
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ED ಚಾರ್ಜ್ಶೀಟ್ ಸಲ್ಲಿಕೆ ಮಾಡಿರುವುದನ್ನು ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ ಮಾಡಲಾಗಿದೆ. ಮಾಜಿ ಸಚಿವ ರಮಾನಾಥ್ ರೈ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದು, ಮಂಗಳೂರು ED ಕಚೇರಿಗೆ ಮುತ್ತಿಗೆ ಹಾಕುವ ಯತ್ನ ಮಾಡಿದ್ದಾರೆ. ED ವಿರುದ್ದ ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆ ಮಾಡಿದ್ದು, ಕೊಂಚಾಡಿ ಬಳಿ ಇರುವ ED ಕಚೇರಿ ಎದುರು ಧಿಕ್ಕಾರದ ಘೋಷಣೆ ಮೊಳಗಿಸಿದ್ದಾರೆ. ಕೇಂದ್ರ ಸರ್ಕಾರ, ED ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಆಕ್ರೋಶಿತ ಕಾರ್ಯಕರ್ತರು ED ಕಚೇರಿಗೆ ನುಗ್ಗಲು ಯತ್ನ ಮಾಡಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇ.ಡಿ ಚಾರ್ಜ್ಶೀಟ್ ಸಲ್ಲಿಕೆ ಮಾಡಿರುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಕಲಬುರಗಿಯಲ್ಲಿ p್ರತಿಕ್ರಿಯೆ ನೀಡಿದ್ದು, ಬಿಜೆಪಿ ಅವರು ರಾಜಕೀಯ ಉದ್ದೇಶದಿಂದ ಮಾಡ್ತಿದ್ದಾರೆ. ನೂರಾರು ವರ್ಷಗಳಿಂದ ನ್ಯಾಷನಲ್ ಹೆರಾಲ್ಡ್ ಇದೆ. ಇದೀಗ ನೂರಾರು ಆಸ್ತಿಗಳನ್ನ ಮುಟ್ಟುಗೋಲು ಹಾಕೋದು, ಸೋನಿಯಾಗಾಂಧಿ, ರಾಹುಲ್ ಗಾಂಧಿ ಮೇಲೆ ಕೇಸ್ಗಳನ್ನ ಹಾಕೋದು ಮಾಡ್ತಿದ್ದಾರೆ. ಇದು ದ್ವೇಷದಿಂದ ಮಾಡುತ್ತಿರುವ ರಾಜಕಾರಣ ಎಂದಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಕೇಸ್ ಬಗ್ಗೆ ಕಲಬುರಗಿಯಲ್ಲಿ ಮmಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಕಳೆದ ಹನ್ನೊಂದು ವರ್ಷಗಳಿಂದ ಕೇಂದ್ರ ಸರ್ಕಾರ ಐಟಿ, ಇಡಿ ಯನ್ನ ಅಸ್ತ್ರವನ್ನಾಗಿ ಬಳಸಿಕೊಳ್ತಿದೆ. ಇಷ್ಟು ವರ್ಷ ಆಯ್ತು, ಎಲ್ಲಿ ಮನಿಲಾಂಡ್ರಿಗ್ ಆಗಿದೆ, ಹೇಗೆ ಆಗಿದೆ ಅಂತ ಪ್ರೂವ್ ಮಾಡಲು ಆಗಿಲ್ಲ. ಇದು ಎಜಿ, ನ್ಯಾಷನಲ್ ಹೆರಾಲ್ಡ್ ಅಲ್ಲಿ ಇರಬಹುದು, ಬೇರೆ ಸಂಸ್ಥೆಗಳು ನಾಟ್ ಫಾರ್ ಬೆನೆಫಿಟ್ ಸಂಸ್ಥೆಗಳು. ಒಂದೂ ರೂಪಾಯಿ ಕೂಡ ಅವರು ಡಿವಿಡೆಂಟ್, ಸ್ಯಾಲರಿ ತೊಗೊಳ್ಳುವ ಹಾಗಿಲ್ಲ. ಆದ್ರು ಕೂಡ ಇವರು ಐಟಿ, ಇಡೀ ಅವರು ವೈಯಕ್ತಿಯ ರಾಜಕೀಯ ದ್ವೇಷ ಸಾಧಿಸಲು ಕೇಂದ್ರದಿಂದ ಆರ್ಡರ್ ತಗೊತ್ತಿದ್ದಾರೆ.

ಯಾವಾಗ ಮೋದಿ ಅವರ ಜನಪ್ರಿಯತೆ ಕಡಿಮೆ ಆಗುತ್ತೆ, ಬೇಲೆ ಏರಿಕೆ ಬಗ್ಗೆ ಜನ ಪ್ರಶ್ನೆ ಮಾಡ್ತಾರೆ, ಆಗ ಮಾತ್ರ ಐಟಿ, ಇಡೀ, ರಾಬರ್ಟ್ ವಾದ್ರಾ, ಸೋನಿಯಾ ಗಾಂಧಿ ಅವರು ನೆನಪಿಗೆ ಬರ್ತಾರೆ. ಇಷ್ಟು ವರ್ಷದಿಂದ ಏನ್ ಮಾಡಿದ್ರು..? ಏನಾದ್ರು ದಾಖಲೆಗಳು ಸಿಕ್ಕಿವೆಯಾ..? ಸ್ಪಷ್ಟತೆ ಸಿಕ್ಕಿದೆಯಾ.? ಯಾಕೆ ಚಾರ್ಜ್ಶೀಟ್ ಮಾಡ್ತಿದ್ದಾರೆ ಅಂತ ಪ್ರಶ್ನಿಸಿದ್ದಾರೆ. ಮನಿಲ್ಯಾಂಡ್ರಿಂಗ್, ಲ್ಯಾಂಡ್ ಡೀಲ್ ಎಲ್ಲಾಯ್ತು..? ಅಂತ ಏನಾದ್ರು ದಾಖಲೆಗಳು ಸಿಕ್ಕಿವೆಯಾ..? ಎಂದು ಪ್ರಶ್ನಿಸಿದ್ದಾರೆ. ಮೋದಿ ಜನಪ್ರಿಯತೆ ಕುಸಿತ ಆಗ್ತಿದೆ. ಇವೆಲ್ಲ ಮುಚ್ಚಿಹಾಕಲು ಇದರ ಮುಖಾಂತರ ನಡೆಯುತ್ತಿದೆ. ಮೊದಲು ಎಲ್ಲಿ ಮನಿ ಲಾಂಡ್ರಿಂಗ್ ಆಗಿದೆ ಅಂತಾ ಹೇಳಲಿ ಎಂದು ಕೇಂದ್ರಕ್ಕೆ ಸವಾಲು ಎಸೆದಿದ್ದಾರೆ.

ನಿಜವಾಗಲೂ ಇ.ಡಿ ದಾಳಿ ಮಾಡಬೇಕಾದ್ರೆ, ಎಲೆಕ್ಷನ್ ಬಾಂಡ್ ಬಗ್ಗೆ ದಾಳಿ ಮಾಡಬೇಕು. ಬಿಜೆಪಿಗೆ, RSS ಅವರಿಗೆ ಐಟಿ, ED ಇಲ್ವಾ..? RSS ಶಾಖೆಗಳ ಮೇಲೆ ED ದಾಳಿ ಮಾಡಬೇಕು. ಜಿಲ್ಲೆಗಳಲ್ಲಿ 600 ಕಚೇರಿಗಳು ಹೈಟೆಕ್ ಆಗಿ ಕಟ್ಟಿದ್ದಾರೆ. ಎಲ್ಲಿಂದ ಬಂತೂ ಹಣ..? 75 ಜನ RSS ಗೆ ದುಡ್ಡು ಕೊಟ್ಟಿದ್ದಾರಂತೆ, ಅವರ ಮೇಲೆ ಐಟಿ, ಇ.ಡಿ ದಾಳಿ ಆಗಬೇಕು. ನಮ್ಮ ಪಕ್ಷ, ನಮ್ಮ ನಾಯಕರಿಗೆ ಬದ್ದತೆ ಇದೆ. ರಾಜಕೀಯ ದ್ವೇಷ ಸಾಧಿಸಲು ಕೇಂದ್ರ ಸರ್ಕಾರ ಇಡಿ ಐಟಿ ದುರ್ಬಳಕೆ ಮಾಡಿಕೊಳ್ತಿದೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ಮಾಡಿದ್ದಾರೆ. ಒಟ್ಟಾರೆ ಮೋದಿ ಜನಪ್ರಿಯತೆ ಕುಗ್ಗಿದಾಗ ಕಾಂಗ್ರೆಸ್ ವಿರುದ್ಧ ದ್ವೇಷ ಸಾಧಿಸುತ್ತ ಜನರ ಮನಸಲ್ಲಿ ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಎಂದಿದ್ದಾರೆ.