ಮಹಾಕುಂಭ ಮೇಳ (Maha kumbh 2025) ಟೀಕಿಸುವವರ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ್ (Yogi adityanath) ವಾಗ್ದಾಳಿ ನಡೆಸಿದ್ದಾರೆ.ಕೆಲವು ರಣಹದ್ದುಗಳಿಗೆ ಕುಂಭಮೇಳದಲ್ಲಿ ಶವಗಳು ಮಾತ್ರಾ ಕಾಣ್ತವೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಕುಂಭಮೇಳದಿಂದ ಸಾವಿರಾರು ಯುವಜನತೆಗೆ ಉದ್ಯೋಗ ಸಿಕ್ಕಿದೆ ಎಂದಿದ್ದಾರೆ.ಇನ್ನು ಮತ್ತೊಂದೆಡೆ ಕುಂಭಮೇಳವನ್ನು ನಿಂದಿಸುವವರನ್ನು ಬಿಹಾರ ಎಂದಿಗೂ ಕ್ಷಮಿಸಲ್ಲ ಎಂದು ಪ್ರಧಾನಿ ಮೋದಿ (Pm modi) ಕೂಡ ಬಿಹಾರದ ತಮ್ಮ ಭಾಷಣದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಮಹಾ ಕುಂಭಮೇಳದಲ್ಲಿ ಇದುವರೆಗೂ 62 ಕೋಟಿಗೂ ಅಧಿಕ ಭಕ್ತರು ತೀರ್ಥಸ್ನಾನದಲ್ಲಿ ಭಾಗಿಯಾಗಿದ್ದಾರೆ. ಇದೇ ಫೆ.26 ಬುಧವಾರದ ಶಿವರಾತ್ರಿಯಂದು ಮಹಾಕುಂಭಮೇಳಕ್ಕೆ ತೆರೆ ಬೀಳಲಿದ್ದು ಇನ್ನೆರೆಡು ದಿನ ಬಾಕಿಯಿದೆ.