ಉತ್ತರ ಪ್ರದೇಶದಲ್ಲಿ (Uttar pradesh) ತೋಳಗಳು ಮಾನವನ (Wolf attack) ಮೇಲೆ ನಡೆಸುತ್ತಿರುವ ಭೀಕರ ದಾಳಿಗೆ ಸಂಬಂಧಪಟ್ಟಂತೆ ಈಗ ಆಶ್ಚರ್ಯಕರ ಮಾಹಿತಿಗಳು ಹೊರಬಿದ್ದಿವೆ. ಈಗಾಗಲೇ ಸುಮಾರು 10ಕ್ಕೂ ಹೆಚ್ಚು ಮಂದಿಯ ಮೇಲೆ ದಾಳಿ ನಡೆಸಿ ಈ ತೋಳಗಳು ಕೊಂದು ಹಾಕಿವೆ. ಈ ದಾಳಿಗೆ ಕಾರಣ ಹಳೆ ದ್ವೇಷವಂತೆ.
ಹೌದು, ಈ ಹಿಂದೆ ನಡೆದಿರುವ ಘಟನೆಗಳು ಮತ್ತು ಇತ್ತೀಚಿನ ಕೆಲ ಘಟನೆಗಳಿಂದಾಗಿ ತೋಳಗಳು (Wolf) ಮಾನವನ ಮೇಲೆ ಕೋಪಗೊಂಡಿವ್ಯಂತೆ. ತಾವು ವಾಸಿಸುವ ಜಾಗಕ್ಕೆ ಮಾನವನ ಅತಿಕ್ರಮಣ ಮತ್ತು ತಮ್ಮ ಮರಿಗಳ ಮೇಲಿನ ದಾಳಿಯಿಂದಾಗಿ ಈ ತೋಳಗಳ ಗ್ಯಾಂಗ್ ಮನುಷ್ಯರ ಮೇಲೆ ಸಿಟ್ಟಾಗಿದ್ದು, ಇದೇ ಕಾರಣಕ್ಕೆ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿ ಕೊಲ್ಲುತ್ತಿವೆಯಂತೆ.
ಕೆಲ ದಿನಗಳ ಹಿಂದೆ, ಉತ್ತರ ಪ್ರದೇಶದ ಬೆಕ್ರೀಚ್ ನ ಗ್ರಾಮದ ಕಬ್ಬಿನ ಗದ್ದೆಯಲ್ಲಿ ತೋಳದ ಮರಿಗಳು ಕಾಣಿಸಿಕೊಂಡಿದ್ದವು. ಆದ್ರೆ ಪ್ರವಾಹ ಉಂಟಾದ ಪರಿಣಾಮ ಈ ಮರಿಗಳು ಕೊಚ್ಚಿಕೊಂಡು ಹೋಗಿವೆ. ಆದ್ರೆ ತನ್ನ ಮರಿಗಳಿಗೆ ಮನುಷ್ಯರಿಂದ ತೊಂದರೆಯಾಗಿದೆ ಎಂದು ಭಾವಿಸಿರುವ ತೋಳಗಳು ಈ ರೀತಿ ಮಾನವನ ಮೇಳೆ ಅಟ್ಯಾಕ್ (Attack) ಮಾಡುತ್ತಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿ (Forest officers) ಹೇಳಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.