• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬಿಜೆಪಿ ನಾಯಕರಿಗೆ ಯಾಕೆ ಕನ್ನಡಿಗರನ್ನು ಕಂಡರೆ ಕೆಂಡದಂತಹ ಕೋಪ..?

ಕೃಷ್ಣ ಮಣಿ by ಕೃಷ್ಣ ಮಣಿ
April 18, 2023
in Top Story, ಅಂಕಣ
0
ಬಿಜೆಪಿ ನಾಯಕರಿಗೆ ಯಾಕೆ ಕನ್ನಡಿಗರನ್ನು ಕಂಡರೆ ಕೆಂಡದಂತಹ ಕೋಪ..?
Share on WhatsAppShare on FacebookShare on Telegram

ಬೆಂಗಳೂರು ಸಹಿತ ರಾಜ್ಯದ ಬೇರೆ ಬೇರೆ ನಗರಗಳಲ್ಲಿ ಬೀದಿ ನಾಯಿಗಳ ಹಾವಳಿ ಅಧಿಕವಾಗಿದೆ. ಕಳೆದ ಕೆಲವು ತಿಂಗಳ ಹಿಂದಷ್ಟೇ ಮಗುವನ್ನು ಬೀದಿ ನಾಯಿಗಳ ಹಿಂಡು ಅಟ್ಟಾಡಿಸಿ ಕೊಂದು ಹಾಕಿದ್ದ ಘಟನೆ ನಡೆದಿತ್ತು.. ಬೆಂಗಳೂರಿನಲ್ಲಿ ಸೈಕಲ್​ ಸವಾರಿ, ಬೈಕ್​ ಸವಾರರನ್ನು ನಾಯಿಗಳು ಅಟ್ಟಾಡಿಸಿಕೊಂಡು ಬರುವ ದೃಶ್ಯಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್​ ಆಗುತ್ತಲೇ ಇವೆ. ನಾಯಿಗಳ ಸಮಸ್ಯೆಯನ್ನು ನಿಯಂತ್ರಣ ಮಾಡದ ಬಿಬಿಎಂಪಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗೆ ಬಿಜೆಪಿ ಸಂಸದರು ಆಗಿರುವ ಮನೇಕಾ ಗಾಂಧಿ ಬಿಬಿಎಂಪಿ ಅಧಿಕಾರಿಗೆ ಬಾಯಿಗೆ ಬಂದ ರೀತಿ ಮಾತನಾಡಿದ್ದಾರೆ. ಇಡೀ ಜಗತ್ತೇ ನನ್ನ ಕೈಲಿದೆ ಎನ್ನುವ ಹಾಗೆ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸಿದ್ದಾರೆ.

ADVERTISEMENT

ಮನೇಕಾ ಗಾಂಧಿ ಜಂಭದ ಮಾತಿಗೆ ಕಾರಣ ಏನು..?

ಬೆಂಗಳೂರಿನ ಚಂದ್ರ ಲೇಔಟ್ ಬಳಿಯ ಅತ್ತಿಗುಪ್ಪೆ ವಾರ್ಡ್​ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಉಪಟಳ ನೀಡುತ್ತಿವೆ. ಶ್ವಾನಗಳ ನಿಯಂತ್ರಣ ಮಾಡುವಂತೆ ಬಿಬಿಎಂಪಿ ಪಶುಸಂಗೋಪನಾ ಇಲಾಖೆಗೆ ಮನವಿ ಮಾಡಿದ್ದರು. ವಿಜಯನಗರ ಶಾಸಕ ಕೃಷ್ಣಪ್ಪ ಸ್ವತಃ ಕರೆಮಾಡಿ, ಶ್ವಾನಗಳ ಉಪಟಳಕ್ಕೆ ಬ್ರೇಕ್ ಹಾಕುವಂತೆ ಸೂಚನೆ ಕೊಟ್ಟಿದ್ರು‌‌‌‌. ಸಾರ್ವಜನಿಕರ ಮನವಿ ಹಾಗು ವಿಜಯ ನಗರ ಶಾಸಕ ಕೃಷ್ಣಪ್ಪ ಸೂಚನೆ ಮೇರೆಗೆ ಪಶುಸಂಗೋಪಾ ಇಲಾಖೆ ಇನ್ಸ್​ಪೆಕ್ಟರ್​​ ನಾಯಿಗಳನ್ನು ಹಿಡಿಯುವುದಕ್ಕೆ ಕಳುಹಿಸಿದ್ರು. ಶ್ವಾನಗಳನ್ನ ಹಿಡಿಯಲು ಮುಂದಾಗ್ತಿದ್ದ ಹಾಗೆ ಇನ್ಸ್​ಪೆಕ್ಟರ್​ ಹನುಮಂತ ರಾಜುವಿಗೆ ಶಾಕ್​ ಆಗಿದೆ. ದಿಲ್ಲಿಯಿಂದ ಕರೆ ಮಾಡಿದ ಸುಲ್ತಾನ್​ಪುರ ಸಂಸದೆ ಮನೇಕಾ ಗಾಂಧಿ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ.

ಕನ್ನಡಿಗ ಅಧಿಕಾರಿ ಮೇಲೆ ಬಿಜೆಪಿ ಸಂಸದೆ ಎಗರಾಡಿದ್ದು ಯಾಕೆ..?

ಉತ್ತರ ಪ್ರದೇಶದ ಸುಲ್ತಾನ್​​ಪುರದ ಸಂಸದೆ ಆಗಿರುವ ಮನೇಕಾ ಗಾಂಧಿ, ಪ್ರಾಣಿ ಹಕ್ಕುಗಳಾ ರಕ್ಷಣಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಬಿಬಿಎಂಪಿಯಲ್ಲಿ ಪಶುವೈದ್ಯರಾಗಿ ಕೆಲಸ ಮಾಡುವ ಹನುಮಂತರಾಜುವಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಕನ್ನಡದಲ್ಲಿ ಉತ್ತರ ಕೊಡಲು ಮುಂದಾದ ಹನುಮಂತರಾಜುಗೆ ಅವಕಾಶವನ್ನೂ ನೀಡದೆ ಬೈಯ್ದಿದ್ದಾರೆ. ನಾಯಿಗಳನ್ನು ಹಿಡಿಯಲು ವ್ಯಾನ್​ ಕಳಿಸಿದ್ದು ಯಾಕೆ..? ನೀನು ಹುಚ್ಚನಾ..? ನಿನಗೆ ಕೆಲಸ ಬೇಕೋ..? ಬೇಡ್ವೋ..? ನಿನ್ನನ್ನು ಕೆಲಸದಿಂದ ತೆಗೆದು ಹಾಕಬೇಕಾ..? ನಿನಗೇನು ಬೇಕು..? ಲಿಖಿತವಾಗಿ ಯಾರಾದರೂ ದೂರು ನೀಡಿದ್ದಾರಾ..? ನೀನು ದುಡ್ಡು ತೆಗೆದುಕೊಂಡಿದ್ಯಾ..? ನೀನು ಹೀಗೆ ಆದರೆ ಕೆಲಸ ಕಳೆದುಕೊಳ್ಳೋದು ಗ್ಯಾರಂಟಿ. ಅರ್ಥ ಆಯ್ತಾ..? ಇನ್ಮುಂದೆ ಎಲ್ಲಿಗೂ ವ್ಯಾನ್​ ಕಳಿಸಬಾರದು. ಅರ್ಥ ಆಯ್ತಾ..? 2021ರಲ್ಲಿ ಸ್ವತಃ ಸುಲ್ತಾನ್​ಪುರದಲ್ಲೂ ಪಶುವೈದ್ಯಾಧಿಕಾರಿಗೆ ಬೈಯ್ದಿದ್ದ ಪರಿಣಾಮ ಪ್ರತಿಭಟನೆಯೂ ನಡೆದಿತ್ತು. ಇದೀಗ ಬೆಂಗಳೂರಿನ ಅಧಿಕಾರಿಗೆ ಬೈಯ್ದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಸಂಸದರಿಗೆ ಇಷ್ಟೊಂದು ಅಧಿಕಾರ ಇರುತ್ತಾ..?

ಕರ್ನಾಟಕದಿಂದ ಬರೋಬ್ಬರಿ 25 ಸಂಸದರು ಆಯ್ಕೆಯಾಗಿ ಮೋದಿ ಸರ್ಕಾರದಲ್ಲಿ ಕೆಲಸ ಮಾಡ್ತಿದ್ದಾರೆ. ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಸತ್​ನಲ್ಲಿ ಮಾತನಾಡಲು ಹಿಂದೆ ಮುಂದೆ ನೋಡ್ತಾರೆ. ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡುವ ಅವಕಾಶ ಇರುತ್ತದೆ. ಆದರೆ ಉತ್ತರ ಪ್ರದೇಶದ ಬಿಜೆಪಿ ಸಂಸದೆ ಇಡೀ ದೇಶಕ್ಕೆಲ್ಲಾ ನಾನೇ ಪ್ರಾಣಿಗಳನ್ನು ರಕ್ಷಣೆ ಮಾಡುತ್ತಿದ್ದೇನೆ ಎನ್ನುವ ಭ್ರಮೆಯಲ್ಲಿ ಬದುಕುತ್ತಿರುವಂತಿದೆ. ಚಂದ್ರಲೇಔಟ್​ನ ಅತ್ತಿಗುಪ್ಪೆಯಲ್ಲಿ ನಾಯಿಗಳ ಹಾವಳಿ ಹೇಗಿದೆ ಅನ್ನೋದಾದ್ರು ಮನೇಕಾ ಗಾಂಧಿಗೆ ಗೊತ್ತಿಲ್ಲ. ಯಾರೋ ಇಲ್ಲಿಂದ ಒಂದು ಮೇಲ್​ ಮಾಡಿರುತ್ತಾರೆ. ಅಷ್ಟಕ್ಕೇ ಮನೇಕಾ ಗಾಂಧಿ ಬಾಯಿಗೆ ಬಂದಂತೆ ಕನ್ನಡಿಗ ಅಧಿಕಾರಿ ಮೇಲೆ ಎಗರಾಡಿದ್ದಾರೆ. ದುಡ್ಡು ತೆಗೆದುಕೊಂಡಿದ್ಯಾ..? ಎಂದು ಕೇಳಿದ್ದಾರೆ. ನಾಯಿ ಹಿಡಿದು ಕಸಾಯಿಖಾನೆಗೆ ಮಾರಾಟ ಮಾಡಲು ಹೋಗಿದ್ರಾ..? ಬೀದಿ ನಾಯಿ ಹಿಡಿದ್ರೆ ಜನ ಬಂದು ಕಾಸು ಕೊಡ್ತಾರಾ..? ಲೋಕಸಭಾ ಸದಸ್ಯೆ ಅನ್ನೋದನ್ನು ಮರೆದು ಮನೇಕಾ ಗಾಂಧಿ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಿರೋದು ಕನ್ನಡಿಗರ ಕಣ್ಣು ಕೆಂಪಾಗುವಂತೆ ಮಾಡಿದೆ.

ಬಿಜೆಪಿ ನಾಯಕರಿಗೆ ಕನ್ನಡಿಗರ ಮೇಲಿಲ್ಲ ಅಭಿಮಾನ..!

ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ನಡೆಯುತ್ತಿದೆ. ಒಂದು ಕಡೆ ನಂದಿಯನ್ನು ಗುಜರಾತ್‌ನ ಅಮೂಲ್ ಜೊತೆಗ ವಿಲೀನ ಮಾಡುವ ಸಂಚು ನಡೆಯುತ್ತಿದೆ. ಗುಜರಾತ್ ಸಂಸ್ಥೆ ಜೊತೆಗೆ ಸೇರಿಸುವ ಉದ್ದೇಶದಿಂದಲೇ ನಂದಿನಿ ಹಾಲು, ತುಪ್ಪ, ಮೊಸರು ಸೇರಿದಂತೆ ಹಲವು ಉತ್ಪನ್ನಗಳ ಅಭಾವ ಸೃಷ್ಟಿ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರ ನಡುವೆ ಉತ್ತರ ಪ್ರದೇಶದ ಸಂಸದೆ ಕನ್ನಡಿಗ ಅಧಿಕಾರಿ ಮೇಲೆ ಈ ರೀತಿ ದರ್ಪ ಮೆರೆದಿರುವುದು ಚುನಾವಣಾ ವಿಚಾರ ಆಗುವ ಎಲ್ಲಾ ಸಾಧ್ಯತೆಗಳು ಇವೆ. ಇದೇ ರೀತಿ ಬಿಟ್ಟುಕೊಂಡು ಹೋದರೆ ನಮ್ಮ ಸಂಸದರು ತೆಪ್ಪಗೆ ಇರ್ತಾರೆ. ಹಿಂದಿ ಭಾಷಿಕ ರಾಜ್ಯಗಳ ಸಂಸದರು ಕರ್ನಾಟಕದಲ್ಲಿ ಆಡಳಿತ ಮಾಡುವ ಕಾಲ ಬಂದರೂ ಬರಬಹುದು.

ಕೃಷ್ಣಮಣಿ

Tags: BBMPBJPKannadigasManeka Gandhistray dogsಕನ್ನಡಿಗರುಬಿಜೆಪಿಬಿಬಿಎಂಪಿಬೀದಿ ನಾಯಿಮೇನಕಾ ಗಾಂಧಿ
Previous Post

ವಿರೋಧ ಪಕ್ಷಗಳೊಡನೆ ಹೆಜ್ಜೆ ಹಾಕಿದ್ದ ವಾಜಪೇಯಿ..ಸುಧೀಂದ್ರ ಕುಲಕರ್ಣಿ

Next Post

ರಾಜ್ಯದಲ್ಲಿ ಮತ್ತೆ ಲಿಂಗಾಯತ ಸಿಎಂ ಹೇಳಿಕೆ ಪುನರುಚ್ಛರಿಸಿದ ನಳೀನ್​ ಕುಮಾರ್​ ಕಟೀಲ್​

Related Posts

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
0

ಜ್ವರ ಹಾಗೂ ಯೂರಿನ್ ಸೋಂಕಿನಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ್ರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಂದಿನ ಕೆಲವು ದಿನಗಳ...

Read moreDetails

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

October 13, 2025

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

October 13, 2025

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025
Next Post
ರಾಜ್ಯದಲ್ಲಿ ಮತ್ತೆ ಲಿಂಗಾಯತ ಸಿಎಂ ಹೇಳಿಕೆ ಪುನರುಚ್ಛರಿಸಿದ ನಳೀನ್​ ಕುಮಾರ್​ ಕಟೀಲ್​

ರಾಜ್ಯದಲ್ಲಿ ಮತ್ತೆ ಲಿಂಗಾಯತ ಸಿಎಂ ಹೇಳಿಕೆ ಪುನರುಚ್ಛರಿಸಿದ ನಳೀನ್​ ಕುಮಾರ್​ ಕಟೀಲ್​

Please login to join discussion

Recent News

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
Top Story

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

by ಪ್ರತಿಧ್ವನಿ
October 13, 2025
Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

October 13, 2025

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada