• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ʼದಿ ಕ್ಯಾರವಾನ್‌ʼ ಪತ್ರಕರ್ತನ ಮೇಲೆ ದೌರ್ಜನ್ಯ ನಡೆಸಿದ ದೆಹಲಿ ಪೊಲೀಸರು

by
October 17, 2020
in ದೇಶ
0
ʼದಿ ಕ್ಯಾರವಾನ್‌ʼ ಪತ್ರಕರ್ತನ ಮೇಲೆ ದೌರ್ಜನ್ಯ ನಡೆಸಿದ ದೆಹಲಿ ಪೊಲೀಸರು
Share on WhatsAppShare on FacebookShare on Telegram

ಇತ್ತೀಚಿನ ದಿನಗಳಲ್ಲಿ ಆಳುವ ಸರ್ಕಾರಗಳು ಮಾಧ್ಯಮದ ಮೇಲೆ ದೌರ್ಜನ್ಯ ನಡೆಸುವ ರೀತಿ ಮಿತಿ ಮೀರಿದೆ. ಸರ್ಕಾರಿ ಪ್ರಾಯೋಜಿತ ಗೂಂಡಾಗಲು ಇಲ್ಲಿಯವರೆಗೆ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದರೆ, ಈಗ ಜನರಿಗೆ ರಕ್ಷಣೆ ನೀಡಬೇಕಿದ್ದ ಪೊಲೀಸರೇ ಖುದ್ದಾಗಿ ಮಾಧ್ಯಮದ ಮೇಲೆ ದೌರ್ಜನ್ಯ ನಡೆಸಲು ಮುಂದಾಗಿದ್ದಾರೆ.ಇದಕ್ಕೆ ಸಾಕ್ಷಿಯಾಗಿ ದೆಹಲಿಯ ಎಸಿಪಿಯೊಬ್ಬರು ʼದ ಕ್ಯಾರವಾನ್‌ʼ ಸುದ್ದಿ ಸಂಸ್ಥೆಯ ಪತ್ರಕರ್ತನ ಮೇಲೆ ಧಾರುಣವಾಗಿ ಹಲ್ಲೆ ನಡೆಸಿದ್ದಾರೆ.

ADVERTISEMENT

ಶುಕ್ರವಾರದಂದು ಉತ್ತರ ದೆಹಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಕುರಿತು ವರದಿ ಮಾಡಲು ಹೋಗಿದ್ದ ಕ್ಯಾರವಾನ್‌ ನ ಅಹನ್‌ ಪೆನ್ಕರ್‌ ಎಂಬ ಪತ್ರಕರ್ತ ತನ್ನ ಗುರುತಿನ ಚೀಟಿಯನ್ನು ಮತ್ತೆ ಮತ್ತೆ ತೋರಿಸಿದರೂ, ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಇಷ್ಟು ಮಾತ್ರವಲ್ಲದೇ, ಪತ್ರಕರ್ತನ ಫೋನ್‌ ಕಿತ್ತುಕೊಂಡು ಅದರಲ್ಲಿದ್ದ ಎಲ್ಲಾ ಫೋಟೋ ಹಾಗೂ ವೀಡಿಯೋಗಳನ್ನು ಡಿಲೀಟ್‌ ಅಳಿಸಿಹಾಕಲಾಗಿದೆ. ಸತತ ನಾಲ್ಕುಗಂಟೆಗಳ ಕಾಲ ಪೆನ್ಕಾರ್‌ ಅವರನ್ನು ಬಂಧನದಲ್ಲಿಟ್ಟುಕೊಂಡು ಅವರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು, ದ ಕ್ಯಾರವಾನ್‌ ತನ್ನ ವರದಿಯಲ್ಲಿ ತಿಳಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದೆಹಲಿಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪೊಲೀಸರು FIR ದಾಖಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಉತ್ತರ ದೆಹಲಿಯ ʼಮಾಡೆಲ್‌ ಪೊಲೀಸ್‌ ಠಾಣೆʼಯ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾಕಾರರಲ್ಲಿ ಕೆಲವರು ಪೊಲೀಸ್‌ ಠಾಣೆಯ ಒಳ ನುಗ್ಗಿ ಪೊಲೀಸರಲ್ಲಿ ಎಫ್‌ಐಆರ್‌ ದಾಖಲಿಸುವಂತೆ ಒತ್ತಾಯಿಸುತ್ತಿದ್ದರು. ಈ ಸಂದರ್ಭದಲ್ಲಿ ಪೆನ್ಕಾರ್‌ ಅವರು, ಸಂತ್ರಸ್ಥೆಯ ಸಂಬಂಧಿಕರ ಬಳಿ ವೀಡಿಯೋ ಮಾಡುತ್ತಿದ್ದರು.

ಹತ್ತು ನಿಮಿಷಗಳ ನಂತರ ಸುಮಾರು 15 ಜನ ಪೊಲೀಸರು ಠಾಣೆಯಿಂದ ಹೊರಗೆ ಬಂದು, ಪ್ರತಿಭಟನಾಕಾರರಿಗೆ ತೆರಳುವಂತೆ ಸೂಚಿಸಿದರು. ಪ್ರತಿಭಟನಾಕಾರರು ನಿರಾಕರಿಸಿದಾಗ, ಪ್ರತಿಭಟನಾ ನಿರತ ಮಹಿಳೆಯರು ಮಕ್ಕಳು ಸೇರಿದಂತೆ ಎಲ್ಲರನ್ನೂ ವಶಕ್ಕೆ ಪಡೆಯಲು ಆರಂಭಿಸಿದರು. ಬಹಳಷ್ಟು ಜನ ಪೊಲೀಸರು ಸಮವಸ್ತ್ರದಲ್ಲೇ ಇರದ ಕಾರಣ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಪೆನ್ಕಾರ್‌ ಹೇಳಿದ್ದಾರೆ.

ಪೆನ್ಕಾರ್‌ ಅವರನ್ನು ವಶಕ್ಕೆ ಪಡೆದ ನಂತರ ಇವರೊಂದಿಗೆ ಇನ್ನೂ ನಾಲ್ಕು ಜನ ಪ್ರತಿಭಟನಾಕಾರರನ್ನು ಸೇರಿಸಿ ಠಾಣೆಯ ಒಂದು ಕೊಠಡಿಯಲ್ಲಿ ಕೂರಿಸಲಾಯಿತು. ನಂತರ ಸತತ ನಾಲ್ಕು ತಾಸುಗಳ ಕಾಲ, ಎಸಿಪಿ ಅಜಯ್‌ ಕುಮಾರ್‌ ಸೇರಿದಂತೆ ಇನ್ನೂ ಹಲವು ಪೊಲೀಸರು ಸತತವಾಗಿ ಇವರ ಮೇಲೆ ಹಲ್ಲೆ ನಡೆಸಿದ್ದಾರೆ.

“ನನ್ನ ಮೇಲೆ ನಿರಂತರವಾಗಿ ಹಲ್ಲೆ ಮಾಡಿದ್ದರಿಂದ ನಾನು ನೆಲದ ಮೇಲೆ ಬಿದ್ದಿದ್ದೆ. ಆಗಲೂ ನನ್ನ ಬೆನ್ನಿಗೆ ಒದ್ದು, ನನ್ನ ಹಿಮ್ಮಡಿಯನ್ನು ನೆಲಕ್ಕೆ ಬೂಟುಗಾಲಿನಿಂದ ಒತ್ತಿ ಹಿಡಿದಿದ್ದರು,” ಎಂದು ಪೆನ್ಕಾರ್‌ ಹೇಳಿದ್ದಾರೆ.

ಭಾರತದ ಪ್ರೆಸ್‌ ಕ್ಲಬ್‌ನಿಂದ ಖಂಡನೆ:

ಈ ವಿಚಾರವಾಗಿ ಹೇಳಿಕೆ ನೀಡಿರುವ ಪ್ರೆಸ್‌ ಕ್ಲಬ್‌ ಆಫ್‌ ಇಂಡಿಯಾ, ದೆಹಲಿ ಪೊಲೀಸರು, ದೌರ್ಜನ್ಯ ನಡೆಸುವ ವಿಚಾರದಲ್ಲಿ ಉತ್ತರ ಪ್ರದೇಶದ ಪೊಲೀಸರನ್ನೂ ಮೀರಿಸಿದ್ದಾರೆ ಎಂದು ಹೇಳಿದೆ. ಪತ್ರಕರ್ತನಿಗೆ ಸಂಪೂರ್ಣ ಬೆಂಬಲ ಘೋಷಿಸಿರುವ ಪ್ರಸ್‌ ಕ್ಲಬ್‌, ಹಲ್ಲೆ ನಡೆಸಿರುವ ಎಸಿಪಿ ಅಜಯ್‌ ಕುಮಾರ್‌ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕೇಳಿಕೊಂಡಿದ್ದಾರೆ.

“ಇಂತಹ ಬೇಜವಾಬ್ದಾರಿಯುತ ಮತ್ತು ಗೂಂಡಾ ಪ್ರವೃತ್ತಿಯ ಪೊಲೀಸರು ಖಾಕಿ ಸಮವಸ್ತ್ರ ಧರಿಸಲು ಅನರ್ಹರು. ಎಸಿಪಿ ಅಜಯ್‌ ಅವರೊಂದಿಗೆ ಅವರ ಕಿರಿಯ ಅಧಿಕಾರಿಗಳ ವಿರುದ್ದ ಕೂಡಾ ತನಿಖೆ ನಡೆಸಬೇಕು,” ಪ್ರಸ್‌ ಕ್ಲಬ್‌ ಆಫ ಇಂಡಿಯಾ ಹೇಳಿದೆ.

Tags: Delhi PoliceThe Caravanದಿ ಕ್ಯಾರವಾನ್ದೆಹಲಿ ಪೊಲೀಸರು
Previous Post

ಮುಖ್ಯಮಂತ್ರಿಗೆ ವಯಸ್ಸಾಗಿದ್ರೆ ರಾಜಿನಾಮೆ ಪಡೆದು ಮನೆಯಲ್ಲಿರಲಿ – ಸಿದ್ದರಾಮಯ್ಯ

Next Post

ಭಾರೀ ಮಳೆಗೆ ಮನೆಗೆ ನುಗ್ಗಿದ ನೀರು; ಸ್ವಚ್ಛಗೊಳಿಸುವುದರಲ್ಲಿ ಹೈರಾಣಾದ ಜನತೆ

Related Posts

Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
0

ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಂತಿಮ ಅಧಿಸೂಚನೆಯಾಗಿದ್ದು, ಈ ಬಗ್ಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಿ ರೈತರ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು...

Read moreDetails

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

July 3, 2025

Neeraj Chopra: ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಬೇಟಿ ಮಾಡಿದ ನೀರಜ್‌ ಚೋಪ್ರ..!!

July 3, 2025
Next Post
ಭಾರೀ ಮಳೆಗೆ ಮನೆಗೆ ನುಗ್ಗಿದ ನೀರು; ಸ್ವಚ್ಛಗೊಳಿಸುವುದರಲ್ಲಿ ಹೈರಾಣಾದ ಜನತೆ

ಭಾರೀ ಮಳೆಗೆ ಮನೆಗೆ ನುಗ್ಗಿದ ನೀರು; ಸ್ವಚ್ಛಗೊಳಿಸುವುದರಲ್ಲಿ ಹೈರಾಣಾದ ಜನತೆ

Please login to join discussion

Recent News

Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

by ಪ್ರತಿಧ್ವನಿ
July 4, 2025
Top Story

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

by Chetan
July 4, 2025
Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 
Top Story

Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 

by Chetan
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada