ಕಾಶ್ಮೀರದ ಪಹಲ್ಲಾಮ್ನಲ್ಲಿ ನಡೆದ ಉಗ್ರರ ದಾಳಿಗೆ (Pahalgam terror attack) ಊಹಿಸಲಾಗದಂತಹ ಉತ್ತರ ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ (Pm Narendra modi) ಗುಡುಗಿದ್ದಾರೆ.ಈ ಹೀನ ಕೃತ್ಯ ನಡೆಸಿದ ಉಗ್ರರಿಗೆ ಊಹೆಗೂ ನಿಲುಕದ ಶಿಕ್ಷೆ ಆಗೋದು ನಿಶ್ಚಿತ ಎಂದು ಮೋದಿ ಹೇಳಿದ್ದಾರೆ.

ಈ ಬಗ್ಗೆ ಬಿಹಾರದ (Bihar) ಮಧುಬನಿಯಲ್ಲಿ ಮಾತನಾಡಿದ ನಮೋ, ಭಾರತವನ್ನು ಭಯೋತ್ಪಾದನೆ ಮೂಲಕ ಹೆದರಿಸುವುದಕ್ಕೆ ಸಾಧ್ಯವಿಲ್ಲ.ರಣ ಹೇಡಿ ಉಗ್ರರು ನಮ್ಮ ಅಮಾಯಕರನ್ನು ಕೊಂದಿದ್ದಾರೆ. ಈ ಹೀನ ಸಂತತಿಯ ಯಾರನ್ನು ಉಳಿಸಲ್ಲ ಎಂದು ಮೋದಿ ಆರ್ಭಟಿಸಿದ್ದಾರೆ.

ಭಾರತ ಭಯೋತ್ಪಾದಕರಿಗೆ ತಕ್ಕ ಶಿಕ್ಷೆ ಕೊಡುತ್ತೇವೆ. ಒಬ್ಬಬ್ಬ ಉಗ್ರರನ್ನು ಮಣ್ಣಿನಲ್ಲಿ ಹೋತಾಕ್ತಿವಿ.ಅವರನ್ನು ಹುಡುಕಿ ಹುಡುಕಿ ಹೊಡೆಯುತ್ತೇವೆ. ಇದು ಭಾರತದ ಆತ್ಮದ ಮೇಲೆ ಮಾಡಿರೋ ದಾಳಿ. ಭಾರತ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದಿದ್ದಾರೆ.