
ನಟ ದರ್ಶನ್ಗೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನಕ್ಕೆ ಒಳಗಾಗಿ 127 ದಿನಗಳು ಕಳೆದಿವೆ. ಅಂದರೆ ಬರೋಬ್ಬರಿ 4 ತಿಂಗಳು ಮುಕ್ತಾಯ ಆಗಿದೆ. ಈ ನಡುವೆ ಸೆಷನ್ಸ್ ಕೋರ್ಟ್ನಲ್ಲಿ ದರ್ಶನ್ ಹಾಗು ಪವಿತ್ರಾಗೌಡ ಜಾಮೀನು ಅರ್ಜಿ ವಜಾ ಆಗಿದೆ. ಚಾರ್ಜ್ಶೀಟ್ ಸಲ್ಲಿಕೆ ಬಳಿಕ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ದರ್ಶನ್ ಅಂಡ್ ಗ್ಯಾಂಗ್ ಮತ್ತೆ ನಿರಾಸೆಯ ಕಾರ್ಮೋಡದಲ್ಲಿ ಸಿಲುಕಿಕೊಂಡಿದೆ. ದರ್ಶನ್ ರಿಲೀಸ್ ಆಗ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೂ ದರ್ಶನ್ ಜಾಮೀನು ಅರ್ಜಿ ವಜಾ ಆಗಿದ್ದು ಅರಗಿಸಿಕೊಳ್ಳಲಾರದ ವಿಚಾರವಾಗಿದೆ. ಆದರೆ ಮುಂದಿನ ದಾರಿ ಯಾವುದು..? ದರ್ಶನ್ಗೆ ಜಾಮೀನು ಸಿಗುವುದೇ ಇಲ್ಲವೇ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಜಾಮೀಣು ಅರ್ಜಿ ವಜಾ ವಿಚಾರ ಮೊದಲೇ ಗೊತ್ತಿತ್ತಾ..?
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಹಾಗು ಪವಿತ್ರಾಗೌಡ ನೇರಾನೇರ ಸಂಬಂಧ ಇರುವ ಕಾರಣಕ್ಕೆ ಜಾಮೀನು ಅರ್ಜಿ ತಿರಸ್ಕಾರ ಆಗಿದೆ. ಅಂದರೆ ದರ್ಶನ್ ಪರ ವಕೀಲರು ಹಾಗು ಆಪ್ತ ಬಳಗಕ್ಕೆ ಈ ವಿಚಾರ ಮೊದಲೇ ತಿಳಿದಿರುತ್ತದೆ. ಜೀವಾವಧಿ ಶಿಕ್ಷೆ ವಿಧಿಸಬಹುದಾದ ಆರೋಪಗಳು ಇರುವುದರಿಂದ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿಲ್ಲ. ಅಲ್ಲದೆ ಸೆಷನ್ಸ್ ಕೋರ್ಟ್ಗೆ ಹೋಗದೆ ನೇರವಾಗಿ ಹೈಕೋರ್ಟ್ನಲ್ಲಿ ಜಾಮೀನು ಕೇಳಿದರೂ ಕೋರ್ಟ್ ಪರಿಗಣಿಸುವುದಿಲ್ಲ. ಹೀಗಾಗಿ ಸೆಷನ್ಸ್ ಕೋರ್ಟ್ನಲ್ಲಿ ಅರ್ಜಿ ವಜಾ ಆಗುವುದೇ ಮುಖ್ಯವಾಗಿತ್ತು. ಇದೀಗ ಸೆಷನ್ಸ್ ಕೋರ್ಟ್ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿ, ಜಾಮೀನು ಕೋಡುವಂತೆ ಮನವಿ ಮಾಡುವುದಕ್ಕೆ ಬಾಗಿಲು ತೆರೆದುಕೊಂಡಿದೆ.
ದರ್ಶನ್ಗೆ ಹೈಕೋರ್ಟ್ನಲ್ಲಿ ಬೇಲ್ ಸಿಕ್ಕೇ ಸಿಗುತ್ತಾ..?

ಹೈಕೋರ್ಟ್ ಹಾಗು ಸುಪ್ರೀಂಕೋರ್ಟ್ ತನ್ನದೇ ಆದ ಅಧಿಕಾರ ಇರುತ್ತದೆ. ಕೇವಲ ಕೇಸ್ ಬಗ್ಗೆ ಮಾತ್ರ ನೋಡದೆ ಅದರಿಂದ ಆಚೆಗೆ ಇರುವ ವಿಚಾರಗಳನ್ನೂ ಪರಿಗಣಿಸುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಹೈಕೋರ್ಟ್ನಲ್ಲಿ ಬೇಲ್ ಸಿಗುವ ನಿರೀಕ್ಷೆಯಿದೆ. ದರ್ಶನ್ಗೆ ಈಗಾಗಲೇ ಬೆನ್ನು ನೋವು ಇರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗ್ತಿದ್ದು, ಆರೋಗ್ಯ ಸಮಸ್ಯೆಯನ್ನೇ ಪ್ರಮುಖ ಅಂಶವಾಗಿ ವಕೀಲರು ವಾದ ಮಾಡುವ ಸಾಧ್ಯತೆಗಳಿವೆ. ಸೆಷನ್ಸ್ ಕೋರ್ಟ್ಗೆ ಕೆಲವು ಇತಿಮಿತಿಗಳು ಇರುವ ಕಾರಣಕ್ಕೆ ಆರೋಗ್ಯ ಸಮಸ್ಯೆ ಸೇರಿದಂತೆ ಬೇರೆ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಹೈಕೋರ್ಟ್ ಹಾಗು ಸುಪ್ರೀಂಕೋರ್ಟ್ ವ್ಯಾಪ್ತಿ ವಿಶಾಲವಾಗಿದ್ದು, ಕೇಸ್ ಹಾಗು ಅದರಿಂದಾಚೆಗಿನ ವಿಚಾರಗಳು ಚರ್ಚೆಗೆ ಬರಲಿವೆ.
ಅನಾರೋಗ್ಯ ಕಾರಣಕ್ಕಾಗಿ ಬೇಲ್ ಸಿಗುವ ನಿರೀಕ್ಷೆ..

ದರ್ಶನ್ ಸಾಮಾನ್ಯ ಕೇಸ್ನಲ್ಲಿ ಬಂಧಿಯಾಗಿಲ್ಲ. ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ದರ್ಶನ್ ಪಾಲಿಗೆ ಆರೋಗ್ಯ ಸಮಸ್ಯೆಯೇ ದೊಡ್ಡ ವರವಾಗುವ ಎಲ್ಲಾ ಸಾಧ್ಯತೆಗಳು ಇವೆ. ಕೊಲೆ ಮಾಡಿದ ಆರೋಪ ಅಷ್ಟೆ. ಆರೋಪ ಸಾಬೀತಾಗಿಲ್ಲ. ಹಾಗೆ ಅಂದ ಮಾತ್ರಕ್ಕೆ ಆರೋಪಿ ಆದವನು ಅನಾರೋಗ್ಯಕ್ಕೆ ಒಳಗಾದರೂ ಚಿಕಿತ್ಸೆ ಪಡೆಯದೆ ಸಂಕಷ್ಟ ಅನುಭವಿಸಬೇಕು ಎನ್ನುವುದು ಯಾವ ಕಾನೂನಿನಲ್ಲೂ ಇಲ್ಲ. ಜೈಲು ಆಸ್ಪತ್ರೆ ಹಾಗು ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲಿಗೆ ಚಿಕಿತ್ಸೆ ಪಡೆಯಬೇಕು. ಆದರೆ ದರ್ಶನ್ ಓರ್ವ ಸಿನಿಮಾ ನಟ, ತನ್ನದೇ ಆದ ವೈದ್ಯರಿಂದ ಚಿಕಿತ್ಸೆ ಪಡೆಯುವುದು ತಪ್ಪೇನು ಅಲ್ಲ. ಈಗಾಗಲೇ ವಿಚಾರಣೆ ಪೂರ್ಣಗೊಂಡಿರುವ ಕಾರಣಕ್ಕೆ ಜಾಮೀನು ಕೊಟ್ಟರೆ ಚಿಕಿತ್ಸೆ ಪಡೆಯಲು ಸಹಕಾರಿ ಆಗಲಿದೆ ಎನ್ನುವ ಅಂಶದ ಆಧಾರದಲ್ಲೇ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಹೆಚ್ಚು. ಇದಕ್ಕೆ ಬೇಕಾದ ಸಕಲ ತಯಾರಿಗಳು ನಡೆದಿವೆ ಎನ್ನುವುದು ಸುಳ್ಳೇನು ಅಲ್ಲ. ಒಂದು ವೇಳೆ ಹೈಕೋರ್ಟ್ ಪರಿಗಣಿಸದಿದ್ದರೂ ಸುಪ್ರೀಂಕೋರ್ಟ್ ಪರಿಗಣಿಸುತ್ತದೆ. ಹೀಗಾಗಿ ಕೆಲವೇ ತಿಂಗಳಲ್ಲಿ ದರ್ಶನ್ಗೆ ಜಾಮೀನು ಸಿಗುವುದು ನಿಶ್ಚಿತ.