![](https://pratidhvani.com/wp-content/uploads/2024/04/FB_IMG_1714066087222-1024x1024.jpg)
ಬಾಲಿವುಡ್ ನ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಬಂಡವಾಳ ಹೂಡುತ್ತಾರಾ ಅಥವಾ ಇಲ್ಲವಾ ಅನ್ನೋ ಪ್ರಶ್ನೆ ಬಹಳ ದಿನದಿಂದ ರಾಕಿ ಭಾಯ್ ಫ್ಯಾನ್ಸ್ ನ ಕಾಡುತ್ತಿತ್ತು. ಈಗ ಅದಕ್ಕೆ ಸ್ಪಷ್ಟ ಉತ್ತರ ಸಿಕ್ಕಿದೆ.ರಾಮಾಯಣ’ ಸಿನಿಮಾನ ನಮಿತ್ ಮಲ್ಹೋತ್ರಾ ಅವರು ನಿರ್ಮಾಣ ಮಾಡುತ್ತಿದ್ದಾರೆ. ಅವರ ಜೊತೆಗೆ ಯಶ್ ಕೂಡ ಕೈ ಜೋಡಿಸಿದ್ದಾರೆ. ‘ವೆರೈಟಿ ಮ್ಯಾಗಜಿನ್’ಗೆ ನೀಡಿದ ಸಂದರ್ಶನದಲ್ಲಿ ಯಶ್ ಸಿನಿಮಾ ನಿರ್ಮಾಣದ ಹಿಂದಿನ ಕಾರಣ ತಿಳಿಸಿದ್ದಾರೆ. ಜೊತೆಗೆ ಅಮೆರಿಕಕ್ಕೆ ಹೋದ ಹಿಂದಿ ಕಾರಣವನ್ನೂ ವಿವರಿಸಿದ್ದಾರೆ.ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು ಎಂಬುದು ನನ್ನ ದೀರ್ಘಕಾಲದ ಆಕಾಂಕ್ಷೆ ಆಗಿತ್ತು. ಅದರ ಅನ್ವೇಷಣೆಯಲ್ಲಿ ನಾನು ಲಾಸ್ ಏಂಜಲೀಸ್ಗೆ ಹೋಗಿದ್ದೆ. ಅತ್ಯುತ್ತಮ ವಿಎಫ್ಎಕ್ಸ್ ಸ್ಟುಡಿಯೋಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಅಲ್ಲಿದ್ದೆ. ಭಾರತೀಯ ಸಿನಿಮಾದ ದೃಷ್ಟಿಯಲ್ಲಿ ನನ್ನ ಮತ್ತು ನಮಿತ್ ಆಲೋಚನೆಗಳು ಹೊಂದುತ್ತವೆ’ ಎಂದಿದ್ದಾರೆ .
![](https://pratidhvani.com/wp-content/uploads/2024/04/Ramayana-3-1.jpg)
15 ಕೆಜಿ ತೂಕ ಹೆಚ್ಚು..!
ರಾವಣನಾಗಿ ಮಿಂಚುವುದಕ್ಕೆ ರಾಕಿಭಾಯ್ ಯಶ್ ಸೈಲೆಂಟ್ ತಯಾರಿ ನಡೆಸಿದ್ದಾರೆ. ಚಿತ್ರಕ್ಕೆ ಬಂಡವಾಳ ಹೂಡುವುದರ ಜೊತೆಗೆ ನಟನೆ ಕೂಡ ಮಾಡುತ್ತಾರೆ ಎನ್ನಲಾಗಿದೆ.ಯಶ್ ಬರೋಬ್ಬರಿ 15 ಕೆಜಿ ತೂಕ ಹೆಚ್ಚಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಜೋರಾಗಿ ಎಲ್ಲೆಡೆ ಓಡಾಡ್ತಿದೆ.ಇಷ್ಟೊಂದು ತೂಕ ಏರಿದಾಗ ಹೇಗೆ ಕಾಣಬಹುದು ಎಂದು ಫ್ಯಾನ್ಸ್ ಕಾತರರಾಗಿದ್ದಾರೆ. ಅಷ್ಟೇ ಅಲ್ಲ, ರಾವಣನ ಅಭಿನಯದ ಬಳಿಕ ಕೆಜಿಎಫ್ 3ಗಾಗಿ ಮತ್ತೆ ಯಶ್ 15 ಕೆಜಿ ತೂಕ ಕಳೆದುಕೊಳ್ಳಬೇಕಿದೆ.
![](https://pratidhvani.com/wp-content/uploads/2024/04/Screenshot_20240425-225937-1024x813.jpg)
ಸದ್ಯ ಟಾಕ್ಸಿಕ್ ಸಿನಿಮಾ ಶೂಟಿಂಗ್ ನಲ್ಲಿ ಯಶ್ ಬ್ಯುಸಿ ಇದ್ದಾರೆ. ಬೆಂಗಳೂರು, ಮುಂಬೈ ಮತ್ತು ಲಂಡನ್ನಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಗೀತು ಮೋಹನ್ದಾಸ್ ಅವರ ಟಾಕ್ಸಿಕ್ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಟಾಕ್ಸಿಕ್ ನಂತರ, ಯಶ್ ರಾಮಾಯಣಕ್ಕೆ ಜಿಗಿಯುತ್ತಾರೆ ಮತ್ತು ಅದರ ನಂತರವೇ ಕೆಜಿಎಫ್ ಫ್ರ್ಯಾಂಚೈಸ್ನ ಮೂರನೇ ಕಂತಿನ ಕೆಲಸವನ್ನು ಪ್ರಾರಂಭಿಸುತ್ತಾರೆ ಎನ್ನಲಾಗಿದೆ.