ಕರ್ನಾಟಕ ರಾಜ್ಯದಲ್ಲಿ ನಾವು ಕೊಟ್ಟಿರುವ ಗ್ಯಾರಂಟಿ ಯೋಜನೆಗಳನ್ನ ಇಡೀ ರಾಷ್ಟ್ರದಲ್ಲಿ ಜಾರಿಗೆ ತರುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.
ಮೈಸೂರಿನಲ್ಲಿ ಬುಧವಾರ (ಆಗಸ್ಟ್ 30) ಆಯೋಜಿಸಿದ್ದ ಗೃಹಲಕ್ಷ್ಮಿ ಉದ್ಘಾಟನೆ ನಂತರ ಅವರು ಮಾತನಾಡಿದರು.
ಇಂದು ಕರ್ನಾಟಕ ರಾಜ್ಯ ಇಡೀ ರಾಷ್ಟ್ರಕ್ಕೆ ಮಾದರಿ. ನಮ್ಮ ವಿರೋಧಿಗಳು ಮತ್ತು ಪ್ರಧಾನಮಂತ್ರಿ ಖುದ್ದಾಗಿ ಹೇಳಿದ್ದರು. ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುವ ಸರ್ಕಾರ ಎಂದು ಪ್ರಧಾನಮಂತ್ರಿಗಳು ಹೇಳಿದ್ದರು. ಆದರೆ ನಾವು ಅವರ ಮಾತು ಸುಳ್ಳು ಎಂದು ಸಾಬೀತು ಮಾಡಿದ್ದೇವೆ. ನಾವು ಕೊಟ್ಟಿದ್ದ ಆಶ್ವಾಸನೆಯನ್ನ ಇವತ್ತು ಈಡೇರಿಸಿದ್ದೇವೆ ಎಂದು ಹೇಳಿದರು.
ಮೊದಲು ಕಾಂಗ್ರೆಸ್ ಪಕ್ಷದಲ್ಲಿ ನಮ್ಕ ನಾಯಕರು ಚುನಾವಣಾ ಪೂರ್ವದಲ್ಲಿ 5 ಗ್ಯಾರಂಟಿ ಕೊಡುವ ಭರವಸೆ ಇಟ್ಟಿತ್ತು. ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಈ ದಿನ ಕೋಟ್ಯಾಂತರ ಮಹಿಳೆಯರಿಗೆ ಬಟನ್ ಪ್ರೆಸ್ ಮಾಡುವ ಮುಖಾಂತರ 2000 ನೇರವಾಗಿ ಅವರ ಅಕೌಂಟ್ಗೆ ತಲುಪುವಂತೆ ಮಾಡಿದ್ದೇವೆ. ಪ್ರತಿ ತಿಂಗಳು ಇದು ಭರವಸೆಯಾಗಿ ಫಲಾನುಭವಿ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದು ತಿಳಿಸಿದರು.
ಕರ್ನಾಟಕದ ಎಲ್ಲಾ ಅಕ್ಕತಂಗಿಯರಿಗೂ ನಾವು ಫ್ರೀಯಾಗಿ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ಮಹಿಳೆಯರು ಯಾರು ಸಹ ಟಿಕೆಟ್ ಖರೀದಿಸುವಂತಿಲ್ಲ. ಹಾಗೇಯೆ ಗೃಹಜ್ಯೋತಿ ಯೊಜನೆಯಡಿಯಲ್ಲು ಫ್ರೀಯಾಗಿ 200 ಯೂನಿಟ್ ನೀಡಿದ್ದೆವೆ. ಕೇವಲ ಒಂದು ಗ್ಯಾರಂಟಿ ಅಷ್ಟೇ ಬಾಕಿಇದೆ ಯುವನಿಧಿ ಯೋಜನೆಯಡಿಯಲ್ಲಿ ಪಧವಿಧರರಿಗೆ 3000 ಹಾಗೂ ಡಿಪ್ಲೊಮಾ ಪಧವಿಧರರಿಗೆ 1500 ರೂ ಕೊಡಲಾಗುವುದು. ಒಂದು ಯೋಜನೆ ಹೊರತು ಪಡಿಸಿ ಇನ್ನೆಲ್ಲಾ ಮಹಿಳೆಯರ ಸಬಲೀಕರಣಕ್ಕಾಗಿ ಮಾಡಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ಭಾರತ ಜೋಡೋ ಯಾತ್ರೆ ಸಮಯದಲ್ಲಿ ಹಲವಾರು ಮಹಿಳೆಯರೊಂದಿಗೆ ಸಂವಾದ ಮಾಡಿದ್ದೇನೆ. ಇಲ್ಲಿ ನನಗೆ ಒಂದು ವಿಷಯ ಸ್ಪಷ್ಟವಾಗಿ ಅರ್ಥವಾಗಿತ್ತು. ಇವತ್ತು ಬೆಲೆ ಏರಿಕೆ ಎಲ್ಲಾ ಮಹಿಳೆಯರ ಮೇಲೆ ಹೊರೆಯಾಗಿವೆ. ಕರ್ನಾಟಕ ರಾಜ್ಯದಲ್ಲಿ ಹೆಣ್ಮಕ್ಕಳೆ ಇಲ್ಲಿನ ಅಡಿಪಾಯ ಎಂದು ನನಗೆ ಅರ್ಥವಾಯಿತು. ಯಾವ ರೀತಿ ಮರದ ಬುಡ ಭೂಮಿಯ ಮೇಲೆ ಕಾಣುವುದಿಲ್ಲವೋ, ಅದೇ ರೀತಿ ಕರ್ನಾಟಕದಹೆಣ್ಣುಮಕ್ಕಳೇ ಇಲ್ಲಿನ ಅಡಿಪಾಯ ಭದ್ರ ಬುನಾದಿಯಾಗಿದ್ದಾರೆ. ಕರ್ನಾಟಕದ ಮೂಲೆಮೂಲೆಗಳಿಂದ ಮಹಿಳೆಯರು ಇಲ್ಲಿಗೆ ಆಗಮಿಸಿದ್ದಾರೆ ಅವರನ್ನ ನಾನು ಖುಷಿಯಿಂದ ಸ್ವಾಗತಿಸುತ್ತೇನೆ. ಅವರಿಗೆ ಕೊಟ್ಟಂತಹ ಮಾತನ್ನು ಉಳಿಸಿಕೊಳ್ಳಲು ನಾವು ರಕ್ಷಾ ಬಂಧನದಿನ ಈಡೇರಿಸಿದ್ದೇವೆ.. ಕರ್ನಾಟಕದಲ್ಲಿ ನಾವು ಕೊಟ್ಟಿರುವ 5 ಗ್ಯಾರಂಟಿಗಳು ನಮ್ಮ ಸರ್ಕಾರಕ್ಕೆ ನೀಲಿ ನಕ್ಷೆಯಾಗಿದ್ದಾವೆ ಎಂದು ಹೇಳಿದರು.