• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ದಲಿತ ವಕೀಲನ ಕೊಲೆಗೆ ಕಾರಣವಾದ ಬ್ರಾಹ್ಮಣ್ಯ ಭಯೋತ್ಪಾದನೆಯನ್ನು ವಿರೋಧಿಸಿ – ನಟ ಚೇತನ್

by
October 19, 2020
in ದೇಶ
0
ದಲಿತ ವಕೀಲನ ಕೊಲೆಗೆ ಕಾರಣವಾದ ಬ್ರಾಹ್ಮಣ್ಯ ಭಯೋತ್ಪಾದನೆಯನ್ನು ವಿರೋಧಿಸಿ – ನಟ ಚೇತನ್
Share on WhatsAppShare on FacebookShare on Telegram

ಕಳೆದ ತಿಂಗಳು ದಲಿತ ವಕೀಲರೊಬ್ಬರನ್ನು ಇರಿದ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ, ನಟ ಚೇತನ್‌ ಖಂಡನೆ ವ್ಯಕ್ತಪಡಿಸಿದ್ದಾರೆ. ದಲಿತ ವಕೀಲರನ್ನು ಕೊಲೆಗೈಯಲು ಕಾರಣವಾದ ಬ್ರಾಹ್ಮಣ್ಯ ಭಯೋತ್ಪಾದನೆಯ ವಿರುದ್ಧ ಭಾರತೀಯರು ಆಕ್ರೋಶ ಹೊರಹಾಕಬೇಕೆಂದೂ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ನಟ ಚೇತನ್‌, ಕಳೆದ ತಿಂಗಳು ದಲಿತ ವಕೀಲರನ್ನು ಬ್ರಾಹ್ಮಣ ವ್ಯಕ್ತಿಯೊಬ್ಬರು ಇರಿದು ಕೊಂದಿದ್ದಾರೆ. ವಕೀಲರ ಬ್ರಾಹ್ಮಣ್ಯ ವಿರೋಧಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಿಂದಾಗಿ ಮನನೊಂದ ಬ್ರಾಹ್ಮಣ ವ್ಯಕ್ತಿ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ, ದಲಿತರು ಸಹಸ್ರಾರು ವರ್ಷಗಳಿಂದ ಜಾತಿ ತಾರತಮ್ಯ ಅನುಭವಿಸುತ್ತಿದ್ದಾರೆ. ಈಗ ಅದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಬರೆದುದಕ್ಕಾಗಿ ಕೊಲೆಯಾಗುತ್ತಿದ್ದಾರೆ. ಭಾರತೀಯರು ಬ್ರಾಹ್ಮಣ್ಯ ಭಯೋತ್ಪಾದನೆಯನ್ನು ವಿರೋಧಿಸಬೇಕು, ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಬೇಕೆಂದು ಆಗ್ರಹಿಸಿದ್ದಾರೆ.

Last month in Mumbai, a Dalit lawyer was stabbed to death by Brahmin man who allegedly got offended by lawyer's anti-Brahminism social media post

Dalits suffer millennias of casteism, now murder just for posting agnst it?

Hope Indians outrage against #BrahminicalTerror as well

— Chetan Kumar / ಚೇತನ್ (@ChetanAhimsa) October 18, 2020


ಬ್ರಾಹ್ಮಣ್ಯ ವಿರೋಧಿ ಬರಹ; ದಲಿತ ವಕೀಲನ ಕೊಲೆ

ಕಳೆದ ತಿಂಗಳು ಬ್ರಾಹ್ಮಣ್ಯ ವಿರೋಧಿ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದಕ್ಕೆ ಗುಜರಾತಿನ ಕಛ್‌ ಪ್ರಾಂತ್ಯದ ದಲಿತ ಕಾರ್ಯಕರ್ತ ಹಾಗೂ ವಕೀಲರೂ ಆದ ದೇವ್‌ ಜಿ ಮಹೇಶ್ವರ್‌ ಎಂಬ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆಗೈಯಲಾಗಿತ್ತು.

ಭಾರತೀಯ ಕಾನೂನು ವೃತ್ತಿಪರರ ಸಂಘ ಮತ್ತು ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟದ ಹಿರಿಯ ಸದಸ್ಯರೂ ಆಗಿದ್ದ ದೇವ್‌ ಜಿ, ದಲಿತ ಹಕ್ಕುಗಳ ಬಗ್ಗೆ, ದಲಿತ ದೌರ್ಜನ್ಯದ ವಿರುದ್ಧ ತಮ್ಮ ಪ್ರತಿಭಟನೆಯನ್ನು ಪ್ರಕಟಿಸುತ್ತಾ ಬಂದವರು. ಕೊಲೆಯಾಗುವ ಮೊದಲು ಪರಿಶಿಷ್ಟ ವರ್ಗದವರು ಹಿಂದೂಗಳಲ್ಲ ಎಂದು ಪೋಸ್ಟ್‌ ಹಾಕಿದ್ದರು. ಅದಕ್ಕೂ ಮೊದಲು ಬ್ರಾಹ್ಮಣ ಧರ್ಮದ ವಿರುದ್ಧ ಸತತ ಪೋಸ್ಟ್‌ ಹಾಕುತ್ತಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದು ದೇವ್‌ ಜಿ ಊರವನೇ ಆದ ಭಾರತ್‌ ರಾವಲ್‌ ಎಂಬ ಬ್ರಾಹ್ಮಣ ಯುವಕನೊಡನೆ ವಾಗ್ವಾದಕ್ಕೂ ಕಾರಣವಾಗಿತ್ತು. ಬ್ರಾಹ್ಮಣರ ವಿರುದ್ಧ ಬರೆಯುವುದನ್ನು ರಾವಲ್‌ ತೀವ್ರವಾಗಿ ವಿರೋಧಿಸಿದ್ದ, ಹಾಗೂ ಇದೇ ವಿಚಾರಕ್ಕೆ ಸಂಬಂಧಿಸಿ ಈರ್ವರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ತನಿಖಾ ವೇಳೆ ಬಹಿರಂಗಗೊಂಡಿದೆ.

ಸೆಪ್ಟೆಂಬರ್‌ 25 ರಂದು ರಾವಲ್‌ ದೇವ್‌ ಜಿ ಯ ಫೋನಿಗೆ ಕರೆ ಮಾಡಿ ಸುಮಾರು 14 ನಿಮಿಷಗಳ ಕಾಲ ವಾಗ್ವಾದ ನಡೆಸಿದ್ದ, ಹಾಗೂ ಕೊಲೆ ಬೆದರಿಕೆಯನ್ನೂ ಒಡ್ಡಿದ್ದ, ಅವರ ಸಂಭಾಷಣೆಯ ತುಣುಕು ನಾವು ವಶಪಡಿಸಿಕೊಂಡಿದ್ದೇವೆ ಎಂದು ತನಿಖಾಧಿಕಾರಿಗಳು ಹೇಳಿರುವುದಾಗಿ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

यह है गुजरात के रापर तहसील में हत्या का शिकार बने बामसेफ के एडवोकेट साथी देवजी महेश्वरी की पत्नी का वीडियो। कल से वह आंदोलन पे बैठे है – यह मांग के साथ कि जब तक उनके पति के कातिलों कि गिरफ्तारी नहीं होती तब तक वह अन्न – जल को हाथ नहीं लगायेंगी। @vijayrupanibjp संवेदनशीलता दिखाइए। pic.twitter.com/hQgLDZALli

— Jignesh Mevani (@jigneshmevani80) September 26, 2020


ADVERTISEMENT

ಮೃತ ವಕೀಲ ದೇವ್‌ ಜಿ ಅವರಿಗೆ ಈ ಹಿಂದೆಯೂ ಬೆದರಿಕೆ ಕರೆಗಳು ಬರುತ್ತಿದ್ದವು, ಅವರು ರಾವಲ್‌ ಕರೆಯನ್ನೂ ಕೇವಲ ಬೆದರಿಕೆ ಕರೆಯೆಂದು ತಳ್ಳಿ ಹಾಕಿದ್ದರು, ಹಾಗೂ ಆತನ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ದೇವ್‌ ಜಿ ಆಪ್ತ ಮೂಲಗಳು ಇಂಡಿಯನ್‌ ಎಕ್ಸ್ಪ್ರೆಸ್‌ ಗೆ ತಿಳಿಸಿದ್ದಾರೆ.

ಘಟನೆ ಕುರಿತಂತೆ ಮೃತ ವಕೀಲರ ಪತ್ನಿ ಒಂಭತ್ತು ಜನರ ವಿರುದ್ಧ ದೂರು ನೀಡಿದ್ದರು. ಅದರಲ್ಲಿ ಪ್ರಸ್ತುತ ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದ ಭರತ್‌ ರಾವಲ್‌ ನನ್ನು ಮುಖ್ಯ ಆರೋಪಿಯೆಂದು ಹೆಸರಿಸಲಾಗಿತ್ತು. ಇದೀಗ ತನಿಖೆಯನ್ನು ನಡೆಸುತ್ತಿರುವ ಪೊಲೀಸರ ತಂಡ ಆರೋಪಿ ಬ್ರಾಹ್ಮಣ್ಯ ವಿರುದ್ಧದ ಪೋಸ್ಟ್‌ ಗೆ ಸಂಬಂಧಿಸಿ ಕೊಲೆ ನಡೆಸಿರುವುದಕ್ಕೆ ಪುರಾವೆಗಳು ಲಭಿಸಿದ್ದಾಗಿ ಹೇಳಿದ್ದಾರೆ.

Tags: ಚೇತನ್‌ ಅಹಿಂಸಾದಲಿತಬ್ರಾಹ್ಮಣ್ಯ
Previous Post

ಕರೋನಾ ಸೋಂಕು: ಫೆಬ್ರವರಿ 2021ರ ವೇಳೆಗೆ ಭಾರತದಲ್ಲಿ ಒಂದು ಕೋಟಿ ದಾಟಲಿರುವ ಸೋಂಕಿತರ ಸಂಖ್ಯೆ

Next Post

ಬಂದೂಕು ತೋರಿಸಿ ದಲಿತ ಯುವತಿಯ ಮೇಲೆ ಅತ್ಯಾಚಾರ

Related Posts

ICC-BCCI: ಅಣ್ತಮ್ಮಾಸ್‌ಗೆ ಮಂಡಿಯೂರಿದ ಐಸಿಸಿ- ಬಿಸಿಸಿಐ..?
Top Story

ICC-BCCI: ಅಣ್ತಮ್ಮಾಸ್‌ಗೆ ಮಂಡಿಯೂರಿದ ಐಸಿಸಿ- ಬಿಸಿಸಿಐ..?

by ಪ್ರತಿಧ್ವನಿ
February 11, 2026
0

ಐಸಿಸಿ.. ಕ್ರಿಕೆಟ್ ಜಗತ್ತಿಗೆ ಬಾಸ್.. ಬಿಸಿಸಿಐ ವಿಶ್ವಕ್ರಿಕೆಟ್‍ನ ಲಕ್ಷ್ಮೀ ಪುತ್ರ.. ಕುಬೇರ.. ದೊಡ್ಡಣ್ಣ..! ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಹಿಂದಿನಿಂದಲೂ ಬಂದಿರುವ ಒಂದು ನಿಯಮ ಇದೆ. ಅದು ಯಾವುದೇ ಕ್ರಿಕೆಟ್...

Read moreDetails
Bitcoin:ಬಿಟ್‌ಕಾಯಿನ್‌ ಹೂಡಿಕೆದಾರರಿಗೆ ಬಿಗ್‌ ಶಾಕ್: 24 ಗಂಟೆಗಳಲ್ಲಿ 1 ಬಿಲಿಯನ್ ಡಾಲರ್ ನಷ್ಟ

Bitcoin:ಬಿಟ್‌ಕಾಯಿನ್‌ ಹೂಡಿಕೆದಾರರಿಗೆ ಬಿಗ್‌ ಶಾಕ್: 24 ಗಂಟೆಗಳಲ್ಲಿ 1 ಬಿಲಿಯನ್ ಡಾಲರ್ ನಷ್ಟ

February 8, 2026
ಭಾರತದಾದ್ಯಂತ 2.5 ಕೋಟಿ ಆಧಾರ್ ಕಾರ್ಡ್ ರದ್ದು-ಯಾಕೆ ಗೊತ್ತೆ ?

ಭಾರತದಾದ್ಯಂತ 2.5 ಕೋಟಿ ಆಧಾರ್ ಕಾರ್ಡ್ ರದ್ದು-ಯಾಕೆ ಗೊತ್ತೆ ?

February 8, 2026
ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್‌ ಲಾಡ್

ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್‌ ಲಾಡ್

February 7, 2026
ಧಾರ್ಮಿಕ ಮೂಲ ತಳಪಾಯದಲ್ಲಿ ನಿರ್ಮಿತ ದೇಶಗಳ ಅಂತ್ಯ: ಪಾಕಿಸ್ತಾನದ ದುರಂತ ಭಾರತಕ್ಕೂ ಪಾಠ!

ಧಾರ್ಮಿಕ ಮೂಲ ತಳಪಾಯದಲ್ಲಿ ನಿರ್ಮಿತ ದೇಶಗಳ ಅಂತ್ಯ: ಪಾಕಿಸ್ತಾನದ ದುರಂತ ಭಾರತಕ್ಕೂ ಪಾಠ!

February 7, 2026
Next Post
ಬಂದೂಕು ತೋರಿಸಿ ದಲಿತ ಯುವತಿಯ ಮೇಲೆ ಅತ್ಯಾಚಾರ

ಬಂದೂಕು ತೋರಿಸಿ ದಲಿತ ಯುವತಿಯ ಮೇಲೆ ಅತ್ಯಾಚಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada