• Home
  • About Us
  • ಕರ್ನಾಟಕ
Wednesday, July 30, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಭಾರತೀಯ ಕ್ರಿಕೆಟ್‌ನಲ್ಲಿ ಧೋನಿ ಯುಗಾಂತ್ಯ?

by
January 16, 2020
in Uncategorized
0
ಭಾರತೀಯ ಕ್ರಿಕೆಟ್‌ನಲ್ಲಿ ಧೋನಿ ಯುಗಾಂತ್ಯ?
Share on WhatsAppShare on FacebookShare on Telegram

ಸಂಕ್ರಾಂತಿ ಮುಗಿಯುತ್ತಿದ್ದಂತೆಯೇ ಭಾರತೀಯ ಕ್ರಿಕೆಟ್‌ ನಿಯಂತ್ರಣ ಸಂಸ್ಥೆ (ಬಿಸಿಸಿಐ) ಕ್ರಿಕೆಟ್‌ ಪ್ರಿಯರಿಗೆ ಶಾಕ್‌ ನೀಡಿದೆ. ಇಂದು ಪ್ರಕಟಿಸಿರುವ 2019-2020ನೇ ಸಾಲಿನ ನೂತನ ವಾರ್ಷಿಕ ಒಪ್ಪಂದ ಪಟ್ಟಿಯಿಂದ ನಾಲ್ವರು ಹಿರಿಯ ಆಟಗಾರರ ಹೆಸರನ್ನು ಕೈಬಿಡಲಾಗಿದೆ. ಇವರಲ್ಲಿ ಭಾರತೀಯ ಕ್ರಿಕೆಟ್‌ ತಂಡದ ಯಶಸ್ವಿ ನಾಯಕ ಮಹೆಂದ್ರ ಸಿಂಗ್‌ ಧೋನಿ ಹೆಸರು ಸೇರಿರುವುದು ಅವರ ಕ್ರಿಕೆಟ್‌ ಭವಿಷ್ಯದ ಮೇಲೆ ಪ್ರಶ್ನಾರ್ಥಕ ಚಿಹ್ನೆ ಇರಿಸಿದೆ. ಈ ಕುರಿತಾಗಿ ಬಹಳಷ್ಟು ಚರ್ಚೆಗಳು ನಡೆಯುತ್ತಿದ್ದು, ಕ್ರಿಕೆಟ್‌ನಲ್ಲಿ ಮಾಹಿ ಯುಗಾಂತ್ಯವಾಯಿತು ಎಂಬ ಆತಂಕ ಧೋನಿ ಅಭಿಮಾನಿಗಳಲ್ಲಿ ಕಂಡುಬರುತ್ತಿದೆ.

ADVERTISEMENT

ಕಳೆದ ವರ್ಷ ನಡೆದ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯ ಸೆಮಿ ಫೈನಲ್‌ ಮ್ಯಾಚ್‌ನಲ್ಲಿ ಧೋನಿ ಕೊನೆಯ ಬಾರಿ ಅಂಗಣಕ್ಕೆ ಇಳಿದಿದ್ದರು. ವಿಶ್ವಕಪ್‌ನಲ್ಲಿ ವಿಫಲರಾದ ಬಳಿಕ ಎಂದೂ ಕ್ರಿಕೆಟ್‌ ಕಡೆ ತಿರುಗಿ ನೋಡದ ಧೋನಿಯನ್ನು, ಆ ನಂತರದ ಯಾವುದೇ ಸೀರೀಸ್‌ಗಳಿಗೂ ಆಯ್ಕೆ ಮಾಡಿರಲಿಲ್ಲ. ಇದರಿಂದ ಬಿಸಿಸಿಐ ಆಯ್ಕೆ ಸಮಿತಿಯು ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಹಿಂದಿನ ಆಯ್ಕೆ ಮಂಡಳಿಯ ಅಧ್ಯಕ್ಷರಾದ ಎಂ ಕೆ ಪ್ರಸಾದ್‌ ಕೂಡ ಧೋನಿಯವರ ಕಳಪೆ ಫಾರ್ಮ್‌ನ ಕಾರಣ ನೀಡಿ ಅವರನ್ನು ಆಯ್ಕೆ ಮಾಡಿರಲಿಲ್ಲ. ಈ ಕುರಿತು ಕ್ರಿಕೆಟ್‌ ವಲಯದಲ್ಲಿ ಬಹಳ ಚರ್ಚೆಗಳು ನಡೆದರೂ ಧೋನಿ ತಮ್ಮ ಭವಿಷ್ಯದ ನಿರ್ಧಾರದ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಲಿಲ್ಲ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಸಿಸಿಐನ ಉನ್ನತ ಅಧಿಕಾರಿ ಧೋನಿ ಜೊತೆ ಈ ವಿಷಯವನ್ನು ಮುಂಚೆನೇ ಚರ್ಚೆ ಮಾಡಲಾಗಿತ್ತು. ಭಾರತೀಯ ಕ್ರಿಕೆಟ್‌ನಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಆಟಗಾರನಿಗೆ ಮಾಹಿತಿಯನ್ನು ನೀಡಿದೇ ಅವರನ್ನು ಒಪ್ಪಂದದಿಂದ ಕೈಬಿಡುವುದು ಶಿಷ್ಟಾಚಾರವಲ್ಲದ ಕಾರಣಕ್ಕೆ ಅವರಿಗೆ ವಿಷಯವನ್ನು ತಿಳಿಸಿಯೇ ಈ ನಿರ್ಧಾರ ಕೈಗೊಂಡಿದ್ದೇವೆಂದು ಹೇಳಿದರು. ಸೆಪ್ಟೆಂಬರ್‌ 19ರ ನಂತರ ಯಾವುದೇ ಪಂದ್ಯದಲ್ಲಿ ಕಣಕ್ಕಿಳಿಯದ ಕಾರಣಕ್ಕೆ ಅವರನ್ನು ಕೈಬಿಡಲಾಗಿದೆಯಷ್ಟೇ, ಮುಂಬರುವ ಏಷ್ಯಾಕಪ್‌ ಪಂದ್ಯಾವಳಿಯಲ್ಲಿ ಮಾಹಿ ಆಡಿದರೆ ಅವರನ್ನು ಖಂಡಿತವಾಗಿಯೂ ಒಪ್ಪಂದಕ್ಕೆ ಒಳಪಡಿಸಲಾಗುವುದು, ಧೋನಿಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಕ್ರಿಕೆಟ್‌ ತಜ್ಞರ ಅಭಿಪ್ರಾಯದ ಪ್ರಕಾರ ಬಿಸಿಸಿಐನ ಈ ನಿರ್ಧಾರವನ್ನು ಧೋನಿಯ ಯುಗಾಂತ್ಯವೆಂದೇ ವಿಶ್ಲೇಷಿಲಾಗುತ್ತಿದೆ. ಭಾರತಕ್ಕಾಗಿ 90 ಟೆಸ್ಟ್‌, 350 ಏಕದಿನ ಹಾಗೂ 98 ಟಿ20 ಪಂದ್ಯಗಳನ್ನಾಡಿರುವ ಧೋನಿ ಹಲವು ದಾಖಲೆಗಳ ಸರದಾರ. ಭಾರತಕ್ಕಾಗಿ ಅತೀ ಹೆಚ್ಚು ಜಯ ತಂದುಕೊಟ್ಟ ಕಪ್ತಾನ, ಅತೀ ಹೆಚ್ಚು ಸ್ಟಂಪಿಂಗ್‌ ಹಾಗೂ ವಿಕೆಟ್‌ ಕೀಪರ್‌ ಆಗಿ ಉತ್ತಮ ದಾಖಲೆಯನ್ನು ಹೊಂದಿರುವ ಧೋನಿ ಭಾರತ ಕಂಡ ಅತ್ಯುತ್ತಮ ಫಿನಿಷರ್‌. ಹೆಲಿಕಾಪ್ಟರ್‌ ಶಾಟ್‌ ಅನ್ನು ಕ್ರಕಿಟ್‌ ಜಗತ್ತಿಗೆ ಮೊದಲು ಪರಿಚಯಿಸಿದ ಆಟಗಾರ. ಇಂತಹ ಕ್ರಿಕೆಟ್‌ ದಿಗ್ಗಜನ ಹೆಸರು ಒಮ್ಮೆಗೆ ಬಿಸಿಸಿಐ ಕೈಬಿಟ್ಟಿದ್ದು ನಿಜಕ್ಕೂ ಆಶ್ಚರ್ಯಕರ.

ವಿಶ್ವಕಪ್‌ ನಂತರ ಕ್ರಿಕೆಟ್‌ನಿಂದ ಅಂತರ ಕಾಯ್ದುಕೊಂಡಿರುವ ಧೋನಿ, ತಮ್ಮ ವೃತ್ತಿ ಜೀವನದ ಕುರಿತು ಯಾವುದೇ ಗುಟ್ಟನ್ನು ಬಿಚ್ಚಿಟ್ಟಿಲ್ಲ. ಕ್ರಿಕೆಟ್‌ನಿಂದ ದೂರ ಉಳಿದು ಕೆಲ ಸಮಯ ಕುಟುಂಬದೊಂದಿಗೆ ಕಳೆಯುವ ಇಚ್ಚೆಯಿಂದ ಅಂಗಣದಿಂದ ಹೊರ ನಡೆದ ಧೋನಿ ಮತ್ತೆ ಕ್ರಿಕೆಟ್‌ಗೆ ಮರಳುತ್ತಾರೆಯೇ ಎಂಬ ಪ್ರಶ್ನೆಗೆ ಅವರು ಎಂದೂ ಉತ್ತರ ನೀಡಿಲ್ಲ. ಸೇನೆಯ ಪ್ಯಾರಾ ಕಮ್ಯಾಂಡೋ ವಿಭಾಗದಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಆಗಿ ಕೆಲ ಸಮಯ ತರಭೇತಿ ಪಡೆದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಬಹಳ ವಿರಳ.

ಇನ್ನು, ಧೋನಿ ಕ್ರಿಕೆಟ್‌ನಿಂದ ದೂರವಾದ ಮೇಲೆ ಭಾರತೀಯ ಏಕದಿನ ಹಾಗೂ ಚುಟುಕು ಮಾದರಿಯಲ್ಲಿ ಅವರಂಥಹ ವಿಕೇಟ್‌ ಕೀಪರ್‌ ಇಲ್ಲದಿರುವುದು ಕೂಡ ಗಂಭೀರ ಸಮಸ್ಯೆಯಾಗಿದೆ. ರಿಷಭ್‌ ಪಂತ್‌ ಅವರಿಂದ ಸ್ಥಿರ ಪ್ರದರ್ಶನ ಯಾವುದೇ ಪಂದ್ಯದಲ್ಲಿ ಮೂಡಿ ಬರಲಿಲ್ಲ. ಪ್ರತೀ ಪಂದ್ಯದಲ್ಲೂ ಸ್ಟೇಡಿಯಂನಲ್ಲಿದ್ದ ಕ್ರಿಕೆಟ್‌ ಅಭಿಮಾನಿಗಳು ಧೋನಿ ಧೋನಿ ಎಂದು ಕೂಗುವುದು ಸಹಜವಾಗಿತ್ತು. ಈ ವರ್ಷ ಒಕ್ಟೋಬರ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ ಪಂದ್ಯಾವಳಿಯ ಮುಂಚೆ ಧೋನಿ ಮತ್ತೆ ಭಾರತವನ್ನು ಪ್ರತಿನಿಧಿಸಲಿದ್ದಾರೆಯೇ? ಅಥವಾ ಅವರ ಬದಲಿಗೆ ಬಿಸಿಸಿಐ ಯುವ ಆಟಗಾರರಿಗೆ ಮಣೆ ಹಾಕಲಿದೆಯೇ ಎನ್ನುವುದು ಕುತೂಹಲಕಾರ ಸಂಗತಿ.

ಏನೇ ಇದ್ದರೂ, ಕ್ರಿಕೆಟ್‌ನಿಂದ ಧೋನಿಯ ಹಠಾತ್‌ ನಿರ್ಗಮನ ಭಾರತೀಯ ಕ್ರಿಕೆಟ್‌ ಪ್ರೇಮಿಗಳಲ್ಲಿ ಬಹಳಷ್ಟು ನಿರಾಸೆ ಮೂಡಿಸಿದೆ. ಐಪಿಎಲ್‌ನಲ್ಲಿ ಚೆನ್ನೈ ತಂಡದ ಪರ ಆಡಲಿಳಿಯುವ ಧೋನಿಯ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ಕ್ರಿಕೆಟ್‌ಗೆ ಧೋನಿ ಅಂತಿಮ ವಿಧಾಯ ಹೇಳುವ ಮುಂಚೆ ಅವರನ್ನು ಮತ್ತೊಮ್ಮೆ ನೀಲಿ ಜೆರ್ಸಿಯಲ್ಲಿ ನೋಡುವ ತವಕ ಕ್ರಿಕೆಟ್‌ ಪ್ರಿಯರಿಗಿದೆ.

Tags: BCCICricketIPLM S DhoniT-20 World Cupಐಪಿಎಲ್‌ಕ್ರಿಕೆಟ್ಟಿ-20 ವಿಶ್ವಕಪ್‌ಬಿಸಿಸಿಐಮಹೆಂದ್ರ ಸಿಂಗ್‌ ಧೋನಿ
Previous Post

KPCC ಅಧ್ಯಕ್ಷ ಸ್ಥಾನದ ಜತೆ ಬಣ ರಾಜಕಾರಣಕ್ಕೂ ಮದ್ದರೆಯುತ್ತಿರುವ ಹೈಕಮಾಂಡ್

Next Post

ಸಿಎಎ ಜಪದ ಮುಂದೆ ಕಳೆಗುಂದಿದ ರಫ್ತು ಕ್ಷೇತ್ರ!

Related Posts

Uncategorized

ಇಂಧನ ಇಲಾಖೆಯ 447.73 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ

by ಪ್ರತಿಧ್ವನಿ
July 19, 2025
0

ಚಾವಿಸನಿನಿಯ 408.95 ಕೋಟಿ ರೂ.ಗಳ ನಾಲ್ಕು ಕಾಮಗಾರಿಗಳು ಕೆಪಿಟಿಸಿಎಲ್ ನ 38.78 ಕೋಟಿ ರೂ.ಗಳ ಎರಡು ಕಾಮಗಾರಿಗಳು ಮೈಸೂರು, ಜುಲೈ 19, 2025ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ...

Read moreDetails

ಸಹಿಸಿಕೊಳ್ಳೋ ಯೋಗ್ಯತೆಯಿಲ್ಲ ಅಂದ್ರೆ ರಾಜಕಾರಣಕ್ಕೆ ಯಾಕೆ ಬರಬೇಕು?

July 19, 2025
ದೊಡ್ಡ ತೂಗುಸೇತುವೆ

ದೊಡ್ಡ ತೂಗುಸೇತುವೆ

July 18, 2025

CM Siddaramaiah: ಹಿಂಸೆ ಹಾಗೂ ಪ್ರಚೋದನೆಗಳನ್ನು ತಡೆದರೆ ಸಮಾಜದ ಒಳಿತು ಸಾಧ್ಯ..

July 16, 2025

Basavaraj Bommai: ಜಿಟಿಟಿಸಿ ತರಬೇತಿ ಪಡೆಯುವವರಿಗೆ ಒಳ್ಳೆಯ ಭವಿಷ್ಯವಿದೆ..

July 16, 2025
Next Post
ಸಿಎಎ ಜಪದ ಮುಂದೆ ಕಳೆಗುಂದಿದ ರಫ್ತು ಕ್ಷೇತ್ರ!

ಸಿಎಎ ಜಪದ ಮುಂದೆ ಕಳೆಗುಂದಿದ ರಫ್ತು ಕ್ಷೇತ್ರ!

Please login to join discussion

Recent News

Top Story

M B Patil: ಪೊದ್ದಾರ್‌ ಪ್ಲಂಬಿಂಗ್‌ನಿಂದ 758 ಕೋಟಿ ರೂ. ಹೂಡಿಕೆ..!!

by ಪ್ರತಿಧ್ವನಿ
July 29, 2025
ಧರ್ಮಸ್ಥಳದಲ್ಲಿ ಹಾರೆ..ಗುದ್ದಲಿ..ಪಿಕಾಸಿ ಸಮೇತ ಕಾರ್ಯಾಚರಣೆ – ಹೂತಿಟ್ಟ ಶವಗಳ ಉತ್ಖನನ ಕಾರ್ಯ ಆರಂಭ !
Top Story

ಧರ್ಮಸ್ಥಳದಲ್ಲಿ ಹಾರೆ..ಗುದ್ದಲಿ..ಪಿಕಾಸಿ ಸಮೇತ ಕಾರ್ಯಾಚರಣೆ – ಹೂತಿಟ್ಟ ಶವಗಳ ಉತ್ಖನನ ಕಾರ್ಯ ಆರಂಭ !

by Chetan
July 29, 2025
Top Story

Namma Metro: ಮೆಟ್ರೋ 3ನೇ ಹಂತದ ಕಾಮಗಾರಿ: 6500 ಮರಗಳ ಮಾರಣಹೋಮಕ್ಕೆ ಮುಂದಾದ ಬಿಎಂಆರ್​​ಸಿಎಲ್​

by ಪ್ರತಿಧ್ವನಿ
July 29, 2025
Top Story

DCM DK Shivakumar: ಶಾಸಕರ ಸಭೆ; ಸಿಎಂ ತಮ್ಮ ಅಧಿಕಾರ ಪ್ರಯೋಗಿಸುತ್ತಿದ್ದಾರೆ, ಅದರಲ್ಲಿ ತಪ್ಪೇನಿದೆ..!!

by ಪ್ರತಿಧ್ವನಿ
July 29, 2025
ಡಿ ಕಂಪನಿ ಅಂದ್ರೆ..ದಗಲ್ಬಾಜಿ ಕಂಪನಿ – ದರ್ಶನ್ ಫ್ಯಾನ್ಸ್ ಗೆ ಶಿಕ್ಷಣ ಕೊಡಿ : ನಟ ಪ್ರಥಮ್! 
Top Story

ಡಿ ಕಂಪನಿ ಅಂದ್ರೆ..ದಗಲ್ಬಾಜಿ ಕಂಪನಿ – ದರ್ಶನ್ ಫ್ಯಾನ್ಸ್ ಗೆ ಶಿಕ್ಷಣ ಕೊಡಿ : ನಟ ಪ್ರಥಮ್! 

by Chetan
July 29, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

M B Patil: ಪೊದ್ದಾರ್‌ ಪ್ಲಂಬಿಂಗ್‌ನಿಂದ 758 ಕೋಟಿ ರೂ. ಹೂಡಿಕೆ..!!

July 29, 2025
ಧರ್ಮಸ್ಥಳದಲ್ಲಿ ಹಾರೆ..ಗುದ್ದಲಿ..ಪಿಕಾಸಿ ಸಮೇತ ಕಾರ್ಯಾಚರಣೆ – ಹೂತಿಟ್ಟ ಶವಗಳ ಉತ್ಖನನ ಕಾರ್ಯ ಆರಂಭ !

ಧರ್ಮಸ್ಥಳದಲ್ಲಿ ಹಾರೆ..ಗುದ್ದಲಿ..ಪಿಕಾಸಿ ಸಮೇತ ಕಾರ್ಯಾಚರಣೆ – ಹೂತಿಟ್ಟ ಶವಗಳ ಉತ್ಖನನ ಕಾರ್ಯ ಆರಂಭ !

July 29, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada