ದೇಶದಲ್ಲಿ ದಿನೇದಿನೇ ಪೆಟ್ರೋಲ್ – ಡಿಸೇಲ್ ದರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸೈಕಲ್ ಸವಾರಿ ಮಾಡಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಸೈಕಲ್ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಸಿದ್ದರಾಮಯ್ಯ ನಿವಾಸದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಸೈಕಲ್ಗಳೊಂದಿಗೆ ಸಜ್ಜಾಗಿದ್ದರು.
ಇನ್ನು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಸೇರಿದಂತೆ ಘಟಾನುಘಟಿ ಕಾಂಗ್ರೆಸ್ ನಾಯಕರು ಸಿದ್ಧರಾಮಯ್ಯ ನಿವಾಸ ಸೇರಿಕೊಂಡಿದ್ದು, ಅಭಿಮಾನಿಗಳು ಸಿದ್ದರಾಮಯ್ಯರಿಗೆ ಸ್ಪೋರ್ಟ್ಸ್ ಸೈಕಲ್ ತಂದಿದ್ದರು.
ಶಿವಾನಂದ ಸರ್ಕಲ್ನಿಂದ ಹೊರಟ ಪ್ರತಿಭಟನಾಕಾರರು ಏರ್ಪೋರ್ಟ್ ರಸ್ತೆ, ಹೈಗ್ರೌಂಡ್ ಪೋಲಿಸ್ ಸ್ಟೇಷನ್ ದಾಟಿ ಕೆಕೆ ಗೇಸ್ ಹೌಸ್, ಮುಖ್ಯಮಂತ್ರಿ ನಿವಾಸದ ಎದುರಿನಿಂದ ಸಾಗಿ ಕೆಪಿಸಿಸಿ ಕಛೇರಿ ಕಡೆಗೆ ಪ್ರತಿಭಟನಾ ಸವಾರಿ ನಡೆಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯನವರ ಮನೆಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರ ದಂಡು ಆಗಮಿಸಲಿರುವ ಹಿನ್ನಲೆಯಲ್ಲಿ ಬಿಬಿಎಂಪಿ ಸಿಬ್ಬಂದಿಗಳು ಸಿದ್ದರಾಮಯ್ಯನವರ ನಿವಾಸವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿದ್ದರು.