ಸೆ.19 ರಂದು ಮಂಗಳೂರು ವಿವಿಯಲ್ಲಿ ಗಣೇಶನ ಪ್ರತಿಷ್ಟಾಪನೆ ಮಾಡಿಯೇ ಮಾಡ್ತೇವೆ. ಅದನ್ನು ಯಾರು ಬೇಡ ಅಂದರೂ ವಿವಿಯ ಮಂಗಳಾ ಆಡಿಟೋರಿಯಂನಲ್ಲೇ ಗಣೇಶೋತ್ಸವ ಆಗುತ್ತೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಸವಾಲು ಹಾಕಿದ್ದಾರೆ.

ಮಂಗಳೂರು ವಿವಿಯಲ್ಲಿ ಹಲವಾರು ವರ್ಷಗಳಿಂದ ಯಾವುದೇ ತಕರಾರು ಇಲ್ಲದೆ ಗಣೇಶೋತ್ಸವ ನಡೆಯುತ್ತಾ ಬಂದಿದೆ. ನೂತನವಿವಾಗಿ ಅಧಿಕಾರ ವಹಿಸಿಕೊಂಡ ಕುಲಪತಿಗಳು ಈ ವರ್ಷ ಹಠಾತ್ ಆಗಿ ಉತ್ಸವವನ್ನು ರದ್ದು ಮಾಡಲು ಹೊರಟಿದ್ದಾರೆ. ಇಂದು ಮಂಗಳೂರು ವಿವಿ ಉಪಕುಲಪತಿ ನಡೆ ಖಂಡಿಸಿ ಮಂಗಳೂರಿನ ಅಸೈಗೋಳಿಯಲ್ಲಿ ಭಜನೆ ಮೂಲಕ ಪ್ರತಿಭಟನೆ ನಡೆಸಲಾಗಿದೆ. ಕಲ್ಲಡ್ಕ ಪ್ರಭಾಕರ ಭಟ್ ಸೇರಿ BJP, ABVP ಸೇರಿದಂತೆ ಸಂಘಪರಿವಾರದ ಹಲವು ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು
ಸದ್ಯದ ಮಟ್ಟಿಗೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಈ ವಿಚಾರ ಬಹಳ ದೊಡ್ಡ ಮಟ್ಟದ ವಿವಾದವನ್ನ ಸೃಷ್ಠಿಸುವ ಸಾಧ್ಯತೆ ಇದ್ದು, ಹಬ್ಬ ಬರುವುದಕ್ಕೂ ಮೊದಲೇ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರಿಗೆ ಹಲವು ರೀತಿಯಾದ ಸವಾಲುಗಳು ಎದುರಾಗುತ್ತಲೇ ಇದೆ. ಹೀಗಾಗಿ ಈ ಸವಾಲುಗಳನ್ನ ಯಾವ ರೀತಿಯಾಗಿ ಕರಾವಳಿ ಪೊಲೀಸರು ಎದುರಿಸಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.