ಸುಮಾರು ಒಂದು ಕೋಟಿ ಹತ್ತು ಲಕ್ಷ ಜನ ಗೃಹಲಕ್ಷ್ಮಿ ಯೋಜನೆಫಲಾನುಭವಿಗಳಾಗಿದ್ದೀರಿ..ಇದು ತುಂಬಾ ಸಂತಸದ ವಿಚಾರ. ನಾವು ನುಡಿದಂತೆ ನಡೆದಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮೈಸೂರಿನಲ್ಲಿ ಬುಧವಾರ (ಆಗಸ್ಟ್ 30) ಗೃಹಲಕ್ಷ್ಮಿ ಯೋಜನೆ ಉದ್ಘಾಟನೆ ನಂತರ ಅವರು ಮಾತನಾಡಿದರು.
ರಾಹುಲ್ ಗಾಂಧಿ ಇಡೀ ದೇಶದ ಉದ್ದಗಲಕ್ಕೂ ಕೂಡ ಭಾರತ್ ಜೋಡೋ ಯಾತ್ರಾ ಹಮ್ಮಿಕೊಂಡಿದ್ರು. ಜನರಿಗೆ ನಾವು ಮಾತು ಕೊಟ್ಟಿದ್ವಿ. 5 ಗ್ಯಾರಂಟಿಗಳನ್ನ ಜಾರಿ ಮಾಡ್ತೇವೆ ಅಂತಾ. ನುಡಿದಂತೆ ನಾವು 100 ದಿನ ಪೂರೈಸಿದ್ದೇವೆ. ಅನ್ನಭಾಗ್ಯ ಮತ್ತು ಶಕ್ತಿ ಯೋಜನೆಯನ್ನ ಸಹ ಅನುಷ್ಠಾನಕ್ಕೆ ತಂದು ಒಂದು ಪವಿತ್ರ ಕಾರ್ಯಕ್ರಮವನ್ನ ಮಾಡ್ತಿದ್ದೇವೆ ಎಂದು ಹೇಳಿದರು.
ಇಡೀ ದೇಶದಲ್ಲಿ ಕರ್ನಾಟಕ ಸರ್ಕಾರ ಒಂದು ಮಾದರಿ ರಾಜ್ಯ. ಇವತ್ತು ಲಕ್ಷ್ಮೀ ಹೆಬ್ಬಾಳಕರ್ ಮುಂಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಗೃಹಲಕ್ಷ್ಮೀ ಯೋಜನೆ ಜಾರಿ ಮಾಡ್ತಿದ್ದೇವೆ..ಇದಕ್ಕೆ ನೀವೆಲ್ಲಾ ಸಹ ಸಾಕ್ಷಿಯಾಗಿದ್ದೀರಿ ಎಂದು ತಿಳಿಸಿದರು.