• Home
  • About Us
  • ಕರ್ನಾಟಕ
Thursday, June 26, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸಿಪಿ ಯೋಗೇಶ್ವರ್ ಗೆಲ್ಲುತ್ತಾರೋ, ಸೋಲುತ್ತಾರೋ

ಪ್ರತಿಧ್ವನಿ by ಪ್ರತಿಧ್ವನಿ
November 15, 2024
in Top Story, ಕರ್ನಾಟಕ, ರಾಜಕೀಯ, ಶೋಧ
0
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸಿಪಿ ಯೋಗೇಶ್ವರ್ ಗೆಲ್ಲುತ್ತಾರೋ, ಸೋಲುತ್ತಾರೋ
Share on WhatsAppShare on FacebookShare on Telegram

ಎಂಬುವುದನ್ನು ಫಲಿತಾಂಶ ನಿರ್ಧಾರ ಮಾಡುತ್ತದೆ. ಆದರೆ, ಈ ಚುನಾವಣೆಯಲ್ಲಿ ಅವರು ಸೋತರೂ ಗೆದ್ದರೂ ಕ್ಷೇತ್ರದ ಒಕ್ಕಲಿಗರು ಹಾಗೂ ಮುಸ್ಲಿಮರ ನಡುವಿನ ಬಾಂಧವ್ಯ ಹಲಸುವ ರೀತಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ನೀಡಿರುವ “ಕರಿಯ” “ಖರೀದಿ” ಹೇಳಿಕೆಗಳು ಬಳಕೆಯಾಗುವುದರಲ್ಲಿ ಸಂಶಯವಿಲ್ಲ.

ADVERTISEMENT

ಮುಸ್ಲಿಮರ ಮಾಸ್‌ ಲೀಡರ್ ಆಗಲು ಹವಣಿಸುತ್ತಿರುವ ಜಮೀರ್ ಅಹ್ಮದ್ ಖಾನ್ ಅವರು ನೀಡುತ್ತಿರುವ ಹೇಳಿಕೆಗಳು ಹಾಗೂ ಅಪ್ರಬುದ್ಧ ನಡೆಗಳು ಮುಸ್ಲಿಮ್ ಸಮುದಾಯಕ್ಕೆ ನಷ್ಟ ಉಂಟು ಮಾಡಿದೆಯೇ ಹೊರತು ಲಾಭವಂತೂ ಅಲ್ಲ. ನನಗೆ ತಿಳಿದಿರುವಂತೆ ವೈಯಕ್ತಿಕವಾಗಿ ಜಮೀರ್‌ ಅವರು ಮತೀಯವಾದಿ ಅಲ್ಲದಿದ್ದರೂ ಅವರ ಚುನಾವಣಾ ರಾಜಕೀಯ ಶೈಲಿ ಸಮಸ್ಯಾತ್ಮಕವಾಗಿದೆ. ಅಭದ್ರತೆಯಲ್ಲಿ ಬಳಲುತ್ತಿರುವ ಮುಸ್ಲಿಮ್ ಸಮುದಾಯಕ್ಕೆ ಇಂತಹ ನಾಯಕತ್ವ ಅಪಾಯಕಾರಿಯಾಗಬಲ್ಲದು.

ಮುಸ್ಲಿಮರ ಇಂದಿನ ರಾಜಕೀಯ ಸ್ಥಿತಿಗತಿಯ ಬಗ್ಗೆ ಖ್ಯಾತ ಚಿಂತಕರಾದ ಯೋಗೇಂದ್ರ ಯಾದವ್ ವಿಶ್ಲೇಷಣೆ ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಈ ಲೇಖನವನ್ನು ಮುಸ್ಲಿಮರು ಓದಲೇ ಬೇಕಿದೆ. ಮುಸ್ಲಿಮರು ಬದುಕುಳಿಯಲು ಮತ ಹಾಕುವಂತಹ ಶೋಚನೀಯ ಪರಿಸ್ಥಿತಿಗೆ ತಲುಪಿದ್ದಾರೆ ಎಂಬ ವಾಸ್ತವ ಅಂಶವನ್ನು ಅವರು ತಮ್ಮ ವಿಶ್ಲೇಷಣೆಯಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಬಿಜೆಪಿ, ಕಾಂಗ್ರೆಸ್ ಹಾಗೂ ಮುಸ್ಲಿಮ್ ನಾಯಕತ್ವದ ಕೊಡುಗೆ ಬಗ್ಗೆ ವಿವರಿಸಿದ್ದಾರೆ.

D. K Suresh : ಚುನಾವಣೆ ಬಂದಾಗ ಮಾಧ್ಯಮಗಳು ಧರ್ಮದ ವಿಚಾರ ತರುವುದೇಕೆ? : ಡಿ.ಕೆ.ಸುರೇಶ್  #pratidhvani

ಮುಸ್ಲಿಮ್ ಸಮುದಾಯದ ದೊಡ್ಡ ಕೊರತೆಯೇ ರಾಜಕೀಯ ನಾಯಕತ್ವ. ಅಬ್ದುಲ್ ನಜೀರ್ ಸಾಬ್, ಜಾಫರ್ ಶರೀಫ್, ಅಜೀಝ್ ಸೇಠ್ ಅವರಂತಹ ನಾಯಕತ್ವವೂ ಇವಾಗ ಇಲ್ಲದಂತಾಗಿದೆ. ಅಬ್ದುಲ್ ನಜೀರ್ ಸಾಬ್ ಅವರನ್ನು ಇಂದಿಗೂ ನೆನಪಿಸಿಕೊಳ್ಳುವುದು ಅವರು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಗೆ ಕೊಟ್ಟ ಕೊಡುಗೆಗಳಿಂದ. ಅಧಿಕಾರ ವಿಕೇಂದ್ರೀಕರಣ ಹಾಗೂ ಪಂಚಾಯತ್ ರಾಜ್ ಪುನಶ್ಚೇತನಕ್ಕೆ ಅವರು ಹೊಂದಿದ್ದ ಬದ್ಧತೆ, ನಿಲುವು ಇತಿಹಾಸದಲ್ಲಿ ದಾಖಲೆಯಾಗಿದೆ. ಎಲ್ಲಾ ಸಮುದಾಯದ ಜನರು ನೆನಪಿನಲ್ಲಿ ಇಡುವಂತಹ ಶುದ್ಧ ಕುಡಿಯುವ ನೀರು, ಜನತಾ ವಸತಿ ಯೋಜನೆಗಳು, ಅಂತ್ಯೋದಯ ಕಾರ್ಯಕ್ರಮಗಳು ಅವರ ಕಾಲದಲ್ಲಿ ಅನುಷ್ಠಾನಗೊಂಡಿದ್ದವು. ಅದಕ್ಕಾಗಿಯೇ ಅವರು ನೀರ್‌ ಸಾಬ್ ಆದರು.

ಆದರೆ ಜಮೀರ್ ಅವರಂತಹ ನಾಯಕತ್ವ ಇಂತಹ ಚಿಲ್ಲರೆ ಹೇಳಿಕೆಗಳು, ಗಂಭೀರತೆ ಇಲ್ಲದ ಹಾಗೂ ಸಮುದಾಯಕ್ಕೆ ಮತ್ತಷ್ಟು ಹಾನಿ ಉಂಟು ಮಾಡುವಂತಹ ನಡವಳಿಕೆಗಳಿಂದಲೇ ಗುರುತಿಸಿಕೊಳ್ಳುತ್ತಿದೆ. ಇದನ್ನು ಮುಂದಿಟ್ಟುಕೊಂಡು ಮುಸ್ಲಿಮ್ ಸಮುದಾಯದ ಮೇಲೆ ಮತ್ತಷ್ಟು ಜರಿಯಲು ಕಾತುರರಾಗಿರುವವರಿಗೂ ಜಮೀರ್ ಪದೇ ಪದೇ ಆಹಾರವನ್ನು ಒದಗಿಸುತ್ತಿದ್ದಾರೆ.

ಯೋಗೇಂದ್ರ ಯಾದವ್ ಅವರು ತಮ್ಮ ಲೇಖನದಲ್ಲಿ ಅವರ ಸಹೋದ್ಯೋಗಿ ಹಿಲಾಲ್ ಅಹ್ಮದ್ ಅವರ ಚಿಂತನೆ, ನಿಲುವುಗಳ ಬಗ್ಗೆ ಉಲ್ಲೇಖಿಸುತ್ತಾರೆ. ಮುಸ್ಲಿಮರ ಇಂದಿನ ಸವಾಲುಗಳನ್ನು ಎದುರಿಸಲು ಹಿಲಾಲ್ ಅಹ್ಮದ್ ಕಂಡುಕೊಂಡ ದಾರಿಗೆ ಸಂಕೇತ ಎಂಬಂತೆ ಅವರ ಕಚೇರಿಯಲ್ಲಿದ್ದ ಪವಿತ್ರ ಕಾಬಾ, ಮಹಾತ್ಮ ಗಾಂಧಿ ಮತ್ತು ಚೆ ಗುವೆರಾ ಚಿತ್ರಗಳ ಬಗ್ಗೆಯೂ ಗಮನ ಸೆಳೆಯುತ್ತಾರೆ. ಇದು ನಿಜಕ್ಕೂ ಚಿಂತನಾರ್ಹ ವಿಚಾರ.

ಹೀಗಾಗಿ, ಧರ್ಮಾಚರಣೆಯ ಜೊತೆ ಜೊತೆಗೆ ಮಹಾತ್ಮ ಗಾಂಧಿ, ಅಂಬೇಡ್ಕರ್ ಆದರ್ಶ, ಆಶಯಗಳನ್ನು ಮುಂದಿಟ್ಟುಕೊಂಡು ಜಾತ್ಯತೀತ ರಾಜಕಾರಣದ ನೆಲೆಯನ್ನು ಮುಸ್ಲಿಮರು ಕಂಡು ಕೊಳ್ಳಬೇಕಾಗಿರುವುದು ಇಂದಿನ ಅಗತ್ಯತೆ.

  • ಇರ್ಷಾದ್ ಉಪ್ಪಿನಂಗಡಿ
Tags: BJPchannapatnachannapatna by electionchannapatna by election 2024channapatna by election candidatechannapatna by election datechannapatna by election meetingchannapatna by election newschannapatna by election votingchannapatna by polls votingchannapatna by- electionchannapatna byelectionchannapatna electionchannapatna election 2024channapatna re electionCongress Partykarnataka by election 2024tv9 kannada by election newsಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಚನ್ನಪಟ್ಟಣ ಫಲಿತಾಂಶದ ಬಗ್ಗೆ DK ಸುರೇಶ್ ತುರ್ತು ಸುದ್ದಿಗೋಷ್ಠಿ

Next Post

ರಾತ್ರಿ ಪಾರ್ಟಿ ಮುಗಿಸಿ ಕಾರಿನಲ್ಲಿ ಹೊರಟ ವಿಧ್ಯಾರ್ಥಿಗಳು ಸೇರಿದ್ದು ಮಸಣಕ್ಕೆ -ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ 6 ಮಂದಿಯ ದೇಹ

Related Posts

Top Story

Anil Shetty: ಸ್ಟಾರ್ಟಪ್ ಉದ್ಯಮಿ ಹಾಗೂ ಯುವರಾಜಕಾರಣಿ ಅನಿಲ್ ಶೆಟ್ಟಿ ನಾಯಕ ನಟನಾಗಿ ಚಲನ ಚಿತ್ರರಂಗಕ್ಕೆ ಪಾದಾರ್ಪಣೆ

by Pratidhvani
June 26, 2025
0

ವಾಣಿಜ್ಯೋದ್ಯಮದಲ್ಲಿ ಹಲವಾರು ಯಶಸ್ವಿ ಯೋಜನೆಗಳನ್ನು ರೂಪಿಸಿರುವಂತಹ ಅನಿಲ್ ಶೆಟ್ಟಿ (Anil Shetty) ರವರು ಈಗ ಚಿತ್ರೋದ್ಯಮದಲ್ಲೂ ತಮ್ಮ ಛಾಪನ್ನು ಮೂಡಿಸಲು ಮುಂದಾಗಿದ್ದಾರೆ. ಸ್ಟಾರ್ಟಪ್ ಉದ್ಯಮಿ ಆಗಿರುವುದರ ಜೊತೆಗೆ...

Read moreDetails

Tiger: ಮಲೆ ಮಹದೇಶ್ವರ ವನ್ಯಧಾಮದಲ್ಲಿ ತಾಯಿ ಹುಲಿ ಸೇರಿ ಮೂರು ಹುಲಿ ಮರಿಗಳ ಅಸಹಜ ಸಾವು ತನಿಖೆಗೆ ಸಚಿವರ ಆದೇಶ

June 26, 2025

Santosh Lad: ಅನ್ನದಾತನಿಗೆ ಜೋಡಿ ಎತ್ತು ಕೊಡಿಸಿ ಮಾನವೀಯತೆ ಮೆರೆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

June 26, 2025

Tamil Hero Surya: ತಮಿಳು ನಟ ಸೂರ್ಯ ಹೊಸ ಸಿನಿಮಾ ʼಕರುಪ್ಪುʼ..ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಾಣದಲ್ಲಿ ಚಿತ್ರ

June 26, 2025

Shruthi Hariharan: ಜುಲೈ 11 ರಂದು ರಾಜ್ಯದಾದ್ಯಂತ ತೆರೆಕಾಣುತ್ತಿದೆ ಶೃತಿ ಹರಿಹರನ್ ಅಭಿನಯದ ದೂರ ತೀರ ಯಾನ ಸಿನೆಮಾ. .

June 26, 2025
Next Post

ರಾತ್ರಿ ಪಾರ್ಟಿ ಮುಗಿಸಿ ಕಾರಿನಲ್ಲಿ ಹೊರಟ ವಿಧ್ಯಾರ್ಥಿಗಳು ಸೇರಿದ್ದು ಮಸಣಕ್ಕೆ -ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ 6 ಮಂದಿಯ ದೇಹ

Recent News

Top Story

Anil Shetty: ಸ್ಟಾರ್ಟಪ್ ಉದ್ಯಮಿ ಹಾಗೂ ಯುವರಾಜಕಾರಣಿ ಅನಿಲ್ ಶೆಟ್ಟಿ ನಾಯಕ ನಟನಾಗಿ ಚಲನ ಚಿತ್ರರಂಗಕ್ಕೆ ಪಾದಾರ್ಪಣೆ

by Pratidhvani
June 26, 2025
Top Story

Tiger: ಮಲೆ ಮಹದೇಶ್ವರ ವನ್ಯಧಾಮದಲ್ಲಿ ತಾಯಿ ಹುಲಿ ಸೇರಿ ಮೂರು ಹುಲಿ ಮರಿಗಳ ಅಸಹಜ ಸಾವು ತನಿಖೆಗೆ ಸಚಿವರ ಆದೇಶ

by ಪ್ರತಿಧ್ವನಿ
June 26, 2025
Top Story

Santosh Lad: ಅನ್ನದಾತನಿಗೆ ಜೋಡಿ ಎತ್ತು ಕೊಡಿಸಿ ಮಾನವೀಯತೆ ಮೆರೆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
June 26, 2025
Top Story

Tamil Hero Surya: ತಮಿಳು ನಟ ಸೂರ್ಯ ಹೊಸ ಸಿನಿಮಾ ʼಕರುಪ್ಪುʼ..ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಾಣದಲ್ಲಿ ಚಿತ್ರ

by ಪ್ರತಿಧ್ವನಿ
June 26, 2025
Top Story

Shruthi Hariharan: ಜುಲೈ 11 ರಂದು ರಾಜ್ಯದಾದ್ಯಂತ ತೆರೆಕಾಣುತ್ತಿದೆ ಶೃತಿ ಹರಿಹರನ್ ಅಭಿನಯದ ದೂರ ತೀರ ಯಾನ ಸಿನೆಮಾ. .

by ಪ್ರತಿಧ್ವನಿ
June 26, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Anil Shetty: ಸ್ಟಾರ್ಟಪ್ ಉದ್ಯಮಿ ಹಾಗೂ ಯುವರಾಜಕಾರಣಿ ಅನಿಲ್ ಶೆಟ್ಟಿ ನಾಯಕ ನಟನಾಗಿ ಚಲನ ಚಿತ್ರರಂಗಕ್ಕೆ ಪಾದಾರ್ಪಣೆ

June 26, 2025

Tiger: ಮಲೆ ಮಹದೇಶ್ವರ ವನ್ಯಧಾಮದಲ್ಲಿ ತಾಯಿ ಹುಲಿ ಸೇರಿ ಮೂರು ಹುಲಿ ಮರಿಗಳ ಅಸಹಜ ಸಾವು ತನಿಖೆಗೆ ಸಚಿವರ ಆದೇಶ

June 26, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada