ಬೆಂಗಳೂರು: ರಾಜಕೀಯದಲ್ಲಿ ದಿನ ವಾದ, ಪ್ರತಿವಾದ ಇರುತ್ತೆ ಆದ್ರೆ ಧರ್ಮಾಧಾರಿತ ರಾಜಕೀಯ ಬಿಟ್ಟು ಬಿಡಿ. ಅಭಿವೃದ್ಧಿ ಕಾರ್ಯಗಳ ಮೇಲೆ ಚರ್ಚೆ ಮಾಡೋಣ ಬನ್ನಿ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಆಡಳಿತ ಪಕ್ಷಕ್ಕೆ ಸವಾಲೆಸೆದಿದ್ದಾರೆ.
ಪ್ರತಿಸಲ ತಗೋ ಆದ್ರೆ ಟಿಪ್ಪು ಸುಲ್ತಾನ್-ಅಬ್ಬಕ್ಕ, ಗಾಂಧಿ-ಗೋಡ್ಸೆ ಚರ್ಚೆನೇ ಮಾಡ್ತೀರ ಬಿಟ್ಟು ಬಿಡಿ . ಸಚಿವರೊಬ್ಬರು ಸಿದ್ದರಾಮಯ್ಯ ಅವರನ್ನು ಮುಗಿಸಿ ಬಿಡಿ ಎಂದು ಹೇಳುತ್ತಾರೆ. ನಾನು ಇದಕ್ಕೆಲ್ಲ ಹೇದರಲ್ಲ. ಹತಾಶೆಯಿಂದ ಬಿಜೆಪಿಯವರು ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ ಎಂದು ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಈ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಧ್ಯ ಪ್ರವೇಶಿಸುತ್ತಿದ್ದಂತೆ, ಅಶ್ವಥ್ ನಾರಾಯಣ್ ನೀಡಿರುವುದು ಪ್ರಚೋದನೆಯ ಹೇಳಿಲೆ ಅಲ್ಲವಾ? ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬಹುದಾಗಿತ್ತು. ನಿಮ್ಮ ಗೃಹ ಇಲಾಖೆ ಸರಿಯಾದ ಕ್ರಮದಲ್ಲಿ ಕಾರ್ಯ ನಿರ್ವಹಿಸುತ್ತಾ ಇಲ್ಲ. ನೀವೊಬ್ಬರು ಒಳ್ಳೆಯ ಮನುಷ್ಯ ಆಗಿರಬಹುದು. ಆದರೆ ಇಲಾಖೆ ನಡೆಸಲು ಅಸಮರ್ಥರಾಗಿದ್ದೀರಿ. ಒಂದು ವೇಳೆ ನೀವು ಸಮರ್ಥರೇ ಆಗಿದ್ದಲ್ಲಿ ಅಶ್ವಥ್ ನಾರಾಯಣ್ ಮೇಲೆ ಮೊದಲು ಪ್ರಕರಣ ದಾಖಲಿಸಿ ಎಂದು ಸಿದ್ದರಾಮಯ್ಯ ಸವಾಲೆಸೆದರು.