• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಬೆಂಗಳೂರು ಸ್ಲಂ ಜನರ ಗೋಳು ಕೇಳುವವರು ಯಾರು?

Any Mind by Any Mind
June 12, 2023
in ಕರ್ನಾಟಕ
0
ಬೆಂಗಳೂರು ಸ್ಲಂ ಜನರ ಗೋಳು ಕೇಳುವವರು ಯಾರು?
Share on WhatsAppShare on FacebookShare on Telegram

ಬೆಂಗಳೂರು ನೋಡೋದಕ್ಕೆ ಹೇಗೆ ಬೃಹತ್ ನಗರವಾಗಿ ಇವತ್ತು ಜಗತ್ತಿನ ಮುಂದೆ ಗುರುತಿಸಿಕೊಂಡಿದೆಯೋ ಅಷ್ಟರಮಟ್ಟಿಗೆ ಬೆಂಗಳೂರಿನ ಒಡಲೊಳಗೆ ಸಾಕಷ್ಟು ಸಮಸ್ಯೆಗಳು ಕೂಡ ತಾಂಡವ ಮಾಡುತ್ತಿದೆ, ಇವತ್ತು ಬೆಂಗಳೂರಿಗೆ ಬಂದವರು ಯಾರು ಬೇಕಾದರೂ ಬೆಂಗಳೂರಿನ ಎರಡು ಮುಖಗಳನ್ನು ನೋಡೋದಕ್ಕೆ ಸಾಧ್ಯ ಆಗುತ್ತೆ ಒಂದು ಸಿಲಿಕಾನ್ ಸಿಟಿಯಾಗಿ, ಗಾರ್ಡನ್ ಸಿಟಿಯಾಗಿ, ಸ್ಟಾರ್ಟ್ ಅಪ್‌ಗಳ ಹಬ್ ಆಗಿ ನೋಡುತ್ತಾರೆ, ಮತ್ತೊಂದು ಬೆಂಗಳೂರಿನಲ್ಲಿರುವ ಅವ್ಯವಸ್ಥೆಗಳು ಅದರಲ್ಲೂ ಸ್ಲಂ ನಿವಾಸಿಗಳು ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿರುವಂತಹ ಶೋಚನೀಯ ಸ್ಥಿತಿಗಳನ್ನು ಕೂಡ ಬೆಂಗಳೂರಿನಂತ ಮಹಾನಗರದಲ್ಲಿ ಕಾಣಬಹುದು, ಹೀಗಾಗಿ ಬೆಂಗಳೂರಿನ ಹಿರಿಯ ನಾಗರಿಕರು ಬೆಂಗಳೂರಿನ ಮಿನಿ ಜಗತ್ತು ಅಂತಲೇ ಕರೆಯುತ್ತಾರೆ.

ADVERTISEMENT

ಇವತ್ತು ಬೆಂಗಳೂರಿನಲ್ಲಿ ದೊಡ್ಡವರ, ದುಡ್ಡಿರುವವರ, ಸದಾ ಎಸಿ ರೂಮಿನಲ್ಲಿ ಕುಬೇರನ ಮಕ್ಕಳಂತೆ ವಾಸಿಸುವವರ ಸಣ್ಣ ಸಮಸ್ಯೆಗಳನ್ನಾದರೂ ನಮ್ಮ ಸರ್ಕಾರ ದೊಡ್ಡ ಕಿವಿ ಕೊಟ್ಟು ಕೇಳುತ್ತದೆ ಇದು ಕೇವಲ ಇಂದಿನ ಸರ್ಕಾರದ ಕಥೆಯಲ್ಲ ಈ ಹಿಂದಿನ ಸರ್ಕಾರದ ಕಥೆಯು ಕೂಡ ಇದೇ ಆಗಿತ್ತು. ಹೀಗಾಗಿ ಬೆಂಗಳೂರಿನ ಬಡ ಜನರು ಸ್ಲಂ ನಿವಾಸಿಗಳು ನಿರಂತರವಾಗಿ ವಿವಿಧ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಇವತ್ತು ಬೆಂಗಳೂರಿನ ಸ್ಲಂಗಳಲ್ಲಿ ವಾಸಿಸುವ ನಾಗರಿಕರ ಪರಿಸ್ಥಿತಿ ಹೇಗಿದೆ ಅಂದ್ರೆ ಮುಂದಿನ ದಿನಗಳಲ್ಲಿ ನಾವು ಬದುಕಿರುತ್ತೇವೋ ಇಲ್ಲವೋ ಎಂಬ ಭಯದಿಂದಲೇ ಬದುಕುವಂತಾಗಿದೆ ಅಷ್ಟರ ಮಟ್ಟಿಗೆ ಬೆಂಗಳೂರಿನ ಸ್ಲಂ ನಿವಾಸಿಗಳು ಅಭದ್ರತೆಯಿಂದ ಬದುಕುತ್ತಿದ್ದಾರೆ

ಇವತ್ತು ಬೆಂಗಳೂರಿನ ಬಹುತೇಕ ಸ್ಲಂಗಳಲ್ಲಿ ವಾಸಿಸುವವರಿಗೆ ತಮ್ಮ ತಾತ್ಕಾಲಿಕ ಮನೆಗಳ ಹಕ್ಕು ಪತ್ರಕ್ಕಾಗಿ ಹಲವು ದಶಕಗಳಿಂದ ಹೋರಾಟವನ್ನು ಮಾಡುತ್ತಿದ್ದಾರೆ, ಇವತ್ತು ಬೆಂಗಳೂರಿನ ಯಾವುದೇ ಸ್ಲಂಗಳಿಗೆ ಭೇಟಿ ನೀಡಿದರು, ಅಲ್ಲಿ ದುರ್ವಾಸನೆ, ಚರಂಡಿಗಳ ಅವ್ಯವಸ್ಥೆ, ಕುಡಿಯೋದಕ್ಕೆ ಶುದ್ಧ ನೀರಿಲ್ಲ, ಶೌಚಾಲಯದ ಕೊರತೆಯಿಂದ ಜನರ ಪರದಾಟ, ಮಳೆ ಬಂದಾಗ ಮನೆ ಯಾವಾಗ ಕುಸಿಯುತ್ತದೆ ಇಂತಹ ನಾನಾ ರೀತಿಯ ಸಮಸ್ಯೆಗಳನ್ನ ಎದುರಿಸಿ ಸ್ಲಂನ ಜನರು ಬದುಕನ್ನ ಸಾಗಿಸಿತ್ತಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆಯಿಂದಾಗಿ ಸಾಕಷ್ಟು ಸ್ಲಮ್ ನಿವಾಸಿಗಳು ಪರದಾಡ್ತಿದ್ರು ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಮಳೆಗಾಲದಿಂದಾಗಿ ಸಾಕಷ್ಟು ಜನ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂಬ ವರದಿಗಳು ಬರುತ್ತಿವೆ. ಈಗಾದಲ್ಲಿ ಸ್ಲಂ ನಿವಾಸಿಗಳ ಜೀವನವಂತು ಅತಂತ್ರ ಆಗೋದ್ರಲ್ಲಿ ಅನುಮಾನವಿಲ್ಲ, ಪ್ರತಿ ಬಾರಿಯೂ ಕೂಡ ಬಿಬಿಎಂಪಿ ಮಳೆಗಾಲದ ಸಂದರ್ಭದಲ್ಲಿ ಗಂಜಿ ಕೇಂದ್ರಗಳನ್ನು ಅಥವಾ ಸ್ಲಂ ನಿವಾಸಿಗಳನ್ನ ಬೇರೆಡೆಗೋ ಸ್ಥಳಾಂತರ ಮಾಡುವ ಕೆಲಸವನ್ನು ಮಾಡುತ್ತದೆ ಆದರೆ ಈ ಸ್ಲಂ ನಿವಾಸಿಗಳ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನೀಡುವುದರಲ್ಲಿ ಬಿಬಿಎಂಪಿ ವಿಫಲವಾಗಿದೆ.

ಇನ್ನು ಈ ಸಮಸ್ಯೆಯ ಬಗ್ಗೆ ಸರ್ಕಾರಕ್ಕೆ ಮಾಹಿತಿಯೇ ಇಲ್ಲ ಇಂದು ಹೇಳಲು ಸಾಧ್ಯವಿಲ್ಲ ಯಾಕಂದ್ರೆ ಈ ಸಮಸ್ಯೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಸರ್ಕಾರದ ಬಳಿ ದಶಕಗಳಿಂದಲೂ ಇದೆ ಆದರೆ ಈ ಜನರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ನಮ್ಮ ಇಂದಿನ ಹಾಗೂ ಹಿಂದಿನ ಸರ್ಕಾರಗಳಿಗೆ ಮನಸ್ಸು ಇರಲಿಲ್ಲ ಎಂಬುದಷ್ಟೇ ಇಲ್ಲಿನ ವಾಸ್ತವ.

ಈಗ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದೆ ಕನಿಷ್ಠಪಕ್ಷ ಇವರ ಸರ್ಕಾರವಾದರೂ ಈ ಸ್ಲಮ್ ನಿವಾಸಿಗಳ ಸಮಸ್ಯೆಯನ್ನ ಬಗೆಹರಿಸುತ್ತಾರೆ ಎಂಬುದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ ಹಾಗಾಗಿ ಮುಂದೆಗಳಲ್ಲಿ ಇವರು ಯಾವ ರೀತಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕು

Tags: BangaloreBangalore Slumಬೆಂಗಳೂರುಬೆಂಗಳೂರು ಸ್ಲಂ
Previous Post

ಪಾರ್ಕಿಂಗ್ ಲಾಟ್​ ಆಗಿ ಬದಲಾಗ್ತಿದೆ ಫುಟ್​ಪಾತ್​, ಕಸದ ರಾಶಿ ಕಂಡು ಸಾರ್ವಜನಿಕರು ಹೈರಾಣು

Next Post

ರಾಜನಾಗಿ, ಗಗನಯಾತ್ರಿಯಾಗಿ, ಕೊನೆಗೆ ಹಣ್ಣು ವ್ಯಾಪಾರಿ ಅವತಾರದಲ್ಲೂ ಕಾಣಿಸಿಕೊಂಡ ಕಿಂಗ್​ ಕೊಹ್ಲಿ!

Related Posts

Top Story

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

by ಪ್ರತಿಧ್ವನಿ
July 2, 2025
0

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ನಟಿಯರಲ್ಲಿ ಖುಷಿ ಮುಖರ್ಜಿ (Khushi Mukherjee) ಕೂಡ ಒಬ್ಬರು. ಸದಾ ತುಂಡುಡುಗೆ ತೊಟ್ಟು ಸದ್ದು ಮಾಡುತ್ತಿರುವ ಬೆಡಗಿ ಎಂದೇ ಹೇಳಬಹುದು. ಇದೀಗ...

Read moreDetails

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

July 2, 2025

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

July 2, 2025

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

July 2, 2025
Next Post
ರಾಜನಾಗಿ, ಗಗನಯಾತ್ರಿಯಾಗಿ, ಕೊನೆಗೆ ಹಣ್ಣು ವ್ಯಾಪಾರಿ ಅವತಾರದಲ್ಲೂ ಕಾಣಿಸಿಕೊಂಡ ಕಿಂಗ್​ ಕೊಹ್ಲಿ!

ರಾಜನಾಗಿ, ಗಗನಯಾತ್ರಿಯಾಗಿ, ಕೊನೆಗೆ ಹಣ್ಣು ವ್ಯಾಪಾರಿ ಅವತಾರದಲ್ಲೂ ಕಾಣಿಸಿಕೊಂಡ ಕಿಂಗ್​ ಕೊಹ್ಲಿ!

Please login to join discussion

Recent News

Top Story

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

by ಪ್ರತಿಧ್ವನಿ
July 2, 2025
Top Story

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

by ಪ್ರತಿಧ್ವನಿ
July 2, 2025
Top Story

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

by ಪ್ರತಿಧ್ವನಿ
July 2, 2025
Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

July 2, 2025

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada