Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಅಂಧರಾಗಿಯೂ ಯಶಸ್ವಿ ಟೈಲರ್ ಆಗಿರುವ ರುದ್ರಾಚಾರಿ

ಅಂಧರಾಗಿಯೂ ಯಶಸ್ವಿ ಟೈಲರ್ ಆಗಿರುವ ರುದ್ರಾಚಾರಿ
ಅಂಧರಾಗಿಯೂ ಯಶಸ್ವಿ ಟೈಲರ್ ಆಗಿರುವ ರುದ್ರಾಚಾರಿ
Pratidhvani Dhvani

Pratidhvani Dhvani

September 29, 2019
Share on FacebookShare on Twitter

ಅಂಗವೈಕಲ್ಯತೆ ಎನ್ನುವುದು ಬಹುತೇಕ ಬಡ ವ್ಯಕ್ತಿಗಳನ್ನು ಬಿಕ್ಷಾಟನೆಗೆ ತಳ್ಳಿಬಿಡುತ್ತದೆ. ಆದರೆ ಇಂತಹ ಅಂಗವಿಕಲತೆಯ ನಡುವೆಯೂ ಸ್ವಾವಲಂಬಿಗಳಾಗಿ ಬದುಕುತ್ತಿರುವ ಅನೇಕ ವಿಕಲ ಚೇತನರು ನಮ್ಮ ನಡುವೆ ಇದ್ದು ಇತರರಿಗೆ ಮಾದರಿ ಆಗಿದ್ದಾರೆ. ಅಂತಹ ಯಶೋಗಾಥೆ ಮಡಿಕೇರಿಯ ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ ಶೆಟ್ಟಳ್ಳಿ ಗ್ರಾಮದಲ್ಲಿ ದರ್ಜಿ ವೃತ್ತಿ ಮಾಡಿಕೊಂಡು ಬದುಕು ಸಾಗಿಸುತ್ತಿರುವ ರುದ್ರಾಚಾರಿ ಅವರದು.

ಹೆಚ್ಚು ಓದಿದ ಸ್ಟೋರಿಗಳು

ಬೆಂಗಳೂರು ಜೈಲಿನಿಂದಲೇ ವಿಡಿಯೋ ಪೋಸ್ಟ್‌ ಮಾಡಿದ ಹರ್ಷ ಕೊಲೆ ಆರೋಪಿ!

ಸರಳ ವಾಸ್ತುಗೂ ಮುನ್ನ ಚಂದ್ರಶೇಖರ್‌ ಗುರೂಜಿ ಏನಾಗಿದ್ದರು ಗೊತ್ತಾ?

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಧರೆಗುರುಳಿದ ವಿದ್ಯುತ್ ಕಂಬಗಳು!

ಟೈಲರ್ ವೃತ್ತಿಗೆ ನೈಪುಣ್ಯತೆ ಹಾಗೂ ನಾಜೂಕು ಬೇಕೆ ಬೇಕು, ಇಲ್ಲದಿದ್ದರೆ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಇದರಲ್ಲಿ ಯಶಸ್ಸು ಗಳಿಸುವುದು ಸುಲಭದ ಮಾತೇನಲ್ಲ. ಅಂತಹುದರಲ್ಲಿ ಕಣ್ಣುಗಳೇ ಕಾಣದ ವ್ಯಕ್ತಿಯೊಬ್ಬರು ಟೈಲರಿಂಗ್ ಮಾಡುತ್ತಿರುವುದು ಆಶ್ಚರ್ಯ ಅಲ್ಲವೇ? 55 ವಸಂತಗಳನ್ನು ಕಂಡಿರುವ ರುದ್ರಾಚಾರಿ ಆವರು ಹುಟ್ಟು ಕುರುಡರೇನಲ್ಲ. ತಮ್ಮ 22 ನೇ ವಯಸ್ಸಿನಲ್ಲಿ ಜೀವನೋಪಾಯಕ್ಕೆ ಟೈಲರಿಂಗ್ ವೃತ್ತಿಯನ್ನು ಆಯ್ದುಕೊಂಡ ರುದ್ರಾಚಾರಿ ಅವರು 28 ನೇ ವಯಸ್ಸಿನ ವರೆಗೂ ಯಾವುದೇ ನ್ಯೂನತೆ ಇಲ್ಲದೆ ಕೆಲಸ ಮಾಡಿದ್ದಾರೆ.

ಆದರೆ, 28 ನೇ ವಯಸ್ಸಿನಿಂದ ರಾತ್ರಿ ಕಣ್ಣು ಕಾಣದಾಯಿತು. ನಂತರ 33 ನೇ ವಯಸ್ಸಿನಲ್ಲಿ ಸಂಪೂರ್ಣ ಅಂಧರೇ ಆಗಿಬಿಟ್ಟರು. ಬೆಂಗಳೂರು, ಮೈಸೂರಿನ ತಜ್ಞ ವೈದ್ಯರಿಗೆ ತೋರಿಸಿದರೂ ಏನೂ ಪ್ರಯೋಜನವಿಲ್ಲದಾಯಿತು ಎನ್ನುತ್ತಾರೆ ಆಚಾರಿ ಅವರು. ದಿಢೀರನೆ ಅಂಧರಾದರೂ ಆಚಾರಿ ಅವರು ಎದೆಗುಂದದೆ ಸ್ವಾಭಿಮಾನಿಯಾಗಿ ಬದುಕುವ ಛಲ ತೊಟ್ಟರು. ಅದು ಅವರಿಗೆ ಅನಿವಾರ್ಯ ಕೂಡ ಆಗಿತ್ತು ಏಕೆಂದರೆ ಅವರಿಗೆ ಪಿತ್ರಾರ್ಜಿತವಾಗಿ ಬಂದಿದ್ದುದು ಸಣ್ಣ ಮನೆಯೊಂದು ಮಾತ್ರ. ವಯಸ್ಸಾದ ತಾಯಿ, ಪತ್ನಿ ಹಾಗೂ ಎರಡು ಮಕ್ಕಳ ಹೊಟ್ಟೆ ತುಂಬಿಸಲು ದುಡಿಮೆ ಮಾಡಲೇಬೇಕಿತ್ತು.

ಮೊದಲಿಗೆ ಕಲಿತಿದ್ದ ಟೈಲರಿಂಗ್ ನ್ನೇ ಮುಂದುವರೆಸಲು ಪ್ರಯತ್ನಿಸಿದರು. ಪತ್ನಿಯ ಸಹಾಯ ಪಡೆದು ಬಟ್ಟೆ ಅಳತೆ ತೆಗೆದುಕೊಳ್ಳುವುದು, ಕತ್ತರಿಸುವುದನ್ನು ಕಲಿತರು. ಮೊದ ಮೊದಲು ಕಷ್ಟವಾಯಿತಾದರೂ ಈಗ ಸಲೀಸಾಗಿ ಬಟ್ಟೆ ಹೊಲಿಯುತ್ತಾರೆ. ಇವರ ಕಷ್ಟವು ಮಂಗಳೂರಿನ ಸಮಾಜ ಸೇವಕಿ ವನಿತಾ ಶೆಟ್ಟಿ ಅವರ ಗಮನಕ್ಕೆ ಬಂದಿತು. ವನಿತಾ ಅವರು ಸುಧೀರ್ಘ 30 ವರ್ಷ ಇಂಗ್ಲೆಂಡ್ ನಲ್ಲಿದ್ದವರಾಗಿದ್ದು ತಮ್ಮ ಸ್ನೇಹಿತೆಯರ ಸಹಾಯದಿಂದ ಅಂಧರು ಬಳಸಲು ಅನುಕೂಲವಾಗುವಂತೆ ಪ್ರತೀ ಇಂಚಿಗೂ ತೂತುಗಳುಳ್ಳ ಟೇಪ್ ಹಾಗೂ ಸೂಜಿಗೆ ದಾರ ಪೋಣಿಸಲು ಚಿಕ್ಕ ತಂತಿಯಾಕಾರದ ವಸ್ತುವನ್ನು ತರಿಸಿಕೊಟ್ಟರು. ಇದೀಗ ರುದ್ರಾಚಾರಿ ಅವರು ಆ ಟೇಪ್ ನ ಸಹಾಯದಿಂದ ತಾವೇ ಅಳತೆ ತೆಗೆದುಕೊಳ್ಳುತ್ತಾರೆ. ಸೂಜಿಗೆ ದಾರ ಪೋಣಿಸಿಕೊಳ್ಳುತ್ತಾರೆ. ಆದರೆ, ಬಟ್ಟೆಯನ್ನು ಕತ್ತರಿಸಲು ಮಾತ್ರ ಬೇರೆಯವರ ನೆರವು ಬೇಕು. ಕತ್ತರಿಸಲು ಬಟ್ಟೆಗೆ ಮಾಡಿರುವ ಮಾರ್ಕಿಂಗ್ ನ್ನು ಅವರಿಗೆ ತೋರಿಸಿಕೊಡಬೇಕಾಗುತ್ತದೆ.

ತಾಯಿ ಹಾಗೂ ಪತ್ನಿಯೊಂದಿಗಿನ ಚಿತ್ರ

ಇವರು ಗ್ರಾಮದಲ್ಲಿ ಮಹಿಳೆಯರ ಪೆಟ್ಟಿಕೋಟ್ ಹೊಲಿಯುವದರಲ್ಲಿ ನಿಪುಣರಾಗಿದ್ದು, ತಾವೇ ಬಟ್ಟೆ ಖರೀದಿಸಿ ತಂದು ಪೆಟ್ಟಿಕೋಟ್ ಹೊಲಿದು ಮಾರಾಟ ಮಾಡುತ್ತಿದ್ದಾರೆ. ಮಕ್ಕಳ ಬಟ್ಟೆ, ಮಹಿಳೆಯರ ಬ್ಲೌಸ್ ಹೊಲಿಯುತ್ತಾರೆ. ಸಮೀಪದ ಸರ್ಕಾರೀ ಶಾಲೆಯ ಮುಖ್ಯೋಪಾಧ್ಯಾಯರು ಪ್ರತೀ ವರ್ಷವೂ 30 ರಿಂದ 40 ಮಕ್ಕಳ ಸಮವಸ್ತ್ರವನ್ನು ಇವರ ಬಳಿಯೇ ಹೊಲಿಸುತ್ತಿದ್ದಾರೆ. ಗ್ರಾಮಸ್ಥರಿಂದ ಉತ್ತಮ ಸಹಕಾರ ಸಿಗುತ್ತಿದೆ ಎಂಬುದನ್ನು ಸ್ಮರಿಸುತ್ತಾರೆ ರುದ್ರಾಚಾರಿ. ಕೆಲಸದಲ್ಲಿ ಸಹಕರಿಸುತಿದ್ದ ಪತ್ನಿಯೂ ಕಳೆದ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದು ವಯೋವೃದ್ದ ತಾಯಿ 95 ವರ್ಷದ ಗಂಗಮ್ಮ ಕೂಡ ಮೃತರಾಗಿದ್ದಾರೆ. ಹಿರಿಯ ಮಗ ಮದುವೆಯಾಗಿ ಪರ ಊರಿನಲ್ಲಿ ಕೆಲಸದಲ್ಲಿದ್ದಾರೆ, ಕಿರಿ ಮಗ ಬಡಗಿ ವೃತ್ತಿ ಮಾಡುತಿದ್ದು ಮನೆಗೆ ನೆರವಾಗುತ್ತಿದ್ದಾನೆ.

ಅಂಧರಾಗಿ ಯಶಸ್ವಿಯಾಗಿ ಕೆಲಸ ಮಾಡುತಿದ್ದರೂ ಇವರಿಗೆ ನೆರವು ನೀಡಲು ಯಾವುದೇ ಬ್ಯಾಂಕ್ ಈ ತನಕ ಮುಂದೆ ಬರಲಿಲ್ಲ ಎಂದ ರುದ್ರಾಚಾರಿ ಅವರು ಹೊಲಿಗೆ ಮೆಷಿನ್ ಹಳತಾಗಿದ್ದು ಅದನ್ನು ಬದಲಿಸಲು ಮತ್ತು ಮನೆಯ ದುರಸ್ಥಿಗೆ ತುರ್ತು ನೆರವು ಬೇಕಾಗಿದೆ, ಆದರೆ ಬ್ಯಾಂಕ್ ಗಳು ತಾವು ಅಂಧರಾಗಿರುವ ಕಾರಣದಿಂದ ಮರುಪಾವತಿ ಸಾಮರ್ಥ್ಯ ಶಂಕಿಸಿ ಸಾಲ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಇವರಿಗೆ ನೆರವು ನೀಡಬಯಸುವವರು ಆಚಾರಿ ಅವರನ್ನು 9481532576 ರಲ್ಲಿ ಸಂಪರ್ಕಿಸಬಹುದು.

RS 500
RS 1500

SCAN HERE

don't miss it !

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಣೆ
ದೇಶ

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಣೆ

by ಪ್ರತಿಧ್ವನಿ
June 29, 2022
ಉದಯಪುರ ಕೊಲೆ ಪ್ರಕರಣ; ಆರೋಪಿಗಳು 14 ದಿನ ನ್ಯಾಯಂಗ ವಶಕ್ಕೆ
ದೇಶ

ಉದಯಪುರ ಕೊಲೆ ಪ್ರಕರಣ; ಆರೋಪಿಗಳು 14 ದಿನ ನ್ಯಾಯಂಗ ವಶಕ್ಕೆ

by ಪ್ರತಿಧ್ವನಿ
July 2, 2022
ಡಿಕೆಶಿ ಸಿದ್ದರಾಮೋತ್ಸವಕ್ಕೆ ವಿರೋಧಿಸಿರುವುದು ಕಟ್ಟು ಕಥೆ : ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌
ಕರ್ನಾಟಕ

ಡಿಕೆಶಿ ಸಿದ್ದರಾಮೋತ್ಸವಕ್ಕೆ ವಿರೋಧಿಸಿರುವುದು ಕಟ್ಟು ಕಥೆ : ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌

by ಪ್ರತಿಧ್ವನಿ
July 4, 2022
ಮಹಾ ಸರ್ಕಾರ ರಚನೆಯ ಬೆನ್ನಲ್ಲೇ  ಶರದ್ ಪವಾರ್‌ಗೆ ಆದಾಯ ತೆರಿಗೆಯಿಂದ ನೋಟಿಸ್!‌
ದೇಶ

ಮಹಾ ಸರ್ಕಾರ ರಚನೆಯ ಬೆನ್ನಲ್ಲೇ  ಶರದ್ ಪವಾರ್‌ಗೆ ಆದಾಯ ತೆರಿಗೆಯಿಂದ ನೋಟಿಸ್!‌

by ಪ್ರತಿಧ್ವನಿ
July 1, 2022
ಗುವಾಹಟಿಯಿಂದ ಮುಂಬೈಗೆ ಮರಳಿದ ಶಿವಸೇನೆ ಬಂಡಾಯ ಶಾಸಕರು!
ದೇಶ

ಸಂಪುಟ ಸಭೆಯಲ್ಲಿ ಅಗಲಿದ ಮಕ್ಕಳನ್ನು ನೆನೆದು ಕಣ್ಣೀರಿಟ್ಟ ಸಿಎಂ ಏಕನಾಥ್ ಶಿಂಧೆ

by ಪ್ರತಿಧ್ವನಿ
July 5, 2022
Next Post
ಕರ್-ನಾಟಕ ಗೊಂದಲಕ್ಕೆ ಕಲಶ ಪ್ರಾಯವಾದ ಚುನಾವಣಾ ಆಯೋಗ

ಕರ್-ನಾಟಕ ಗೊಂದಲಕ್ಕೆ ಕಲಶ ಪ್ರಾಯವಾದ ಚುನಾವಣಾ ಆಯೋಗ

ದಸರಾ ಆನೆಗಳ ಕಣ್ಣೀರ ಕತೆ....

ದಸರಾ ಆನೆಗಳ ಕಣ್ಣೀರ ಕತೆ....

ಟ್ರಂಪ್ ಇಂಪೀಚ್ಮೆಂಟ್  ಸುತ್ತಮುತ್ತ

ಟ್ರಂಪ್ ಇಂಪೀಚ್ಮೆಂಟ್ ಸುತ್ತಮುತ್ತ, ಏನು ಎತ್ತ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist