ಪ್ರತಿಯೊಬ್ಬ ಮನುಷ್ಯನು ದಿನಕ್ಕೆ ಮೂರು ಬಾರಿ ಪ್ರಮುಖ ಆಹಾರವನ್ನು ಸೇವನೆ ಮಾಡ್ಲೇಬೇಕು.. ಅದರಲ್ಲಿ ಕೆಲವರು ತಮ್ಮ ಬಿಸಿ ಲೈಫ್ ಸ್ಟೈಲ್ ಇಂದ ಇರಬಹುದು ಅಥವಾ ತೂಕ ಇಳಿಸುವ ಕಾರಣದಿಂಗಾಗಿಯೋ ಅಥವಾ ಇನ್ನೊಂದು ಏನೋ ರೀಸನ್ ಇಂದಾಗಿ ಬೆಳಗಿನ ಉಪಹಾರ ಅಥವಾ ತಿಂಡಿಯನ್ನ ಸ್ಕಿಪ್ ಮಾಡ್ತಾರೆ.. ಇದರಿಂದ ಸಾಕಷ್ಟು ಕಾಯಿಲೆಗಳಿಗೆ ನಾವು ಒಳಗಾಗ್ತಿವಿ..
ತಿಂಡಿನ ಸ್ಕಿಪ್ ಮಾಡಿದ್ರೆ ಈ ರೀತಿ ಸಮಸ್ಯೆಗೆ ತುತ್ತಾಗೋದು ಪಕ್ಕಾ
ತೂಕವನ್ನ ಹೆಚ್ಚಿಸುತ್ತದೆ
ಬೆಳಗಿನ ಜಾವ ತಿಂಡಿಯನ್ನು ಬಿಟ್ಟು ನೀವು ಸಣ್ಣ ಆಗ್ತೀರಾ ಅಂತ ಹೇಳಿದ್ರೆ ಅದು ಆರೋಗ್ಯಕರವಲ್ಲ..ನೀವೂ ತಿಂಡಿ ತಿನ್ನದಿದ್ದರೂ ದೇಹಕ್ಕೆ ಬೇಕಾದಂತಹ ಪ್ರೋಟೀನ್ ,ಕ್ಯಾಲೋರಿಸ್ ,ಫೈಬರ್ ಆಗಿರಬಹುದು ಹಾಗೂ ಕ್ಯಾಲ್ಸಿಯಂ ಅಂಶ ಸರಿಯಾದ ರೀತಿಯಲ್ಲಿ ಸಿಗಬೇಕು..ಇವೆಲ್ಲವೂ ಸರಿಯಾಗಿ ಸಿಗದಿದ್ರೆ ನಿಮ್ಮ ತೂಕ ಹೆಚ್ಚಾಗುತ್ತದೆ..
ಮಧುಮೇಹ ಬರಬಹುದು
ಬೆಳಗಿನ ಜಾವ ತಿಂಡಿಯನ್ನ ಬಿಟ್ಟು ಮಧ್ಯಾಹ್ನ ಊಟದ ಸಮಯದಲ್ಲಿ ಹೆಚ್ಚು ತಿಂದರೆ ನಮ್ಮ ಬ್ಲಡ್ ಶುಗರ್ ಲೆವೆಲ್ ಅಲ್ಲಿ ಏರುಪೇರು ಆಗುತ್ತೆ. ಇದು ಡಯಾಬಿಟಿಸ್ ಗೆ ಪ್ರಮುಖ ಕಾರಣ.
ಒತ್ತಡ ಹೆಚ್ಚು ಮಾಡುತ್ತದೆ
ಬೆಳಗಿನ ತಿಂಡಿ ನ ಬಿಡುವುದರಿಂದ ಬ್ಲಡ್ ಶುಗರ್ ಲೆವೆಲ್ ಕಡಿಮೆಯಾಗುತ್ತೆ ಇದು ನಮ್ಮ ದೇಹಕ್ಕೆ ಒತ್ತಡವನ್ನ ಜಾಸ್ತಿ ನೀಡ್ತಾ ಹೋಗುತ್ತೆ. ಇದು ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸಬಹುದು, ದಿನವಿಡಿ ಹೆಚ್ಚಿದ ಒತ್ತಡ ಮತ್ತು ಆತಂಕಕ್ಕೆ ಒಳಗಾಗ್ತಿವಿ.
ಮೂಡ್ ಸ್ವಿಂಗ್ಸ್ ಮತ್ತು ಸುಸ್ತು
ಸಮಯಕ್ಕೆ ಸರಿಯಾಗಿ ತಿಂಡಿಯನ್ನ ಮಾಡದಿದ್ರೆ ಮೂಡ್ ಸ್ವಿಂಗ್ಸ್ ಜಾಸ್ತಿ ಆಗುತ್ತೆ ಜೊತೆಗೆ ಸಿಟ್ಟು ಕೋಪ ಹಾಗೂ ಯಾವುದರ ಮೇಲು ಮನಸ್ಸು ಇರುವುದಿಲ್ಲ ಕಂಪ್ಲೀಟ್ ಆಗಿ ನಮ್ಮ ಎನರ್ಜಿ ಡ್ರಾಪ್ ಆಗತ್ತೆ..ಚಿಕ್ಕಪುಟ್ಟ ವಿಚಾರಕ್ಕೂ ಇರಿಟೇಟ್ ಆಗತ್ತೆ..
ಬೆಳಗಿನ ಉಪಹಾರವನ್ನು ದೀರ್ಘಾವಧಿಯಲ್ಲಿ ಬಿಟ್ಟುಬಿಡುವುದರಿಂದ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗತ್ತೆ.. ಹಾಗೂ ಟೈಪ್ 2 ಡಯಾಬಿಟಿಸ್, ಹೃದ್ರೋಗ ಮತ್ತು ಮೆಟಾಬಾಲಿಕ್ ಸಿಂಡ್ರೋಮ್ ಸೇರಿದಂತೆ ದೀರ್ಘಕಾಲದ ಕಾಯಿಲೆಗಳ ಗುರಿಯಾಗ್ತಿವಿ..
ಒಟ್ಟಾರೆ ಆರೋಗ್ಯಕ್ಕಾಗಿ ಈ ಬೆಳಗಿನ ಊಟದ ಪ್ರಾಮುಖ್ಯತೆ ಹೆಚ್ಚಿದೇ. ತಿಂಡಿ ತಿನ್ನದಿದ್ದರೆ ಏನಾಗಲ್ಲ ಆರಾಮಾಗಿ ಇರ್ತೀವಿ ಅನ್ನೋದು ನಿಮ್ಮ ತಲೆಯಲ್ಲಿ ಇದ್ದರೆ ಅದನ್ನ ಈಗಲೇ ತೆಗೆದು ಹಾಕಿ.. ಇಲ್ಲವಾದರೆ ಈ ಎಲ್ಲಾ ಕಾಯಿಲೆಗಳಿಗೂ ನೀವು ತುತ್ತಾಗುವುದು ಗ್ಯಾರಂಟಿ..