• Home
  • About Us
  • ಕರ್ನಾಟಕ
Wednesday, October 29, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಇನ್ನೊಬ್ಬರ ಮನಸ್ಸಿನಲ್ಲಿ ನಾವು ಯಾವ ಸ್ಥಾನದಲ್ಲಿ ಇದ್ದಿವಿ

ಪ್ರತಿಧ್ವನಿ by ಪ್ರತಿಧ್ವನಿ
June 9, 2025
in Top Story, ಜೀವನದ ಶೈಲಿ
0
ಇನ್ನೊಬ್ಬರ ಮನಸ್ಸಿನಲ್ಲಿ ನಾವು ಯಾವ ಸ್ಥಾನದಲ್ಲಿ ಇದ್ದಿವಿ
Share on WhatsAppShare on FacebookShare on Telegram

ಸುಂದರ ಕ್ಷಣಗಳು ಅನ್ನುವ ಹಾಗೆಯೇ ಕೆಲವರಿಗೆ ಮರೆಯಲಾಗದ ಶಾಪಗಳು.
ಅವರವರ ಜೀವನದಲ್ಲಿ ಯಾವ ನೆನಪುಗಳು ಯಾವ ಅನುಭವಗಳನ್ನು ನೀಡುತ್ತವೆ ಅಂತ ಯಾರಿಗೂ ಮೊದಲೇ ಊಹಿಸಲು ಸಾಧ್ಯವಿಲ್ಲ. ಸವಿ ನೆನಪುಗಳು ಅಂದುಕೊಂಡು ಬದುಕುವ ಜೀವನದಲ್ಲಿ ಅದೇ ಸವಿ ನೆನಪುಗಳು ಅನುಭವಗಳ ಪುಟಗಳಲ್ಲಿ ಮರೆಯಲಾಗದ ಕಹಿ ಘಟನೆಗಳು ನೆನಪುಗಳಾಗಲೂಬಹುದು.

ADVERTISEMENT

ಸಮಯ ಅನ್ನೋದು ನಾವು ಅಂದುಕೊಂಡಂತೆ, ನಾವುಗಳು ಅಂದುಕೊಂಡ ಹಾಗೆಯೇ ಎಂದಿಗೂ ಚಲಿಸದು. ಚಲಿಸುವ ಸಮಯ, ಚಲಿಸುವ ಕಾಲ ಅದರ ದಿಕ್ಕನ್ನು ಯಾವ ಕಡೆಯಿಂದ, ಯಾವ ಕಡೆಗೆ ತನ್ನ ಪಥವನ್ನು ಅಥವಾ ದಿಕ್ಕನ್ನು ಬದಲಾಯಿಸುತ್ತೆ ಅಂತಲೇ ಗೊತ್ತಾಗಲ್ಲ. ಯಾವುದೋ ಒಂದು ಭ್ರಮೆಯಲ್ಲಿ, ಇನ್ಯಾವುದೋ ಕಲ್ಪನೆಯಲ್ಲಿಯೇ ಬದುಕು ಸಾಗುತ್ತಲೇ ಇರುತ್ತೆ.

Chetan Ahimsa Podcast: ಸ್ಟೇಡಿಯಂ ದುರಂತಕ್ಕೆ ಸಿದ್ದರಾಮಯ್ಯ, ಡಿಕೆಶಿ ನೇರ ಹೊಣೆ.? #siddaramaiah #dkshivakumar

ಬಣ್ಣ ಬಣ್ಣದ ಲೋಕದಲ್ಲಿ, ಬಣ್ಣ ಬಣ್ಣ ಮಾತಿಗೆ, ಅಂದವಾಗಿ ಕಾಣುವ ಹೊರ ಪ್ರಪಂಚವೇ ಆಕರ್ಷಣೆ. ಐಶ್ವರ್ಯ ಅನ್ನುವ ಅಯಸ್ಕಾಂತದ ಆಕರ್ಷಣೆಯ ಹುಚ್ಚಿಗೆ ಬಿದ್ದು ಗಳಿಸಿಕೊಂಡಿದ್ದೆಷ್ಟು, ಅದನ್ನು ಗಳಿಸಿಕೊಳ್ಳುವ ಪ್ರಯತ್ನದಲ್ಲಿ ಕಳೆದುಕೊಂಡದ್ದೆಷ್ಟು…?

ಈ ಪ್ರಪಂಚದಲ್ಲಿ ಒಮ್ಮೆ ಕಳೆದುಕೊಂಡರೆ ಮತ್ತೆ ಗಳಿಸಿಕೊಳ್ಳಲು ಅವಕಾಶವಿದೆ ಅನ್ನುವುದು ಎಲ್ಲರ ಅನುಭವದ ಮಾತು. ಆದರೆ, ವಾಸ್ತವದಲ್ಲಿ ಅದು ಅಸಾಧ್ಯ. ಒಮ್ಮೆ ಜೀವನದಲ್ಲಿ ಕೆಲವೊಂದನ್ನು ಕಳೆದುಕೊಂಡರೆ ಮರಳಿ ಪಡೆಯುವ ಅರ್ಹತೆ ಕಳೆದುಕೊಂಡಂತೆಯೇ. ಮರಳಿ ಪಡೆಯುವ ಅವಕಾಶವಾಗಲಿ ಅಥವಾ ಅದೃಷ್ಟವಾಗಲಿ ಸಿಗಲಾಗದು. ಯಾಕೆಂದರೆ, ಕಳೆದುಕೊಂಡವರನ್ನು ಈ ಸಮಾಜ ನೋಡುವ ದೃಷ್ಠಿಕೋನವೇ ಬೇರೆ.

ಬದಲಾಗಬೇಕು, ಬದಲಾವಣೆ ಹೊಂದಿ ಮರಳಿ ಜೀವನ ಸರಿದಾರಿಗೆ ತಂದುಕೊಂಡು ಎಲ್ಲರಂತೆ ಬದುಕಬೇಕು ಅಂತ ಅಂದುಕೊಂಡರೂ ಅದು ಸಾಮಾನ್ಯವಾಗಿ ಈಡೇರದ ಕನಸಾಗಿ, ತನ್ನ ಜೀವನದಲ್ಲಿ ಕಳೆದುಕೊಂಡದ್ದನ್ನು ನೆನೆದು, ಆ ನೆನಪುಗಳಲ್ಲಿಯೇ ಕಣ್ಣೀರು ಸುರಿಸುತ್ತ ಅವಕಾಶ ವಂಚಿತರಾಗಿ ಇಡೀ ಜೀವನ ಕಳೆಯುವ ಹಣೆಬರಹ ಕೆಲವರದ್ದು. ಇದನ್ನೇ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಇಡೀ ಜೀವನ ಶಿಕ್ಷೆ ಅನುಭವಿಸುವಂತದ್ದು ಅನ್ನೋದು.

ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಕಾರ್ಯ ಸಾಧನೆಗಾಗಿ ಜೊತೆಗಿದ್ದು, ತಮ್ಮ ಕಾಲ ಕಳೆಯುವುದಕ್ಕಾಗಿ ಉಪಯೋಗಿಸಿಕೊಂಡು ಇಲ್ಲದ ನಂಬಿಕೆ, ಭಾವನೆಗಳನ್ನು ಹುಟ್ಟಿಸಿ, ಕೊನೆಗೆ ಅದಕ್ಕೆ ಬೇರೆಯದೇ ಅರ್ಥವಿದೆ ಅನ್ನುವ ಪಾಠವನ್ನು ಕಲಿಸಿಕೊಡುವ ಜನರ ಮಧ್ಯೆ ಯಾರನ್ನ ನಂಬಬೇಕು, ಯಾರನ್ನ ನಂಬಬಾರದು ಅನ್ನುವುದೇ ಎಲ್ಲರ ಜೀವನದಲ್ಲಿನ ಗೊಂದಲದ ಪ್ರಶ್ನೆ. ಅದಕ್ಕೆ ಹೇಳಿರುವುದು ಮನುಷ್ಯರಿಗಿಂತ ಮಾತು ಬಾರದ ಪ್ರಾಣಿ – ಪಕ್ಷಿಗಳೇ ಎಷ್ಟೋ ವಾಸಿ ಅಂತ. ಯಾಕೆಂದರೆ ಅವುಗಳಿಗೆ ಮನುಷ್ಯರಂತೆ ಸಮಯಕ್ಕೆ ತಕ್ಕಂತೆ ನಟನೆ ಮಾಡಲು, ಮಾತು ಬದಲಾಯಿಸಲು ಬರಲ್ಲ. ಒಂದೇ ವ್ಯಕ್ತಿತ್ವ ಒಂದೇ ಬದುಕು ಅವುಗಳದ್ದು.

ನಾವು ಎಲ್ಲರ ಮುಂದೆ, ಎಲ್ಲರ ಕಣ್ಣಿಗೆ ಕಾಣುವಂತೆ ಹೇಗೆ ಬದುಕುತ್ತೇವೆ, ಕಣ್ಣಿಗೆ ಕಾಣುವಂತೆ ಏನೆಲ್ಲಾ ಸಂಪಾದನೆ ಮಾಡುತ್ತೇವೆ ಅನ್ನೋದು ಮುಖ್ಯ ಅನ್ನೋದು ಇಂದಿನ ಜೀವನ ಕ್ರಮ. ಅದು ಬದಲಾಗಬೇಕು. ಕಣ್ಣಿಗೆ ಕಾಣುವುದು ಮುಖ್ಯವಲ್ಲ. ಮನಸ್ಸಿಗೆ ಕಾಣುವುದು ಮುಖ್ಯ. ಇನ್ನೊಬ್ಬರ ಮನಸ್ಸಿನಲ್ಲಿ ನಾವು ಯಾವ ಸ್ಥಾನದಲ್ಲಿ ಇದ್ದಿವಿ, ಯಾವ ಸ್ಥಾನವನ್ನು ಸಂಪಾದನೆ ಮಾಡಿಕೊಂಡಿದ್ದೇವೆ ಅನ್ನೋದು ಮುಖ್ಯ. ಅದೇ ರೀತಿ ಎಂತಹ ಸ್ಥಾನದಲ್ಲಿ ನಮ್ಮನ್ನು ಅವರು ಇಟ್ಟಿದ್ದಾರೆ ಅನ್ನೋದನ್ನು ಅರ್ಥ ಮಾಡಿಕೊಂಡು ಅವರ ನಂಬಿಕೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವುದು ಜೀವನದಲ್ಲಿ ಬಹಳ ಮುಖ್ಯ.

Siddaramaiah: ಬಿಜೆಪಿ ಪ್ರತಿಭಟನೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್‌..! #bjpprotest #byvijayendra #rashok

ಹುಟ್ಟು ಅನ್ನೋದು ಎಲ್ಲರಿಗೂ, ಎಲ್ಲಾ ಜೀವರಾಶಿಗಳಿಗೂ ಸಹಜ. ಆ ಹುಟ್ಟಿಗೆ ಒಂದು ಸಾರ್ಥಕತೆ ಸಿಗಬೇಕು. ಬದುಕಿಗೆ ಒಂದು ಅರ್ಥ ಇರಬೇಕು. ಹುಟ್ಟು ಸಾವಿನ ಮಧ್ಯೆ ನಾವು ನಿಜವಾಗಿ ಸಂಪಾದನೆ ಮಾಡಬೇಕಾಗಿರುವುದು ನಾವು ಅಳಿದರೂ ಇನ್ನೊಬ್ಬರ ಜೀವನದಲ್ಲಿ ನಮ್ಮಿಂದ ಅಳಿಯಲಾಗದ ಹೆಸರು, ಪ್ರೀತಿ, ವಿಶ್ವಾಸ, ನಂಬಿಕೆಯುಕ್ತ ನೆನಪುಗಳು ಮಾತ್ರ.

ಸ್ವಾರ್ಥಕ್ಕಾಗಿ ದಯವಿಟ್ಟು ಯಾರೊಂದಿಗೂ ಯಾವ ಸಮಯದಲ್ಲಿಯೂ ವ್ಯವಹರಿಸಬಾರದು. ಸ್ವಾರ್ಥದ ಜೀವನ ಇನ್ನೊಬ್ಬರ ಜೀವನದಲ್ಲಿ ಯಾವ ಪರಿಣಾಮ ಬೀರುತ್ತೆ, ಯಾವ ಹಂತಕ್ಕೆ ಬೀರುತ್ತೆ ಅನ್ನೋದು ಸ್ವಲ್ಪ ಯೋಚಿಸಿ ನೋಡಿ. ಎಲ್ಲಾ ಮುಗಿದ ಮೇಲೆ ಚಿಂತಿಸಿ ಪ್ರಯೋಜನವೂ ಇಲ್ಲ. ತಿದ್ದಿ ಬದಲಾವಣೆ ಮಾಡಲು ಅವಕಾಶವೂ ಇರಲ್ಲ.
ಪ್ರಪಂಚ ಒಂದು ತಪ್ಪಾದರೆ ಅದೇ ತಪ್ಪನ್ನು ಹಿಡಿದು ನೋಡುತ್ತದೆಯೇ ಹೊರತು, ಆ ತಪ್ಪಿಗೆ ಸೂಕ್ತ ಕಾರಣ ಹುಡುಕಲ್ಲ, ಕೇಳಲ್ಲ. ತಪ್ಪು ಮಾಡಿದವನು ಇಂದಿಗೂ ಎಂದಿಗೂ ಎಂದೆಂದಿಗೂ ತಪ್ಪಿತಸ್ತ ಅಷ್ಟೇ ಅನ್ನುವ ನಿರ್ಧಾರ ಮಾಡಿಬಿಡುತ್ತೆ. ಅದೇ ದೃಷ್ಟಿಕೋನದಲ್ಲಿ ಸದಾ ನೋಡುತ್ತೆ, ಬದಲಾಗಬೇಕೆಂದುಕೊಂಡರೂ ಅವಕಾಶವಾಗಲಿ ಅಥವಾ ಬದಲಾಗುತ್ತೀಯಾ ಅನ್ನುವ ನಂಬಿಕೆಯಾಗಲಿ ಇಡುವುದೇ ಇಲ್ಲ


ಅಂತಹ ಬದಲಾವಣೆಗೆ ಅವಕಾಶವಿಲ್ಲದೆ, ಅವಕಾಶ ನೀಡುವವರು ಇಲ್ಲದೆ, ನಂಬಿಕೆ ಇಡುವವರು ಇಲ್ಲದೆ ಒಂಟಿಯಾಗಿದ್ದು, ಎಲ್ಲರಂತೆ ಬದುಕಲು ಆಗದೆ ಏಕಾಂತದಲ್ಲಿ ಏಕಾಂಗಿಯಾಗಿ ಸುರಿಸುವ ಕಣ್ಣೀರಿನ ಬದುಕು ಅನ್ನೋದು ಅಸಹನೀಯ. ಯಾಕೆಂದರೆ, ತಮ್ಮಲ್ಲಿನ ಅಂತಾರಾಳದ ನೋವು ವ್ಯಕ್ತಪಡಿಸಿದರೂ ಸಹ ಅದು ಎಲ್ಲರಿಗೂ ಕೇವಲ ಒಂದು ಕಥೆಯಾಗಿ ಕಾಣುತ್ತದೆಯೇ ವಿನಃ ಅರ್ಥ ಆಗುವ ವಾಸ್ತವ ಕಥೆಯಂತೆ ಯಾರಿಗೂ ಭಾಸವಾಗಲ್ಲ…

ನವೀನ ಹೆಚ್ಎ. ಅಂಕಣಕಾರರು ಲೇಖಕರುಹನುಮನಹಳ್ಳಿ ಕೆಆರ್ ನಗರ ತಾಲೂಕು, ಮೈಸೂರು ಜಿಲ್ಲೆ

Tags: am i stressedbest motivational speechesbest motivational videocaught in the actdid you knowdid you know that indid you know that in the walking deademma and mila staufferemma and mila vinesgrand theaterhand gesturesmila and emma stauffermila and emma vinesmotivational speechespeaky blinders editssandeep maheshowri motivationthe walking dead first walker little girltrending youtube shortstwd did you know
Previous Post

ಇದೇ 18ಕ್ಕೆ ಜಲಶಕ್ತಿ ಸಚಿವಾಲಯದಿಂದ ಎಲ್ಲಾ ರಾಜ್ಯಗಳ ಸಚಿವರ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Next Post

ತತ್ವ ಸಿದ್ಧಾಂತಗಳ ನಡುವೆ ಅಧಿಕಾರ ರಾಜಕಾರಣ

Related Posts

ಮಕ್ಕಳು ದೇವರ ಸಮಾನ, ಅವರ ಸೇವೆಯೇ ನಿಜವಾದ ತೃಪ್ತಿ: ಸಚಿವ ಮಧು ಬಂಗಾರಪ್ಪ
Top Story

ಮಕ್ಕಳು ದೇವರ ಸಮಾನ, ಅವರ ಸೇವೆಯೇ ನಿಜವಾದ ತೃಪ್ತಿ: ಸಚಿವ ಮಧು ಬಂಗಾರಪ್ಪ

by ಪ್ರತಿಧ್ವನಿ
October 29, 2025
0

ಬೆಂಗಳೂರು, ಅಕ್ಟೋಬರ್ 28: 2025-26ನೇ ಸಾಲಿನ ಪದವಿ ಪೂರ್ವ ಶಿಕ್ಷಣ ಹಂತದ ವಿದ್ಯಾರ್ಥಿಗಳ ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆಯ ಸಮಾರೋಪ ಸಮಾರಂಭವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ...

Read moreDetails

DK Shivakumar: ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿ.ಕೆ. ಶಿವಕುಮಾರ್

October 28, 2025
ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

October 28, 2025
ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ

ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ

October 28, 2025

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

October 28, 2025
Next Post
ತತ್ವ ಸಿದ್ಧಾಂತಗಳ ನಡುವೆ ಅಧಿಕಾರ ರಾಜಕಾರಣ

ತತ್ವ ಸಿದ್ಧಾಂತಗಳ ನಡುವೆ ಅಧಿಕಾರ ರಾಜಕಾರಣ

Recent News

ಮಕ್ಕಳು ದೇವರ ಸಮಾನ, ಅವರ ಸೇವೆಯೇ ನಿಜವಾದ ತೃಪ್ತಿ: ಸಚಿವ ಮಧು ಬಂಗಾರಪ್ಪ
Top Story

ಮಕ್ಕಳು ದೇವರ ಸಮಾನ, ಅವರ ಸೇವೆಯೇ ನಿಜವಾದ ತೃಪ್ತಿ: ಸಚಿವ ಮಧು ಬಂಗಾರಪ್ಪ

by ಪ್ರತಿಧ್ವನಿ
October 29, 2025
Top Story

DK Shivakumar: ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 28, 2025
ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ
Top Story

ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

by ಪ್ರತಿಧ್ವನಿ
October 28, 2025
ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ
Top Story

ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ

by ಪ್ರತಿಧ್ವನಿ
October 28, 2025
Top Story

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

by ಪ್ರತಿಧ್ವನಿ
October 28, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಕ್ಕಳು ದೇವರ ಸಮಾನ, ಅವರ ಸೇವೆಯೇ ನಿಜವಾದ ತೃಪ್ತಿ: ಸಚಿವ ಮಧು ಬಂಗಾರಪ್ಪ

ಮಕ್ಕಳು ದೇವರ ಸಮಾನ, ಅವರ ಸೇವೆಯೇ ನಿಜವಾದ ತೃಪ್ತಿ: ಸಚಿವ ಮಧು ಬಂಗಾರಪ್ಪ

October 29, 2025

DK Shivakumar: ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿ.ಕೆ. ಶಿವಕುಮಾರ್

October 28, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada