ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD kumaraswamy) ವಿರುದ್ಧ ಮಾಗಡಿ ಶಾಸಕ ಬಾಲಕೃಷ್ಣ (Balakrishna) ಕೆಂಡ ಕಾರಿದ್ದಾರೆ. ಈ ಪ್ರಕರಣದಲ್ಲಿ ಶಿವರಾಮೇಗೌಡ (Shivaramegowda) ತಪ್ಪು ಮಾಡಿದ್ರೆ ಆತನಿಗೆ ಶಿಕ್ಷೆ ಆಗಲಿ. ಅದನ್ನು ಬಿಟ್ಟು ಡಿಕೆ ಶಿವಕುಮಾರ್ ವಿರುದ್ಧ ಮಾತಾಡೋದು ತಪ್ಪು, ಶಿವರಾಮೇಗೌಡ ತನ್ನ ತೆವಲಿಗೆ ಮಾತಾಡಿದ್ದಾನೆ ಎಂದು ವಾಗ್ದಾಳಿ ನಡೆಸಿದ್ದಾರೆ.
![](https://pratidhvani.com/wp-content/uploads/2024/05/IMG_7830.jpeg)
ಆಡಿಯೋ ಲೀಕ್ (Audio leak) ಆಗಿರೋದು ಶಿವರಾಮೇಗೌಡ ಮಾತಾಡಿರೋ ಬಗ್ಗೆ. ಅವನ ವಿರುದ್ಧ ಬೇಕಿದ್ರೆ ಕ್ರಮ ಕೈಗೊಳ್ಳಲಿ. ಆದರೆ ಡಿಕೆ ಶಿವಕುಮಾರ್ ವಿರುದ್ಧ ಪ್ರತಿಭಟನೆ ಮಾಡಿಸ್ತಿದ್ದೀರಿ.ಡಿಕೆಶಿ ಪೋಸ್ಟರ್ ಸುಟ್ಟು ಹಾಕಿ ಚಪ್ಪಲಿಯಲ್ಲಿ ಹೊಡಿಸ್ತೀರಾ ಕುಮಾರಸ್ವಾಮಿ ಅವರೇ,ನಾವು ತಾಳ್ಮೆಯಿಂದ ಇದ್ದೇವೆ, ಮುಂದೆ ನಾವು ನಿಮ್ಮಂತೆಯೇ ಮಾಡಬೇಕಾಗುತ್ತೆ ಎಂದು ಹರಿಹಾಯ್ದರು.
ಇನ್ನು ಇದೇ ಸಂದರ್ಭದಲ್ಲಿ ಜಡಿಎಸ್ (Jds) ಕಾರ್ಯಕರ್ತರಿಗೆ ವಾರ್ನ್ ಮಾಡಿದ ಶಾಸಕ ಬಾಲಕೃಷ್ಣ (balakrishna), ಡಿಕೆ ಶಿವಕುಮಾರ್ ಶಿಷ್ಯಂದಿರೇನು ಸುಮ್ಮನೆ ಕೂತಿಲ್ಲ. ನಾವು ಮನಸ್ಸು ಮಾಡಿದ್ರೆ ನಾವು ನಿಮ್ಮ ಪೋಟೊಗೆ ಬೆಂಕಿ ಇಟ್ಟು ಸುಡ್ತೀವಿ. ನಾವೇನೂ ಬಳೆ ತೊಟ್ಟಿಕೊಂಡು ಕೂತಿಲ್ಲ ಅಂತ ರಾಮನಗರದಲ್ಲಿ ಕಿಡಿಕಾರಿದ್ದಾರೆ.