• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ರೋಹಿಣಿ ವಿರುದ್ಧ ದೂರು, IPS ಅಧಿಕಾರಿ ಡಿ ರೂಪಾ ಹಿಂದಿರುವ ಸೂತ್ರಧಾರಿ ಯಾರು..?

ಕೃಷ್ಣ ಮಣಿ by ಕೃಷ್ಣ ಮಣಿ
February 21, 2023
in ಅಂಕಣ
0
ರೋಹಿಣಿ ಸಿಂಧೂರಿ ಹಾಗೂ ಡಿ ರೂಪ ಫೈಟ್‌ ಗೆ ಡಿ.ಕೆ. ರವಿ ತಾಯಿ ಕಣ್ಣೀರು..!
Share on WhatsAppShare on FacebookShare on Telegram

IAS-IPS ಎರಡು ಸರಿಸಮಾನವಾದ ಹುದ್ದೆಗಳೇ ಆದರೂ IAS ಗೆ ಕಿಂಚಿತ್ತು ಮಾನ್ಯತೆ ಹೆಚ್ಚು. ಆಡಳಿತಾತ್ಮಕವಾಗಿ IAS ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರವನ್ನು IPS ಅಧಿಕಾರಿಗಳು ಪಾಲನೆ ಮಾಡುವುದು ಕರ್ತವ್ಯ ಆಗಿರುತ್ತದೆ. ಆದರೆ ಇದೀಗ ರಾಜ್ಯದ ಆಡಳಿತ ವಲಯದಲ್ಲಿ ನಡೆಯುತ್ತಿರುವ IAS ಹಾಗು IPS ನಡುವೆ ಹಾದಿ ಬೀದಿ ರಂಪಾಟವನ್ನು ನೋಡಿದಾಗ IAS ಅಧಿಕಾರಿ ರೋಹಿಣಿ ಸಿಂಧುರಿಗಿಂತಲೂ IPS ಅಧಿಕಾರಿ ಡಿ ರೂಪಾ ಒಂದು ಕೈ ಮೇಲೆಯೇ ಇದ್ದಾರೆ. ಡಿ ರೂಪಾ ಮಾಡಿರುವ ಆರೋಪಗಳು ಎಲ್ಲವೂ ಸರಿ ಎನ್ನಿಸಿದರೂ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಹಾಗು ನಾಟ್​ ಸೋ ಡೀಸೆಂಟ್​ ಫೋಟೋಗಳನ್ನು ಮೂವರು ಐಎಎಸ್ ಪುರುಷ​ ಅಧಿಕಾರಿಗಳಿಗೆ ಕಳುಹಿಸಿದ್ದಾರೆ ಎಂದಿದ್ದಾರೆ. ಆದರೆ ಅದು ಡಿ ರೂಪಾ ಅವರಿಗೆ ಸಂಬಂಧಿಸಿದ ವಿಒಚಾರ ಅಲ್ಲವೇ ಅಲ್ಲ. ಹಾಗಿದ್ದರೂ ಈ ವಿಚಾರದಲ್ಲಿ ಮೂಗು ತೂರಿಸಿದ್ದು ಯಾಕೆ ಅನ್ನೋ ಪ್ರಶ್ನೆ ಕಾಡುತ್ತಿದೆ. ಡಿ ರೂಪಾ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೀಡಿರುವ ದೂರಿನಲ್ಲಿ ಅಕ್ರಮಗಳ ಬಗ್ಗೆ ತನಿಖೆ ಮಾಡುವಂತೆ ಕೇಳಿದ್ದಾರೆ. ಆದರೆ ವೈಯಕ್ತಿಕ ಫೋಟೋಗಳ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದಿರುವುದು ರೂಪಾ ಹಿಂದೆ ಯಾರೋ ಸೂತ್ರಧಾರರು ನಿಂತು ಇದನ್ನೆಲ್ಲಾ ಮಾಡಿಸುತ್ತಿದ್ದಾರೆ ಎನಿಸುತ್ತದೆ.

ADVERTISEMENT

IPS ಡಿ ರೂಪಾ ಮೇಲೆ ಅನುಮಾನಕ್ಕೆ ಇದೂ ಕಾರಣ..!

ನಿನ್ನೆ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡುವುದಕ್ಕೆ ವಿಧಾನಸೌಧಕ್ಕೆ ಆಗಮಿಸಿದ್ದರು. ಆ ವೇಳೆ ಒಂದೆರಡು ಪೊಲೀಸ್​ ಅಧಿಕಾರಿಗಳು ಸೆಲ್ಯೂಟ್​ ಹೊಡೆದಿದ್ದು ಬಿಟ್ಟರೆ ಬೇರೆ ಯಾವುದೇ ಗನ್​ಮ್ಯಾನ್​ ಇರಲಿಲ್ಲ. ಸುತ್ತಲೂ ನಾಲ್ಕಾರು ಪೊಲೀಸ್​ ಅಧಿಕಾರಿಗಳೂ ಇರಲಿಲ್ಲ. ಒಬ್ಬರೆ ಬಂದರು ಒಬ್ಬರೇ ಹೋದರು. ಮಾಧ್ಯಮಗಳ ಬಳಿ ಮಾತನಾಡುವಾಗಲು ರೋಹಿಣಿ ಸಿಂಧೂರಿ ನಾವು ಮಾಧ್ಯಮಗಳ ಜೊತೆಗೆ ಮಾತನಾಡಬಾರದು ಅನ್ನೋದು ನಿಯಮವಿದೆ ಎಂದು ಸ್ಪಷ್ಟಪಡಿಸಿದ್ರು. ಆದರೆ ಅದೇ ಡಿ ರೂಪಾ ದೂರಿಗೆ ಸ್ಪಷ್ಟನೆ ಕೊಡುವುದಕ್ಕೆ ಬಂದ ವೇಳೆ ವಿಧಾನಸೌಧದ ಮುಖ್ಯ ದ್ವಾರದಲ್ಲೇ ರೂಪಾ ಅವರನ್ನು ಇಡೀ ಪೊಲೀಸ್​ ಅಧಿಕಾರಿಗಳು ಐಪಿಎಸ್​ ಅಧಿಕಾರಿಗಳು ಸುತ್ತುವರಿದರು. ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಹೋಗುವ ತನಕ ಪೊಲೀಸ್​​ ಟೀಂ ಸುತ್ತುವರಿದಿತ್ತು. ಆ ಬಳಿಕ ವಿಧಾನಸೌಧದಿಂದ ಹೊರಕ್ಕೆ ಹೋಗುವಾಗಲೂ ಖಾಕಿ ಕೋಟೆಯೇ ನಿರ್ಮಾಣ ಆಗಿತ್ತು. ಇದರ ಜೊತೆಗೆ ಬಹಿರಂಗವಾಗಿಯೇ ಡಿ ರೂಪಾ ಅವರಿಗೆ ರಾಜಕೀಯ ಬೆಂಬಲ ಸಿಕ್ಕಿದೆ.

ಡಿ ರೂಪಾ ಪ್ರಶ್ನೆಗಳನ್ನು ಬೆಂಬಲಿಸಿದ ಬಿಜೆಪಿ ಸಂಸದ..!

ಮೈಸೂರು ಹಾಗು ಕೊಡಗು ಬಿಜೆಪಿ ಸಂಸದ ಪ್ರತಾಪ್​ ಸಿಂಹ ಡಿ ರೂಪಾ ಅವರು ಎತ್ತಿರುವ ಪ್ರಶ್ನೆಗಳನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಶಾಸಕ ಸಾ ರಾ ಮಹೇಶ್​ ಎತ್ತಿದ್ದ ಪ್ರಶ್ನೆಗಳು ರಾಜಿ ಸಂಧಾನದ ಮೂಲಕ ಬಗೆಹರಿದ ವಿಚಾರ ಮಾಧ್ಯಮಗಳಲ್ಲಿ ಬಹಿರಂಗ ಆದ ಬಳಿಕ ಡಿ ರೂಪಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು. ಇದೀಗ ಮೈಸೂರು ಸಂಸದ ಪ್ರತಾಪ್​ ಸಿಂಹ ರೋಹಿಣಿ ಸಿಂಧೂರಿ ವಿರುದ್ಧ ಹರಿಹಾಯ್ದಿದ್ದಾರೆ. ಡಿ ರೂಪಾ ಅವರು ದಕ್ಷತೆಯಿಂದ ಪ್ರಶ್ನೆ ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ. ಅಂದರೆ ಡಿ ರೂಪಾ ಅವರಿಗೆ ಸಂಸದ ಬೆಂಬಲ ಇದೆ ಎನ್ನುವುದು ಖಚಿತ ಆಯ್ತು. ಇಷ್ಟು ಮಾತ್ರವಲ್ಲದೆ ಇನ್ನೂ ದೊಡ್ಡ ಮಟ್ಟದಲ್ಲೇ ರಾಜಕೀಯ ಈ ವಿಚಾರದಲ್ಲಿ ಕೆಲಸ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಈಗಾಗಲೇ ಮೈಸೂರು ಜಿಲ್ಲಾಧಿಕಾರಿ ಸ್ಥಾನವನ್ನು ತೊರೆದು ವರ್ಷಗಳೇ ಉರುಳಿ ಹೋಗಿರುವಾಗ ಮತ್ತೆ ರೋಹಿಣಿ ಸಿಂಧೂರಿ ಮೇಲೆ ಈ ರೀತಿಯ ಆಕ್ರಮಣ ಯಾಕೆ ಎನ್ನುವ ಪ್ರಶ್ನೆ ರೋಹಿಣಿ ಅಭಿಮಾನಿಗಳನ್ನು ಕಾಡುತ್ತಿದೆ.

IAS & IPS ವಿರುದ್ಧ ಯಾವುದೇ ಕೇಸ್​ ಆಗಲ್ಲ..!

ಭಾರತದ ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು ಅನ್ನೋದು ಸರಿಯಷ್ಟೆ. ಆದರೆ ಯಾವುದೇ IAS ಹಾಗು IPS ಅಧಿಕಾರಿಗಳ ವಿರುದ್ಧ ದೂರು ದಾಖಲಾಗುತ್ತದೆ. ಆದರೆ ಅಂತಿಮವಾಗಿ ಯಾವುದೇ ತನಿಖೆ ನಡೆದರೂ IAS ಹಾಗು IPS ಅಧಿಕಾರಿಗಳ ಕಣ್ಗಾವಲಿನಲ್ಲೇ ನಡೆಯುತ್ತದೆ. ಆ ಸಮಯದಲ್ಲಿ IAS ಹಾಗು IPS ಅಧಿಕಾರಿಗಳ ಲಾಬಿ ಕೆಲಸ ಮಾಡುತ್ತದೆ. ಒಂದೇ ರಾಜ್ಯದಲ್ಲಿ ಕೆಲಸ ಮಾಡುವ IAS ಹಾಗು IPS ಅಧಿಕಾರಿಗಳು ಒಬ್ಬರು ಇನ್ನೊಬ್ಬರಿಗೆ ಪರಿಚಯ ಆಗಿರುವುದು ಸಹಜ. ಹೀಗಿರುವಾಗ ತನಿಖಾ ಹಂತದಲ್ಲೇ ವಿಚಾರಣೆ ದಿಕ್ಕು ತಪ್ಪುತ್ತದೆ. ಇನ್ನು ಕೋರ್ಟ್​’ನಲ್ಲಿ ಕೇಸ್​ ನಿಲ್ಲುವುದಿಲ್ಲ. ಅದರ ಜೊತೆಗೆ ಕೆಲವೊಮ್ಮೆ ರಾಜಿ ಪಂಚಾಯ್ತಿಯಲ್ಲಿ ಕೇಸ್​ ಖಲ್ಲಾಸ್​ ಆಗುತ್ತದೆ. ಈ ಕೇಸ್​’ನಲ್ಲೂ ರೂಪಾ ಯಾವುದೋ ಅಜೆಂಡ ಹಿಡಿದುಕೊಂಡು ರೋಹಿಣಿ ಸಿಂಧೂರಿ ಬಗ್ಗೆ ಆರೋಪಗಳನ್ನು ಮಾಡುತ್ತಿದ್ದಾರೆ. ರೋಹಿಣಿ ಸಿಂಧೂರಿ ಪತಿ ಸುಧೀರ್​ ರೆಡ್ಡಿ ಬಾಗಲಗುಂಟೆ ಠಾಣೆಯಲ್ಲಿ ಕೇಸ್​ ದಾಖಲು ಮಾಡಿದ್ದಾರೆ. ಒಂದು ವೇಳೆ FIR ಮಾಡದೆ ಹೋದರೆ ಕೋರ್ಟ್​ ಮೆಟ್ಟಿಲೇರಲು ತಯಾರಿ ಮಾಡಿಕೊಂಡಿದ್ದಾರೆ. ಆದರೆ ಅಂತಿಮವಾಗಿ ಏನಾಗುತ್ತದೆ ಎನ್ನುವುದನ್ನು ಕಾದು ನೋಡಿ. ಕೊನೆಗೆ ಕೇಸ್​ ಏನಾಯ್ತು ಎನ್ನುವುದನ್ನು ಜನರೇ ಹುಡುಕಿದರೂ ಸಿಗುವುದಿಲ್ಲ. ಆ ರೀತಿ ಮಂಗಮಾಯ ಆಗುತ್ತದೆ. ಅದೇ ಕಾರಣಕ್ಕೆ ಇದು ಕೇವಲ ಉದ್ದೇಶ ಈಡೇರಿಕೆಗಾಗಿ ನಡೆಯುತ್ತಿರುವ ಸಮರ. ಇದರ ಹಿಂದೆ ಕಾಣದ ಕೈಗಳ ಕೈವಾಡ ಇರುವುದು ಸತ್ಯ.

Tags: D RoopaIAS/IPSprathapsimhaRohini Sindhuri
Previous Post

ಮಂಡ್ಯದಲ್ಲಿ ಕಮಲ ಅರಳಿಸಲು ಕೇಸರಿ ಸರ್ಕಸ್..! ಲೀಡರ್ಸ್​ ಇಲ್ಲದೆ ಕಂಗಾಲು..!

Next Post

ಪರೇಶ್ ಮೇಸ್ತಾ ಪ್ರಕರಣ: ಕಾಗೇರಿ, ಬಿಜೆಪಿ ಕಾರ್ಯಕರ್ತರು ಸೇರಿದಂತೆ 122 ಜನರ ಮೇಲೆ ದಾಖಲಾಗಿದ್ದ ಪ್ರಕರಣ ಹಿಂಪಡೆದ ರಾಜ್ಯ ಸರ್ಕಾರ

Related Posts

Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
0

ಮಕ್ಕಳ ಯೋಗ ಕ್ಷೇಮ ವಿಚಾರಿಸಿದ ಸಚಿವರು ಬೀದರ್ ಪ್ರವಾಸದಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಇಂದು ದಿಢೀರ್ ಅಂಗನವಾಡಿ ಹಾಗೂ ಬಾಲಕಿಯರ ಬಾಲಮಂದಿರಕ್ಕೆ ಭೇಟಿ ನೀಡಿ, ಪರಿಶೀಲನೆ...

Read moreDetails

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025
Next Post
ಪರೇಶ್ ಮೇಸ್ತಾ ಪ್ರಕರಣ: ಕಾಗೇರಿ, ಬಿಜೆಪಿ ಕಾರ್ಯಕರ್ತರು ಸೇರಿದಂತೆ 122 ಜನರ ಮೇಲೆ ದಾಖಲಾಗಿದ್ದ ಪ್ರಕರಣ ಹಿಂಪಡೆದ ರಾಜ್ಯ ಸರ್ಕಾರ

ಪರೇಶ್ ಮೇಸ್ತಾ ಪ್ರಕರಣ: ಕಾಗೇರಿ, ಬಿಜೆಪಿ ಕಾರ್ಯಕರ್ತರು ಸೇರಿದಂತೆ 122 ಜನರ ಮೇಲೆ ದಾಖಲಾಗಿದ್ದ ಪ್ರಕರಣ ಹಿಂಪಡೆದ ರಾಜ್ಯ ಸರ್ಕಾರ

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada