• Home
  • About Us
  • ಕರ್ನಾಟಕ
Saturday, December 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸೊರಗಿದ ಮಂಡಲ- ಭೋರ್ಗರೆದ ಕಮಂಡಲ

by
November 13, 2019
in ದೇಶ
0
ಸೊರಗಿದ ಮಂಡಲ- ಭೋರ್ಗರೆದ ಕಮಂಡಲ
Share on WhatsAppShare on FacebookShare on Telegram

’’1949ರ ಡಿಸೆಂಬರ್ 22-23ರ ನಡುವಣ ರಾತ್ರಿ ಹಿಂದೂ ದೇವತೆಗಳ ಮೂರ್ತಿಗಳನ್ನು ಒಳಪ್ರಾಂಗಣದಲ್ಲಿ ತಂದಿಟ್ಟು ಮಸೀದಿಯನ್ನು ಅಪವಿತ್ರಗೊಳಿಸಲಾಯಿತು. ಆ ಸಂದರ್ಭದಲ್ಲಿ ಮುಸಲ್ಮಾನರನ್ನು ಅಲ್ಲಿಂದ ಹೊರದಬ್ಬಿದ್ದು ಕಾನೂನು ಬಾಹಿರವಾಗಿತ್ತು. ಅವರ ಧಾರ್ಮಿಕ ತಾಣವನ್ನು ಅವರ ಕೈ ತಪ್ಪಿಸುವ ಲೆಕ್ಕಾಚಾರದ ಕೃತ್ಯವಾಗಿತ್ತು’’.

ADVERTISEMENT

-”ಕ್ರಿಮಿನಲ್ ಪ್ರಕರಣವೊಂದನ್ನು ದಾಖಲು ಮಾಡಿಕೊಂಡ ನಂತರ ರಿಸೀವರ್ ನೇಮಕ ಮಾಡಿ ಒಳಪ್ರಾಂಗಣವನ್ನು ಮುಟ್ಟುಗೋಲು ಹಾಕಿಕೊಂಡ ನಂತರ ಹಿಂದೂ ದೇವತಾ ಮೂರ್ತಿಗಳ ಪೂಜೆಗೆ ಅವಕಾಶ ಮಾಡಿಕೊಡಲಾಯಿತು. ತಕರಾರು ಅರ್ಜಿಗಳ ವಿಚಾರಣೆ ಬಾಕಿ ಇರುವಂತೆಯೇ ಇಡೀ ಮಸೀದಿಯನ್ನು ನೆಲಸಮ ಮಾಲಾಯಿತು. ಸಾರ್ವಜನಿಕ ಪೂಜಾ ಸ್ಥಳವನ್ನು ನಾಶ ಮಾಡಿದ ಲೆಕ್ಕಾಚಾರದ ಕೃತ್ಯವದು. 450 ವರ್ಷಗಳ ಹಿಂದೆ ಕಟ್ಟಲಾಗಿದ್ದ ಮಸೀದಿಯೊಂದನ್ನು ಮುಸಲ್ಮಾನರ ಕೈ ತಪ್ಪಿಸಿದ್ದು ತಪ್ಪು’’ ಎಂದು ನ್ಯಾಯಾಲಯ ನಿಚ್ಚಳವಾಗಿ ಸಾರಿದೆ.

ಈ ಮಾತುಗಳನ್ನು ಹೇಳಿದ ನಂತರವೂ ವಿವಾದಿತ ಜಮೀನನ್ನು ಮಂದಿರ ನಿರ್ಮಾಣಕ್ಕೆ ಮಾತ್ರವೇ ಕೊಡಬೇಕಾಗಿ ಬಂದಿತಲ್ಲ ಅದು ಹೇಗೆ ಎಂಬ ಪ್ರಶ್ನೆಗಳನ್ನು ಸುಪ್ರೀಮ್ ಕೋರ್ಟಿನ ಹಲವು ನಿವೃತ್ತ ನ್ಯಾಯಮೂರ್ತಿಗಳು ಎತ್ತಿದ್ದಾರೆ. ಈ ಸಂದೇಹಕ್ಕೆ ನ್ಯಾಯಾಲಯ 799ನೆಯ ಪ್ಯಾರಾದಲ್ಲಿ ನೀಡಿರುವ ಸಮಾಧಾನ ಹೀಗಿದೆ- ‘ಸಾರ್ವಜನಿಕ ಶಾಂತಿ ಸಾಮರಸ್ಯ ಕಾಪಾಡುವ ಉದ್ದೇಶದಿಂದ 2010ರ ತೀರ್ಪಿನಲ್ಲಿ ಅಲಹಾಬಾದ್ ಹೈಕೋರ್ಟು ವಿವಾದಿತ ಜಾಗವನ್ನು ಮೂರೂ ಅರ್ಜಿದಾರರಿಗೆ (ಸುನ್ನಿ ವಕ್ಫ್ ಮಂಡಳಿ, ರಾಮಲಲ್ಲಾ ವಿರಾಜಮಾನ್ ಹಾಗೂ ನಿರ್ಮೋಹಿ ಅಖಾಡ) ಹಂಚಿಕೊಟ್ಟಿದೆಯಾದರೂ, ಈ ಪರಿಹಾರ ಕಾರ್ಯಸಾಧ್ಯ ಅಲ್ಲ. ವಿವಾದಿತ ಜಾಗದ ಒಟ್ಟು ವಿಸ್ತೀರ್ಣ ಕೇವಲ 1500 ಚದರ ಗಜಗಳು. ಈ ಜಾಗವನ್ನು ವಿಭಾಗಿಸಿ ಹಂಚಿಕೊಡುವುದರಿಂದ ಯಾರ ಹಿತದ ಸಾಧನೆಯೂ ಆಗುವುದಿಲ್ಲ. ಅಷ್ಟೇ ಅಲ್ಲ, ಇಂತಹ ಕ್ರಮದಿಂದ ಶಾಂತಿ ಸಾಮರಸ್ಯ ಕಾಯಮ್ಮಾಗಿ ನೆಲೆಸುತ್ತದೆಂದು ಹೇಳುವುದು ಸಾಧ್ಯವಿಲ್ಲ’.

ಅರ್ಥಾತ್ ಮಂದಿರ ಮಸೀದಿಗಳೆರಡಕ್ಕೂ ಈ ಜಾಗವನ್ನು ಹಂಚಿಕೊಟ್ಟರೆ ವಿವಾದ ಪುನಃ ಭುಗಿಲೇಳಬಹುದು ಎಂಬ ಶಂಕೆಯನ್ನು ನ್ಯಾಯಾಲಯ ಇಲ್ಲಿ ವ್ಯಕ್ತಪಡಿಸಿದೆ. ದೇಶದಲ್ಲಿ ಇನ್ನೂ ಮೂರು ಸಾವಿರ ಮಸೀದಿಗಳು ಮೂಲತಃ ಹಿಂದೂ ದೇವಾಲಯಗಳಾಗಿದ್ದು ಅವುಗಳನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂಬುದು ವಿಶ್ವಹಿಂದೂ ಪರಿಷತ್ತಿನ ದಾವೆ. ಈ ಪಟ್ಟಿಯಲ್ಲಿ ಕಾಶಿ ಮತ್ತು ಮಥುರಾ ಅಗ್ರ ಸ್ಥಾನದಲ್ಲಿವೆ. ಸದ್ಯಕ್ಕೆ ಇವುಗಳ ಪ್ರಸ್ತಾಪ ಮಾಡುವುದಿಲ್ಲ ಎಂಬ ಮಾತುಗಳು ಪರಿವಾರದ ಕಡೆಯಿಂದ ಬಂದಿವೆ. ಆದರೆ ಈ ದಾವೆಯನ್ನು ಸದಾ ಕಾಲಕ್ಕೆ ಕೈ ಬಿಟ್ಟಿರುವುದಾಗಿ ಹೇಳಿಲ್ಲ ಎಂಬುದನ್ನು ಗಮನಿಸಬೇಕಿದೆ. ಯಾವುದೇ ಪೂಜಾ ಅಥವಾ ಪ್ರಾರ್ಥನಾ ಸ್ಥಳವನ್ನು ಅದು 1947ರ ಆಗಸ್ಟ್ 15ರಂದು ಇದ್ದ ಸ್ಥಿತಿಯಿಂದ ಬದಲಾಯಿಸುವುದನ್ನು 1991ರ ಪೂಜಾಸ್ಥಳಗಳ ಕಾಯಿದೆಯು ಪ್ರತಿಬಂಧಿಸಿದೆ. ಈ ಕಾಯಿದೆಯನ್ನು ತೀರ್ಪಿನಲ್ಲಿ ಮತ್ತೊಮ್ಮೆ ಉಲ್ಲೇಖಿಸಲಾಗಿದೆ ಅಷ್ಟೇ.

ನ್ಯಾಯಾಲಯದ ಮುಂದಿರುವ ನಿರ್ದಿಷ್ಟ ವಾಜ್ಯವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಹೊರಗೆ ನಡೆಯುವ ಘಟನಾವಳಿಗಳು ನಮಗೆ ಅಪ್ರಸ್ತುತ. ಕಾಯಿದೆ ಮತ್ತು ಸಂವಿಧಾನವೇ ನಮಗೆ ಪರಮ ಒರೆಗಲ್ಲುಗಳು. ನಮ್ಮ ನ್ಯಾಯ ನಿರ್ಣಯ ಪ್ರಕ್ರಿಯೆ ಈ ಎರಡು ಅಂಶಗಳನ್ನು ಮಾತ್ರವೇ ಆಧರಿಸಿರುತ್ತದೆ ಎಂದು ಸುಪ್ರೀಮ್ ಕೋರ್ಟ್ ನೂರಾರು ಪ್ರಕರಣಗಳಲ್ಲಿ ಸಾರಿರುವುದು ಉಂಟು.

ಆದರೆ ಸುಪ್ರೀಮ್ ಕೋರ್ಟಿನ ನಿಲುವಿಗೆ ಅಲ್ಲಲ್ಲಿ ಬಹುದೊಡ್ಡ ಅಪವಾದಗಳು ಕಾಣಸಿಗುತ್ತವೆ. ಉದಾಹರಣೆಗೆ ಇಂದಿರಾಗಾಂಧೀ ಅವರು ಹೇರಿದ್ದ ತುರ್ತುಪರಿಸ್ಥಿತಿಯ ಕಾಲ. ಹೊರಗಿನ ವಾತಾವರಣದ ಪ್ರಭಾವದಿಂದ ನ್ಯಾಯಾಲಯವೂ ತಪ್ಪಿಸಿಕೊಳ್ಳದೆ ಹೋಯಿತು ಎಂಬ ಮಾತಿಗೆ ಜ್ವಲಂತ ನಿದರ್ಶನವೊಂದು ಇತಿಹಾಸದಲ್ಲಿ ಸದಾ ಕಾಲಕ್ಕೆ ದಾಖಲಾಗಿಬಿಟ್ಟಿತು. ವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಮತ್ತು ಪ್ರಾಣದ ಹಕ್ಕು ಸಂವಿಧಾನವೇ ನೀಡಿರುವ ಮೂಲಭೂತ ಹಕ್ಕುಗಳು (ಈ ಹಕ್ಕುಗಳು ಅನಿರ್ಬಂಧಿತ ಅಲ್ಲ). ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಈ ಎರಡು ಹಕ್ಕುಗಳನ್ನು ಅಮಾನತುಗೊಳಿಸಬಹುದು ಎಂದು ಮುಖ್ಯನ್ಯಾಯಮೂರ್ತಿ ಎ.ಎನ್.ರೇ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ ಬಹುಮತದ ತೀರ್ಪು ನೀಡಿಬಿಟ್ಟಿತ್ತು. ಎ.ಡಿ.ಎಂ.ಜಬ್ಬಲ್ಪುರ ಪ್ರಕರಣ ಎಂದೇ ಜನಜನಿತವಾದ ತೀರ್ಪು ಇದು. ಈ ನ್ಯಾಯಪೀಠದಲ್ಲಿ ಎಚ್.ಆರ್. ಖನ್ನಾ, ಹಮೀದುಲ್ಲಾ ಬೇಗ್, ವೈ.ವಿ.ಚಂದ್ರಚೂಡ್ ಹಾಗೂ ಪಿ.ಎನ್.ಭಗವತಿ ಅವರು ಇದ್ದರು. ಈ ಪೈಕಿ ನ್ಯಾಯಮೂರ್ತಿ ಖನ್ನಾ ಭಿನ್ನಮತದ ತೀರ್ಪು ಬರೆದರು. ನಾಗರಿಕ ಸಮಾಜಗಳಲ್ಲಿ ಪ್ರಾಣದ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳು ಮಾನವ ಜೀವಿಗಳ ಅತ್ಯಮೂಲ್ಯ ಹಕ್ಕುಗಳು…. ಈ ಹಕ್ಕುಗಳನ್ನು ಕಾರ್ಯಾಂಗದ ಪದತಲಕ್ಕೆ ಶರಣಾಗಿಸುವುದನ್ನು ಭಾರತದ ಸಂವಿಧಾನ ಮತ್ತು ಕಾಯಿದೆ ಕಾನೂನುಗಳು ಒಪ್ಪುವುದಿಲ್ಲ. ಈ ಹಕ್ಕುಗಳ ಉಲ್ಲಂಘನೆಯನ್ನು ನ್ಯಾಯಾಲಯದಲ್ಲೂ ಪ್ರಶ್ನಿಸುವಂತಿಲ್ಲ ಎನ್ನುವ ಹಂತದ ಸರ್ವಾಧಿಕಾರವನ್ನು ಕಾರ್ಯಾಂಗಕ್ಕೆ ನೀಡಲು ಅವಕಾಶ ಇಲ್ಲ ಎಂದು ಸಾರಿದರು. ಈ ಭಿನ್ನಮತದ ತೀರ್ಪಿನ ಕಾರಣ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಹುದ್ದೆಗೆ ಬಡ್ತಿಯನ್ನು ನಿರಾಕರಿಸಲಾಯಿತು. ಸೇವಾ ಜ್ಯೇಷ್ಠತೆಯನ್ನು ಅವಗಣಿಸಿ ಅವರಿಗಿಂತ ಕಿರಿಯ ನ್ಯಾಯಮೂರ್ತಿಗೆ ಬಡ್ತಿ ನೀಡಿದ್ದು ತುರ್ತುಪರಿಸ್ಥಿತಿಯ ಅತಿರೇಕಗಳಲ್ಲೊಂದು.

ಮುಂದೊಂದು ದಿನ ಸುಪ್ರೀಮ್ ಕೋರ್ಟ್ ಮುಖ್ಯನ್ಯಾಯಮೂರ್ತಿಯಾದ ಚಂದ್ರಚೂಡ್ ಅವರು ಈ ತೀರ್ಪಿಗಾಗಿ ಕ್ಷಮೆ ಯಾಚಿಸಿದರು. ಪಿ.ಎನ್.ಭಗವತಿ ಪಶ್ಚಾತ್ತಾಪಪಟ್ಟರು. ಇಂತಹ ತೀರ್ಪಿನಲ್ಲಿ ಭಾಗಿಯಾಗುವುದರ ಬದಲು ತಾವು ರಾಜೀನಾಮೆ ನೀಡುವುದೇ ಲೇಸಿತ್ತು ಎಂದರು.

ಮಂದಿರ ಮಸೀದಿ ತೀರ್ಪು ಮತ್ತು ಎ.ಡಿ.ಎಂ.ಜಬ್ಬಲ್ಪುರ ತೀರ್ಪು ತೀರಾ ಭಿನ್ನವಾದ ತೀರ್ಪುಗಳು. ಸ್ವರೂಪದಲ್ಲಿ ಒಂದಕ್ಕೊಂದು ಸಂಬಂಧವಿಲ್ಲ. ಆದರೆ ನ್ಯಾಯಾಲಯದ ಹೊರಗಿನ ವಾತಾವರಣವೂ ನ್ಯಾಯಾಲಯದ ತೀರ್ಪಿನ ಮೇಲೆ ಪರಿಣಾಮ ಬೀರಬಲ್ಲದು ಎಂಬ ಮಾತಿಗೆ ಉದಾಹರಣೆಯಾಗಿ ಮಾತ್ರವೇ ಈ ತೀರ್ಪನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಮಂದಿರ-ಮಸೀದಿ ವಿವಾದದ ತೀರ್ಪಿನಲ್ಲೂ ಬಾಹ್ಯ ವಾತಾವರಣ ಪ್ರಭಾವ ಬೀರಿರುವ ಸಾಧ್ಯತೆಗಳನ್ನು ತಳ್ಳಿ ಹಾಕಲು ಬರುವುದಿಲ್ಲ. ಆದರೆ ಹಾಲಿ ಪ್ರಭಾವದ ಹಿಂದೆ ಸಾಮಾಜಿಕ ಶಾಂತಿ ಸಾಮರಸ್ಯಗಳನ್ನು ಕಾಪಾಡುವ ‘ಸದಾಶಯ’ದ ಹಿರಿಯ ಉದ್ದೇಶ ಇದ್ದೀತು. ನ್ಯಾಯಾಲಯದ ಹೊರಗಿನ ಇಂದಿನ ವಾತಾವರಣ ಹಿಂದುಸ್ತಾನ ಹಿಂದೆಂದೂ ಕಾಣದಂತಹುದು. ಉಗ್ರ ಹಿಂದುತ್ವ ಮತ್ತು ಆಕ್ರಮಣಕಾರಿ ರಾಷ್ಟ್ರವಾದಗಳು, ದೈತ್ಯ ಮತ್ತು ನಿರ್ದಯೀ ಬಹುಸಂಖ್ಯಾತ ವಾದವನ್ನು ಕಟೆದು ನಿಲ್ಲಿಸಿವೆ. ಈ ವಿವಾದವು 1989ರಿಂದ ದೇಶವನ್ನು ಉದ್ದಗಲಕ್ಕೆಹರಿಯ ಬಿಟ್ಟ ಹಿಂಸೆ ದ್ವೇಷ ತಿರಸ್ಕಾರ ಕೋಮು ಧೃವೀಕರಣದ ಹೆದ್ದೆರೆಗಳ ಭಯಾನಕ ಇತಿಹಾಸ ಪ್ರಾಯಶಃ ನ್ಯಾಯಾಲಯದ ಗಮನದಲ್ಲಿ ಇದ್ದಿರಬೇಕು. ಅಂತಹ ಮತ್ತೊಂದು ಉತ್ಕಟ ಸಂಕಟವನ್ನು ದೇಶ ಹಾದು ಹೋಗುವುದು ಬೇಡ ಎಂಬ ಸದಾಶಯ ಕೆಲಸ ಮಾಡಿದ್ದೀತು. ತೀರ್ಪು ಯಾರ ಪರವಾಗಿ ಬಂದರೂ ಒಬ್ಬರು ಸೋತರು ಮತ್ತೊಬ್ಬರು ಗೆದ್ದರು ಎಂದು ಭಾವಿಸುವುದು ಬೇಡ ಎಂಬ ವಿವೇಕದ ಮಾತುಗಳನ್ನು ಆಳುವ ಪಕ್ಷ ಮತ್ತು ಅದರ ಹಿಂದಿನ ಪರಿವಾರ ಆಡಿದ್ದು ಮೇಲ್ನೋಟಕ್ಕೆ ಪ್ರಶಂಸನೀಯ. ಆದರೆ ಆಳುವ ಪಕ್ಷ ಮತ್ತು ಅದರ ಬೆನ್ನಿಗಿರುವ ಪರಿವಾರ 1989ರಿಂದ ದೇಶದ ಬಹುಸಂಖ್ಯಾತರ ಸಾಮೂಹಿಕ ಮನಸ್ಥಿತಿಯನ್ನು ಬಹುತೇಕ ಹಿಂದೂರಾಷ್ಟ್ರದ ಪರಿಕಲ್ಪನೆಯ ಪರವಾಗಿ ಪ್ರಚೋದಿಸಿ ತಿದ್ದಿ ತೀಡಿ ರೂಪಿಸಿಬಿಟ್ಟಿದೆ. ದಶಕಗಟ್ಟಲೆ ‘ಮಂಡಲ’ವನ್ನು ಕುದಿಸಿ ಮಾಡಿದ ‘ಕಮಂಡಲ’ದ ಕಡುಪಾಕವನ್ನು ದಿನ ಬೆಳಗಾಗುವುದರ ಒಳಗೆ ಬದಲಾಯಿಸುವುದು ಸಾಧ್ಯವಿಲ್ಲ. ಈ ನಗ್ನ ವಾಸ್ತವ ಖುದ್ದು ಆಳುವ ಪಕ್ಷ ಮತ್ತು ಪರಿವಾರಕ್ಕೆ ಚೆನ್ನಾಗಿ ಗೊತ್ತು. ಇನ್ನು ಈ ನಿಷ್ಠುರ ಸತ್ಯ ದೇಶದ ಅತ್ಯುನ್ನತ ನ್ಯಾಯಸ್ಥಾನಕ್ಕೆ ತಿಳಿಯದೆ ಇದ್ದೀತೇ? ಹೀಗಾಗಿ ಮತ್ತೊಂದು ಕಡುದ್ವೇಷದ ಹೀನ ಹಿಂಸೆಯ ಹೆದ್ದೆರೆ ದೇಶದ ಸಮಾಜಜೀವನವನ್ನು ಅಪ್ಪಳಿಸುವ ಸಾಧಕ ಬಾಧಕಗಳು ನ್ಯಾಯಮೂರ್ತಿಗಳ ಕಣ್ಣ ಮುಂದೆ ಸುಳಿದಿರಲೇಬೇಕು. ಹೀಗಾಗಿಯೇ ನ್ಯಾಯ ನೀಡಿಕೆಯ ಉದಾತ್ತ ತತ್ವವು, ಕೇವಲ ವಿವಾದ ಇತ್ಯರ್ಥದ ಅನುಸಂಧಾನಕ್ಕೆ ಇಳಿದಿರಬೇಕು. ನ್ಯಾಯ ನೀಡಿಕೆ ಬೇರೆ. ವಿವಾದದ ಇತ್ಯರ್ಥ ಬೇರೆ ಎಂಬುದನ್ನು ಗಮನಿಸಬೇಕಿದೆ. ನ್ಯಾಯ ನೀಡಿಕೆಗೆ ಆದ್ಯತೆ ದೊರೆತಿದ್ದರೆ 2.77 ಎಕರೆ ಜಾಗದಲ್ಲಿ ಮಂದಿರ-ಮಸೀದಿಗಳೆರಡೂ ಸಹಬಾಳ್ವೆ ನಡೆಸಬೇಕಿತ್ತು. 1992ರ ಡಿಸೆಂಬರ್ 6ರ ಮುನ್ನ ನಿಂತಿದ್ದ ಮಸೀದಿಯ ಅಸ್ತಿತ್ವವನ್ನು ಮೂಲೆಗೆ ಸರಿಸುವುದೂ ಸಾಧ್ಯವಿರುತ್ತಿರಲಿಲ್ಲ. ಅಸ್ತಿತ್ವವನ್ನು ಮೂಲೆಗೆ ಒತ್ತಲಾಗಿದೆ ಎಂಬ ಕಾರಣಕ್ಕಾಗಿಯೇ ಮಸೀದಿ ನಿರ್ಮಾಣಕ್ಕೆಂದು ಐದು ಎಕರೆಯ ಜಾಗೆಯನ್ನು ನಷ್ಟಪರಿಹಾರ ರೂಪದಲ್ಲಿ ನೀಡಲಾಗಿದೆ. ಈ ಮೂಲಕ ತನ್ನ ತೀರ್ಪನ್ನು ಕೇವಲ ವಿವಾದ ಇತ್ಯರ್ಥದ ಹಂತದಿಂದ ನ್ಯಾಯ ನೀಡಿಕೆಯ ಎತ್ತರಕ್ಕೆ ಏರಿಸುವ ಪ್ರಯತ್ನವನ್ನು ನ್ಯಾಯಾಲಯ ನಡೆಸಿದೆ.

ದೇಶದ ರಾಜಕೀಯ ಚಿತ್ರದ ಗಾಲಿ ಒಂದು ಸುತ್ತು ತಿರುಗಿದೆ. ಮೂರು ದಶಕಗಳ ಹಿಂದೆ ಸಾಮಾಜಿಕ ನ್ಯಾಯ ಮತ್ತು ತಳವರ್ಗಗಳ ಅಸ್ಮಿತೆಯನ್ನು ಎತ್ತಿ ಹಿಡಿದಿದ್ದ ಮಂಡಲ್ ಶಕ್ತಿಗಳು ಕಮಂಡಲದ ಶಕ್ತಿಯ ಮುಂದೆ ಸಂಪೂರ್ಣ ಸೊರಗಿ ಮಲಗಿರುವುದೇ ಇಂದಿನ ಕಟು ವಾಸ್ತವ.

ಗಾಲಿ ಪುನಃ ತಿರುಗುವುದೇ? ಕಾಲವೇ ಹೇಳಬೇಕಿದೆ

Tags: AyodhyaBabri MasjidRammandirsupreme courtಅಯೋಧ್ಯೆತೀರ್ಪುಬಾಬ್ರಿ ಮಸೀದಿರಾಮಮಂದಿರಸುಪ್ರೀಂ ಕೋರ್ಟ್
Previous Post

ಪತ್ರ ಬಂದಿಲ್ಲ….ನಾಲ್ಕು ವರ್ಷ ಆತು……ಏನಾತು!!

Next Post

ಶಾಸಕರು ಅನರ್ಹ, ಚುನಾವಣೆ ಸ್ಪರ್ಧೆಗೆ ಅರ್ಹ!

Related Posts

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
0

ಬೆಂಗಳೂರು : ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು(Mekedatu) ಸಮತೋಲಿತ ಜಲಾನಯನ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಕೆಇಆರ್‌ಎಸ್(KERS) ನಿರ್ದೇಶಕರ ನೇತೃತ್ವದಲ್ಲಿ ಹೊಸ ತಂಡ ರಚಿಸಿ, ಯೋಜನೆ ಕಾರ್ಯಾನುಷ್ಠಾನಕ್ಕೆ ರಾಜ್ಯ ಸರ್ಕಾರ...

Read moreDetails
ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025

ಆರ್.ಡಿ.ಪಿ.ಆರ್ ಅಧಿಕಾರಿಗಳಿಗೆ ಹೈಕೋರ್ಟಿನಲ್ಲಿ ಐತಿಹಾಸಿಕ ನ್ಯಾಯ: ಪ್ರಿಯಾಂಕ್ ಖರ್ಗೆ

December 12, 2025
ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

December 12, 2025

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

December 12, 2025
Next Post
ಶಾಸಕರು ಅನರ್ಹ

ಶಾಸಕರು ಅನರ್ಹ, ಚುನಾವಣೆ ಸ್ಪರ್ಧೆಗೆ ಅರ್ಹ!

Please login to join discussion

Recent News

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’
Top Story

ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada