ಸ್ತಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತರೆ ಹಿಂದುಳಿದ ವರ್ಗ(OBC)ಗಳಿಗೆ ಚುನಾವಣೆಯಲ್ಲಿ ಮೀಸಲಾತಿ ನೀಡುವಂತೆ ಅಲಹಬಾದ್ ಹೈಕೋರ್ಟ್ ಆದೇಶಿಸಿದ್ದ ಬೆನ್ನಲ್ಲೇ ಉತ್ತರಪ್ರದೇಶ ಸರ್ಕಾರ ಐವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದೆ.
ಬುಧವಾರ ಸಮಿತಿ ರಚಿಸುವ ಕುರಿತು ಸಂಪುಟ ಸಚಿವ ಸಭೆ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್ ನಿವೃತ್ತ ನ್ಯಾಯಮೂರ್ತಿ ರಾಮ್ ಅವತಾರ್ ಸಿಂಗ್, ಮಾಜಿ IAS ಅಧಿಕಾರಿಗಳಾದ ಚೌಬ್ ಸಿಂಗ್ ವರ್ಮಾ, ಮಹೇಂದ್ರ ಕುಮಾರ್, ಮಾಜಿ ಕಾನೂನು ಸಲಹೆಗಾರರಾದ ಸಂತೋಷ್ ಕುಮಾರ್ ವಿಶ್ವಕರ್ಮ ಹಾಗೂ ಬ್ರಿಜೇಶ್ ಕುಮಾರ್ ಸೋನಿಯವರನ್ನು ನೇಮಿಸಿತ್ತು.
ಇವರುಗಳ ನೇಮಕಕ್ೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆಯನ್ನ ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿತ್ತು.
