RCB ಆಟಗಾರ ವಿರಾಟ್ ಕೊಹ್ಲಿಗೆ ಪ್ರಾಣ ಬೆದರಿಕೆ ಇದೆ ಅನ್ನೋ ಕಾರಣಕ್ಕೆ ಇಂದಿನ ಪಂದ್ಯಕ್ಕೂ ಮುನ್ನ ಮಾಡಬೇಕಿದ್ದ ಪ್ರಾಕ್ಟೀಸ್ ರದ್ದು ಮಾಡಿದೆ RCB ತಂಡ. ಭದ್ರತಾ ದೃಷ್ಟಿಯಿಂದ ಪ್ರಾಕ್ಟೀಸ್ನಿಂದ ಹೊರಗುಳಿದಿದೆ ಆರ್ಸಿಬಿ ಟೀಂ. ಆದರೆ ಇಂದಿನ ಎಲಿಮಿನೇಟರ್ ಪಂದ್ಯ ನಡೆಯುತ್ತಾ..? ಇಲ್ವಾ..? ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ.
ಗುಜರಾತ್ ಪೊಲೀಸರಿಂದ ಸೋಮವಾರ ನಾಲ್ವರು ಶಂಕಿತ ಉಗ್ರರ ಬಂಧನ ಮಾಡಲಾಗಿತ್ತು. ಅಹಮದಾಬಾದ್ ಏರ್ಪೋರ್ಟ್ನಲ್ಲಿ ಶಂಕಿತರ ಬಂಧನ ಮಾಡಿದ ಬಳಿಕ ಅನುಮಾನಾಸ್ಪದ ವಸ್ತುಗಳು, ವಿಡಿಯೋ, ಟೆಕ್ಸ್ಟ್ ಮೆಸೇಜ್ ಪತ್ತೆ ಆಗಿತ್ತು. ಆ ಬಳಿಕ ಆರ್ಸಿಬಿ ಟೀಂಗೆ ಬೆದರಿಕೆ ಇರುವ ಬಗ್ಗೆ ಬೆಳಕಿಗೆ ಬಂದಿತ್ತು
ಇಂದು ಪ್ರಾಕ್ಟೀಸ್ ರದ್ದು ಮಾಡಿದ್ದು ಅಷ್ಟೇ ಅಲ್ಲದೆ ಸಂಜೆ ನಡೆಯಬೇಕಿದ್ದ ಪ್ರೆಸ್ಮೀಟ್ ಕೂಡಾ ರದ್ದು ಮಾಡಿದೆ ಆರ್ಸಿಬಿ ಟೀಂ. ಆಟಗಾರರು ಉಳಿದುಕೊಂಡಿರುವ ಹೋಟೆಲ್ಗೆ ಭಾರೀ ಪೊಲೀಸ್ ಭದ್ರತೆ ನೀಡಲಾಗಿದೆ. ಅಹಮದಾಬಾದ್ನಲ್ಲಿ ಭದ್ರತೆ ಹೆಚ್ಚಳ ಮಾಡಿದ್ದಾರೆ ಖಾಕಿಪಡೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ RCB ವರ್ಸಸ್ RR ನಡುವೆ 2ನೇ ಕ್ವಾಲಿಫೈಯರ್ ಪಂದ್ಯಕ್ಕಾಗಿ ಐಪಿಎಲ್ ಎಲಿಮಿನೇಟರ್ ಪಂದ್ಯ ನಡೆಯಬೇಕಿದೆ. ಆದರೆ ಇದೀಗ ಉಗ್ರರ ಬೆದರಿಕೆ ಇರುವ ಬಗ್ಗೆ ಸುದ್ದಿ ಹೊರಬಿದ್ದಿರುವ ಕಾರಣಕ್ಕೆ ಪಂದ್ಯದ ಮೇಲೆ ಕರಿನೆರಳು ಬಿದ್ದಂತಾಗಿದೆ.
ಕ್ರೀಡಾಂಗಣಕ್ಕೆ ಬಿಗಿ ಭದ್ರತೆ ನೀಡಲಾಗಿದೆ. ಅಲ್ಲಿನ ಪಂದ್ಯಕ್ಕೂ ಯಾವುದೇ ಅಡ್ಡಿ ಇಲ್ಲ. ಆದರೆ ಇಂದಿನ ಪಂದ್ಯಕ್ಕೂ ಮುನ್ನ ಅಹಮದಾಬಾದ್ನ ಕಾಲೇಜು ಗ್ರೌಂಡ್ನಲ್ಲಿ ಪ್ರಾಕ್ಟೀಸ್ ಮಾಡಬೇಕಿತ್ತು. ನೆಟ್ಸ್ನಲ್ಲಿ ಪ್ರಾಕ್ಸೀಸ್ ಮಾಡಲು ನಿಗದಿಯಾಗಿತ್ತು. ಭದ್ರತೆ ಕಾರಣದಿಂದ ಕಾಲೇಜು ಗ್ರೌಂಡ್ನ ಪ್ರಾಕ್ಟೀಸ್ ಮಾಡದೆ ಸುಮ್ಮನಿದ್ದಾರೆ ಅಷ್ಟೆ.