ವಕ್ಫ್ ಬೋರ್ಡ್ (Waqf board) ನೋಟಿಸ್ ವಿರುದ್ಧ ಅನ್ನದಾತರು ಅಕ್ಷರಶಃ ಆಕ್ರೋಶಗೊಂಡಿದ್ದಾರೆ. ವಿಜಯಪುರ (Vijayapura) ಜಿಲ್ಲೆಯ ರೈತರ ಜಮೀನಿನ ಪಹಣಿಗಳ ಕಾಲಂ ನಂ.11ರಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಿರೋದನ್ನು ವಿರೋಧಿಸಿ ಅನ್ನದಾತರ ಪ್ರತಿಭಟಿಸ್ತಿದ್ದಾರೆ.

ರೈತ ಮುಖಂಡರ ನೇತೃತ್ವದಲ್ಲಿ ಅಖಾಡಕ್ಕಿಳಿದ ಅನ್ನದಾತರು ಜಿಲ್ಲಾಧಿಕಾರಿ ಕಚೇರಿ (Dc office) ಆವರಣದಲ್ಲಿ ರಾತ್ರಿ ದೀಪಗಳನ್ನು ಬೆಳಗಿಸುವ ಮೂಲಕ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ (chalaadi narayanan swamy) ಹಾಗೂ ಬಿಜೆಪಿ ಮುಖಂಡ ಉಮೇಶ್ ಕಾರಜೋಳ ಪ್ರತಿಭಟನೆಗೆ ಸಾಥ್ ನೀಡಿದ್ರು.
ಈ ವೇಳೆ ಪೊಲೀಸರು ಎಷ್ಟೆ ಮನವೊಲಿಕೆ ಪ್ರಯತ್ನ ಮಾಡಿದ್ರು. ಪ್ರತಿಭಟನಾ ನಿರತ ರೈತರು ತಮ್ಮ ಪಟ್ಟು ಸಡಿಲಿಸಿಲ್ಲ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ, ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಭೂಬಾಲನ್, 124 ನೋಟಿಸ್ಗಳನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ.