• Home
  • About Us
  • ಕರ್ನಾಟಕ
Thursday, July 31, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಚುನಾವಣಾ ಆಯೋಗದ ಸ್ವಾಯತ್ತೆಗೆ ಪುನರ್ಜನ್ಮ ನೀಡಿದ ಶೇಷನ್

by
November 11, 2019
in ದೇಶ
0
ಚುನಾವಣಾ ಆಯೋಗದ ಸ್ವಾಯತ್ತೆಗೆ ಪುನರ್ಜನ್ಮ ನೀಡಿದ ಶೇಷನ್
Share on WhatsAppShare on FacebookShare on Telegram

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವೊಂದರ ಪ್ರಮುಖ ಹುದ್ದೆಯನ್ನು ನಿಷ್ಪಕ್ಷಪಾತವಾಗಿ ಮತ್ತು ನಿರ್ಭಯವಾಗಿ ನಿರ್ವಹಿಸಿದ ಟಿ ಎನ್ ಶೇಷನ್ ಭಾನುವಾರ ನಿಧನರಾಗಿದ್ದಾರೆ. ತಮಿಳುನಾಡು ಕೇಡರ್ ನ ಐ ಎ ಎಸ್ ಅಧಿಕಾರಿ ಶೇಷನ್, ಡಿಸೆಂಬರ್ 15, 1932 ರಂದು ಪಾಲಕ್ಕಾಡ್ನಲ್ಲಿ ಜನಿಸಿದವರು. ಅವರ ಪೂರ್ಣ ಹೆಸರು ತಿರುನೆಲ್ಲೈ ನಾರಾಯಣ ಅಯ್ಯರ್ ಶೇಷನ್.

ADVERTISEMENT

ಒಂದು ಕಾಲದಲ್ಲಿ ದೇಶದ ಚುನಾವಣೆಗಳಲ್ಲಿ ಬೂತ್ ರಿಗ್ಗಿಂಗ್ ಮತ್ತು ಸರ್ಕಾರಿ ಯಂತ್ರೋಪಕರಣಗಳ ದುರುಪಯೋಗ ಹೆಚ್ಚುತ್ತಿದ್ದಾಗ, ಶೇಷನ್ ಅವರು ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿನ ನಂಬಿಕೆಯನ್ನು ಮರಳಿ ತಂದರು. ಅಷ್ಟೇ ಅಲ್ಲ ಚುನಾವಣಾ ನೀತಿ ಸಂಹಿತೆಯೇ ಗೊತ್ತಿರದಿದ್ದ ಸಮಯದಲ್ಲಿ ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಜಾರಿಗೊಳಿಸಿದರು. 1990 ರಿಂದ 1996 ರವರೆಗೆ ದೇಶದ 10 ನೇ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಅವಧಿಯಲ್ಲಿ ದೇಶದ ಚುನಾವಣಾ ವ್ಯವಸ್ಥೆಯ ಮೇಲೆ ಆಯೋಗದ ಅಧಿಕಾರವನ್ನು ಸೂಕ್ತವಾಗಿ ಬಳಸುವಲ್ಲಿ ಶೇಷನ್ ಯಶಸ್ವಿ ಆಗಿದ್ದರು.

ಅದು 1991 ನೇ ಇಸವಿ. ಅಂದಿನ ಪ್ರಧಾನ ಮಂತ್ರಿ ಚಂದ್ರಶೇಖರ್ ಅವರ ಅಲ್ಪಾವಧಿ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಸುಬ್ರಮಣಿಯನ್ ಸ್ವಾಮಿ ಅವರು ಶೇಷನ್ ಅವರು ಚುನಾವಣಾ ಆಯುಕ್ತರಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರ ಕಟ್ಟುನಿಟ್ಟಿನ ಆದೇಶಗಳೆಂದರೆ, ಮತದಾರರಿಗೆ ಲಂಚ ಅಥವಾ ಬೆದರಿಕೆ ಹಾಕದಂತೆ ನೋಡಿಕೊಳ್ಳುವುದು, ಚುನಾವಣೆಯ ಸಮಯದಲ್ಲಿ ಮದ್ಯ ವಿತರಣೆ ನಿಲ್ಲಿಸುವುದು, ಪ್ರಚಾರಕ್ಕಾಗಿ ಸರ್ಕಾರೀ ಯಂತ್ರದ ಬಳಕೆ ನಿಯಂತ್ರಿಸಿವುದು, ಜಾತಿ ಮತ್ತು ಕೋಮು ರಾಜಕಾರಣ ನಿಲ್ಲಿಸುವುದು, ಚುನಾವಣಾ ಪ್ರಚಾರಕ್ಕಾಗಿ ಧಾರ್ಮಿಕ ಸ್ಥಳಗಳನ್ನು ಮತ್ತು ಧ್ವನಿವರ್ಧಕಗಳನ್ನು ಬಳಸಲು ಕಡ್ಡಾಯ ಅನುಮತಿ ಬೇಕೆನ್ನುವ ಆಜ್ಞೆ ಹೊರಡಿಸಿದುದು.

ಶೇಷನ್ ಅವರ ಆದೇಶದಿಂದಾಗಿಯೇ ಚುನಾವಣೆಗಳಲ್ಲಿ ಮಿತಿ ಇಲ್ಲದೆ ವೆಚ್ಚ ಮಾಡಲಾಗುತಿದ್ದ ಕಪ್ಪು ಹಣದ ಬಳಕೆ ಕಡಿಮೆ ಆಯಿತು. ಅಷ್ಟೇ ಅಲ್ಲ ನಕಲೀ ಮತದಾರರನ್ನು ತಡೆಯಲು ಗುರುತಿನ ಚೀಟಿಗಳನ್ನೂ ಕಡ್ಡಾಯಗೊಳಿಸಲಾಯಿತು. ಒಟ್ಟಾರೆ ಹೇಳುವುದಾದರೆ ಮುಖ್ಯ ಚುನಾವಣಾ ಆಯುಕ್ತರು ಹೇಗಿರಬೇಕು ಎಂಬುದಕ್ಕೆ ಸ್ಪಷ್ಟ ಉದಾಹರಣೆಯೇ ಆದರು ಶೇಷನ್.

ಒಮ್ಮೆ ಪತ್ರಿಕಾ ಗೋಷ್ಟಿಯಲ್ಲಿ ಪತ್ರಕರ್ತರೊಬ್ಬರು ಶೇಷನ್ ಅವರಿಗೆ ಸುಬ್ರಮಣ್ಯನ್ ಸ್ವಾಮಿ ಅವರ ಜನತಾ ಪಕ್ಷಕ್ಕೆ ಮಾನ್ಯತೆ ಮತ್ತು ಪಕ್ಷದ ಚಿಹ್ನೆ ನೀಡುವಾಗ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಲು ಸಾದ್ಯವೇ ಎಂದೇ ಪ್ರಶ್ನಿಸಿದ್ದರು. ಆಗ ಶೇಷನ್ ಅವರು ತಮ್ಮ ತೀರ್ಮಾನವನ್ನು ಕಾದು ನೋಡುವಂತೆ ಹೇಳಿದ್ದರು.

1991 ರ ಮೇ 21 ರಂದು ರಾಜೀವ್ ಗಾಂಧಿಯವರ ದುರಂತ ಹತ್ಯೆಗೆ ಒಂದು ಅಥವಾ ಎರಡು ದಿನ ಮೊದಲು ನಡೆದಿದ್ದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಬೆಂಬಲಿಗರಿಂದ ಬೂತ್ ರಿಗ್ಗಿಂಗ್ ಕೃತ್ಯಗಳು ವ್ಯಾಪಕವಾಗಿ ನಡೆದಿದ್ದವು. ಈ ಬಗ್ಗೆ ಸಮಯಕ್ಕೆ ಅವಕಾಶವೇ ಇಲ್ಲದಂತೆ ಶೇಷನ್ ಇಡೀ ಕ್ಷೇತ್ರದಲ್ಲಿ ಮರು ಮತದಾನ ನಡೆಸಿದರು. ನಂತರ 1997 ರಲ್ಲಿ ಶೇಷನ್ ಅವರು ರಾಷ್ಟ್ರಪತಿ ಚುನಾವಣೆಗೂ ಕೆ ಅರ್ ನಾರಾಯಣನ್ ವಿರುದ್ದ ಸ್ಪರ್ಧಿಸಿ ಸೋಲನ್ನುಂಡರು. ಕಾಂಗ್ರೆಸ್ ಪಕ್ಷ ಅವರನ್ನು 1999 ರಲ್ಲಿ ಗಾಂಧಿನಗರದಿಂದ ಎಲ್. ಕೆ. ಅಡ್ವಾಣಿ ವಿರುದ್ಧ ಕಣಕ್ಕಿಳಿಸಿತು. ಇದು ಅವರ ಜನಪ್ರಿಯತೆಯನ್ನು ಕುಗ್ಗಿಸಿತು.

ಶೇಷನ್ ಅವರ ನಿಧನದ ಹಿನ್ನಲೆಯಲ್ಲಿ ನಡೆದ ಶೋಕ ಸಭೆಯಲ್ಲಿ ಕೇಂದ್ರ ಚುನಾವಣಾ ಆಯುಕ್ತ ಸುನೀಲ್ ಅರೋಡಾ

1991 ರ ಉತ್ತರಪ್ರದೇಶದ ಚುನಾವಣೆಯಲ್ಲಿ 873 ಇದ್ದ ಬೂತ್ ರಿಗ್ಗಿಂಗ್ ಸಂಖ್ಯೆ 1993 ರ ಚುನಾವಣೆಯಲ್ಲಿ 255 ಕ್ಕೆ ಇಳಿದಿತ್ತು. ಮತದಾನ ದಿನದ ಹತ್ಯೆಗಳ ಸಂಖ್ಯೆ 36 ರಿಂದ ಮೂರಕ್ಕೆ ಇಳಿದಿತ್ತು. 1994 ರ ನಾಲ್ಕು ರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅವರು 150 ಚುನಾವಣಾ ವೀಕ್ಷಕರನ್ನು ನಿಯೋಜಿಸಿದರು. ಪ್ರತಿ ಅಭ್ಯರ್ಥಿಯ ಚುನಾವಣಾ ವೆಚ್ಚವನ್ನು ಮೇಲ್ವಿಚಾರಣೆ ಮಾಡಲು ಅವರು ಆಂಧ್ರದಲ್ಲಿ 120, ಕರ್ನಾಟಕದಲ್ಲಿ 116, ಸಿಕ್ಕಿಂನಲ್ಲಿ 60 ಮತ್ತು ಗೋವಾದಲ್ಲಿ 40 ಆಡಿಟ್ ವೀಕ್ಷಕರನ್ನು ನಿಯೋಜಿಸಿದರು.

1996 ರ ಸಾರ್ವತ್ರಿಕ ಚುನಾವಣೆಗಳಲ್ಲಿ, ಪ್ರತೀ ಕ್ಷೇತ್ರಕ್ಕೆ ಚುನಾವಣಾ ಆಯೋಗವು ಅತ್ಯಂತ ಹೆಚ್ಚಿನ ವೀಕ್ಷಕರನ್ನೂ ಅಧಿಕಾರಿಗಳನ್ನೂ ನೇಮಿಸಿತ್ತು. ಆಗ ದೇಶದಲ್ಲಿ ಸುಮಾರು 3,00,000 ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧನದಲ್ಲಿರಿಸಿದ್ದು ಒಂದು ದಾಖಲೆಯೇ. 1994 ರಲ್ಲಿ, ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಕ್ಕಾಗಿ ಅಂದಿನ ಕೇಂದ್ರ ಸಚಿವ ಸೀತಾರಾಮ್ ಕೇಸರಿ ಮತ್ತು ಆಹಾರ ಸಚಿವ ಕಲ್ಪನಾಥ ರೈ ಇಬ್ಬರನ್ನು ಸಂಪುಟದಿಂದ ತೆಗೆದು ಹಾಕುವಂತೆ ಅಂದಿನ ಪ್ರಧಾನ ಮಂತ್ರಿಯಯವರನ್ನು ಕೋರಿದ್ದರು. ಸರ್ಕಾರಕ್ಕೆ ಇಂತಹ ಅಪೇಕ್ಷಿಸದ ಸಲಹೆಗಳನ್ನು ನೀಡುವ ಮೂಲಕ ಸಿಇಸಿ ತನ್ನ ಕಾರ್ಯವ್ಯಾಪ್ತಿಯನ್ನು ಮೀರಿದೆ ಎಂಬ ಬಗ್ಗೆ ಆ ಸಮಯದಲ್ಲಿ ಚರ್ಚೆ ನಡೆದಿತ್ತು. ಏನೇ ಆದರೂ ಶೇಷನ್ ಅವರ ಕಾರ್ಯ ವೈಖರಿ ಪ್ರತಿಯೊಬ್ಬ ಪ್ರಜೆಯೂ ಬಹಳ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂತಾದ್ದಾಗಿದೆ.

Tags: Autonomy to Election CommissionBooth RiggingCentral Election CommissionChief Election CommissionerT N Seshanಕೇಂದ್ರ ಚುನಾವಣಾ ಆಯೋಗಕೇಂದ್ರ ಮುಖ್ಯ ಚುನಾವಣಾಧಿಕಾರಿಚುನಾವಣಾ ಆಯೋಗದ ಸ್ವಾಯತ್ತೆಟಿ ಎನ್ ಶೇಷನ್ಬೂತ್ ರಿಗ್ಗಿಂಗ್
Previous Post

ಅದಾನಿ ಪರ ಸುಪ್ರೀಂ ತೀರ್ಪು ಕುರಿತು ದುಶ್ಯಂತ್ ದವೆ ಪ್ರಶ್ನೆಗಳೇನು?

Next Post

ಉಪಚುನಾವಣೆ: ಮಗ್ಗುಲ ಮುಳ್ಳಾಗಿರುವ ಪಕ್ಷಾಂತರ, ಅಸಮಾಧಾನ

Related Posts

Top Story

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

by ಪ್ರತಿಧ್ವನಿ
July 30, 2025
0

ಕೇಂದ್ರ ಸರ್ಕಾರದಿಂದ ಯೂರಿಯಾ ಪೂರೈಕೆ ಕೊರತೆಯಾದ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಿತರಣೆಯಲ್ಲಿ ಸಮಸ್ಯೆಯಾಗಿದ್ದು, ಅದನ್ನು ನಿಭಾಯಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಗೊಂದಲಗಳು ಬಗೆಹರಿಯಲಿವೆ ಎಂದು ಕೃಷಿ...

Read moreDetails

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

July 30, 2025

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

July 30, 2025

Lakshmi Hebbalkar: ಗೃಹಲಕ್ಷ್ಮೀ ಯೋಜನೆಯ ಜಂಟಿ ಹೊಣೆಗಾರಿಕೆ ಗುಂಪುಗಳ ಕುರಿತು ಸಭೆ

July 30, 2025
ಚರಿತ್ರೆ-ವರ್ತಮಾನದ ತಾಕಲಾಟಗಳ ನಡುವೆ,,,,

ಚರಿತ್ರೆ-ವರ್ತಮಾನದ ತಾಕಲಾಟಗಳ ನಡುವೆ,,,,

July 30, 2025
Next Post
ಉಪಚುನಾವಣೆ: ಮಗ್ಗುಲ ಮುಳ್ಳಾಗಿರುವ ಪಕ್ಷಾಂತರ

ಉಪಚುನಾವಣೆ: ಮಗ್ಗುಲ ಮುಳ್ಳಾಗಿರುವ ಪಕ್ಷಾಂತರ, ಅಸಮಾಧಾನ

Please login to join discussion

Recent News

Top Story

ನನ್ನನ್ನು ಜೈಲಿಗೆ ಕಳಿಸಿದ್ದೆ ಆರ್.ಅಶೋಕ್‌

by ಪ್ರತಿಧ್ವನಿ
July 31, 2025
Top Story

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

by ಪ್ರತಿಧ್ವನಿ
July 30, 2025
Top Story

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

by ಪ್ರತಿಧ್ವನಿ
July 30, 2025
Top Story

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

by ಪ್ರತಿಧ್ವನಿ
July 30, 2025
Top Story

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

by ಪ್ರತಿಧ್ವನಿ
July 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನನ್ನನ್ನು ಜೈಲಿಗೆ ಕಳಿಸಿದ್ದೆ ಆರ್.ಅಶೋಕ್‌

July 31, 2025

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

July 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada