ಹುಲಿ ಯೋಜನೆಗೆ 50 ವರ್ಷಗಳು ತುಂಬಿದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಇಂದು 2 ಗಂಟೆಗಳ ಕಾಲ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಸಫಾರಿ ನಡೆಸಿದ್ರು. ಅಂದಹಾಗೆ ದೇಶದ ಇತಿಹಾಸದಲ್ಲಿಯೇ ಬಂಡಿಪುರಕ್ಕೆ ಭೇಟಿ ಕೊಟ್ಟ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಪ್ರಧಾನಿ ಮೋದಿ ಬಂಡಿಪುರವನ್ನೇ ಸಫಾರಿಗೆ ಏಕೆ ಆಯ್ಕೆ ಮಾಡಿಕೊಂಡರು..? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ..
![](https://pratidhvani.com/wp-content/uploads/2023/04/WhatsApp-Image-2023-04-09-at-1.43.11-PM-1.jpeg)
ದೇಶದಲ್ಲಿ ಅವನತಿಯ ಹಾದಿಯನ್ನು ಹಿಡಿದಿದ್ದ ಹುಲಿಗಳನ್ನು ಸಂರಕ್ಷಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ 1973ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಈ ಪ್ರಾಜೆಕ್ಟ್ ಟೈಗರ್ ್ಯೋಜನೆ ಆರಂಭಿಸಿದರು. ಆಗ ಬಂಡಿಪುರದಲ್ಲಿಯೂ ಹುಲಿ ರಕ್ಷಿತ ಅರಣ್ಯವಿತ್ತು. ಹೀಗಾಗಿ ಮೋದಿ ಈ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಹುಲಿ ಸಂರಕ್ಷಿತ ಪ್ರದೇಶಗಳ ಪಟ್ಟಿಯಲ್ಲಿ ಬಂಡಿಪುರ 100ಕ್ಕೆ 97 ಅಂಕಗಳನ್ನು ಪಡೆದಿದೆ. ಹೀಗಾಗಿ ದೇಶದಲ್ಲಿ ನಂಬರ್ 1 ಅಥವಾ ನಂಬರ್ 2ರ ಸ್ಥಾನವಂತೂ ಬಂಡಿಪುರಕ್ಕೆ ಪಕ್ಕಾ. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಬಂಡಿಪುರವನ್ನು ಆಯ್ಕೆ ಮಾಡಿಕೊಂಡಿದ್ದರಬಹುದು .
![](https://pratidhvani.com/wp-content/uploads/2023/04/WhatsApp-Image-2023-04-09-at-1.43.11-PM-789x1024.jpeg)
ಹುಲಿಗಳ ಸಂಖ್ಯೆಯಲ್ಲಿ ಸದ್ಯ 2ನೇ ಸ್ಥಾನದಲ್ಲಿರುವ ಕರ್ನಾಟಕ ಈ ಬಾರಿ ಮೊದಲ ಸ್ಥಾನವನ್ನು ಪಡೆಯುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಹುಲಿಗಳು ಬಂಡಿಪುರದಲ್ಲಿಯೇ ಇರೋದ್ರಿಂದ ಇಂದು ಈ ಸ್ಥಳವನ್ನು ಪ್ರಧಾನಿ ಮೋದಿ ಆಯ್ಕೆ ಮಾಡಿಕೊಂಡಿದ್ದಾರೆ.
![](https://pratidhvani.com/wp-content/uploads/2023/04/WhatsApp-Image-2023-04-09-at-1.43.10-PM.jpeg)
ಇನ್ನು ರಾಜಕೀಯವಾಗಿ ಕೂಡ ಈ ಭೇಟಿಯನ್ನು ಬಣ್ಣಿಸಬಹುದಾಗಿದೆ. ಕಳೆದ ಕೆಲವು ದಿನಗಳಿಂದ ಪ್ರಧಾನಿ ಮೋದಿ ಪದೇ ಪದೇ ಕರ್ನಾಟಕಕ್ಕೆ ಭೇಟಿ ನೀಡುತ್ತಲೇ ಇದ್ದಾರೆ. ವಿವಿಧ ಸರ್ಕಾರಿ ಯೋಜನೆಗಳ ನೆಪದಲ್ಲಿ ಆರು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ಏಳನೇ ಬಾರಿ ರಾಜ್ಯಕ್ಕೆ ಭೇಟಿ ನೀಡಿದಂತಾಗಿದೆ. ಚುನಾವಣೆ ಬೇರೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಅನಿವಾರ್ಯ ಆಗಿರೋದ್ರಿಂದ ಈ ಕಾರಣ ಕೂಡ ಇರಬಹುದು ಎಂದು ಅಂದಾಜಿಸಬಹುದಾಗಿದೆ.