• Home
  • About Us
  • ಕರ್ನಾಟಕ
Saturday, December 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಅಂದಿಗೂ ಇಂದಿಗೂ ರಜನಿಕಾಂತ್‌ಗೆ ಅಧೈರ್ಯ ಮತ್ತು ಗೊಂದಲ್ಲದ್ದೇ ಸಮಸ್ಯೆ!

by
March 13, 2020
in ದೇಶ
0
ಅಂದಿಗೂ ಇಂದಿಗೂ ರಜನಿಕಾಂತ್‌ಗೆ ಅಧೈರ್ಯ ಮತ್ತು ಗೊಂದಲ್ಲದ್ದೇ ಸಮಸ್ಯೆ!
Share on WhatsAppShare on FacebookShare on Telegram

ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ಆರಂಭವಾಗಿದ್ದು 1995ರಲ್ಲಿ. ಅವರು ರಾಜಕೀಯ ಪಕ್ಷ ಕಟ್ಟಲು ನಿಶ್ಚಯಿಸಿದ್ದು 2017ರಲ್ಲಿ. ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಿಸಿದ್ದು ಈಗ ಅಂದರೆ 2020ರಲ್ಲಿ. (ಈಗಲೂ ಪೂರ್ಣ ಪ್ರಮಾಣದಲ್ಲಲ್ಲ). ಈ ರಾಜಕೀಯ ಪಕ್ಷದ ಗುರಿ 2021ರ ತಮಿಳುನಾಡು ವಿಧಾನಸಭಾ ಚುನಾವಣೆ. ರಜನಿಕಾಂತ್ ಅವರಿಗಿರುವ ರಾಜಕೀಯ ಸ್ಪಷ್ಟತೆ, ಬದ್ಧತೆಗಳನ್ನು ಈ ಟೈಮ್‌ಲೈನ್ ಹೇಳಿಬಿಡುತ್ತದೆ.

ADVERTISEMENT

1995ರಿಂದ 2020ರವರೆಗೆ ಅಂದರೆ ಬರೋಬ್ಬರಿ ಎರಡೂವರೆ ದಶಕ ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶ ಮತ್ತು ಪ್ರಯಾಣದ ಬಗ್ಗೆಯೇ ಚಿಂತನ-ಮಂಥನ ನಡೆಸಿದ್ದಾರೆ. ಸಿನಿಮಾದಲ್ಲಿ ಕ್ಷಣಮಾತ್ರದಲ್ಲಿ ಏನೇನೆಲ್ಲವನ್ನೂ ಮಾಡಿರುವ ರಜನಿಕಾಂತ್ ಅವರಿಗೆ ರಾಜಕಾರಣದಲ್ಲಿ 25 ವರ್ಷದ ಮಹತ್ವ ತಿಳಿಯಲಿಲ್ಲವೇ? ಇಂದಿನ ರಜನಿಕಾಂತ್‌ಗೂ 1995ರ ರಜನಿಕಾಂತ್‌ಗೂ ಅಂತರವಿಲ್ಲವೇ? ಅಂದು ಖ್ಯಾತಿಯ ಉತ್ತುಂಗದಲ್ಲಿದ್ದವರು, ಜನ ಸಿನಿತಾರೆಯರನ್ನು ಮುಡಿಗಿಟ್ಟುಕೊಂಡಿದ್ದರು. ಇಂದು ರಜನಿ ಸಿನಿಮಾಗಳಿಗೇ ಸಾಲು ಸಾಲು ಸೋಲು ಕಂಡಿವೆ. ಜನರ ಮನಸ್ಥಿತಿ ಬದಲಾಗಿರುವುದಕ್ಕೆ ಪಕ್ಕದ ಆಂಧ್ರದಲ್ಲಿ ಸಿನಿತಾರೆಯರು ಮುಗ್ಗರಿಸಿರುವುದೇ ಉದಾಹರಣೆ.

ಅಂದು ಕಾಲ ಪಕ್ವ ಆಗಿದ್ದಾಗಲೇ ತಲೈವಾ ಧೈರ್ಯ ಮಾಡಲಿಲ್ಲ. ಅವರಿಗೆ ಕಾಲ ಪಕ್ವವಾಗಿತ್ತು ಎಂಬುದಕ್ಕೆ 1996ರಲ್ಲಿ ರಜನಿಕಾಂತ್ ನೀಡಿದ್ದ ಆ ಒಂದೇ ಹೇಳಿಕೆಯೇ ಉದಾರಣೆ. ‘ಅಕಸ್ಮಾತ್ ಜಯಲಲಿತಾ (ಆಗ ಅವರು ಮುಖ್ಯಮಂತ್ರಿ) ಈ ಚುನಾವಣೆಯಲ್ಲಿ ಗೆದ್ದರೆ, ಆ ದೇವರು ಬಂದರೂ ತಮಿಳುನಾಡನ್ನು ಕಾಪಾಡಲು ಸಾಧ್ಯವಿಲ್ಲ’ ಎಂದಿದ್ದರು. ಫಲಿತಾಂಶ ಬಂದ ಬಳಿಕ ತಮಿಳುನಾಡಿನ ರಾಜಕೀಯ ಚಿತ್ರಣ ಬದಲಾಗಿತ್ತು. ಅಮ್ಮ ಎಂದೇ ಖ್ಯಾತರಾಗಿದ್ದ ಜಯಲಲಿತಾ ಅಧಿಕಾರ ಕಳೆದುಕೊಂಡಿದ್ದರು, ಕರುಣಾನಿಧಿ ದ್ರಾವಿಡ ನಾಡಿನ ಗದ್ದುಗೆ ಹಿಡಿದಿದ್ದರು. ಈ ‘ಟೆಸ್ಟ್ ಡೋಸ್’ ಬಳಿಕವೂ ರಜನಿಕಾಂತ್ ಧೈರ್ಯ ಮಾಡಲಿಲ್ಲ.

ಇಂದು ಏನಾಗಿದೆ?

2019ರ ಲೋಕಸಭಾ ಚುನಾವಣೆಗೂ ಮುನ್ನ ರಜನಿಕಾಂತ್ ಬಿಜೆಪಿ ಸೇರೇಬಿಡುತ್ತಾರೆ ಎಂಬ ಸುದ್ದಿಗಳು ಸರಿದಾಡಿದ್ದವು. ರಜನಿಕಾಂತ್ ಈ ಸುದ್ದಿಗಳನ್ನು ಅಲ್ಲಗೆಳೆದಿರಲಿಲ್ಲ. ಬದಲಿಗೆ ಈ ವದಂತಿಗಳಿಗೆ ಪೂರಕ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಚೆನ್ನೈನಲ್ಲಿರುವ ರಜನಿಕಾಂತ್ ಮನೆಗೆ ಭೇಟಿ ನೀಡಿದ್ದರು. ಆ ಮೂಲಕ ರಜನಿಕಾಂತ್ ಬಿಜೆಪಿ ಪರವಾಗಿದ್ದಾರೆ ಎಂಬ ಸಂದೇಶ ರವಾನಿಸಲಾಯಿತು. ಇಷ್ಟಲ್ಲದೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಆಡಳಿತಾರೂಢ ಎಐಡಿಎಂಕೆ ಮತ್ತು ಇನ್ನೊಂದು ಪ್ರಾದೇಶಿಕ ಪಕ್ಷ ಪಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿತು. ಆದರೂ 39 ಸೀಟುಗಳನ್ನೊಳಗೊಂಡ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅಷ್ಟೇಯಲ್ಲ, ರಜನಿಕಾಂತ್ ಪರೋಕ್ಷವಾಗಿ ಬೆಂಬಲಿಸಿದ್ದ ಮತ್ತು ಅಧಿಕಾರದಲ್ಲಿದ್ದ ಎಐಎಡಿಎಂಕೆ ಗಳಿಸಿದ್ದು ಕೇವಲ ಒಂದು ಸೀಟನ್ನು.

ಅಂದು ಸಾಧ್ಯವಾಗದೇ ಇದ್ದುದು ಇಂದು ಸಾಧ್ಯವಾಗುವುದೇ?

1995ರಿಂದ ಇಡೀ ದೇಶದಲ್ಲಿ ಬಹಳಷ್ಟು ನಾಯಕರು ಬಂದು ಬದಿಗೆ ಸರಿದಿದ್ದಾರೆ. ಆದರೆ ಮೊನ್ನೆಮೊನ್ನೆವರೆಗೂ ತಮಿಳುನಾಡಿನಲ್ಲಿ ಜಯಲಲಿತಾ ಮತ್ತು ಕರುಣಾನಿಧಿ ಅವರದೇ ನಾಯಕತ್ವ. ಇವರಿಬ್ಬರೂ ಕೂಡ ಸಿನಿಮಾ ಹಿನ್ನಲೆಯವರೇ. ಹಾಗಾಗಿ ಒಮ್ಮೆ ಜಯಲಲಿತಾ ಅವರನ್ನು ಸೋಲಿಸಲು ಕರೆಕೊಟ್ಟಿದ್ದರೂ ತಮ್ಮ ಸಿನಿಮೋದ್ಯಮದ ಸುಲಲಿತ ಪ್ರಗತಿಗಾಗಿ ರಜನಿಕಾಂತ್ ಇಬ್ಬರೊಂದಿಗೂ ಉತ್ತಮವಾದ ಬಾಂಧವ್ಯವನ್ನೇ ಇಟ್ಟುಕೊಂಡಿದ್ದರು. ಧೈರ್ಯದ ಅಭಾವದ ಜೊತೆಗೆ ಬಾಂಧವ್ಯವೂ ಕೂಡ ತಲೈವಾ ತೆಪ್ಪಗಿರುವಂತೆ ಮಾಡಿತ್ತು ಎನ್ನುತ್ತಾರೆ ತಮಿಳುನಾಡು ರಾಜಕೀಯ ವಿಶ್ಲೇಷಕರು.

1995ರಿಂದ ಶುರುವಾದ ರಾಜಕೀಯ ಪ್ರವೇಶದ ಚರ್ಚೆ ಆಗಾಗ ನಡೆಯುತ್ತಿತ್ತು. ಆಗಾಗ ಪರಿಸ್ಥಿತಿಯೂ ಅದಕ್ಕೆ ಪೂರಕವೆಂಬಂತಿತ್ತು. ಜಯಲಲಿತಾ ಮತ್ತು ಕರುಣಾನಿಧಿ ಬದಲಿಗೆ ಮತ್ತೊಬ್ಬರನ್ನೂ ತಮಿಳುನಾಡಿನ ಜನ ಅಪೇಕ್ಷೆ ಪಡಬಹುದು ಎಂಬ ಅಂದಾಜು ಕೇಳಿಬರುತ್ತಿತ್ತು. ಆದರೆ ಎಂದಿಗೂ ರಜನಿಕಾಂತ್ ಮನಸ್ಸು ಮಾಡಲೇ ಇಲ್ಲ. ಕ್ರಮೇಣ ರಜನಿಕಾಂತ್ ಅವರ ಸಿನಿ ಇಮೇಜು ಕರಗತೊಡಗಿತು. ಜಯಲಲಿತಾ-ಕರುಣಾನಿಧಿ ಕೂಡ ಇಲ್ಲವಾದರು. ಪರಿಣಾಮವಾಗಿ ರಜನಿಕಾಂತ್ ಸಾಕಷ್ಟು ಗುಣಕಾರ ಭಾಗಾಕಾರ ಹಾಕಿ 2017ರಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡುವುದಾಗಿ ಪ್ರಕಟಿಸಿದರು. ಈ ನಿಶ್ಚಯದ ಬಳಿಕವಾದರೂ ಗಂಭೀರ ಪ್ರಯತ್ನ ನಡೆಸಿ 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಹುರಿಯಾಳುಗಳನ್ನು ಅಖಾಡಕ್ಕೂಡ್ಡಿದ್ದರೆ ಇಷ್ಟೊತ್ತಿಗೆ ಒಂದು ಚಿತ್ರಣ ಸಿಗುತ್ತಿತ್ತೇನೋ. ಮುಂಬರುವ 2021ರ ವಿಧಾನಸಭಾ ಚುನಾವಣೆಗೆ ತಯಾರಿ ಆಗಿರುತ್ತಿತ್ತೇನೋ. ಆದರೆ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವುದಾಗಿ ಪ್ರಕಟಿಸಿದರೇ ವಿನಃ ಸಕ್ರೀಯ ರಾಜಕಾರಣ ಮಾಡಲಿಲ್ಲ.

ವರ್ಷಗಟ್ಟಲೆ ಅಳೆದು ತೂಗಿದ್ದು ಸಾಲದಾಗಿ ಈಗ ನಿರಂತರವಾಗಿ 6 ದಿನ ಸಭೆ ನಡೆಸಿ ಕಡೆಗೆ ‘ರಜನಿ ಮಕ್ಕಳ್ ಮಂಡ್ರಂ (ಆರ್‌ಎಂಎಂ) ಪಕ್ಷವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈಗಲಾದರೂ ಗಂಭೀರತೆಯನ್ನು, ಸ್ಪಷ್ಟತೆಯನ್ನು ನೀಡಿದ್ದಾರಾ? ಅದೂ ಇಲ್ಲ. ಇಡೀ ದೇಶ ಈಗ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ಧ ಸಮರ್ಥ ಎದುರಾಳಿ ಇಲ್ಲ ಎಂಬುದೇ ದೊಡ್ಡ ಚರ್ಚೆ ಆಯಿತು. ತೀರಾ ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲದೇ ಇದ್ದುದೇ ಸೋಲಲು ಪ್ರಮುಖ ಕಾರಣವಾಗಿತ್ತು. ತಮಿಳುನಾಡು ಕೂಡ ಹೊಸ ನಾಯಕತ್ವವನ್ನು ಎದುರು ನೋಡುತ್ತಿದೆ. ಆದರೆ ರಜನಿಕಾಂತ್ ‘ತಾನು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ’ ಎಂದು ಘೋಷಿಸಿಕೊಂಡಿದ್ದಾರೆ. 68ನೇ ವಯಸ್ಸಿನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಆಸೆಪಡುವುದು ಹುಚ್ಚುತನ ಎಂದು ಬಣ್ಣಿಸಿದ್ದಾರೆ. ಅಧಿಕಾರಕ್ಕಾಗಿ ರಾಜಕೀಯ ಪ್ರವೇಶ ಮಾಡಿಲ್ಲ ಎಂಬ ಅವಾಸ್ತವಿಕ ಮಾತನ್ನಾಡಿದ್ದಾರೆ. ವಿಧಾನಸಭೆಯಲ್ಲಿ ಕುಳಿತು ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸುವುದು ನನ್ನ ಕೆಲಸವಲ್ಲ ಎಂದು ವಿಮುಖರಾಗಿದ್ದಾರೆ.

ಇವರು ಮುಖ್ಯಮಂತ್ರಿ ಆಗುವುದಿಲ್ಲ ಎನ್ನುವುದಾದರೆ, ಮುಖ್ಯಮಂತ್ರಿ ಆಗುವುದು ಹುಚ್ಚುತನ ಎನ್ನುವುದಾದರೆ, ಅಧಿಕಾರ ಮುಖ್ಯವಲ್ಲ ಎನ್ನುವುದಾದರೆ, ಅಧಿಕಾರ ನಡೆಸುವುದು ಇವರ ಕೆಲಸ ಅಲ್ಲ ಎನ್ನುವುದಾದರೆ ಜನ ರಜನಿಕಾಂತ್‌ಗೆ ಏಕೆ ಮತ ನೀಡಬೇಕು? ಹೇಗೂ ಮುಖ್ಯಮಂತ್ರಿ ಆಗುವಷ್ಟು ಜನಬೆಂಬಲ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಹೀಗೆ ಮಾತನಾಡಿದ್ದಾರಾ? ತಮ್ಮಲ್ಲೇ ಸ್ಪಷ್ಟತೆ ಇಲ್ಲದಿದ್ದರೆ ಜನಕ್ಕೆ ಖಚಿತವಾದುದ್ದನ್ನು ಏನು ಹೇಳಲು ಸಾಧ್ಯ? ಅಂದಿಗೂ ಇಂದಿಗೂ ರಜನಿಕಾಂತ್‌ಗೆ ಅಧೈರ್ಯ ಮತ್ತು ಗೊಂದಲ್ಲದ್ದೇ ಸಮಸ್ಯೆ.

Tags: AIDMKDMKRajanikanthಎಐಎಡಿಎಂಕೆಡಿಎಂಕೆರಜನಿಕಾಂತ್‌
Previous Post

ಭೀಮಾ ಕೋರೆಗಾಂವ್ ಪ್ರಕರಣದ ಹಿಂದಿದೆ ಮಾಲ್ ವೇರ್ ಅಸ್ತ್ರದ ಪಿತೂರಿ!

Next Post

ಕರೋನಾತಂಕ: ಮುನ್ನೆಚ್ಚರಿಕೆಗಾಗಿ ರಾಜ್ಯದಲ್ಲಿ ಸರ್ಕಾರಿ ಘೋಷಿತ ಬಂದ್

Related Posts

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
0

ಬೆಂಗಳೂರು : ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು(Mekedatu) ಸಮತೋಲಿತ ಜಲಾನಯನ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಕೆಇಆರ್‌ಎಸ್(KERS) ನಿರ್ದೇಶಕರ ನೇತೃತ್ವದಲ್ಲಿ ಹೊಸ ತಂಡ ರಚಿಸಿ, ಯೋಜನೆ ಕಾರ್ಯಾನುಷ್ಠಾನಕ್ಕೆ ರಾಜ್ಯ ಸರ್ಕಾರ...

Read moreDetails
ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025

ಆರ್.ಡಿ.ಪಿ.ಆರ್ ಅಧಿಕಾರಿಗಳಿಗೆ ಹೈಕೋರ್ಟಿನಲ್ಲಿ ಐತಿಹಾಸಿಕ ನ್ಯಾಯ: ಪ್ರಿಯಾಂಕ್ ಖರ್ಗೆ

December 12, 2025
ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

December 12, 2025

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

December 12, 2025
Next Post
ಕರೋನಾತಂಕ: ಮುನ್ನೆಚ್ಚರಿಕೆಗಾಗಿ ರಾಜ್ಯದಲ್ಲಿ ಸರ್ಕಾರಿ ಘೋಷಿತ ಬಂದ್

ಕರೋನಾತಂಕ: ಮುನ್ನೆಚ್ಚರಿಕೆಗಾಗಿ ರಾಜ್ಯದಲ್ಲಿ ಸರ್ಕಾರಿ ಘೋಷಿತ ಬಂದ್

Please login to join discussion

Recent News

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’
Top Story

ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada