Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಅರ್ನಾಬ್ ಗೋಸ್ವಾಮಿಗೆ ಇಲ್ಲದ ಶಿಕ್ಷೆ ಕುನಾಲ್ ಕಮ್ರಾಗೆ ಏಕೆ?

ಅರ್ನಾಬ್ ಗೋಸ್ವಾಮಿಗೆ ಇಲ್ಲದ ಶಿಕ್ಷೆ ಕುನಾಲ್ ಕಮ್ರಾಗೆ ಏಕೆ?
ಅರ್ನಾಬ್ ಗೋಸ್ವಾಮಿಗೆ ಇಲ್ಲದ ಶಿಕ್ಷೆ ಕುನಾಲ್ ಕಮ್ರಾಗೆ ಏಕೆ?

January 30, 2020
Share on FacebookShare on Twitter

ಸ್ಪರ್ಧೆಗೆ ಬಿದ್ದವರಂತೆ ವಿಮಾನ ಯಾನ ಸಂಸ್ಥೆಗಳು ಸ್ಟ್ಯಾಂಡಪ್ ಕಮೇಡಿಯನ್ ಕುನಾಲ್ ಕಮ್ರಾಗೆ ನಿಷೇಧ ಹೇರಿವೆ. ಇದೇ ಅರ್ನಾಬ್ ಗೋಸ್ವಾಮಿ ಈ ಹಿಂದೆ ವಿಮಾನ ಹಾರಾಟ ಸಂದರ್ಭದಲ್ಲಿಯೇ ತಮ್ಮ ವರದಿಗಾರರನ್ನು ಕಳುಹಿಸಿ ತೇಜಸ್ವಿ ಯಾದವ್ ಮತ್ತು ಶಶಿ ತರೂರ್ ಅವರ ಸಂದರ್ಶನ ಮಾಡಿಸಿದ್ದಾಗ ಈ ವಿಮಾನಯಾನ ಸಂಸ್ಥೆಗಳು ನಿದ್ದೆ ಮಾಡುತ್ತಿದ್ದವಾ?

ಹೆಚ್ಚು ಓದಿದ ಸ್ಟೋರಿಗಳು

ಕಾಂಗ್ರೆಸ್​ ನಾಯಕಿಗೆ ಶೂರ್ಪನಖಿ ಎಂದಿದ್ದ ಪ್ರಧಾನಿ ಮೋದಿ : ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದ ರೇಣುಕಾ ಚೌಧರಿ

ಬಿಜೆಪಿಗೆ ಬಿಜೆಪಿಯೇ ಎದುರಾಳಿ..! ‘ನಾವಿಕನಿಲ್ಲದ ಹಡಗು’ ಭಾಗ – 02

ನಿಮ್ಮಂತಹ ಪುಕ್ಕಲು ಸರ್ವಾಧಿಕಾರಿಗೆ ಹೆದರಲ್ಲ: ಮೋದಿ ವಿರುದ್ಧ ಪ್ರಿಯಾಂಕ ಗುಡುಗು.!

ಆ ಸಂದರ್ಭದಲ್ಲಿ ಸಹ ಪ್ರಯಾಣಿಕರಿಗೆ ತೊಂದರೆಯಾಗಿರಲಿಲ್ಲವಾ? ವಿಮಾನದ ಸದ್ದಿಗಿಂತಲೂ ಹೆಚ್ಚು ಸದ್ದು ಮಾಡಿ ಕಿರುಚಾಡುತ್ತಾ ಇಂಟರ್ ವ್ಯೂ ಮಾಡಿದ್ದ ಅರ್ನಾಬ್ ಗೋಸ್ವಾಮಿಯವರ ಚಾನೆಲ್ ನ ಸಿಬ್ಬಂದಿಯ ಶಬ್ಧ ಈ ವಿಮಾನ ಯಾನ ಸಂಸ್ಥೆಗಳಿಗೆ ಕೇಳಿರಲಿಲ್ಲವೇ? ಆಗ ಇವುಗಳ ಸಿಬ್ಬಂದಿ ಕಿವುಡರಾಗಿದ್ದರಾ? ಆ ಸಂದರ್ಭದಲ್ಲಿ ನಿಷೇಧ ಹೇರುವಂತಹ ಕಾನೂನುಗಳು ಇರಲಿಲ್ಲವೇ? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.

ಅಷ್ಟಕ್ಕೂ ಕುನಾಲ್ ಕಮ್ರಾ ಇಂಡಿಗೋ ವಿಮಾನದಲ್ಲಿ ಅರ್ನಾಬ್ ಗೋಸ್ವಾಮಿಗೆ ಮಾನಹಾನಿಯಾಗುವಂತಹ ಪ್ರಶ್ನೆಗಳನ್ನೇನೂ ಕೇಳಿಲ್ಲ. ಅರ್ನಾಬ್ ಮುಂಬೈನಿಂದ ಲಕ್ನೋಗೆ ಪ್ರಯಾಣ ಮಾಡುತ್ತಿದ್ದ ಇಂಡಿಗೋ ವಿಮಾನದಲ್ಲಿಯೇ ಕಮ್ರಾ ಪ್ರಯಾಣಿಸುತ್ತಿದ್ದರು. ಆಗ ಅರ್ನಾಬ್ ರಿಗೆ ಕಮ್ರಾ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ, ಅರ್ನಾಬ್ ಅದಕ್ಕೆ ಉತ್ತರ ನೀಡದೇ ಮೌನಕ್ಕೆ ಶರಣಾಗಿದ್ದಾರೆ. ಆಗಲೂ ಬಿಡದ ಕಮ್ರಾ ಏನಾದರೂ ಮಾಡಿ ಅರ್ನಾಬ್ ಅವರ ಬಾಯಿ ಬಿಡಿಸಬೇಕೆಂದು ನೀವು ಪತ್ರಕರ್ತರೇ? ಈಗೇಕೆ ಮೌನವಾಗಿದ್ದೀರಿ? ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಕೇಳಿಕೊಂಡಿದ್ದಾರೆ.

ಆದರೆ, ನಿಮಗೆ ತಲೆ ಸರಿ ಇಲ್ಲ ಎಂದು ಹೇಳಿದ ಅರ್ನಾಬ್ ತಮ್ಮ ಪಾಡಿಗೆ ತಾವು ಮೌನಕ್ಕೆ ಶರಣಾಗಿದ್ದರು. ಟಿವಿಯಲ್ಲಿ ಕುಳಿತು ಟಾಕ್ ಶೋನಲ್ಲಿ ಬಿಜೆಪಿಯವರನ್ನು ಹೊರತುಪಡಿಸಿ ತಾವೇ ಬಿಜೆಪಿ ಸರ್ಕಾರ ಎಂದು ಭಾವಿಸಿ ಪ್ರತಿಪಕ್ಷದ ಎಲ್ಲರನ್ನೂ ತರಾಟೆಗೆ ತೆಗೆದುಕೊಳ್ಳುವ ಅರ್ನಾಬ್ ಗೆ ಕಮ್ರಾ ಕೇಳಿದ ಒಂದೆರಡು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಿರುವುದು ಏಕೆ? ಇಡೀ ಭಾರತ ದೇಶವೇ ತಮ್ಮ ಮೇಲೆ ಬಿದ್ದಿದೆ ಎಂಬಂತೆ ಟಿವಿ ಪರದೆಯಲ್ಲಿ ಅರಚಾಡುತ್ತಿದ್ದ ಅರ್ನಾಬ್ ವಿಮಾನದಲ್ಲಿ ಇಲಿಯಂತಾದದ್ದು ಏಕೆ? ಘಟಾನುಘಟಿ ರಾಜಕಾರಣಿಗಳು, ಅಧಿಕಾರಿಗಳನ್ನು ತಮ್ಮ ಮನಸಿಗೆ ಬಂದ ರೀತಿಯಲ್ಲಿ ಬಾಯಿ ಮುಚ್ಚಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಅರ್ನಾಬ್ ಗೆ ಕಮ್ರಾ ಬಾಯಿ ಮುಚ್ಚಿಸಲು ಸಾಧ್ಯವಾಗಲಿಲ್ಲವೇ?

ಅರ್ನಾಬ್ ವಿಮಾನದಲ್ಲಿ ಮೌನಕ್ಕೆ ಶರಣಾದದ್ದನ್ನು ನೋಡಿದರೆ ಜಾರಿಕೊಳ್ಳುವ ತಂತ್ರ ಎಂಬಂತೆ ಗೋಚರಿಸುತ್ತದೆ. ಅರ್ನಾಬ್ ಬಾಯಿ ಬಿಡಿಸಲು ಹರಸಾಹಸ ಪಟ್ಟು ಸಫಲರಾಗದ ಕಮ್ರಾ ಸಹ ಪ್ರಯಾಣಿಕರ ಕ್ಷಮೆಯನ್ನೂ ಯಾಚಿಸಿದ್ದಾರೆ. ಆದರೆ, ವಿಮಾನ ಪ್ರಯಾಣದ ನಂತರ ಅರ್ನಾಬ್ ತಮ್ಮ ಅಸಲಿಯತ್ತನ್ನು ಪ್ರದರ್ಶಿಸಿದ್ದಾರೆ. ಅದೆಂದರೆ ತಮ್ಮ ಪ್ರಭಾವವನ್ನು ಬೀರಿ ಕಮ್ರಾಗೆ ವಿಮಾನ ಪ್ರಯಾಣದ ಮೇಲೆ ನಿಷೇಧ ಹೇರುವಂತೆ ಮಾಡಿದ್ದಾರೆ. ಇದು ಒಂದು ರೀತಿಯ ಹೇಡಿತನವಲ್ಲದೇ ಮತ್ತಿನ್ನೇನು? ಸಣ್ಣ ಪ್ರಶ್ನೆಗೆ ಉತ್ತರಿಸಲಾಗದೇ, ಹಿಂಬಾಗಿಲ ಮೂಲಕ ಪ್ರಭಾವ ಬೀರಿ ಪ್ರಶ್ನಿಸಿದವನಿಗೇ ಶಿಕ್ಷೆ ಕೊಡಿಸುವ ಮಟ್ಟಕ್ಕೆ ಒಬ್ಬ ಪತ್ರಕರ್ತ ಇಳಿಯಬಾರದಿತ್ತು.

ಅರ್ನಾಬ್ ಗೋಸ್ವಾಮಿ ತಮಗೆ ಕಮ್ರಾ ಕಿರುಕುಳ ನೀಡಿದ್ದಾರೆ ಎಂದು ಭಾವಿಸಿದ್ದರೆ, ಕಮ್ರಾಗೆ ಅವರು ಮಾನಸಿಕ ಸ್ಥಿಮಿತ ಇಲ್ಲ ಎಂದು ಹೀಗಳೆದಿದ್ದು ಮಾನಹಾನಿ ಆಗಿಲ್ಲವೇ? ಇದೊಂದೇ ವಿಷಯವನ್ನು ಇಟ್ಟುಕೊಂಡು ಕಮ್ರಾ ಅರ್ನಾಬ್ ವಿರುದ್ಧ ಕಾನೂನು ಸಮರ ಸಾರಬಹುದಲ್ಲವೇ? ಕಮ್ರಾಗೆ ಮಾನಸಿಕ ಸ್ಥಿಮಿತ ಇಲ್ಲ ಎನ್ನುವುದಕ್ಕೆ ಅರ್ನಾಬ್ ಬಳಿ ಸಾಕ್ಷ್ಯ ಸಿಗುತ್ತದೆಯೇ?
ಇಂಡಿಗೋ, ಏರ್ ಇಂಡಿಯಾ, ಸ್ಪೈಸ್ ಜೆಟ್, ಗೋಏರ್ ಸಂಸ್ಥೆಗಳು ಕಮ್ರಾ ವಿಮಾನ ಪ್ರಯಾಣಕ್ಕೆ ನಿಷೇಧ ಹೇರಿವೆ.

ವಿಮಾನಯಾನ ಸಂಸ್ಥೆಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ವರ್ತಿಸುತ್ತಿವೆ ಎಂಬುದನ್ನು ಅವುಗಳ ಈ ನಿರ್ಧಾರ ಸಾಬೀತುಪಡಿಸುತ್ತದೆ. ಈ ಹಿಂದೆ ಇದೇ ಅರ್ನಾಬ್ ಗೋಸ್ವಾಮಿಯವರು ರಿಪಬ್ಲಿಕ್ ಟಿವಿಯ ವರದಿಗಾರರು ಹಲವಾರು ಮಂದಿ ಗಣ್ಯರನ್ನು ವಿಮಾನ ಹಾರಾಟದ ಸಂದರ್ಭದಲ್ಲಿಯೇ ಸಂದರ್ಶನ ಮಾಡಿದ್ದಾರೆ. ಆಗ ನಿಷೇಧ ಹೇರುವ ನಿರ್ಧಾರ ಇಲ್ಲದಿದ್ದುದು ಈಗೇಕೆ ಎಂಬ ಪ್ರಶ್ನೆಗಳು ಎಲ್ಲೆಡೆಯಿಂದ ಬರತೊಡಗಿವೆ. ಇದೇ ಗೋಸ್ವಾಮಿಯವರು ತಮ್ಮ ವರದಿಗಾರರನ್ನು ಕಳುಹಿಸಿ ವಿಮಾನದೊಳಗೆ ಸಂದರ್ಶನ ಮಾಡಿಸುವಾಗ ಸಹಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ಕನಿಷ್ಠ ಪ್ರಜ್ಞೆಯೂ ಇರಲಿಲ್ಲವೇ? ಈಗ ತಮಗೆ ತೊಂದರೆಯಾಯಿತು ಎಂಬ ಕಾರಣಕ್ಕೆ ಪ್ರಭಾವ ಬೀರಿ ಕಮ್ರಾ ಮೇಲೆ ನಿಷೇಧ ಹೇರುವಂತೆ ಮಾಡಿದ್ದಾರೆ. ಅದಕ್ಕೇ ಹೇಳುವುದು ಬುಡಕ್ಕೆ ಬೆಂಕಿ ಬಿದ್ದಾಗಲೇ ಗೊತ್ತಾಗುವುದು ಅದರ ನೋವು ಎಂಬುದು. ಇಷ್ಟೇ ಅಲ್ಲದೇ, ಒಂದು ವೇಳೆ ಸಂದರ್ಶನ ಮಾಡಲು ಹೋದಾಗ ತಮ್ಮ ಸಿಬ್ಬಂದಿ ವಿರುದ್ಧ ಇದೇ ರೀತಿಯ ನಿಷೇಧ ಹೇರಿದ್ದರೆ ಅರ್ನಾಬ್ ಸುಮ್ಮನಿರುತ್ತಿದ್ದರೆ? ವಾರಗಟ್ಟಲೇ ತಮ್ಮ ರಿಪಬ್ಲಿಕ್ ಟಿವಿಯಲ್ಲಿ ನಿರ್ಧಾರವನ್ನು ಟೀಕಿಸುವ ಸುದ್ದಿಗಳನ್ನು ಪುಂಕಾನುಪುಂಕವಾಗಿ ಬಿತ್ತರಿಸುತ್ತಿರಲಿಲ್ಲವೇ? ಇದಕ್ಕೆ ಅರ್ನಾಬ್ ಉತ್ತರಿಸುತ್ತಾರೆ ಎಂಬ ನಿರೀಕ್ಷೆ ಯಾರೊಬ್ಬರಲ್ಲಿಯೂ ಇಲ್ಲ.

ಇಲ್ಲಿ ನಿಷೇಧ ಹೇರಿರುವ ವಿಮಾನಯಾನ ಸಂಸ್ಥೆಗಳು ಖಾಸಗಿಯಾಗಿದ್ದರೂ ಹೇಗೆ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ವರ್ತಿಸುತ್ತಿವೆ ಎಂಬುದಕ್ಕೆ ಕೆಲವು ನಿದರ್ಶನಗಳಿವೆ. ಸಾಮಾನ್ಯವಾಗಿ ಪ್ರತಿಯೊಂದು ವಿಮಾನಯಾನ ಸಂಸ್ಥೆಗಳಲ್ಲಿ ಕುಂದುಕೊರತೆ ನಿವಾರಣೆ ಸಮಿತಿ ಇರುತ್ತದೆ. ಇದರಲ್ಲಿನ ಅಧಿಕಾರಿಗಳು ಯಾವುದಾದರೂ ದೂರುಗಳು ಬಂದಲ್ಲಿ ಸ್ವಲ್ಪ ದಿನಗಳ ಕಾಲಾವಕಾಶ ತೆಗೆದುಕೊಂಡು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಗಳನ್ನು ಪ್ರಕಟಿಸುತ್ತವೆ. ಆದರೆ, ಕಮ್ರಾ ಪ್ರಕರಣದಲ್ಲಿ ಕೆಲವೇ ಗಂಟೆಗಳಲ್ಲಿ ನಿಷೇಧ ಹೇರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇದೆ ಎಂಬುದಕ್ಕೆ ವಿಮಾನಯಾನ ಸಚಿವಾಲಯ ಟ್ವೀಟ್ ಮಾಡಿ ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿರುವುದು.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

DBOSS FANS | ವಿನೋದ್ ಪ್ರಭಾಕರ್ ಖಡಕ್ ಡೈಲಾಗ್ ಗೆ ಶಿಳ್ಳೆ, ಕೇಕೆ ಹಾಕಿದ ಅಭಿಮಾನಿಗಳು | VINOD PRABHAKAR
ಇದೀಗ

DBOSS FANS | ವಿನೋದ್ ಪ್ರಭಾಕರ್ ಖಡಕ್ ಡೈಲಾಗ್ ಗೆ ಶಿಳ್ಳೆ, ಕೇಕೆ ಹಾಕಿದ ಅಭಿಮಾನಿಗಳು | VINOD PRABHAKAR

by ಪ್ರತಿಧ್ವನಿ
March 20, 2023
ಕೆ.ಆರ್‌ ಕ್ಷೇತ್ರ – ಗೆಲ್ಲಬಹುದಾದ ಕುದುರೆಗೆ ಟಿಕೆಟ್‌ ಕಂಟಕ..! : K.R.Kshetra – Ticket
Top Story

ಕೆ.ಆರ್‌ ಕ್ಷೇತ್ರ – ಗೆಲ್ಲಬಹುದಾದ ಕುದುರೆಗೆ ಟಿಕೆಟ್‌ ಕಂಟಕ..! : K.R.Kshetra – Ticket

by ನಾ ದಿವಾಕರ
March 21, 2023
ಪಲ್ಲವಿಸುವ ನಿಸರ್ಗವೂ ಮನುಷ್ಯನ ಪರಿಸರ ಪ್ರಜ್ಞೆಯೂ..ಯುಗಾದಿಯ ಆಚರಣೆಯನ್ನು ಬೇವು-ಬೆಲ್ಲದಿಂದಾಚೆಗೂ ವಿಸ್ತರಿಸಿದಾಗ ಪರಿಸರ ಉಳಿಯುತ್ತದೆ : UGADI
Top Story

ಪಲ್ಲವಿಸುವ ನಿಸರ್ಗವೂ ಮನುಷ್ಯನ ಪರಿಸರ ಪ್ರಜ್ಞೆಯೂ..ಯುಗಾದಿಯ ಆಚರಣೆಯನ್ನು ಬೇವು-ಬೆಲ್ಲದಿಂದಾಚೆಗೂ ವಿಸ್ತರಿಸಿದಾಗ ಪರಿಸರ ಉಳಿಯುತ್ತದೆ : UGADI

by ನಾ ದಿವಾಕರ
March 22, 2023
ತಂದೆ ಮಗನ ಜಗಳ ಇದ್ದೇ ಇರುತ್ತದೆ: ಖರ್ಗೆ ಜೊತೆಗಿನ ಜಗಳದ ಬಗ್ಗೆ ಬಾಬುರಾವ್ ಚಿಂಚನಸೂರು ಪ್ರತಿಕ್ರಿಯೆ
ರಾಜಕೀಯ

ತಂದೆ ಮಗನ ಜಗಳ ಇದ್ದೇ ಇರುತ್ತದೆ: ಖರ್ಗೆ ಜೊತೆಗಿನ ಜಗಳದ ಬಗ್ಗೆ ಬಾಬುರಾವ್ ಚಿಂಚನಸೂರು ಪ್ರತಿಕ್ರಿಯೆ

by ಪ್ರತಿಧ್ವನಿ
March 22, 2023
ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಅಪಘಾತ : ಶಸ್ತ್ರಚಿಕಿತ್ಸೆ ಮುಗಿಸಿ ಆ್ಯಂಬುಲೆನ್ಸ್​ನಲ್ಲೇ ಪರೀಕ್ಷೆ ಬರೆದ ಸಾಹಸಿ
Top Story

ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಅಪಘಾತ : ಶಸ್ತ್ರಚಿಕಿತ್ಸೆ ಮುಗಿಸಿ ಆ್ಯಂಬುಲೆನ್ಸ್​ನಲ್ಲೇ ಪರೀಕ್ಷೆ ಬರೆದ ಸಾಹಸಿ

by ಮಂಜುನಾಥ ಬಿ
March 21, 2023
Next Post
ನೀವು ಗಾಂಧಿಯನ್ನು ಕೊಲ್ಲಬಹುದು

ನೀವು ಗಾಂಧಿಯನ್ನು ಕೊಲ್ಲಬಹುದು, ಅವರ ತತ್ವ ಸಿದ್ದಾಂತಗಳನ್ನಲ್ಲ

ಬಿಜೆಪಿಗೆ ಶಾಹೀನ್ ಬಾಗ್  ಚುನಾವಣೆ ಅಸ್ತ್ರವೇ? 

ಬಿಜೆಪಿಗೆ ಶಾಹೀನ್ ಬಾಗ್ ಚುನಾವಣೆ ಅಸ್ತ್ರವೇ? 

ಸಂಪುಟ ವಿಸ್ತರಣೆ  ಜೇನುಗೂಡಿಗೆ ಕೈಹಾಕಿರುವ ಬಿಎಸ್‌ವೈ ರಾಜ್ಯಭಾರ ಎಷ್ಟು ದಿನ?‌

ಸಂಪುಟ ವಿಸ್ತರಣೆ ಜೇನುಗೂಡಿಗೆ ಕೈಹಾಕಿರುವ ಬಿಎಸ್‌ವೈ ರಾಜ್ಯಭಾರ ಎಷ್ಟು ದಿನ?‌

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist