ಒಂದೆರಡು ದಿನಗಳಲ್ಲಿ ಸಿಎಂ ಯಾರು ಎಂಬುದನ್ನು ನಿರ್ಧಾರ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ವಿಧಾನಸಭಾ ಚುನಾವಣೆ ಗೆಲುವಿನ ವಿಚಾರವಾಗಿ ಮಾತನಾಡಿದ ಅವರು, ಈ ಸಂತೋಷವನ್ನು ಸಂಭ್ರಮಿಸುತ್ತಿದ್ದೇವೆ ಎಂದು ಹೇಳಿದರು.

ಇದೇ ವೇಳೆ ಆಪರೇಷನ್ ಕಮಲದ ವಿಚಾರವಾಗಿಯೂ ಮಾತನಾಡಿದ ಅವರು, ನಾವು ನಮ್ಮ ಶಾಸಕರನ್ನು ಎಲ್ಲಿಯೂ ಅಡಗಿಸಿ ಇಟ್ಟಿಲ್ಲ. ಸರ್ಕಾರ ರಚನೆ ಮಾಡುವ ಬಗ್ಗೆ ಸಭೆ ನಡೆಸಬೇಕು ಎಂಬ ಕಾರಣಕ್ಕೆ ಒಂದೆಡೆ ಸೇರಲು ನಿರ್ಧರಿಸಿದ್ದೇವೆ. ಈ ಪದ್ಧತಿ ನಮ್ಮ ಪಕ್ಷದಿಂದ ಮೊದಲಿಂದಲೂ ನಡೆದುಕೊಂಡು ಬಂದಿದೆ ಹೇಳಿದರು.