• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಟಿಡಿಆರ್‌ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ದೋಷಾರೋಪ ಪಟ್ಟಿ ಎಸಿಬಿ ಕೈಯಲ್ಲಿ

by
January 15, 2020
in ಕರ್ನಾಟಕ
0
ಟಿಡಿಆರ್‌ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ದೋಷಾರೋಪ ಪಟ್ಟಿ ಎಸಿಬಿ ಕೈಯಲ್ಲಿ
Share on WhatsAppShare on FacebookShare on Telegram

ಟಿ.ಸಿ ಪಾಳ್ಯ ಮುಖ್ಯರಸ್ತೆ ಮತ್ತು ಹೊರಮಾವು ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇರುವ ಕೌದೇನಹಳ್ಳಿ ಗ್ರಾಮದ ಸರ್ವೆ ನಂ. 132ರಲ್ಲಿನ ಜಾಗವು ಸೇರಿದಂತೆ ಇನ್ನೂ ಕೆಲವು ಸ್ವತ್ತುಗಳನ್ನು ಭಟ್ಟರಹಳ್ಳಿ ರಸ್ತೆ ಟಿ.ಸಿ ಪಾಳ್ಯ ಜಂಕ್ಷನ್‌ ವರೆಗೆ ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿ 29.07.2009ರಲ್ಲಿ ನೋಟಿಫೈ ಮಾಡಿರುತ್ತದೆ. ಆದರೆ 1989ರಲ್ಲಿ ಈ ಸರ್ವೆ ನಂ.132ರಲ್ಲಿನ ಬಡಾವಣೆ ನಿರ್ಮಿಸಿ, ಅಲ್ಲಿನ ಸೈಟ್‌ಗಳನ್ನು ಭೂ ಮಾಲೀಕರಾದ ಮುನಿರಾಜಪ್ಪ ಬಿನ್‌ ಲೇಟ್‌ ರೇವಣ್ಣ ಹಾಗೂ ಇತರರಿಂದ ಜಿ.ಪಿ.ಎ ಪಡೆದ ಆರೋಪಿತ ಟಿ.ಡಿ.ಆರ್‌ ಬ್ರೋಕರ್‌ಗಳಾದ ಬಿ.ಎಸ್‌ ಸುರೇಂದ್ರನಾಥ್‌, ಕೆ ಗೌತಮ್‌, ಸುರೇಶ.ಕೆ ಹಾಗೂ ಮೆ|| ವಾರ್ಲ್ಮಾಕ್‌ ರಿಯಾಲ್ಟಿ ಹೋಲ್ಡಿಂಗ್‌ ಪ್ರೈ.ಲಿ ಕಂಪನಿಯವರು ಬಿಬಿಎಂಪಿ ಅಧಿಕಾರಿಗಳೊಂದಿಗೆ ಅಕ್ರಮ ಒಡಂಬಡಿಕೆಯನ್ನು ಮಾಡಿಕೊಂಡಿದ್ದರು.

ADVERTISEMENT

ಅಲ್ಲದೆ, ಸರ್ವೆ ನಂ.132ರಲ್ಲಿ ಹಲವಾರು ಸಾರ್ವಜನಿಕರು ಸೈಟ್‌ಗಳನ್ನು ಖರೀದಿಸಿ, ಅಲ್ಲಿ ಮನೆಗಳನ್ನು ಕಟ್ಟಿಕೊಂಡು, ಬಿಬಿಎಂಪಿಯಲ್ಲಿ ಖಾತೆಮಾಡಿಸಿ, ಕಂದಾಯವನ್ನು ಪಾವತಿಸುತ್ತಿದ್ದಾರೆ. ಆದರೆ ಈ ಟಿ.ಡಿ.ಆರ್‌ ಬ್ರೋಕರ್‌ಗಳು, ಇದನೆಲ್ಲಾ ಮರೆಮಾಚಿ, ಬಿಬಿಎಂಪಿ ಸುತ್ತೋಲೆಗಳಿಗೆ ವ್ಯತಿರಿಕ್ತವಾಗಿ ಕಟ್ಟಡಗಳ ಮೌಲ್ಯ ಮಾಪನ ವರದಿಗಳನ್ನು ತಯಾರಿಸಿ, ರಸ್ತೆ ಅಗಲೀಕರಣಕ್ಕೆ ಒಳಪಡದ ಹಲವು ಕಟ್ಟಡಗಳನ್ನು ರಸ್ತೆ ಅಗಲೀಕರಣಕ್ಕೆ ಒಳಪಡುವುದಾಗಿ ಹಾಗೂ ನೆಲ+1 ಮಹಡಿ ಇರುವ ಕಟ್ಟಡಗಳನ್ನು ನೆಲ+3 ಮಹಡಿಯ ಕಟ್ಟಡಗಳೆಂದು ಸುಳ್ಳು ವರದಿಗಳನ್ನು ತಯಾರಿಸಿದ್ದಾರೆ. ಅಲ್ಲದೆ, ಈ ಕಟ್ಟಡಗಳಿಗೆ 5,95,86,925/- ರೂಪಾಯಿಗಳ ಬೆಲೆ ನಿಗಧಿಪಡಿಸಿ, ಕಾನೂನು ಬಾಹಿರವಾಗಿ ಡಿ.ಆರ್.ಸಿ ನಂ.002924 ಮತ್ತು 002958 ಗಳನ್ನು 2014ನೇ ಸಾಲಿನಲ್ಲಿ ಬಿಬಿಎಂಪಿಯಿಂದ ಪಡೆದು ಅವುಗಳನ್ನು 8 ರಿಯಲ್‌ ಎಸ್ಟೇಟ್‌ ಕಂಪನಿಗಳಿಗೆ 27 ಕೋಟಿಗೂ ಅಧಿಕ ಬೆಲೆಗೆ ಮಾರಾಟ ಮಾಡಿಕೊಂಡು ಬಿಬಿಎಂಪಿಗೆ ವಂಚಿಸಿದ್ದಾರೆ.

ಈ ರೀತಿ ಟಿ.ಡಿ.ಆರ್‌ ಪಡೆದಿರುವ ಜಾಗವನ್ನು ಬಿಬಿಎಂಪಿರವರು ಸುಮಾರು 6 ವರ್ಷಗಳು ಕಳೆದರೂ ಸ್ವಾಧೀನ ಪಡೆದು ರಸ್ತೆ ಅಗಲೀಕರಣ ಮಾಡಿಲ್ಲ. ಉದ್ದೇಶಿತ ಅಗಲೀಕರಣವಾಗದೇ ಯಥಾಸ್ಥಿತಿ ಮುಂದುವರೆದಿದೆ. ಹಾಗೂ ಟಿಡಿಆರ್‌ಗೆ ಅರ್ಜಿ ಹಾಕುವ ಹಂತದಿಂದಲೇ ಟಿಡಿಆರ್‌ ಬ್ರೋಕರ್‌ಗಳು ಹಾಗೂ ವಾಲ್‌ಮಾರ್ಕ್‌ ಕಂಪನಿಯವರು, ಟಿಡಿಆರ್‌ ಪಡೆಯುವ ಸಲುವಾಗಿ ಹಳೆಯ ಜಮೀನು ಮಾಲೀಕರಿಂದ ನೋಂದಾಯಿತ ಜಿಪಿಎ ಹಾಗೂ ಸೇಲ್‌ ಅಗ್ರೀಮೆಂಟ್‌ ಪಡೆದುಕೊಂಡು ಅಕ್ರಮಗಳನ್ನು ಎಸಗಿದ್ದಾರೆ. ಇದು ಭ್ರಷ್ಟಾಚಾರ ನಿಗ್ರಹದಳದಿಂದ ಧೃಡಪಟ್ಟಿದೆ.

Also Read: ಟಿಡಿಆರ್: ತನಿಖೆ ಆಗಲಿರುವ 20 ಪ್ರಕರಣಗಳ ಅವ್ಯವಹಾರ ಬರೋಬ್ಬರಿ 700 ಕೋಟಿ ರೂ.

ಅಲ್ಲದೆ, ಈ ಪ್ರಕರಣದಲ್ಲಿ ಟಿ.ಡಿ.ಆರ್‌ ವಿತರಣೆ ಮಾಡುವಾಗ ಬಿಬಿಎಂಪಿ ಅಧಿಕಾರಿಗಳು ತಯಾರಿಸಿ ಸಹಿ ಮಾಡಿದ್ದ ಕೆಲವು ದಾಖಲೆಗಳ ಪ್ರತಿಗಳನ್ನು ಆರೋಪಿತ ಬಿಬಿಎಂಪಿ ಅಧಿಕಾರಿಗಳಾದ ಕೃಷ್ಣಲಾಲ್, ಕೆ.ಎನ್‌.ರಮೇಶ್‌, ಕಂದಾಯ ಅಧಿಕಾರಿ ಈಶ್ವರ ಪ್ರಸನ್ನಯ್ಯ, ರಾಜಸ್ವ ನಿರೀಕ್ಷಕರಾದ ಜಗನ್ನಾಥ ರೆಡ್ಡಿ, ಗ್ರಾಮ ಲೆಕ್ಕಿಗ ಚಂದ್ರಶೇಖರ್‌ ಹಾಗೂ ಇತರ ಬಿಬಿಎಂಪಿ ಅಧಿಕಾರಿಗಳು ಆರೋಪಿತ ಟಿ.ಡಿ.ಆರ್‌ ಬ್ರೋಕರ್‌ಗಳೊಂದಿಗೆ ಅಕ್ರಮ ಒಡಂಬಡಿಕೆಯನ್ನು ಮಾಡಿಕೊಂಡು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಹಾಗೂ ಹಲವು ಅಸ್ತಿತ್ವದಲ್ಲಿಯೇ ಇಲ್ಲದೇ ಕಟ್ಟಡಗಳ ಹೆಸರನಲ್ಲಿ ಹಾಗೂ ರಸ್ತೆ ಅಗಲೀಕರಣಕ್ಕೆ ಒಳಪಡದ ಕಟ್ಟಡಗಳ ಹೆಸರಿನಲ್ಲಿ 5 ಕೋಟಿಗೂ ಅಧಿಕ ಮೌಲ್ಯವನ್ನು ಕಾನೂನು ಬಾಹಿರವಾಗಿ ನಿಗಧಿಪಡಿಸಿ ಅಕ್ರಮವಾಗಿ ಒಟ್ಟು 5,64,592 ಚದರ ಅಡಿ ವಿಸ್ತೀರ್ಣದ ಟಿ.ಡಿ.ಆರ್‌ ಅನ್ನು ವಿತರಣೆ ಮಾಡಿದ್ದಾರೆ.

ಹೀಗಾಗಿ ಆರೋಪಿತ ಸರ್ಕಾರಿ ಅಧಿಕಾರಿಗಳನ್ನು ನ್ಯಾಯಾಲಯದಲ್ಲಿ ಅಭಿಯೋಜನೆಗೆ ಒಳಪಡಿಸುವುದಕ್ಕೆ ಎಸಿಬಿ ಆದೇಶ ಕೋರಿದೆ. ಅಲ್ಲದೆ, ಈ ಆರೋಪಿಗಳಿಗೆ 30.12.2019ರಂದು ತನಿಖಾ ವರದಿಯನ್ನು ಸಹ ಕಳಿಸಿದೆ. ನ್ಯಾಯಾಲಯದಲ್ಲಿ ಅಭಿಯೋಜನಾ ಮಂಜೂರಾತಿ ಆದೇಶವನ್ನು ಪಡೆದ ನಂತರ ನ್ಯಾಯಾಲಯಕ್ಕೆ ಎಸಿಬಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಿದೆ.

Tags: ACBAccused OfficersBBMPBBMP OfficersGPATDRಅಕ್ರಮಆರೋಪಿತ ಅಧಿಕಾರಿಗಳುಎಸಿಬಿಜಿಪಿಎಟಿಡಿಆರ್ ಅಕ್ರಮಬಿಬಿಎಂಪಿಬಿಬಿಎಂಪಿ ಅಧಿಕಾರಿಗಳುಭ್ರಷ್ಟಾಚಾರ ನಿಗ್ರಹದಳ
Previous Post

ಒಂದೇಟಿಗೆ ಎರಡು ಹಕ್ಕಿ ಹೊಡೆಯುವುದು ಬಿಎಸ್​​ವೈ ‘ರಾಜೀನಾಮೆ’ ತಂತ್ರವೇ?

Next Post

ಕೇಂದ್ರ ಸರ್ಕಾರವನ್ನು ಸುಪ್ರೀಂ ಕಟಕಟೆಗೆ ತಂದ ಕೇರಳ

Related Posts

114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ
ಕರ್ನಾಟಕ

114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

by ಪ್ರತಿಧ್ವನಿ
April 16, 2026
0

ರಾಜ್ಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರೀ ಮಟ್ಟದ ಬದಲಾವಣೆ ನಡೆಯಿದ್ದು, ಒಟ್ಟು 114 ಜಿಲ್ಲಾ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಈ ಮಹತ್ವದ ಆದೇಶವನ್ನು ಹೈಕೋರ್ಟ್ ಹೊರಡಿಸಿದ್ದು, ವಿವಿಧ ಹಂತಗಳ...

Read moreDetails
ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

April 16, 2026
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
Next Post
ಕೇಂದ್ರ ಸರ್ಕಾರವನ್ನು ಸುಪ್ರೀಂ ಕಟಕಟೆಗೆ ತಂದ ಕೇರಳ

ಕೇಂದ್ರ ಸರ್ಕಾರವನ್ನು ಸುಪ್ರೀಂ ಕಟಕಟೆಗೆ ತಂದ ಕೇರಳ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada