• Home
  • About Us
  • ಕರ್ನಾಟಕ
Saturday, December 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸಿಕ್ಕಿಂ ಪ್ರಕರಣ: ನೈತಿಕತೆ ಪ್ರಶ್ನೆಯಲ್ಲಿ ಸಿಕ್ಕಿಬಿದ್ದ ಚುನಾವಣಾ ಆಯೋಗ

by
October 2, 2019
in ದೇಶ
0
ಸಿಕ್ಕಿಂ ಪ್ರಕರಣ: ನೈತಿಕತೆ ಪ್ರಶ್ನೆಯಲ್ಲಿ ಸಿಕ್ಕಿಬಿದ್ದ ಚುನಾವಣಾ ಆಯೋಗ
Share on WhatsAppShare on FacebookShare on Telegram

ಭಾರತೀಯ ಜನತಾ ಪಾರ್ಟಿ ಮೈತ್ರಿ ಸರಕಾರದ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ಅವರು ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹತೆ ಮಾಡಿರುವ ಅವಧಿಯನ್ನು 6 ವರ್ಷದಿಂದ ಕೇವಲ ಒಂದು ವರ್ಷ ಒಂದು ತಿಂಗಳಿಗೆ ಕಡಿಮೆ ಮಾಡಿ ಭಾರತೀಯ ಚುನಾವಣಾ ಆಯೋಗ ಮತ್ತೊಂದು ಅಚ್ಚರಿಯ ಆದೇಶ ನೀಡಿದೆ.

ADVERTISEMENT

ಪಿ. ಎಸ್. ಗೋಲೆ ಎಂದೇ ಜನಪ್ರಿಯರಾಗಿರುವ ಪ್ರೇಮ್ ಸಿಂಗ್ ತಮಂಗ್ ಸದ್ಯ ಸಿಕ್ಕಿಂ ರಾಜ್ಯದ ಮುಖ್ಯಮಂತ್ರಿ. ಸಿಕ್ಕಿಂ ಕ್ರಾಂತಿ ಮೋರ್ಚಾದ ಮುಖಂಡರು. ಅವರು ಕಳೆದ ವಿಧಾನಸಭೆಗೆ ಸ್ಪರ್ಧೆ ಮಾಡಿರಲಿಲ್ಲ. ಏಕೆಂದರೆ, ಅವರು ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ಕಳಕೊಂಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ರಂಗ ಜಯಗಳಿಸಿದಾಗ ಭ್ರಷ್ಟಾಚಾರ ಕಾರಣಕ್ಕಾಗಿ ಚುನಾವಣೆ ಸ್ಪರ್ಧಿಸಲು ಅನರ್ಹಗೊಂಡಿದ್ದ ತಮಂಗ್ ಅವರನ್ನು ಮುಖ್ಯಮಂತ್ರಿ ಮಾಡಲಾಗುತ್ತದೆ. ಆ ಮೂಲಕ, ಭ್ರಷ್ಟರ ಶುದ್ಧೀಕರಣದ ಮತ್ತೊಂದು ಮಾದರಿಯನ್ನು ದೇಶಕ್ಕೆ ಪರಿಚಯಿಸಲಾಗುತ್ತದೆ.

ಪ್ರೇಮ್ ತಮಂಗ್ ಅವರನ್ನು ಜೈಲಿಗೆ ಹಾಕಿದ ಭ್ರಷ್ಟಚಾರದ ಕೇಸ್ ಆದರೂ ಯಾವುದು? ಪಶುಸಂಗೋಪನಾ ಸಚಿವರಾಗಿದ್ದಾಗ ಹಾಲು ಕರೆಯುವ ಹಸು (`ಗೋಮಾತೆಯನ್ನು’) ಖರೀದಿಸಿ ವಿತರಿಸುವ ಯೋಜನೆಯಲ್ಲಿ ಮಾಡಿರುವ ಅವ್ಯವಹಾರಕ್ಕಾಗಿ ತಮಂಗ್ ಅವರಿಗೆ ಜೈಲು ಶಿಕ್ಷೆ ಆಗುತ್ತದೆ. ಗೋಮಾತೆಯ ವಿಚಾರದಲ್ಲೇ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರನ್ನು ಬಿಜೆಪಿ ಮೈತ್ರಿ ಸಂಘಟನೆ ಮುಖ್ಯಮಂತ್ರಿಯನ್ನಾಗಿ ಮಾಡುತ್ತದೆ. ಮಾತ್ರವಲ್ಲದೆ, ಪರಾಜಿತ ಎಸ್ ಡಿ ಎಫ್ ಪಕ್ಷದ 13ರ ಸದಸ್ಯರಲ್ಲಿ ಹತ್ತು ಮಂದಿ ಶಾಸಕರನ್ನು ಬಿಜೆಪಿ ಖರೀದಿಸುತ್ತದೆ. ಇಬ್ಬರನ್ನು ತಮಂಗ್ ಖರೀದಿಸುತ್ತಾರೆ. ಕೊನೆಗೆ ವಿಪಕ್ಷದಲ್ಲಿ ಉಳಿಯುವುದು ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಮಾತ್ರ. ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇನ್ನಷ್ಟೇ ಉಪ ಚುನಾವಣೆ ನಡೆಯಬೇಕಾಗಿದೆ.

ಈ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಹಾಯಕ ಆಗುವಂತೆ ಚುನಾವಣಾ ಆಯೋಗ ಕಳೆದ ಭಾನುವಾರ ತಮಂಗ್ ಅವರ ಅನರ್ಹತೆಯ ಅವಧಿಯನ್ನು ಕಡಿತ ಮಾಡಿ ಆದೇಶ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಚುನಾವಣಾ ಆಯೋಗ ತನ್ನ ಆದೇಶವನ್ನು ನೀಡುವಾಗ ಕೆಲವೊಂದು ನ್ಯಾಯಾಲಯ ತೀರ್ಪುಗಳನ್ನು ಉಲ್ಲೇಖ ಮಾಡಿ ತಮಂಗ್ ಅವರ ಪಕ್ಷ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನಮನ್ನಣೆ ಗಳಿಸಿದೆ ಎಂದೂ ಹೇಳಿದೆ.

1996-1997ರಲ್ಲಿ ನಡೆದಿರುವ 50 ಲಕ್ಷ ರೂಪಾಯಿ ಪಶುಸಂಗೋಪನಾ ಇಲಾಖೆಯ ಅವ್ಯವಹಾರಕ್ಕಾಗಿ ಸಚಿವರಾಗಿದ್ದ ತಮಂಗ್ ಅವರ ವಿರುದ್ಧ 2003ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆಯ ಅನಂತರ ತಮಂಗ್ ದೋಷಿ ಎಂದು ನ್ಯಾಯಾಲಯ ತೀರ್ಮಾನಿಸಿ, ಡಿಸೆಂಬರ್ 26, 2016ರಂದು ಒಂದು ವರ್ಷ ಜೈಲು ವಾಸ ಮತ್ತು ಹತ್ತು ಸಾವಿರ ರೂಪಾಯಿ ದಂಡ ವಿಧಿಸಿತ್ತು. 2018 ಆಗಸ್ಟ್ ತಿಂಗಳಲ್ಲಿ ತಮಂಗ್ ಜೈಲು ವಾಸದಿಂದ ಬಿಡುಗಡೆ ಆಗಿದ್ದರು.

ಜನಪ್ರತಿನಿಧಿ ಕಾಯ್ದೆಯ (The Representation of People Act) ಪ್ರಕಾರ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದವರು ಜೈಲಿನಿಂದ ಹೊರಬಂದ ದಿನದಿಂದ ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಈ ಕಾರಣಕ್ಕಾಗಿ ಕಳೆದ ವಿಧಾನಸಭಾ ಚುನಾವಣಾ ಪ್ರಚಾರ ತಮಂಗ್ ನೇತೃತ್ವದಲ್ಲಿ ನಡೆದು, ಅವರೇ ಮುಂದಿನ ಮುಖ್ಯಮಂತ್ರಿ ಎಂದು ಪ್ರಚಾರ ಮಾಡಿದರೂ ಅವರು ಮಾತ್ರ ನಾಮಪತ್ರ ಸಲ್ಲಿಸಿರಲಿಲ್ಲ. ನಾಮಪತ್ರ ಸಲ್ಲಿಸಿದ್ದರೆ ನಾಮಪತ್ರ ತಿರಸ್ಕೃತ ಆಗುತ್ತಿತ್ತು.

ಆದರೆ, ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿರುವ ಆಯೋಗ ಅದೇ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 11 ರಲ್ಲಿ ನೀಡಲಾದಂತೆ ತನ್ನ ವಿವೇಚನಾ ಅಧಿಕಾರವನ್ನು ಬಳಸಿದೆ. ಆಯೋಗದ ಆದೇಶದಂತೆ, “ಜನಪ್ರತಿನಿಧಿ ಕಾಯ್ದೆ ಪ್ರಕಾರ ದೋಷಿ ಎಂದು ತೀರ್ಮಾನಗೊಂಡವರು 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ. ಆದರೆ, ಅನರ್ಹತೆ ವಿಧಿಸಲು ಶಿಕ್ಷೆ ಕಡಿಮೆ ಎಂದರೂ 2 ವರ್ಷಗಳಾಗಿರಬೇಕೆಂಬ ನಿಬಂಧನೆ ಇತ್ತು. 2018ರಂದು ಭ್ರಷ್ಟಾಚಾರ ತಡೆ ಕಾಯ್ದೆಗೆ ತಿದ್ದುಪಡಿಯಾಗಿದ್ದು, ಸೆಕ್ಷನ್ 13 (1) (ಡಿ) ರದ್ದುಗೊಂಡಿದೆ. ಸೆಕ್ಷನ್ 13 (1) (ಡಿ) 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದ್ದರೂ ಈ ಪ್ರಕರಣದಲ್ಲಿ ನ್ಯಾಯಾಲಯ ಸೆಕ್ಷನ್ ನಲ್ಲಿ ಒಂದು ವರ್ಷ ಶಿಕ್ಷೆ ವಿಧಿಸಿದೆ. ಜೊತೆಗೆ, ಇವರ (ತಮಂಗ್) ನಾಯಕತ್ವದ ಪಕ್ಷಕ್ಕೆ ಚುನಾವಣೆಯಲ್ಲಿ ಜನಮನ್ನಣೆಯೂ ದೊರೆತಿದೆ.’’

ಗೃಹ ಮಂತ್ರಿ ಅಮಿತ್ ಶಾ ಜೊತೆ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್

ಚುನಾವಣಾ ಆಯೋಗದ ಈಗಿನ ಆದೇಶದಿಂದಾಗಿ ಮುಖ್ಯಮಂತ್ರಿ ಆಗಿರುವ ತಮಂಗ್ ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ. ಕಳೆದ ಮೇ 28ರಂದು ಸಿಕ್ಕಿಂ ರಾಜ್ಯದ ಆರನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ತಮಂಗ್ ಆರು ತಿಂಗಳೊಳಗೆ ಯಾವುದೇ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಬೇಕಾಗುತ್ತದೆ.

ಈಗ ಚುನಾವಣಾ ಆಯೋಗದ ಆದೇಶದಿಂದಾಗಿ ಪ್ರೇಮ್ ತಮಂಗ್ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕಾನೂನು ಸಮಸ್ಯೆ ಇಲ್ಲ. ಆದರೆ, ಅನರ್ಹರಾಗಿದ್ದ ಅವಧಿಯಲ್ಲೇ ತಮಂಗ್ ಮುಖ್ಯಮಂತ್ರಿ ಆಗಿರುವುದು ಕಾನೂನು ಸಮ್ಮತವೇ ಮತ್ತು ನೈತಿಕವೇ ಎಂಬ ಪ್ರಶ್ನೆ ಈಗ ಉಂಟಾಗಿದೆ. ಕಾನೂನು ತಜ್ಞರ ಪ್ರಕಾರ ಚುನಾವಣೆಯಲ್ಲಿ ಅನರ್ಹನಾಗಿರುವ ವ್ಯಕ್ತಿ ಸಚಿವ ಅಥವಾ ಮುಖ್ಯಮಂತ್ರಿ ಆಗುವಂತಿಲ್ಲ. ಈ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಆಗಿದ್ದ ದಿವಂಗತ ಜಯಲಲಿತಾ ಪ್ರಕರಣದಲ್ಲೇ ಸ್ಪಷ್ಟ ಆದೇಶ ನ್ಯಾಯಾಲದಿಂದ ದೊರಕಿದೆ.

ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೊರಾ (ಮಧ್ಯದಲ್ಲಿ)

ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಆದ ಮಾತ್ರಕ್ಕೆ ಮುಖ್ಯಮಂತ್ರಿ ಆಗುವಂತಿಲ್ಲ ಎಂದು 2001ರಲ್ಲಿ ಜಯಲಲಿತಾ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಸರಕಾರಿ ಜಮೀನು ಪರಭಾರೆ ಭ್ರಷ್ಟಾಚಾರ ಪ್ರಕರಣದಲ್ಲಿ ಜಯಲಲಿತಾ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಲಾಗಿತ್ತು. 2001 ಜೂನ್ ತಿಂಗಳಲ್ಲಿ ಜಯಲಲಿತಾ ಅವರನ್ನು ಏ ಐ ಎ ಡಿ ಎಂ ಕೆ ಶಾಸಕರು ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆರಿಸುತ್ತಾರೆ. 2001 ಸೆಪ್ಟೆಂಬರ್ ನಲ್ಲಿ ಈ ಪ್ರಕರಣದ ತೀರ್ಪು ನೀಡಿದ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ ಅನರ್ಹ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಿದ ರಾಜ್ಯಪಾಲರ ಕ್ರಮವೂ ಅಸಾಂವಿಧಾನಿಕ ಎಂದು ಹೇಳುತ್ತದೆ. ಆರು ತಿಂಗಳ ಕಾಲ ಚುನಾಯಿತನಾಗದ ವ್ಯಕ್ತಿ ಕೂಡ ಮುಖ್ಯಮಂತ್ರಿ ಆಗಬಹುದು ಎಂಬ ಸಾಂವಿಧಾನಿಕ ಅವಕಾಶ ಇಂತಹ ಪ್ರಕರಣಗಳಲ್ಲಿ ದೊರೆಯುವುದಿಲ್ಲ ಎಂದೂ ಕೂಡ ಹೇಳಿದೆ.

ಸುಪ್ರೀಂ ಕೋರ್ಟಿನ ಸಂವಿಧಾನ ಪೀಠದ ತೀರ್ಪಿನ ಪ್ರಕಾರ ತಮಂಗ್ ಅವರು ಅಧಿಕಾರದಲ್ಲಿ ಇದ್ದದ್ದು ಕಾನೂನು ಬಾಹಿರವಾಗಿದೆ ಎನ್ನುತ್ತಾರೆ ತಜ್ಞರು. ಮಾತ್ರವಲ್ಲದೆ, ಈಗ ಚುನಾವಣಾ ಆಯೋಗ ನೀಡಿರುವ ಆದೇಶದಲ್ಲಿ ಕೂಡ ಈಗ ಕಳೆದಿರುವ ಅವಧಿಯಲ್ಲಿ ಅಂದರೆ ತಮಂಗ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಅವರು ಅನರ್ಹರಾಗಿದ್ದರು ಎಂಬುದನ್ನು ದೃಢೀಕರಿಸುತ್ತದೆ. ತಮಂಗ್ ಅವರ ಅನರ್ಹತೆ ಅವಧಿಯನ್ನು ಹಲವು ಕಾರಣಗಳಿಗಾಗಿ ಕಡಿತಗೊಳಿಸಿರುವ ಬಗ್ಗೆ ತಮ್ಮ ಆದೇಶದಲ್ಲಿ ಚರ್ಚಿಸಿರುವ ಚುನಾವಣಾ ಆಯೋಗ ಆಯ್ದ ಕೆಲವು ಕೋರ್ಟು ತೀರ್ಪುಗಳನ್ನು ಉಲ್ಲೇಖಿಸಿ, ಜಯಲಲಿತಾ ಪ್ರಕರಣವನ್ನು ಗಮನಿಸದಿರುವುದು ಕೇವಲ ಕಣ್ತಪ್ಪೆಂದು ನೈತಿಕತೆ ಹಾಗೂ ಕಾನೂನನ್ನು ಗೌರವಿಸುವ ಯಾವ ಸಜ್ಜನರೂ ಹೇಳಲಾರರು.

Tags: BJP-Sikkim Kranti Morcha Coalition GovernmentCentral Election CommissionChief Election Commissioner Sunil AroraSikkim Chief Minister Prem Singh TamangSikkim StateSupreme Court of Indiaಕೇಂದ್ರ ಚುನಾವಣಾ ಆಯೋಗಬಿಜೆಪಿ-ಸಿಕ್ಕಿಂ ಕ್ರಾಂತಿ ಮೋರ್ಚಾ ಮೈತ್ರಿ ಸರ್ಕಾರಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೊರಾಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ಸಿಕ್ಕಿಂ ರಾಜ್ಯಸುಪ್ರೀಂ ಕೋರ್ಟ್
Previous Post

ನೀರಿಲ್ಲದೇ ಬಯಲು ಬಹಿರ್ದಸೆ ಮುಕ್ತ ಆಗುವುದೆಂತು?

Next Post

ತಂತಿ ಮೇಲಿನ ನಡಿಗೆಯಲ್ಲಿ ಬಿ ಎಸ್ ವೈ ಎಡವಿದರೆ ಬಿಜೆಪಿಯೂ ಬೀಳುತ್ತದೆ

Related Posts

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
0

ಬೆಂಗಳೂರು : ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು(Mekedatu) ಸಮತೋಲಿತ ಜಲಾನಯನ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಕೆಇಆರ್‌ಎಸ್(KERS) ನಿರ್ದೇಶಕರ ನೇತೃತ್ವದಲ್ಲಿ ಹೊಸ ತಂಡ ರಚಿಸಿ, ಯೋಜನೆ ಕಾರ್ಯಾನುಷ್ಠಾನಕ್ಕೆ ರಾಜ್ಯ ಸರ್ಕಾರ...

Read moreDetails
ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025

ಆರ್.ಡಿ.ಪಿ.ಆರ್ ಅಧಿಕಾರಿಗಳಿಗೆ ಹೈಕೋರ್ಟಿನಲ್ಲಿ ಐತಿಹಾಸಿಕ ನ್ಯಾಯ: ಪ್ರಿಯಾಂಕ್ ಖರ್ಗೆ

December 12, 2025
ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

December 12, 2025

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

December 12, 2025
Next Post
ತಂತಿ ಮೇಲಿನ ನಡಿಗೆಯಲ್ಲಿ ಬಿ ಎಸ್ ವೈ  ಎಡವಿದರೆ ಬಿಜೆಪಿಯೂ ಬೀಳುತ್ತದೆ

ತಂತಿ ಮೇಲಿನ ನಡಿಗೆಯಲ್ಲಿ ಬಿ ಎಸ್ ವೈ ಎಡವಿದರೆ ಬಿಜೆಪಿಯೂ ಬೀಳುತ್ತದೆ

Please login to join discussion

Recent News

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’
Top Story

ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada