇ ಆಧಾರ್?

by ಫಾತಿಮಾ
August 7, 2022
Next Post
ಆರ್ಥಿಕತೆ

ಆರ್ಥಿಕತೆ,ನಿರುದ್ಯೋಗ ಹೆಚ್ಚುತ್ತಿರುವಾಗ BJP ಖಜಾನೆ ತುಂಬುತ್ತಿರುವುದು ಹೇಗೆ?

JNU ತೊರೆಯಲು ಮುಂದಾಗುತ್ತಿರುವ ಪ್ರೊಫೆಸರ್ ಗಳು!

JNU ತೊರೆಯಲು ಮುಂದಾಗುತ್ತಿರುವ ಪ್ರೊಫೆಸರ್ ಗಳು!

JNU ಹಿಂಸಾಚಾರದ ಎಲ್ಲಾ ದೃಶ್ಯಾವಳಿ ರಕ್ಷಿಸಿಡುವಂತೆ ನ್ಯಾಯಾಲಯ ತಾಕೀತು

JNU ಹಿಂಸಾಚಾರದ ಎಲ್ಲಾ ದೃಶ್ಯಾವಳಿ ರಕ್ಷಿಸಿಡುವಂತೆ ನ್ಯಾಯಾಲಯ ತಾಕೀತು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist