ಓಬಳಾಪುರಂ ಮೈನಿಂಗ್ ಅಕ್ರಮ ಪ್ರಕರಣದಲ್ಲಿ ಜನಾರ್ದನರೆಡ್ಡಿಗೆ ಶಿಕ್ಷೆ ಪ್ರಕಟ ಆಗಿರುವ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರಮುಖ ದೂರುದಾರ ಹಾಗೂ ಸಾಕ್ಷಿ ಟಪಾಲ್ ಗಣೇಶ ಹೇಳಿಕೆ ನೀಡಿದ್ದು, ಜನಾರ್ದನರೆಡ್ಡಿಗೆ ಶಿಕ್ಷೆ ಪ್ರಕಟ ಆಗಿದ್ರಿಂದ ನಮ್ಮ ತಂದೆ, ತಾಯಿ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದಿದ್ದಾರೆ. ಜನಾರ್ದನ ರೆಡ್ಡಿ ರಾಜಕೀಯದ ಬೆಂಬಲದಿಂದ ಮೊದಲಿನಿಂದಲೂ ಅಕ್ರಮ ಗಣಿಗಾರಿಕೆ ಮಾಡ್ತಾ ಬಂದಿದ್ದಾರೆ. ಆಂಧ್ರದಲ್ಲಿ ಪರವಾನಗಿ ಪಡೆದು ಕರ್ನಾಟಕದಲ್ಲಿ ಗಣಿಗಾರಿಕೆ ಮಾಡಿದ್ದಾರೆ. ಒತ್ತುವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ಮಾಡಿರೋದು ಎಂದು ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ 29 ಲಕ್ಷ ಟನ್ ಅಕ್ರಮ ಗಣಿಗಾರಿಕೆ ಮಾಡಿದ್ದಾರೆ. 2009 ರಲ್ಲಿ ನನ್ನ ದೂರಿನ ಮೇರೆಗೆ ಓಬಳಾಪುರಂ ಮೈನಿಂಗ್ ಕಂಪನಿಗಳು ಸ್ಥಗಿತಗೊಂಡವು. ಇದೀಗ ದೂಷಿ ಅಂತಾ ತೀರ್ಪು ಬಂದಿದೆ, ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಈ ವಿಚಾರದಲ್ಲಿ ನಮ್ಮ ಸರ್ಕಾರ ಸಂಪೂರ್ಣ ಫೇಲ್ ಆಗಿದೆ. ನಮ್ಮ ಅಧಿಕಾರಿಗಳೇ ಅವ್ರಿಗೆ ಸಾಥ್ ಕೊಟ್ಟಿದ್ರು. ಇವರ ವಿರುದ್ಧ ಹೋರಾಟ ಮಾಡಿ ಸಾಕಷ್ಟು ಅನುಭವಿಸಿದ್ದೇವೆ. ಮಾರಣಾಂತಿಕ ಹಲ್ಲೆ ಮಾಡಿದ್ರು, ಕೊಲೆ ಯತ್ನ ಮಾಡಿದ್ರು. ಆದ್ರೂ ಯಾವುದಕ್ಕೂ ಎದೆಗುಂದಲಿಲ್ಲ, ನಮ್ಮ ಹೋರಾಟ ನಿರಂತರವಾಗಿ ಮಾಡಿದ್ವಿ. ಕರ್ನಾಟಕ ಹಾಗೂ ಆಂಧ್ರದಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ರು. ಆದ್ರೂ ಎಲ್ಲಾ ಕೇಸ್ ಖುಲಾಸೆ ಮಾಡಿಕೊಂಡು ಬಂದಿದ್ದೇನೆ ಎಂದಿದ್ದಾರೆ.
ಜನಾರ್ದನರೆಡ್ಡಿ ವಿರುದ್ಧ ಕಂಪ್ಲೆಂಟ್ ಕೊಡೋ ಒಬ್ಬರೇ ಒಬ್ಬರು ಇರಲಿಲ್ಲ. ರಾಜಕೀಯದ ಬೆಂಬಲದಿಂದ ಇಷ್ಟೂ ವರ್ಷ ಮುಂದೂಡ್ತಾ ಬಂದ್ರು. ಆದ್ರೆ ಇಂದು ನಮಗೆ ನ್ಯಾಯ ಸಿಕ್ಕಿದೆ ಎಂದಿದ್ದಾರೆ ಟಪಾಲ್ ಗಣೇಶ್. ಜನಾರ್ದನ ರೆಡ್ಡಿಗೆ ಸಿಬಿಐ ಕೋರ್ಟ್ನಿಂದ ಶಿಕ್ಷೆ ಪ್ರಕಟ ಆಗಿದ್ರ ಬಗ್ಗೆ ವಿಧಾನಸೌಧದಲ್ಲಿ ಎಂಎಲ್ಸಿ ಸಿ.ಟಿ.ರವಿ ಮಾತನಾಡಿ, ಜನಾರ್ಧನ ರೆಡ್ಡಿ ನಮ್ಮ ಪಕ್ಷದ ಸಹ ಸದಸ್ಯ ಅಷ್ಟೇ. ಅವರು ಮತ್ತು ಅವರ ಕಂಪನಿಗೆ ಸಂಬಂಧಪಟ್ಟ ವಿಚಾರ. ಜನಾರ್ದನ ರೆಡ್ಡಿ ಇದನ್ನ ಎದುರಿಸುತ್ತಾರೆ ಎಂದಿದ್ದಾರೆ. ನಮ್ಮ ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ ಅಂತಾನೂ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಬಿ.ವೈ ರಾಘವೇಂದ್ರ ಮಾತನಾಡಿ, ಜನಾರ್ದನ ರೆಡ್ಡಿ ಅವರಿಗೆ ಕಾನೂನು ಹೋರಾಟದ ಹಾದಿ ಮುಕ್ತವಾಗಿದೆ. ಅವರಿಗೆ ಸಿಬಿಐ ಕೋರ್ಟ್ನಲ್ಲಿ ಹಿನ್ನಡೆ ಆಗಿರಬಹುದು. ಅವರು ಪಕ್ಷಕ್ಕೆ ಮರಳಿದ್ದರು. ಅವರು ವೈಯಕ್ತಿಕ ಕಾರಣಕ್ಕಾಗಿ ಪಕ್ಷಕ್ಕೆ ಬಂದಿರಲಿಲ್ಲ. ನಮ್ಮ ನಾಯಕರು ಬಯಸಿದ್ದರಿಂದ ಬಂದಿದ್ದರು. ಇದರಿಂದ ಪಕ್ಷಕ್ಕೆ ಹಿನ್ನಡೆ ಆಗಿಲ್ಲ ಎಂದಿದ್ದಾರೆ.