ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಬಂಧನ ಮಾಡಲಾಗಿದೆ. ಬೆಂಗಳೂರಿನ ಬಸವೇಶ್ವರ ನಗರ ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧನ ಮಾಡಿ ಬೆಂಗಳೂರಿಗೆ ಕರೆತರುತ್ತಿದ್ದಾರೆ. ಕೊಲ್ಹಾಪುರದ ಖಾಸಗಿ ಲಾಡ್ಜ್ನಲ್ಲಿ ಬಂಧನ ಮಾಡಲಾಗಿದೆ. ವಿಜಯಪುರ ಟಿಕೆಟ್ ಕೊಡಿಸ್ತೀವಿ ಅಂತ ಹೇಳಿ 1.75 ಕೋಟಿ ಹಣವನ್ನು ನಾಗಠಾಣ ಮಾಜಿ ಶಾಸಕ ದೇವಾನಂದ ಚವ್ಹಾಣ್ ಅವರಿಂದ ಪಡೆದಿದ್ದಾರೆ ಎಂದು ದೂರು ನೀಡಿದ್ದರು. ಇದೀಗ ಕೊಲ್ಹಾಪುರದಲ್ಲಿ ಗೋಪಾಲ್ ಜೋಶಿ, ಪುಣೆಯಲ್ಲಿ ಅಜಯ್ ಜೋಷಿಯನ್ನು ಬಂಧಿಸಿದ್ದಾರೆ ಪೊಲೀಸರು..
ಪ್ರಹ್ಲಾದ್ ಜೋಷಿ ಸಹೋದರನ ಬಂಧನ ವಿಚಾರವಾಗಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಪ್ರಹ್ಲಾದ್ ಜೋಶಿ ರಾಜೀನಾಮೆಗೆ ಆಗ್ರಹ ಮಾಡಿದ್ದಾರೆ. ಬಿಜೆಪಿ ಬ್ರಹ್ಮಾಂಡ ಭ್ರಷ್ಟಾಚಾರ ಒಂದೊಂದೆ ಜಗಜ್ಜಾಹಿರ್ ಆಗ್ತಿದೆ. ಪ್ರಹ್ಲಾದ್ ಜೋಷಿ ಸಹೋದರನನ್ನ ಬಂಧಿಸಲಾಗಿದೆ. ಈಗ ಯಾಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳು ಒಂದೊಂದೆ ಹೊರಗೆ ಬರುತ್ತಿವೆ. ನಮ್ಮ ಮೇಲೆ ಆರೋಪ ಕೇಳಿ ಬಂದ್ರೆ ರಾಜೀನಾಮೆ ಅಂತಾರೆ. ಬಿಜೆಪಿ ನಾಯಕರ ಮೇಲೆ ಆರೋಪ ಬಂದ್ರೆ ರಾಜಕೀಯ ದ್ವೇಷ ಅಂತಾರೆ. ಇನ್ನೂ ಬಗೆದಷ್ಟು ಹಗರಣಗಳು ಹೊರಗೆ ಬರಲಿವೆ ಅಂತಾ ತಿಳಿಸಿದ್ದಾರೆ.
ಗೋಪಾಲ ಜೋಶಿ ಬಂಧನದ ಬಳಿಕ ಹುಬ್ಬಳ್ಳಿಯಲ್ಲಿ ದೂರುದಾರೆ ಸುನೀತಾ ಚವ್ಹಾಣ್ ಮಾತನಾಡಿ, ಜೆಡಿಎಸ್ ಪಕ್ಷದಿಂದ ಟಿಕೆಟ್ ಸಿಗುವ ಸಾಧ್ಯತೆ ಇತ್ತು. ಆದರೆ ಬಿಜೆಪಿಯಿಂದ ಟಿಕೆಟ್ ಕೊಡಿಸುತ್ತೇನೆ ಅಂದ್ರು. ಟಿಕೆಟ್ ಕೊಡಿಸೋದಾಗಿ 2 ಕೋಟಿ ಬೇಡಿಕೆ ಇಟ್ಟು, 25 ಲಕ್ಷ ಹಣ ಪಡೆದಿದ್ರು. ಕೊಟ್ಟ ಹಣ ವಾಪಸ್ ಮಾಡಿರಲಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ದೂರು ಕೊಟ್ಟಿದೀವೆ. ಗೋಪಾಲ್ ಜೋಶಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಹೈಕಮಾಂಡ್ ಹೆಸರನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ಕೇಂದ್ರ ಸಚಿವರ ಪಾತ್ರ ಇಲ್ಲ. ಹೈಕಮಾಂಡ್ ನಾಯಕರನ್ನು ನಾವು ಭೇಟಿ ಆಗಿಲ್ಲ. ನೇರವಾಗಿ ಗೋಪಾಲ ಜೋಶಿ ಅವರಿಗೆ ದುಡ್ಡು ಕೊಟ್ಟಿದ್ದೇನೆ. ಹಣ ವಾಪಸ್ ಮಾಡದ ಗೋಪಾಲ್ ಜೋಶಿ ಮೇಲೆ ಕ್ರಮವಾಗಲಿ ಎಂದಿದ್ದಾರೆ.