• Home
  • About Us
  • ಕರ್ನಾಟಕ
Tuesday, November 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ನಾಳೆ ಕರ್ನಾಟಕ ಬಂದ್​ ಇರುತ್ತಾ..? ಇಲ್ವಾ..? ಇಲ್ಲಿದೆ ಡೀಟೈಲ್ಸ್​..

ಕೃಷ್ಣ ಮಣಿ by ಕೃಷ್ಣ ಮಣಿ
March 21, 2025
in Top Story, ಕರ್ನಾಟಕ, ರಾಜಕೀಯ
0
ನಾಳೆ ಕರ್ನಾಟಕ ಬಂದ್​ ಇರುತ್ತಾ..? ಇಲ್ವಾ..? ಇಲ್ಲಿದೆ ಡೀಟೈಲ್ಸ್​..
Share on WhatsAppShare on FacebookShare on Telegram

ನಾಳೆ ಕರ್ನಾಟಕ ಬಂದ್ ಹಿನ್ನೆಲೆ ಕನ್ನಡಪರ ಸಂಘಟನೆಗಳ ಒಕ್ಕೂಟ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದು, ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರೆಸ್​ ಕ್ಲಬ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರವೇ ಶಿವರಾಮೇಗೌಡ ಮಾತನಾಡಿದ್ದಾರೆ. ನಾಳಿನ ಬಂದ್​ಗೆ ಕೆಲವರು ನೈತಿಕ ಬೆಂಬಲ, ಸಂಪೂರ್ಣ ಬೆಂಬಲ ಅನ್ನೋ ಗೊಂದಲಗಳಿವೆ. ಅದು ಯಾವುದೂ ಇಲ್ಲ, ಯಾವ ಅಪಸ್ವರವೂ ಇಲ್ಲ. ನಾಳಿನ ಬಂದ್​ಗೆ ಎಲ್ಲರ ಸಹಕಾರ ಇದೆ. ಕನ್ನಡಿಗರನ್ನ ಎತ್ತಿಕಟ್ಟುವ ಕೆಲಸವನ್ನ ಕೆಲವರು ಮಾಡ್ತಿದ್ದಾರೆ. ಅದ್ಯಾವುದೂ ಸಕ್ಸಸ್ ಆಗಲ್ಲ, ಬಂದ್ ಯಶಸ್ವಿಯಾಗುತ್ತದೆ ಎಂದಿದ್ದಾರೆ.

ADVERTISEMENT

ಕನ್ನಡಪರ ಹೋರಾಟಗಾರ ಕೆ.ಆರ್ ಕುಮಾರ್ ಮಾತನಾಡಿ, ಕನ್ನಡ ಒಕ್ಕೂಟದಿಂದ ನಾಳೆ ಕರ್ನಾಟಕ ಬಂದ್​ಗೆ ಕರೆ ಕೊಟ್ಟಿದ್ದೇವೆ. 20 ಬೇಡಿಕೆಗಳನ್ನ ರಾಜ್ಯ ಹಾಗೂ ಕೇಂದ್ರ ಈಡೇರಿಸಬೇಕು. ಕೆಲ ಸಂಘಟನೆಗಳು ಬೆನ್ನು ತೋರಿಸುವ ಕೆಲಸ ಮಾಡ್ತಿದ್ದಾರೆ. ನಾವು ಶಾಂತಿ ರೀತಿಯಲ್ಲಿ ಬಂದ್ ಮಾಡ್ತಿದ್ದೇವೆ. ಆದ್ರೆ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕಲು ಕೆಲಸ ಮಾಡ್ತಿದ್ದಾರೆ. ಸರ್ಕಾರ ಪೊಲೀಸರ ಮೂಲಕ ಬಂದ್ ಮಾಡದಂತೆ ತಡೆಯುತ್ತಿದ್ದಾರೆ. ಕರ್ನಾಟಕ ಯೋಜನೆ ಸರಿಯಾಗಿ ಅನುಷ್ಠಾನ ಆಗಿಲ್ಲ. ಮೆಟ್ರೋ ಸೇರಿದಂತೆ ಎಲ್ಲ ದರವೂ ಏರಿಕೆ ಆಗಿದೆ. ಹೀಗಾಗಿ ಕನ್ನಡಪರ ಸಂಘಟನೆಗಳು ಬಂದ್​ಗೆ ಕರೆ ಕೊಟ್ಟಿದ್ದಾರೆ ಎಂದಿದ್ದಾರೆ.

ಕನ್ನಡಪರ ಸಂಘಟನೆಗಳಿಗೆ ಪೊಲೀಸ್ ‌ಮೂಲಕ‌ ನೋಟಿಸ್ ನೀಡ್ತಿದ್ದಾರೆ. ಪೊಲೀಸ್ ಠಾಣೆಗೆ ಬನ್ನಿ, ಬಂದ್ ಪ್ರತಿಭಟನೆ ಮಾಡಬಾರದು ಎಂದು ಬೆದರಿಸುವ ಕೆಲಸ ಮಾಡ್ತಿದ್ದಾರೆ. ಡಿ.ಕೆ ಶಿವಕುಮಾರ್ ನೀವು ಅಧಿಕಾರಕ್ಕೆ ಬರಬೇಕಾದರೆ ಹೋರಾಟ ‌ಮಾಡ್ತಿರಾ..? ವಾಟಳ್ ನಾಗರಾಜ್ ಅವ್ರು ಹೋರಾಟ ಮಾಡಿದ್ರೆ ಕಾನೂನು ಅಂತ ಹೇಳ್ತಿರಾ ಎಂದು ಪ್ರಶ್ನಿಸಿದ್ದಾರೆ. ಕನ್ನಡಿಗರು ಕೆಲಸಕ್ಕೆ ಹೋಗದೆ ನಮಗೆ ಬೆಂಬಲ ಕೊಡ್ಬೇಕು, ಯಾವುದೋ ಸಂಘಟನೆ ಬಂದ್​ನ ವಿರೋಧ ಮಾಡ್ತಿದ್ದಾರೆ. 20 ಬೇಡಿಕೆಗಳಲ್ಲಿ 10 ಬೇಡಿಕೆಗಳು ಈಡೇರಿಸಿಲಿ, ನಾಳೆ ಪೊಲೀಸರು ನಮ್ಮ ಕಾರ್ಯಕರ್ತರನ್ನ ಬೆದರಿಸುವ ಕೆಲಸ ಮಾಡಿದ್ದಾರೆ. ಆದರೆ ನಾವು ಯಾವುದಕ್ಕೂ ಹೆದರಲ್ಲ, ಬಂದ್ ಮಾಡೇ ಮಾಡ್ತೀವಿ ಎಂದಿದ್ದಾರೆ.

ಆದರ್ಶ ಆಟೋ ಚಾಲಕ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ನಾಳೆ ಆಟೋ, ಟ್ಯಾಕ್ಸಿ, ಗೂಡ್ಸ್ ಆಟೋ ಎಲ್ಲವೂ ಬಂದ್ ಆಗಲಿದೆ. ಬಂದ್​ಗೆ ಸಂಪೂರ್ಣ ಬೆಂಬಲ ಇದೆ ಎಂದಿದ್ದಾರೆ. ಆದರೆ ನಾಳೆ‌ ಕರ್ನಾಟಕ ಬಂದ್ ಬೆಂಬಲಿಸಿದ ಸಂಘಟನೆಗಳಿಗೆ ಪೊಲೀಸ್ರು ನೋಟಿಸ್ ಕೊಡುತ್ತಿದ್ದಾರೆ. ನಾಳೆ ಪ್ರತಿಭಟನೆ, ಮುಷ್ಕರ, ಸಾರ್ವಜನಿಕ ತೊಂದರೆ, ಮೆರವಣಿಗೆ ಮಾಡುವಂತಿಲ್ಲ ಎಂದು ನೋಟಿಸ್ ನೀಡಲಾಗಿದೆ. ಎಸ್.ಜೆ. ಪಾಕ್೯ ಪೊಲೀಸ್ ಠಾಣೆಯಿಂದ ನೋಟಿಸ್​ ಜಾರಿ ಆಗ್ತಿದೆ. ಒಂದ್ವೇಳೆ ಮೆರವಣಿಗೆ, ಪ್ರತಿಭಟನೆ ಮಾಡಿದ್ರೆ ಕಾನೂನು ಕ್ರಮ ಎಂದು ನೋಟಿಸ್ ಮೂಲಕ ಎಚ್ಚರಿಕೆ ನೀಡಲಾಗಿದೆ.

CM Siddaramaiah  : ವಿಪಕ್ಷ ಸದಸ್ಯರು ಸ್ಪೀಕರ್ ಪೀಠದತ್ತ ನುಗ್ಗಿ ಗಲಾಟೆ ಮಾಡಿದ್ಯಾಕೆ #pratidhvani

ಕನ್ನಡಪರ ಹೋರಾಟಗಾರ ಸಾರಾ ಗೋವಿಂದು ಮಾತನಾಡಿ, ನಮ್ಮ ಹೋರಾಟಕ್ಕೆ ಉಪಮುಖ್ಯಮಂತ್ರಿ ಬೆಂಬಲ ಇಲ್ಲ ಅಂದಿದ್ದಾರೆ. ಇವರು ಮೇಕೆದಾಟು ಹೆಸರಲ್ಲಿ ಹೋರಾಟ ಮಾಡಿದಾಗ ನಾವು ಬೆಂಬಲಿಸಿದ್ವಿ, ಕನ್ನಡಿಗರು ಇವರ ಕೈಗೆ ಅಧಿಕಾರ ಕೊಟ್ಟು ನಾಡು ಉದ್ದಾರ ಮಾಡಿ ಅಂತಂದ್ರು. ಆದರೆ ನಾವು ಕನ್ನಡಿಗರ ಪರವಾಗಿ ಬಂದ್ ಗೆ ಕರೆ ಕೊಟ್ಟಾಗ ನಮ್ಮನ್ನು ಹತ್ತಿಕ್ತಾ ಇದ್ದಾರೆ. ಪಕ್ಷಾತೀತವಾಗಿ ಇವರ ಯೋಗ್ಯತೆ ಏನು ಅಂತ ನಿನ್ನೆ ಮೊನ್ನೆ ಸದನದಲ್ಲಿ ಚರ್ಚೆ ಆಗಿದೆ. ನಿಮ್ಮಗಳ ಯೋಗ್ಯತೆ ಇಷ್ಟೇ! ಜನರ ಹಿತ ನಿಮಗೆ ಬೇಕಾಗಿಲ್ಲ. ಕೇಂದ್ರ ಸರ್ಕಾರಕ್ಕೆ ವಿಪಕ್ಷದ ನಾಯಕರು ಕನ್ನಡಿಗರ ಪರವಾಗಿ ಹೋಗಿಲ್ಲ. ಅವರವರ ಕಷ್ಟ ಸುಖಕ್ಕಾಗಿ ದೆಹಲಿಗೆ ಹೋಗಿ ಬರ್ತಾರೆ. ಹೋಟೆಲ್ ಮಾಲೀಕರು ಬೆಂಬಲ ಇಲ್ಲಾ ಎಂದಿದ್ದಾರೆ. ಅವರಿಗೆ ಕಷ್ಟ ಬಂದಾಗ ನಾವು ಹೋಗಿ ನಿಂತಿದ್ವಿ. ಈಗ ಅವರು ಕನ್ನಡದ ಪರವಾಗಿ ಇಲ್ಲ ಅಂತಿದ್ದಾರೆ ಎಂದು ಸಾರಾ ಗೋವಿಂದ ಕಿಡಿಕಾರಿದ್ದಾರೆ. ಪೊಲೀಸ್ ಅವ್ರು ಮುಂದೆ ಬಿಟ್ಟು ಕರ್ನಾಟಕ ಬಂದ್​ನ ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ. ನಿನ್ನೆ ನಿಮ್ಮ ಯೋಗ್ಯತೆ ಏನು ಸದನದಲ್ಲಿ ಗೊತ್ತಾಗ್ತಿದೆ. ಹನಿಟ್ರ್ಯಾಪ್ ಮಾಡಿದವರನ್ನ ಬಂದಿಸಿಬೇಕು, ನಮ್ಮನಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ವಾಟಾಳ್ ನಾಗರಾಜ್ ಮಾತನಾಡಿ, ಡಿಸಿಎಂ ಡಿ.ಕೆ ಶಿವಕುಮಾರ್​ ಮೇಲೆ ಗರಂ ಆಗಿದ್ದಾರೆ. ಬಂಗಾರಪ್ಪನ‌ ಕಾಲದಲ್ಲಿ ನಾನೇ ಬಂಗಾರಪ್ಪನ ಕೈಲಿ ಬಂದ್ ಮಾಡಿಸಿದ್ದೆ. ಏಯ್ ಡಿಕೆ ಕೇಳಿಲ್ಲಿ, ತಿಳ್ಕೋ ಬೇಕು ನೀನು. ಬಂಗಾರಪ್ಪನ ಕೈಲೇ ಬಂದ್ ಮಾಡಿಸಿದೋನು ನಾನು. ಅದೆಲ್ಲಾ ಸ್ವಲ್ಪ ತಿಳ್ಕೋಬೇಕು ನೀನು ಎಂದಿದ್ದಾರೆ. ಇನ್ನು ಬೆಂಗಳೂರು ಪೊಲೀಸ್ ಕಮಿಷನರ್ ನಡೆಗೆ ವಾಟಾಳ್ ಸಿಟ್ಟು ಪ್ರದರ್ಶನ ಮಾಡಿ, ನಮ್ಮ ಪೊಲೀಸ್ ಕಮಿಷನರ್ ದಯಾನಂದ ಅವರು, ದಯಾ + ಆನಂದ ಅವರು. ಅವರಿಗೆ ದಯೆಯೂ ಇಲ್ಲ ಆನಂದವೂ ಇಲ್ಲ. ನಮ್ಮ ಹೋರಾಟ ಹತ್ತಿಕ್ತಿದ್ದಾರೆ. ನಾನು ಸ್ವಲ್ಪ ಯಾಮಾರಿದೆ ನಾನೂ ಸಿಎಂ ಆಗ್ಬೇಕಿತ್ತು. ಆಗ ಇವರೆಲ್ಲಾ ನನ್ನ ಹಿಂದೆ ಹಿಂದೆ ಬರ್ತಿದ್ರು. ನಾನು ದಯಾನಂದ ಅವರನ್ನು ಭೇಟಿ ಮಾಡೋಕೆ ಹೋದೆ, ಆಗ ಅವರೊಂದು ತುದಿ ನಾನೊಂದು ತುದಿ. ಮಾತಿಲ್ಲ ಕತೆಯಿಲ್ಲ ಅವರದ್ದು. ನಾಳಿನ ಬಂದ್ ಯಶಸ್ವಿ ಆಗೇ ಆಗುತ್ತೆ. ನಾಳೆ ಟೌನ್ ಹಾಲ್ ನಿಂದ 11:30ಕ್ಕೆ ಮೆರವಣಿಗೆ ಇರುತ್ತದೆ. ನಾಳೆ ಸಂಪೂರ್ಣ ಕರ್ನಾಟಕ ಬಂದ್ ಇದ್ದೇ ಇದೆ ಎಂದಿದ್ದಾರೆ.

Tags: Karnataka bandhkarnataka bandh 2020karnataka bandh dec 31karnataka bandh feb 13karnataka bandh latest newskarnataka bandh livekarnataka bandh march 22karnataka bandh newskarnataka bandh news updateskarnataka bandh on march 22karnataka bandh today live newskarnataka bandh today newskarnataka bandh tomorrowkarnataka latest newskarnataka political developmentsKarnataka Politicsmarch 22 karnataka bandh
Previous Post

ಹನಿಟ್ರ್ಯಾಪ್​ ಬಗ್ಗೆ ಕ್ರಮಕ್ಕೆ ವಿಪಕ್ಷಗಳ ಒತ್ತಾಯ.. ಸ್ಪೀಕರ್​ ಪೀಠಕ್ಕೆ ನುಗ್ಗಿ ದಾಂಧಲೆ..

Next Post

ಬೆಂಗಳೂರಲ್ಲಿ ಹ್ಯಾಂಡ್​ ಗ್ರೆನೇಡ್​​ ಪತ್ತೆ.. ಆರೋಪಿ ಅರೆಸ್ಟ್​..

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025
Next Post
ಬೆಂಗಳೂರಲ್ಲಿ ಹ್ಯಾಂಡ್​ ಗ್ರೆನೇಡ್​​ ಪತ್ತೆ.. ಆರೋಪಿ ಅರೆಸ್ಟ್​..

ಬೆಂಗಳೂರಲ್ಲಿ ಹ್ಯಾಂಡ್​ ಗ್ರೆನೇಡ್​​ ಪತ್ತೆ.. ಆರೋಪಿ ಅರೆಸ್ಟ್​..

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada